<p><strong>ಬೆಂಗಳೂರು:</strong> ಮೂರನೇ ಶ್ರೇಯಾಂಕದ ಕರ್ನಾಟಕದ ಕೆವಿನ್ ಸುರೇಶ್ ಅವರು ಇಲ್ಲಿನ ಟಾಪ್ಸ್ಪಿನ್ ಕೋರ್ಟ್ನಲ್ಲಿ ನಡೆಯುತ್ತಿರುವ ಟಿ.ಎನ್.ಆರ್. ಸ್ಮಾರಕ ಎಐಟಿಎ ರಾಷ್ಟ್ರೀಯ ಸರಣಿಯ 18 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್ನಲ್ಲಿ 7-6(3), 6-4 ಸೆಟ್ಗಳಿಂದ ಎರಡನೇ ಶ್ರೇಯಾಂಕದ ಡೇವಿಡ್ ಜೇಸನ್ (ಕರ್ನಾಟಕ) ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.</p>.<p>ಶುಕ್ರವಾರ ನಡೆದ ಮತ್ತೊಂದು ಸೆಮಿಫೈನಲ್ನಲ್ಲಿ ಕೇರಳದ ಕರಣ್ ಥಾಪಾ 7-5, 6-3 ರಿಂದ ಕರ್ನಾಟಕದ ಶ್ರೀಕರ್ ಡೋಣಿ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.</p>.<p>ಬಾಲಕಿಯರ ಸಿಂಗಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕದ ಕರ್ನಾಟಕದ ಅಮೋದಿನಿ ನಾಯಕ್ 7-5,6-4ರಿಂದ ಅಗ್ರ ಶ್ರೇಯಾಂಕದ ಹರ್ಷಿಣಿ ಎನ್. (ಕರ್ನಾಟಕ) ಅವರಿಗೆ ಆಘಾತ ನೀಡಿ ಫೈನಲ್ಗೆ ಲಗ್ಗೆ ಹಾಕಿದರು. ಮತ್ತೊಂದು ಸೆಮಿಫೈನಲ್ನಲ್ಲಿ ಕರ್ನಾಟಕದ ಸ್ನಿಗ್ಧಾ ಕಾಂತ 7-6(8), 6-0ರಿಂದ ಕಶ್ವಿ ಸುನಿಲ್ (ಕರ್ನಾಟಕ) ಅವರನ್ನು ಮಣಿಸಿ ಮುನ್ನಡೆದರು.</p>.<p>ಬಾಲಕರ ಡಬಲ್ಸ್ನಲ್ಲಿ ಶ್ರೀಕರ್ ಡೋಣಿ ಮತ್ತು ಕೆವಿನ್ ಸುರೇಶ್ ಜೋಡಿ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಬಾಲಕಿಯರ ಡಬಲ್ಸ್ನಲ್ಲಿ ಮಹಾರಾಷ್ಟ್ರದ ನೈನಿಕಾ ಬೇಂದ್ರಂ ಮತ್ತು ಕೇರಳದ ಹರ್ಷಿಣಿ ಎಚ್. ಜೋಡಿ ಚಾಂಪಿಯನ್ ಆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೂರನೇ ಶ್ರೇಯಾಂಕದ ಕರ್ನಾಟಕದ ಕೆವಿನ್ ಸುರೇಶ್ ಅವರು ಇಲ್ಲಿನ ಟಾಪ್ಸ್ಪಿನ್ ಕೋರ್ಟ್ನಲ್ಲಿ ನಡೆಯುತ್ತಿರುವ ಟಿ.ಎನ್.ಆರ್. ಸ್ಮಾರಕ ಎಐಟಿಎ ರಾಷ್ಟ್ರೀಯ ಸರಣಿಯ 18 ವರ್ಷದೊಳಗಿನವರ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್ನಲ್ಲಿ 7-6(3), 6-4 ಸೆಟ್ಗಳಿಂದ ಎರಡನೇ ಶ್ರೇಯಾಂಕದ ಡೇವಿಡ್ ಜೇಸನ್ (ಕರ್ನಾಟಕ) ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದರು.</p>.<p>ಶುಕ್ರವಾರ ನಡೆದ ಮತ್ತೊಂದು ಸೆಮಿಫೈನಲ್ನಲ್ಲಿ ಕೇರಳದ ಕರಣ್ ಥಾಪಾ 7-5, 6-3 ರಿಂದ ಕರ್ನಾಟಕದ ಶ್ರೀಕರ್ ಡೋಣಿ ಅವರನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.</p>.<p>ಬಾಲಕಿಯರ ಸಿಂಗಲ್ಸ್ನಲ್ಲಿ ನಾಲ್ಕನೇ ಶ್ರೇಯಾಂಕದ ಕರ್ನಾಟಕದ ಅಮೋದಿನಿ ನಾಯಕ್ 7-5,6-4ರಿಂದ ಅಗ್ರ ಶ್ರೇಯಾಂಕದ ಹರ್ಷಿಣಿ ಎನ್. (ಕರ್ನಾಟಕ) ಅವರಿಗೆ ಆಘಾತ ನೀಡಿ ಫೈನಲ್ಗೆ ಲಗ್ಗೆ ಹಾಕಿದರು. ಮತ್ತೊಂದು ಸೆಮಿಫೈನಲ್ನಲ್ಲಿ ಕರ್ನಾಟಕದ ಸ್ನಿಗ್ಧಾ ಕಾಂತ 7-6(8), 6-0ರಿಂದ ಕಶ್ವಿ ಸುನಿಲ್ (ಕರ್ನಾಟಕ) ಅವರನ್ನು ಮಣಿಸಿ ಮುನ್ನಡೆದರು.</p>.<p>ಬಾಲಕರ ಡಬಲ್ಸ್ನಲ್ಲಿ ಶ್ರೀಕರ್ ಡೋಣಿ ಮತ್ತು ಕೆವಿನ್ ಸುರೇಶ್ ಜೋಡಿ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಬಾಲಕಿಯರ ಡಬಲ್ಸ್ನಲ್ಲಿ ಮಹಾರಾಷ್ಟ್ರದ ನೈನಿಕಾ ಬೇಂದ್ರಂ ಮತ್ತು ಕೇರಳದ ಹರ್ಷಿಣಿ ಎಚ್. ಜೋಡಿ ಚಾಂಪಿಯನ್ ಆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>