ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಬರ್‌ ಸಖ್ಯ ಇರಲಿ ಎಚ್ಚರ

Published : 27 ಜುಲೈ 2024, 0:13 IST
Last Updated : 27 ಜುಲೈ 2024, 0:13 IST
ಫಾಲೋ ಮಾಡಿ
Comments
ತಿಳಿದಿರಲಿ ‘ಗೋಲ್ಡನ್‌ ಅವರ್‌’
ಭಾವಾನಾತ್ಮಕ ಕಥೆ ಹೇಳಿ ಹೆಣ್ಣುಮಕ್ಕಳ ನಂಬಿಕೆ ಗಳಿಸಿ ಹಣ ಕೀಳಲಾಗುತ್ತದೆ. ತಂತ್ರಜ್ಞಾನ ಪರಿಣತರಲ್ಲದ ಹೆಣ್ಣುಮಕ್ಕಳು ಬಹುಬೇಗ ಮೋಸಕ್ಕೆ ಈಡಾಗುತ್ತಾರೆ. ಹಣ ಕಳೆದುಕೊಳ್ಳುವುದು ಎಂದರೆ ಕೈಯಿಂದ ಕೈಗೆ ಕೊಟ್ಟು ಮೋಸ ಹೋಗುವ ಪರಿಕಲ್ಪನೆಯಲ್ಲಿಯೇ ಇದ್ದೇವೆ. ಆದರೆ ಡಿಜಿಟಲ್‌ ಯುಗದಲ್ಲಿ ಒಟಿಪಿ, ಆಧಾರ್‌ ನಂಬರ್‌ಗಳನ್ನು ಪಡೆದು ಬ್ಯಾಂಕ್‌ ಖಾತೆಗೆ ಕನ್ನ ಹಾಕಬಹುದು ಎಂಬುದರ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು. ಸೈಬರ್‌ ಕ್ರೈಂನಲ್ಲಿಯೂ ‘ಗೋಲ್ಡನ್‌ ಅವರ್‌’ ಪರಿಕಲ್ಪನೆ ಇದೆ. ಹಣ ಕಳೆದುಕೊಂಡವರು ತಡಮಾಡದೇ 1930 ಸೈಬರ್‌ ಅಪರಾಧಗಳ ಸಹಾಯವಾಣಿಗೆ ಕರೆ ಮಾಡಿ, ಪ್ರಕರಣ ದಾಖಲಿಸಬೇಕು. ಅಥವಾ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿಯೂ ಪ್ರಕರಣ ದಾಖಲಿಸಬಹುದು. ಪೊಲೀಸರು ತ್ವರಿತವಾಗಿ ಬ್ಯಾಂಕ್‌ನ ನೆರವಿನೊಂದಿಗೆ ಹಣ ವರ್ಗಾವಣೆಯಾಗದಂತೆ ‘ಡೆಬಿಟ್‌ ಫ್ರೀಜ್‌’, ‘ಅಕೌಂಟ್‌ ಫ್ರೀಜ್‌’ ಮಾಡುತ್ತಾರೆ. ಇದು ಎಲ್ಲೋ ಕುಳಿತ ಸೈಬರ್‌ ಕಳ್ಳರ ಕೈಗಳನ್ನು ಕಟ್ಟುವ ಬಗೆ. ಹಾಗಾಗಿ ಮೋಸ ಹೋದ ತಕ್ಷಣ ಪ್ರಕರಣ ದಾಖಲಿಸಿ. www.cybercrime.gov.inನಲ್ಲಿಯೂ ಪ್ರಕರಣ ದಾಖಲಿಸಬಹುದು. ಸತೀಶ್‌ ವೆಂಕಟಸುಬ್ಬು, ಸೈಬರ್‌ ವಕೀಲ
ಅರಿವು ಅಗತ್ಯ
ಈ ರೀತಿ ಆನ್‌ಲೈನ್‌ನಲ್ಲಿ ಮೋಸ ಹೋಗುವ ಪ್ರಕರಣಗಳಿಗೆ ಗಂಡು ಹೆಣ್ಣೆಂಬ ಭೇದ ಇರುವುದಿಲ್ಲ. ಬಾಲ್ಯದಲ್ಲಿ ಪ್ರೀತಿ, ವಿಶ್ವಾಸ, ಹೊಗಳಿಕೆಯಿಂದ ವಂಚಿತಗೊಂಡ ಮನಸ್ಸುಗಳು ಬಹುಬೇಗ ಇಂಥ ಮೋಸಕೂಪಕ್ಕೆ ಬಲಿಯಾಗುತ್ತಾರೆ. ಸಣ್ಣ ಪ್ರಶಂಸೆಯನ್ನೂ ಪ್ರೀತಿಯೆಂದು ನಂಬಿ ಬಿಡುತ್ತಾರೆ. ಯಾರಲ್ಲಿ ಎಷ್ಟು ಹಂಚಿಕೊಳ್ಳಬೇಕು ಮತ್ತು ಹಂಚಿಕೊಳ್ಳಬಾರದು ಎಂಬ ರೇಖೆಯನ್ನು ಮರೆಯುತ್ತಾರೆ. ಈಗೀಗಂತೂ ಸಾಮಾಜಿಕ ಜಾಲತಾಣಗಳೇ ಬದುಕಿನ ಭಾಗವಾಗಿಬಿಟ್ಟಿವೆ. ಸಾಮಾಜಿಕ ವ್ಯವಸ್ಥೆಯ ಬದುಕಿನಿಂದ ಬಹುದೂರ ಹೋಗಿಬಿಟ್ಟಿದ್ದೇವೆ. ಸ್ನೇಹಿತರು, ಪ್ರೀತಿಪಾತ್ರರೆಲ್ಲರೂ ವರ್ಚುಯಲ್‌ ಆಗಿ ಇದ್ದಾರೆ ಹೊರತು ಆಫ್‌ಲೈನ್‌ನಲ್ಲಿ ಕಡಿಮೆಯಾಗಿದ್ದಾರೆ. ಆನ್‌ಲೈನ್‌ ಡೇಟಿಂಗ್, ಚಾಟಿಂಗ್‌ಗಳ ಜಮಾನದಲ್ಲಿ ಇರುವುದರಿಂದ ವರ್ಚುಯುಲ್‌ ಜಗತ್ತಿನ ತವಕ ಹಾಗೂ ತಲ್ಲಣಗಳನ್ನು ಅರಿಯುವುದು ಬಹುಮುಖ್ಯ. ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳಬೇಕು. ಯಾವುದೇ ಆ್ಯಪ್‌ ಇರಲಿ; ಸಾಮಾಜಿಕ ಜಾಲತಾಣಗಳೇ ಇರಲಿ ಅರಿವು ಮೂಡಿಸಿಕೊಳ್ಳುವುದು ಮುಖ್ಯ. ಡಾ.ಅಲೋಕ್‌ ಕುಲಕರ್ಣಿ, ಹಿರಿಯ ಮನಶಾಸ್ತ್ರಜ್ಞ, ಮಾನಸ ಇನ್‌ಸ್ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಆ್ಯಂಡ್‌ ನ್ಯುರೋಸೈನ್ಸ್‌, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT