<p><strong>ತಿಳಿವಿನಸಿ</strong></p>.<p>ಹನುಮಂತನು ಸಮುದ್ರವನ್ನು ಲಂಘಿಸಲು ಮಹೇಂದ್ರಾಚಲ ಶೃಂಗದಿಂದ ಚಿಮ್ಮಿದನು. ಅವನು ತದೇಕಚಿತ್ತನಾಗಿ ಸಾಗುತ್ತಿದ್ದುದನ್ನು ಕುವೆಂಪು ಅವರು ಹೀಗೆ ಚಿತ್ರಿಸಿದ್ದಾರೆ:</p>.<p>‘ತಿಳಿವಿನಸಿಯಲಿ ಮಾಯೆಯನು ಕಡಿಕಡಿದು ನುಗ್ಗುವ ಯೋಗಿಯೊ?’</p>.<p>(ಸಮುದ್ರ ಲಂಘನ – ಖಂಡಕಾವ್ಯ)</p>.<p>ಅದರಲ್ಲಿ ಜ್ಞಾನದ ಅರಿವಿಗೆ ಒಳಗಾದ ‘ತಿಳಿವಿನಸಿ’ (ಅಸಿ=ಕತ್ತಿ) ತಿಳಿವಿನ ಕತ್ತಿಯಿಂದ ಮಾಯೆಯನ್ನು ಕಡಿಕಡಿದು ಮುನ್ನುಗಿದ ಯೋಗಿ ಆಂಜನೇಯನನ್ನು ಬಣ್ಣಿಸಿರುವ ರೀತಿ ಅನನ್ಯವಾಗಿದೆ</p>.<p><strong>ಮೌಢ್ಯಮೇಧ</strong></p>.<p>ಪುರೋಹಿತಶಾಹಿ ವ್ಯವಸ್ಥೆಯು ಅಷ್ಟ್ರಗ್ರಹ ನಿವಾರಣೆಗಾಗಿ ಯಜ್ಞಯಾಗಾದಿಗಳನ್ನು ನಡೆಸಿ ಜನರನ್ನು ಮೂಢರನ್ನಾಗಿಸುತ್ತಿತ್ತು. ಆ ಸಂದರ್ಭದಲ್ಲಿ 9-1-1962 ರಂದು ಕುವೆಂಪು ಅವರು ಜನರನ್ನು ವೈಜ್ಞಾನಿಕ ವಿಶ್ಲೇಷಣೆಯಲ್ಲಿ ವೈಚಾರಿಕವಾಗಿ ಚಿಂತಿಸಿ ಎಂದು ಹೇಳುತ್ತ ಜಾಗೃತಗೊಳಿಸಲು ರಚಿಸಿದ ಕವನ ‘ಮೌಢ್ಯಮೇಧ’ (ಮೇಧ=ಯಾಗ, ಯಜ್ಞ). ಧರ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ಭೀತರನ್ನಾಗಿಸಿ ಸುಲಿಯುವ ವ್ಯವಸ್ಥೆಯೇ ಇದು. ಮೂಢತನ, ತಿಳಿಗೇಡಿತನವನ್ನು ಬಂಡವಾಳ ಮಾಡಿಕೊಂಡು ನಾಜೂಕಾಗಿ ಶೋಷಿಸುವ ಪುರೋಹಿತಶಾಹಿ ಹುನ್ನಾರ ಎಂದು ಕ್ರಾಂತಿಕಾರಿ ನುಡಿಗಳಲ್ಲಿ ಯಜ್ಞಾದಿಗಳನ್ನು ‘ಮೌಢ್ಯಮೇಧ’ ಪದ ರೂಪಿಸಿ ಖಂಡಿಸಿದರು.</p>.<p>‘ಎತ್ತಿ ಋತ್ವಿಕ್ಕರನು ಎಸೆ ಹೋಮ ಕುಂಡಕ್ಕೆ</p>.<p>ಅಷ್ಟಗ್ರಹಕೂಟ ದೋಷ ಪರಿಹಾರಕ್ಕೆ</p>.<p>(ಮೌಢ್ಯಮೇಧ - ಪ್ರೇತ-ಕ್ಯೂ)</p>.<p>ಕುವೆಂಪು ಅವರು ಮತ್ತೆ 29-1-1962ರಂದು ‘ಅಷ್ಟಗ್ರಹ ಯೋಗ ಸಿದ್ಧಿ’ ಕವನ ರಚಿಸಿ, ಲಾಭವನ್ನು ಪಡೆಯುವವರ ಯುಕ್ತಿಯನ್ನು ಹೀಗೆ ಛೇಡಿಸಿದ್ದಾರೆ:</p>.<p>‘ಮಂಕು ಮಂದಿಗೆ ಮೌಢ್ಯಮದ್ಯವನ್ನು ಕುಡಿಸಿರಯ್;</p>.<p>ಸುಳ್ಳು ಭಯವನು ಬಿತ್ತಿ ಚೆನ್ನಾಗಿ ದುಡಿಸಿರಯ್’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಳಿವಿನಸಿ</strong></p>.<p>ಹನುಮಂತನು ಸಮುದ್ರವನ್ನು ಲಂಘಿಸಲು ಮಹೇಂದ್ರಾಚಲ ಶೃಂಗದಿಂದ ಚಿಮ್ಮಿದನು. ಅವನು ತದೇಕಚಿತ್ತನಾಗಿ ಸಾಗುತ್ತಿದ್ದುದನ್ನು ಕುವೆಂಪು ಅವರು ಹೀಗೆ ಚಿತ್ರಿಸಿದ್ದಾರೆ:</p>.<p>‘ತಿಳಿವಿನಸಿಯಲಿ ಮಾಯೆಯನು ಕಡಿಕಡಿದು ನುಗ್ಗುವ ಯೋಗಿಯೊ?’</p>.<p>(ಸಮುದ್ರ ಲಂಘನ – ಖಂಡಕಾವ್ಯ)</p>.<p>ಅದರಲ್ಲಿ ಜ್ಞಾನದ ಅರಿವಿಗೆ ಒಳಗಾದ ‘ತಿಳಿವಿನಸಿ’ (ಅಸಿ=ಕತ್ತಿ) ತಿಳಿವಿನ ಕತ್ತಿಯಿಂದ ಮಾಯೆಯನ್ನು ಕಡಿಕಡಿದು ಮುನ್ನುಗಿದ ಯೋಗಿ ಆಂಜನೇಯನನ್ನು ಬಣ್ಣಿಸಿರುವ ರೀತಿ ಅನನ್ಯವಾಗಿದೆ</p>.<p><strong>ಮೌಢ್ಯಮೇಧ</strong></p>.<p>ಪುರೋಹಿತಶಾಹಿ ವ್ಯವಸ್ಥೆಯು ಅಷ್ಟ್ರಗ್ರಹ ನಿವಾರಣೆಗಾಗಿ ಯಜ್ಞಯಾಗಾದಿಗಳನ್ನು ನಡೆಸಿ ಜನರನ್ನು ಮೂಢರನ್ನಾಗಿಸುತ್ತಿತ್ತು. ಆ ಸಂದರ್ಭದಲ್ಲಿ 9-1-1962 ರಂದು ಕುವೆಂಪು ಅವರು ಜನರನ್ನು ವೈಜ್ಞಾನಿಕ ವಿಶ್ಲೇಷಣೆಯಲ್ಲಿ ವೈಚಾರಿಕವಾಗಿ ಚಿಂತಿಸಿ ಎಂದು ಹೇಳುತ್ತ ಜಾಗೃತಗೊಳಿಸಲು ರಚಿಸಿದ ಕವನ ‘ಮೌಢ್ಯಮೇಧ’ (ಮೇಧ=ಯಾಗ, ಯಜ್ಞ). ಧರ್ಮದ ಹೆಸರಿನಲ್ಲಿ ಜನಸಾಮಾನ್ಯರನ್ನು ಭೀತರನ್ನಾಗಿಸಿ ಸುಲಿಯುವ ವ್ಯವಸ್ಥೆಯೇ ಇದು. ಮೂಢತನ, ತಿಳಿಗೇಡಿತನವನ್ನು ಬಂಡವಾಳ ಮಾಡಿಕೊಂಡು ನಾಜೂಕಾಗಿ ಶೋಷಿಸುವ ಪುರೋಹಿತಶಾಹಿ ಹುನ್ನಾರ ಎಂದು ಕ್ರಾಂತಿಕಾರಿ ನುಡಿಗಳಲ್ಲಿ ಯಜ್ಞಾದಿಗಳನ್ನು ‘ಮೌಢ್ಯಮೇಧ’ ಪದ ರೂಪಿಸಿ ಖಂಡಿಸಿದರು.</p>.<p>‘ಎತ್ತಿ ಋತ್ವಿಕ್ಕರನು ಎಸೆ ಹೋಮ ಕುಂಡಕ್ಕೆ</p>.<p>ಅಷ್ಟಗ್ರಹಕೂಟ ದೋಷ ಪರಿಹಾರಕ್ಕೆ</p>.<p>(ಮೌಢ್ಯಮೇಧ - ಪ್ರೇತ-ಕ್ಯೂ)</p>.<p>ಕುವೆಂಪು ಅವರು ಮತ್ತೆ 29-1-1962ರಂದು ‘ಅಷ್ಟಗ್ರಹ ಯೋಗ ಸಿದ್ಧಿ’ ಕವನ ರಚಿಸಿ, ಲಾಭವನ್ನು ಪಡೆಯುವವರ ಯುಕ್ತಿಯನ್ನು ಹೀಗೆ ಛೇಡಿಸಿದ್ದಾರೆ:</p>.<p>‘ಮಂಕು ಮಂದಿಗೆ ಮೌಢ್ಯಮದ್ಯವನ್ನು ಕುಡಿಸಿರಯ್;</p>.<p>ಸುಳ್ಳು ಭಯವನು ಬಿತ್ತಿ ಚೆನ್ನಾಗಿ ದುಡಿಸಿರಯ್’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>