<p><strong>ನವದೆಹಲಿ</strong>: ‘ಜೂನ್ 4ರ ಲೋಕಸಭಾ ಫಲಿತಾಂಶದ ದಿನ ಷೇರು ಮಾರುಕಟ್ಟೆಯಲ್ಲಿ ‘ನ್ಯಾಯಯುತವಲ್ಲದ ವ್ಯವಹಾರ’ ನಡೆದಿರುವ ಕುರಿತಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ)ಗೆ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ’ ಎಂದು ಸೋಮವಾರ ಸಂಸತ್ತಿನಲ್ಲಿ ತಿಳಿಸಲಾಗಿದೆ. </p>.<p>ಫಲಿತಾಂಶ ದಿನದಂದು ಷೇರು ಸಂವೇದಿ ಸೂಚ್ಯಂಕ ಹಾಗೂ ಷೇರುಗಳ ಬೆಲೆ ದಿಢೀರ್ ಕುಸಿತದಿಂದ ಒಂದೇ ದಿನ ಹೂಡಿಕೆದಾರರಿಗೆ ₹30 ಲಕ್ಷ ಕೋಟಿ ನಷ್ಟವಾಗಿರುವುದು ಸತ್ಯವೇ ಎಂದು ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ,‘ಷೇರು ಮಾರುಕಟ್ಟೆಯು ಹೂಡಿಕೆದಾರರ ಗ್ರಹಿಕೆ ಹಾಗೂ ಇತರೆ ಅಂಶಗಳ ಆಧರಿಸಿ ಕಾರ್ಯಾಚರಿಸುತ್ತದೆ’ ಎಂದು ತಿಳಿಸಿದ್ದಾರೆ. </p>.<p>‘ಸಂಬಂಧಿತ ಪ್ರತಿನಿಧಿಗಳಿಂದ ಷೇರು ಮಾರುಕಟ್ಟೆಯಲ್ಲಿ ವಹಿವಾಟಿನ ಕುರಿತಂತೆ ಸೆ.ಬಿ ಮಾಹಿತಿ ಸ್ವೀಕರಿಸುತ್ತದೆ. ‘ನ್ಯಾಯಯುತವಲ್ಲದ ವ್ಯವಹಾರ’ದ ಕುರಿತಂತೆ ನಿರ್ದಿಷ್ಟ ಮಾಹಿತಿ ಸಿಕ್ಕಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.</p>.<p>ಕೇಂದ್ರದಲ್ಲಿ ಬಿಜೆಪಿ ಸರಳ ಬಹುಮತ ಪಡೆಯಲಿದೆ ಎಂದು ಜೂನ್ 3ರಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಮುಂಬೈ ಷೇರುಪೇಟೆ ಸೂಚ್ಯಂಕ(ಬಿಎಸ್ಇ) ಶೇ 3.4 ರಷ್ಟು ಏರಿಕೆಯಾಗಿತ್ತು. </p>.<p>ಫಲಿತಾಂಶದ ದಿನದಂದು ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂಬ ಖಚಿತ ಮಾಹಿತಿ ಬಳಿಕ ಷೇರು ಸೂಚ್ಯಂಕವು ಶೇ 6ರಷ್ಟು ಕುಸಿತ ಕಂಡಿತ್ತು. ಕಳೆದ ನಾಲ್ಕು ವರ್ಷದಲ್ಲಿ ಆ ದಿನ ಹೂಡಿಕೆದಾರರ ಸಂಪತ್ತು ₹30 ಲಕ್ಷದಷ್ಟು ಕರಗಿತ್ತು.</p>.<p>‘ಚುನಾವಣಾ ಫಲಿತಾಂಶದ ದಿನದಂದು ಬಿಎಸ್ಇ ಹಾಗೂ ಎನ್ಎಸ್ಇ ಸೂಚ್ಯಂಕವು ಕ್ರಮವಾಗಿ ಶೇ 5.7 ಹಾಗೂ 5.9ರಷ್ಟು ಕುಸಿತ ಕಂಡಿತ್ತು. ಮೂರು ದಿನಗಳಲ್ಲಿಯೇ ಚೇತರಿಸಿಕೊಂಡಿದ್ದು, ಜುಲೈ 18ಕ್ಕೆ ಕ್ರಮವಾಗಿ ಶೇ 12.9 ಹಾಗೂ 13.3ರಷ್ಟು ಏರಿಕೆ ದಾಖಲಿಸಿವೆ. ಕುಸಿತದಿಂದ ಹೂಡಿಕೆದಾರರ ಸಂಪತ್ತು ₹30 ಲಕ್ಷದಷ್ಟು ಕರಗಿದರೆ, ಐದು ದಿನಗಳಲ್ಲಿ ಮತ್ತೆ ಚೇತರಿಕೆ ಕಂಡಿದೆ. ಅಲ್ಲಿಂದ ಜುಲೈ 18ರವರೆಗೆ ಹೂಡಿಕೆದಾರರಿಗೆ ₹58 ಲಕ್ಷದಷ್ಟು ಸಂಪತ್ತು ಸೇರ್ಪಡೆಯಾಗಿದೆ’ ಎಂದು ಚೌಧರಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಜೂನ್ 4ರ ಲೋಕಸಭಾ ಫಲಿತಾಂಶದ ದಿನ ಷೇರು ಮಾರುಕಟ್ಟೆಯಲ್ಲಿ ‘ನ್ಯಾಯಯುತವಲ್ಲದ ವ್ಯವಹಾರ’ ನಡೆದಿರುವ ಕುರಿತಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ)ಗೆ ಯಾವುದೇ ನಿರ್ದಿಷ್ಟ ಮಾಹಿತಿ ಬಂದಿಲ್ಲ’ ಎಂದು ಸೋಮವಾರ ಸಂಸತ್ತಿನಲ್ಲಿ ತಿಳಿಸಲಾಗಿದೆ. </p>.<p>ಫಲಿತಾಂಶ ದಿನದಂದು ಷೇರು ಸಂವೇದಿ ಸೂಚ್ಯಂಕ ಹಾಗೂ ಷೇರುಗಳ ಬೆಲೆ ದಿಢೀರ್ ಕುಸಿತದಿಂದ ಒಂದೇ ದಿನ ಹೂಡಿಕೆದಾರರಿಗೆ ₹30 ಲಕ್ಷ ಕೋಟಿ ನಷ್ಟವಾಗಿರುವುದು ಸತ್ಯವೇ ಎಂದು ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ,‘ಷೇರು ಮಾರುಕಟ್ಟೆಯು ಹೂಡಿಕೆದಾರರ ಗ್ರಹಿಕೆ ಹಾಗೂ ಇತರೆ ಅಂಶಗಳ ಆಧರಿಸಿ ಕಾರ್ಯಾಚರಿಸುತ್ತದೆ’ ಎಂದು ತಿಳಿಸಿದ್ದಾರೆ. </p>.<p>‘ಸಂಬಂಧಿತ ಪ್ರತಿನಿಧಿಗಳಿಂದ ಷೇರು ಮಾರುಕಟ್ಟೆಯಲ್ಲಿ ವಹಿವಾಟಿನ ಕುರಿತಂತೆ ಸೆ.ಬಿ ಮಾಹಿತಿ ಸ್ವೀಕರಿಸುತ್ತದೆ. ‘ನ್ಯಾಯಯುತವಲ್ಲದ ವ್ಯವಹಾರ’ದ ಕುರಿತಂತೆ ನಿರ್ದಿಷ್ಟ ಮಾಹಿತಿ ಸಿಕ್ಕಿಲ್ಲ’ ಎಂದು ಸಚಿವರು ಸ್ಪಷ್ಟಪಡಿಸಿದರು.</p>.<p>ಕೇಂದ್ರದಲ್ಲಿ ಬಿಜೆಪಿ ಸರಳ ಬಹುಮತ ಪಡೆಯಲಿದೆ ಎಂದು ಜೂನ್ 3ರಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಮುಂಬೈ ಷೇರುಪೇಟೆ ಸೂಚ್ಯಂಕ(ಬಿಎಸ್ಇ) ಶೇ 3.4 ರಷ್ಟು ಏರಿಕೆಯಾಗಿತ್ತು. </p>.<p>ಫಲಿತಾಂಶದ ದಿನದಂದು ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂಬ ಖಚಿತ ಮಾಹಿತಿ ಬಳಿಕ ಷೇರು ಸೂಚ್ಯಂಕವು ಶೇ 6ರಷ್ಟು ಕುಸಿತ ಕಂಡಿತ್ತು. ಕಳೆದ ನಾಲ್ಕು ವರ್ಷದಲ್ಲಿ ಆ ದಿನ ಹೂಡಿಕೆದಾರರ ಸಂಪತ್ತು ₹30 ಲಕ್ಷದಷ್ಟು ಕರಗಿತ್ತು.</p>.<p>‘ಚುನಾವಣಾ ಫಲಿತಾಂಶದ ದಿನದಂದು ಬಿಎಸ್ಇ ಹಾಗೂ ಎನ್ಎಸ್ಇ ಸೂಚ್ಯಂಕವು ಕ್ರಮವಾಗಿ ಶೇ 5.7 ಹಾಗೂ 5.9ರಷ್ಟು ಕುಸಿತ ಕಂಡಿತ್ತು. ಮೂರು ದಿನಗಳಲ್ಲಿಯೇ ಚೇತರಿಸಿಕೊಂಡಿದ್ದು, ಜುಲೈ 18ಕ್ಕೆ ಕ್ರಮವಾಗಿ ಶೇ 12.9 ಹಾಗೂ 13.3ರಷ್ಟು ಏರಿಕೆ ದಾಖಲಿಸಿವೆ. ಕುಸಿತದಿಂದ ಹೂಡಿಕೆದಾರರ ಸಂಪತ್ತು ₹30 ಲಕ್ಷದಷ್ಟು ಕರಗಿದರೆ, ಐದು ದಿನಗಳಲ್ಲಿ ಮತ್ತೆ ಚೇತರಿಕೆ ಕಂಡಿದೆ. ಅಲ್ಲಿಂದ ಜುಲೈ 18ರವರೆಗೆ ಹೂಡಿಕೆದಾರರಿಗೆ ₹58 ಲಕ್ಷದಷ್ಟು ಸಂಪತ್ತು ಸೇರ್ಪಡೆಯಾಗಿದೆ’ ಎಂದು ಚೌಧರಿ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>