<p>ಮಹಾಭಾರತದ ಅರಣ್ಯ ಪರ್ವದಲ್ಲಿ ಒಂದು ಘಟನೆ ಬರುತ್ತದೆ. ಒಂದು ದಿನ ಎತ್ತರದ ಮರದ ತುದಿಯಲ್ಲಿ ಒಂದೇ ಒಂದು ಹಣ್ಣು ಇರುವುದು ದ್ರೌಪದಿಗೆ ಕಾಣುತ್ತದೆ. ‘ಅದು ನನಗೆ ಬೇಕು, ತಂದುಕೊಡು’ ಎಂದು ಭೀಮನಿಗೆ ಹೇಳುತ್ತಾಳೆ. ‘ಅಷ್ಟೇ ತಾನೆ’ ಎಂದು ಭೀಮ ಆ ಹಣ್ಣನ್ನು ತಂದುಕೊಡುತ್ತಾನೆ. ಹಣ್ಣು ದ್ರೌಪದಿಯ ಕೈಗೆ ಬಂದ ತಕ್ಷಣವೇ ಬಹಳಷ್ಟು ಅಪಶಕುನಗಳಾಗುತ್ತವೆ. ಮುಂದೆ ಯಾವುದೋ ಕೆಟ್ಟ ಘಟನೆ ನಡೆಯುವ ಮುನ್ಸೂಚನೆಗಳು ಸಿಗುತ್ತವೆ. ಇದರಿಂದ ಪಾಂಡವರು ಭೀತಿಗೆ ಒಳಗಾಗುತ್ತಾರೆ. ಆಗ ಧರ್ಮರಾಯನು ಕೃಷ್ಣನನ್ನು ಕರೆಯುತ್ತಾನೆ. </p><p>ಕೃಷ್ಣ ಬಂದವನೇ ಭೀಮ ಕಿತ್ತ ಹಣ್ಣಿನ ಮರದ ವೈಶಿಷ್ಟ್ಯಗಳನ್ನು ವಿವರಿಸುತ್ತಾನೆ. ‘ಅಯ್ಯಾ ಭೀಮ, ನೀನು ದುಡುಕಿ ಹಣ್ಣು ಕಿತ್ತೆಯಲ್ಲ ಆ ಮರದ ಹೆಸರು ಜಂಬೂಫಲ ವೃಕ್ಷ. ಆ ಮರದ ಕೆಳಗೆ ಒಬ್ಬ ಮಹಾನ್ ತಪಸ್ವಿ ತಪಸ್ಸು ಮಾಡುತ್ತಿದ್ದಾನೆ. ವರ್ಷದಲ್ಲಿ ಒಂದು ಬಾರಿ ಮಾತ್ರ ತಪಸ್ಸಿನಿಂದ ಏಳುತ್ತಾನೆ. ಅವನು ಕಣ್ಣು ಬಿಟ್ಟು ಮರದ ತುದಿ ನೋಡುತ್ತಾನೆ. ಜಂಬೂಫಲ ಅವನ ಕೈಗೆ ಬೀಳುತ್ತದೆ. ಅದನ್ನು ಆಹಾರವಾಗಿ ಸೇವಿಸಿ ಮತ್ತೆ ಒಂದು ವರ್ಷ ತಪಸ್ಸಿನಲ್ಲಿ ತೊಡಗುತ್ತಾನೆ. ಒಂದೊಮ್ಮೆ ತಪಸ್ವಿ ಕಣ್ಣು ಬಿಟ್ಟಾಗ ಮರದ ತುದಿಯಲ್ಲಿ ಹಣ್ಣು ಕಾಣದೇ ಇದ್ದರೆ ಆ ಹಣ್ಣಿಗಾಗಿ ಆಸೆಪಟ್ಟವರು ಮತ್ತು ಕಿತ್ತವರ ತಲೆ ಹೋಳಾಗುತ್ತದೆ. ತಪಸ್ವಿ ಕಣ್ಣು ಬಿಡುವುದರೊಳಗಾಗಿ ಹಣ್ಣನ್ನು ಅದು ಮೊದಲಿದ್ದ ಸ್ಥಾನಕ್ಕೆ ಸೇರಿಸಬೇಕು’ ಎನ್ನುತ್ತಾನೆ.</p><p>‘ಇದಕ್ಕೆ ಪರಿಹಾರ ಏನು?’ ಎಂದು ಧರ್ಮರಾಯ ಕೇಳಿದಾಗ ‘ದ್ರೌಪದಿ ಕೈಯಲ್ಲಿರುವ ಹಣ್ಣನ್ನು ನೆಲಕ್ಕೆ ಇಡಬೇಕು. ದ್ರೌಪದಿಯೂ ಸೇರಿದಂತೆ ಪಾಂಡವರೆಲ್ಲರೂ ತಮ್ಮ ಜೀವಿತಾವಧಿಯಲ್ಲಿ ಯಾರಿಗೂ ತಿಳಿಸದ ಗುಟ್ಟನ್ನು ಬಹಿರಂಗ ಮಾಡಿದರೆ ಹಣ್ಣು ಆಳೆತ್ತರ ಆಳೆತ್ತರ ಮೇಲಕ್ಕೆ ಹೋಗಿ ತನ್ನ ಸ್ಥಾನವನ್ನು ಸೇರಿಕೊಳ್ಳುತ್ತದೆ’ ಎಂದು ಕೃಷ್ಣ ಉಪಾಯ ಹೇಳಿದ. ಅದರಂತೆ ಧರ್ಮರಾಯನೂ ಸೇರಿ ಪಾಂಡವರೆಲ್ಲರೂ ತಮ್ಮ ತಮ್ಮ ಗುಟ್ಟುಗಳನ್ನು ಹೇಳಿದರು. ಹಣ್ಣು ಮೇಲಕ್ಕೆ ಹೋಗಿ ಇನ್ನೊಂದು ಆಳೆತ್ತರದಲ್ಲಿ ಸ್ವಸ್ಥಾನ ತಲುಪುವ ಹಂತಕ್ಕೆ ಬಂತು. ಆಗ ದ್ರೌಪದಿಯ ಸರದಿ ಬಂತು. ಆಕೆ ಹೇಳಿದ ಗುಟ್ಟು ಹೊರಬರುತ್ತಿದ್ದಂತೆ ಮೇಲಿದ್ದ ಹಣ್ಣು ನೆಲಕ್ಕೆ ಬಿತ್ತು. ‘ಯಾಕೆ ಹೀಗೆ?’ ಎಂದು ಕೇಳಿದಾಗ, ಕೃಷ್ಣ ‘ದ್ರೌಪದಿ ನೀನು ಸುಳ್ಳು ಹೇಳುತ್ತಾ ಇದ್ದೀಯ’ ಎಂದಾಗ ದ್ರೌಪದಿ ತಾನು ಕರ್ಣನನ್ನೂ ಬಯಸಿದ ಸತ್ಯವನ್ನು ಬಹಿರಂಗಪಡಿಸಿದಳು. ಹಣ್ಣು ಸ್ವಸ್ಥಾನ ಸೇರಿತು.</p><p>ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಿತಿಯೂ ಹೀಗೆಯೇ ಆಗಿದೆ. ಮುಡಾ ಪ್ರಕರಣದ ಬಗ್ಗೆ ಅವರು, ಅವರ ಹಿಂಬಾಲಕರು, ಸಚಿವ ಸಂಪುಟದ ಸಹೋದ್ಯೋಗಿಗಳು ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆ ಎಂದುಕೊಂಡರೂ ಪ್ರಕರಣ ಸುಖಾಂತ್ಯವಾಗುತ್ತಿಲ್ಲ. ಯಾಕೆ? ಯಾಕೆಂದರೆ ಈ ಪ್ರಕರಣದ ಕೇಂದ್ರಬಿಂದು<br>ವಾಗಿರುವ ಮುಖ್ಯಮಂತ್ರಿ ಪತ್ನಿ ಇನ್ನೂ ಮಾತನಾಡಿಲ್ಲ. ಮುಖ್ಯಮಂತ್ರಿ ಪತ್ನಿಗೆ ದಾನ ಕೊಟ್ಟ ಭಾಮೈದ ಕೂಡ ಬಾಯಿ ಬಿಟ್ಟಿಲ್ಲ.</p><p>ಈ ವಿಷಯದ ಬಗ್ಗೆ ಸಿದ್ದರಾಮಯ್ಯ ಅವರು ಬಹಳಷ್ಟು ಮಾತನಾಡಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ವೀರಾವೇಶದ ಘೋಷಣೆ ಮಾಡಿದ್ದಾರೆ. ಅವರ ಸಂಪುಟದ ಸಚಿವರೂ ಸಮರ್ಥನೆ ನೀಡಿದ್ದಾರೆ. ಪ್ರಕರಣದ ತನಿಖೆಗೆ ನ್ಯಾಯಾಂಗ ಆಯೋಗವನ್ನೂ ರಚಿಸಲಾಗಿದೆ. ಆದರೂ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆಯನ್ನು ಒಪ್ಪಿಕೊಳ್ಳಲು ಜನ ಸಿದ್ಧರಿಲ್ಲ. ನ್ಯಾಯಾಂಗದ ವರದಿಯಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ತಪ್ಪು ಮಾಡಿಲ್ಲ ಎಂಬ ವರದಿ ಬಂದರೂ ಜನ ನಂಬುವುದಿಲ್ಲ. ಈ ಪ್ರಕರಣವನ್ನು ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವಂತೆ ಸಿಬಿಐ ತನಿಖೆಗೆ ಒಪ್ಪಿಸಿ ಅಲ್ಲಿಂದಲೂ ಕ್ಲೀನ್ ಚಿಟ್ ಬಂದರೂ ಜನರಿಗೆ ಸಮಾಧಾನವಾಗುವುದಿಲ್ಲ. ಯಾಕೆಂದರೆ ಜನರ ಮನಃಸ್ಥಿತಿ ಅಷ್ಟೊಂದು ಹದಗೆಟ್ಟು ಹೋಗಿದೆ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಅವರಿಲ್ಲ. ಒಮ್ಮೆ ಅವರು ನಾಯಿ ಮಾಂಸ ಎಂದು ನಂಬಿಬಿಟ್ಟ ಮೇಲೆ ಯಾವ ಪ್ರಯೋಗಾಲಯದ ವರದಿ ಬಂದರೂ ಅವರು ನಂಬುವುದಿಲ್ಲ.</p><p>ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾಗಿಯೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕಾಂಗಿಯಾಗಿ ಹೋರಾಟವನ್ನೂ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆಯುವುದರೊಳಗೇ ಇಂತಹ ಸ್ಥಿತಿ ಯಾಕೆ ಬಂತು? ದೇವರಾಜ ಅರಸು ನಂತರ ಮುಖ್ಯಮಂತ್ರಿ<br>ಯಾಗಿ ಐದು ವರ್ಷದ ಅವಧಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿದ್ದು ಸಿದ್ದರಾಮಯ್ಯ ಮಾತ್ರ. ಅರಸು ಅವರಂತೆಯೇ ಸಿದ್ದರಾಮಯ್ಯ ಅವರನ್ನೂ ಪದಚ್ಯುತಗೊಳಿಸುವ ತಂತ್ರ ನಡೆಯುತ್ತಿರಬಹುದೇ? ‘ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅರಸು ವಿರುದ್ಧ ಮಾಡಿದ ಪಿತೂರಿಯನ್ನೇ ನನ್ನ ವಿರುದ್ಧವೂ ನಡೆಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಅದರಲ್ಲಿ ಸತ್ಯ ಇರಬಹುದೇ?</p><p>ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ಒಂದು ವರ್ಷ ಕಳೆಯುವುದರೊಳಗೇ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಿಕೊಂಡಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಸಿದ್ದರಾಮಯ್ಯ ಅನುಭವಿಸುತ್ತಿರುವ ಎಲ್ಲ ಸಂಕಷ್ಟಗಳಿಗೂ ಮುಕ್ತಿ ದೊರೆಯುತ್ತದೆ. ತಮ್ಮ ನಲವತ್ತು ವರ್ಷಗಳ ರಾಜಕೀಯದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲ ಎಂದು ಅವರು ಹೇಳಿಕೊಳ್ಳುತ್ತಾರೆ. ಅದು ನಿಜ ಎಂದೂ ಒಪ್ಪೋಣ. ಆದರೆ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ನಂತರ ಆಡಳಿತದಲ್ಲಿ ಅವರ ಹಿಡಿತ ಹಿಂದಿನ ಬಾರಿಯ ಹಾಗೆ ಬಿಗಿಯಾಗಿಲ್ಲ ಎಂದು ಅವರ ಹಿಂಬಾಲಕರೇ ಹೇಳುತ್ತಿದ್ದಾರೆ. </p><p>ಸಂಪುಟದ ಸಚಿವರಿಂದಲೂ ವಿರೋಧ ಪಕ್ಷದಲ್ಲಿ ಇರುವ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಾಯಲ್ಲೂ ಇಂತಹ ಮಾತುಗಳು ಬಂದಿವೆ. ಸಂಸದರಾಗಿದ್ದ ಪ್ರತಾಪ ಸಿಂಹ ಅವರಂತೂ ‘ಸಿದ್ದರಾಮಯ್ಯ ಭ್ರಷ್ಟ ಎಂದು ಹೇಳಲಾರೆ’ ಎಂದಿದ್ದಾರೆ. ಇಷ್ಟೆಲ್ಲಾ ಇದ್ದೂ ಸಿದ್ದರಾಮಯ್ಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ಹೇಗೆ ಎಂದು ಕೇಳಿದರೆ, ಆಡಳಿತದ ಮೇಲೆ ಹಿಡಿತ ತಪ್ಪಿದ್ದೇ ಕಾರಣ ಎಂಬ ಉತ್ತರ ಬರುತ್ತದೆ. ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರದಲ್ಲಿ ಆಡಳಿತ ಸಡಿಲವಾಗಿರಬಹುದೇ?</p><p>ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ, ರಾಜ್ಯ ಸರ್ಕಾರಕ್ಕೆ ಇನ್ನೂ ಒಂದೇ ವರ್ಷ ಆಗಿದೆ ಎನ್ನುವುದನ್ನು ನಂಬುವುದು ಕಷ್ಟ. ಮುಡಾ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ರಾಜ್ಯದ ಎಲ್ಲ ರಾಜಕಾರಣಿಗಳ ನಿದ್ದೆ ಕೆಡಿಸಿವೆ. ವಿಧಾನಸಭೆ ಅಧಿವೇಶನದ ಬಹುಪಾಲು ಸಮಯವನ್ನು ಈ ವಿಷಯಗಳೇ ತಿಂದುಹಾಕಿವೆ. ಬಿಜೆಪಿ– ಜೆಡಿಎಸ್ ಮೈತ್ರಿಕೂಟದವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಆ ಕಡೆ ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲರು ಮತ್ತೊಂದು ಪಾದಯಾತ್ರೆಯ ಮಾತನಾಡುತ್ತಿದ್ದಾರೆ. ಬಿಜೆಪಿ– ಜೆಡಿಎಸ್ ಪಾದಯಾತ್ರೆ ನಡೆಸುವ ಎಲ್ಲ ಕಡೆ ತಾವೂ ಸಂಘರ್ಷ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.</p><p>ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷವೋ ಆರು ತಿಂಗಳೋ ಇದ್ದಾಗ ಇಂತಹ ಪಾದಯಾತ್ರೆಗಳು ನಡೆಯುವುದು ಮಾಮೂಲು. ಆದರೆ ಸದ್ಯಕ್ಕೆ ಚುನಾವಣೆಯೇನೂ ಇಲ್ಲ. ರಾಜ್ಯ ರಾಜಕೀಯದಲ್ಲಿ ಈಗ ಅಕಾಲಿಕ ಮಳೆ. ಅಕಾಲಿಕ ಮಳೆ ಯಾವ ಬೆಳೆಗೂ ಒಳ್ಳೆಯದಲ್ಲ ಎಂಬುದು ತಜ್ಞರ ಅಂಬೋಣ.</p><p>ಪ್ರಜಾಪ್ರಭುತ್ವದಲ್ಲಿ ಚುನಾವಣೆಯೇ ಜಂಬೂಫಲ ವೃಕ್ಷ. ಅಧಿಕಾರವೆಂಬುದೇ ಹಣ್ಣು. ಮಹಾಭಾರತದ ಕಾಲದಲ್ಲಿ ಸತ್ಯ ಹೇಳಿದರೆ ಹಣ್ಣಿನ ಹತ್ತಿರಕ್ಕೆ ಹೋಗಬಹುದಿತ್ತು. ಆದರೆ ಈಗ ಕಲಿಯುಗ. ಸುಳ್ಳು ಹೇಳಿದಷ್ಟೂ ಹಣ್ಣಿನ ಹತ್ತಿರ ಹೋಗಬಹುದು. ಹಣ್ಣಿನ ಮೇಲೆ ಕಣ್ಣು ಎಲ್ಲರಿಗೂ ಇರುತ್ತದೆ. ನಮ್ಮ ಜನ ಸುಳ್ಳಿಗೆ ಮರುಳಾದ ಹಾಗೆ ಸತ್ಯಕ್ಕೆ ವಶವಾಗುವುದಿಲ್ಲ. ಬಹುತೇಕ ಎಲ್ಲ ಚುನಾವಣೆಯಲ್ಲಿಯೂ ಇದು ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ಬಿಗಿಗೊಳಿಸುವುದೇ ಸಿದ್ದರಾಮಯ್ಯ ಅವರ ಮುಂದಿರುವ ದಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾಭಾರತದ ಅರಣ್ಯ ಪರ್ವದಲ್ಲಿ ಒಂದು ಘಟನೆ ಬರುತ್ತದೆ. ಒಂದು ದಿನ ಎತ್ತರದ ಮರದ ತುದಿಯಲ್ಲಿ ಒಂದೇ ಒಂದು ಹಣ್ಣು ಇರುವುದು ದ್ರೌಪದಿಗೆ ಕಾಣುತ್ತದೆ. ‘ಅದು ನನಗೆ ಬೇಕು, ತಂದುಕೊಡು’ ಎಂದು ಭೀಮನಿಗೆ ಹೇಳುತ್ತಾಳೆ. ‘ಅಷ್ಟೇ ತಾನೆ’ ಎಂದು ಭೀಮ ಆ ಹಣ್ಣನ್ನು ತಂದುಕೊಡುತ್ತಾನೆ. ಹಣ್ಣು ದ್ರೌಪದಿಯ ಕೈಗೆ ಬಂದ ತಕ್ಷಣವೇ ಬಹಳಷ್ಟು ಅಪಶಕುನಗಳಾಗುತ್ತವೆ. ಮುಂದೆ ಯಾವುದೋ ಕೆಟ್ಟ ಘಟನೆ ನಡೆಯುವ ಮುನ್ಸೂಚನೆಗಳು ಸಿಗುತ್ತವೆ. ಇದರಿಂದ ಪಾಂಡವರು ಭೀತಿಗೆ ಒಳಗಾಗುತ್ತಾರೆ. ಆಗ ಧರ್ಮರಾಯನು ಕೃಷ್ಣನನ್ನು ಕರೆಯುತ್ತಾನೆ. </p><p>ಕೃಷ್ಣ ಬಂದವನೇ ಭೀಮ ಕಿತ್ತ ಹಣ್ಣಿನ ಮರದ ವೈಶಿಷ್ಟ್ಯಗಳನ್ನು ವಿವರಿಸುತ್ತಾನೆ. ‘ಅಯ್ಯಾ ಭೀಮ, ನೀನು ದುಡುಕಿ ಹಣ್ಣು ಕಿತ್ತೆಯಲ್ಲ ಆ ಮರದ ಹೆಸರು ಜಂಬೂಫಲ ವೃಕ್ಷ. ಆ ಮರದ ಕೆಳಗೆ ಒಬ್ಬ ಮಹಾನ್ ತಪಸ್ವಿ ತಪಸ್ಸು ಮಾಡುತ್ತಿದ್ದಾನೆ. ವರ್ಷದಲ್ಲಿ ಒಂದು ಬಾರಿ ಮಾತ್ರ ತಪಸ್ಸಿನಿಂದ ಏಳುತ್ತಾನೆ. ಅವನು ಕಣ್ಣು ಬಿಟ್ಟು ಮರದ ತುದಿ ನೋಡುತ್ತಾನೆ. ಜಂಬೂಫಲ ಅವನ ಕೈಗೆ ಬೀಳುತ್ತದೆ. ಅದನ್ನು ಆಹಾರವಾಗಿ ಸೇವಿಸಿ ಮತ್ತೆ ಒಂದು ವರ್ಷ ತಪಸ್ಸಿನಲ್ಲಿ ತೊಡಗುತ್ತಾನೆ. ಒಂದೊಮ್ಮೆ ತಪಸ್ವಿ ಕಣ್ಣು ಬಿಟ್ಟಾಗ ಮರದ ತುದಿಯಲ್ಲಿ ಹಣ್ಣು ಕಾಣದೇ ಇದ್ದರೆ ಆ ಹಣ್ಣಿಗಾಗಿ ಆಸೆಪಟ್ಟವರು ಮತ್ತು ಕಿತ್ತವರ ತಲೆ ಹೋಳಾಗುತ್ತದೆ. ತಪಸ್ವಿ ಕಣ್ಣು ಬಿಡುವುದರೊಳಗಾಗಿ ಹಣ್ಣನ್ನು ಅದು ಮೊದಲಿದ್ದ ಸ್ಥಾನಕ್ಕೆ ಸೇರಿಸಬೇಕು’ ಎನ್ನುತ್ತಾನೆ.</p><p>‘ಇದಕ್ಕೆ ಪರಿಹಾರ ಏನು?’ ಎಂದು ಧರ್ಮರಾಯ ಕೇಳಿದಾಗ ‘ದ್ರೌಪದಿ ಕೈಯಲ್ಲಿರುವ ಹಣ್ಣನ್ನು ನೆಲಕ್ಕೆ ಇಡಬೇಕು. ದ್ರೌಪದಿಯೂ ಸೇರಿದಂತೆ ಪಾಂಡವರೆಲ್ಲರೂ ತಮ್ಮ ಜೀವಿತಾವಧಿಯಲ್ಲಿ ಯಾರಿಗೂ ತಿಳಿಸದ ಗುಟ್ಟನ್ನು ಬಹಿರಂಗ ಮಾಡಿದರೆ ಹಣ್ಣು ಆಳೆತ್ತರ ಆಳೆತ್ತರ ಮೇಲಕ್ಕೆ ಹೋಗಿ ತನ್ನ ಸ್ಥಾನವನ್ನು ಸೇರಿಕೊಳ್ಳುತ್ತದೆ’ ಎಂದು ಕೃಷ್ಣ ಉಪಾಯ ಹೇಳಿದ. ಅದರಂತೆ ಧರ್ಮರಾಯನೂ ಸೇರಿ ಪಾಂಡವರೆಲ್ಲರೂ ತಮ್ಮ ತಮ್ಮ ಗುಟ್ಟುಗಳನ್ನು ಹೇಳಿದರು. ಹಣ್ಣು ಮೇಲಕ್ಕೆ ಹೋಗಿ ಇನ್ನೊಂದು ಆಳೆತ್ತರದಲ್ಲಿ ಸ್ವಸ್ಥಾನ ತಲುಪುವ ಹಂತಕ್ಕೆ ಬಂತು. ಆಗ ದ್ರೌಪದಿಯ ಸರದಿ ಬಂತು. ಆಕೆ ಹೇಳಿದ ಗುಟ್ಟು ಹೊರಬರುತ್ತಿದ್ದಂತೆ ಮೇಲಿದ್ದ ಹಣ್ಣು ನೆಲಕ್ಕೆ ಬಿತ್ತು. ‘ಯಾಕೆ ಹೀಗೆ?’ ಎಂದು ಕೇಳಿದಾಗ, ಕೃಷ್ಣ ‘ದ್ರೌಪದಿ ನೀನು ಸುಳ್ಳು ಹೇಳುತ್ತಾ ಇದ್ದೀಯ’ ಎಂದಾಗ ದ್ರೌಪದಿ ತಾನು ಕರ್ಣನನ್ನೂ ಬಯಸಿದ ಸತ್ಯವನ್ನು ಬಹಿರಂಗಪಡಿಸಿದಳು. ಹಣ್ಣು ಸ್ವಸ್ಥಾನ ಸೇರಿತು.</p><p>ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಿತಿಯೂ ಹೀಗೆಯೇ ಆಗಿದೆ. ಮುಡಾ ಪ್ರಕರಣದ ಬಗ್ಗೆ ಅವರು, ಅವರ ಹಿಂಬಾಲಕರು, ಸಚಿವ ಸಂಪುಟದ ಸಹೋದ್ಯೋಗಿಗಳು ಎಲ್ಲರೂ ಸತ್ಯವನ್ನೇ ಹೇಳುತ್ತಿದ್ದಾರೆ ಎಂದುಕೊಂಡರೂ ಪ್ರಕರಣ ಸುಖಾಂತ್ಯವಾಗುತ್ತಿಲ್ಲ. ಯಾಕೆ? ಯಾಕೆಂದರೆ ಈ ಪ್ರಕರಣದ ಕೇಂದ್ರಬಿಂದು<br>ವಾಗಿರುವ ಮುಖ್ಯಮಂತ್ರಿ ಪತ್ನಿ ಇನ್ನೂ ಮಾತನಾಡಿಲ್ಲ. ಮುಖ್ಯಮಂತ್ರಿ ಪತ್ನಿಗೆ ದಾನ ಕೊಟ್ಟ ಭಾಮೈದ ಕೂಡ ಬಾಯಿ ಬಿಟ್ಟಿಲ್ಲ.</p><p>ಈ ವಿಷಯದ ಬಗ್ಗೆ ಸಿದ್ದರಾಮಯ್ಯ ಅವರು ಬಹಳಷ್ಟು ಮಾತನಾಡಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ವೀರಾವೇಶದ ಘೋಷಣೆ ಮಾಡಿದ್ದಾರೆ. ಅವರ ಸಂಪುಟದ ಸಚಿವರೂ ಸಮರ್ಥನೆ ನೀಡಿದ್ದಾರೆ. ಪ್ರಕರಣದ ತನಿಖೆಗೆ ನ್ಯಾಯಾಂಗ ಆಯೋಗವನ್ನೂ ರಚಿಸಲಾಗಿದೆ. ಆದರೂ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆಯನ್ನು ಒಪ್ಪಿಕೊಳ್ಳಲು ಜನ ಸಿದ್ಧರಿಲ್ಲ. ನ್ಯಾಯಾಂಗದ ವರದಿಯಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ತಪ್ಪು ಮಾಡಿಲ್ಲ ಎಂಬ ವರದಿ ಬಂದರೂ ಜನ ನಂಬುವುದಿಲ್ಲ. ಈ ಪ್ರಕರಣವನ್ನು ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವಂತೆ ಸಿಬಿಐ ತನಿಖೆಗೆ ಒಪ್ಪಿಸಿ ಅಲ್ಲಿಂದಲೂ ಕ್ಲೀನ್ ಚಿಟ್ ಬಂದರೂ ಜನರಿಗೆ ಸಮಾಧಾನವಾಗುವುದಿಲ್ಲ. ಯಾಕೆಂದರೆ ಜನರ ಮನಃಸ್ಥಿತಿ ಅಷ್ಟೊಂದು ಹದಗೆಟ್ಟು ಹೋಗಿದೆ. ಯಾರನ್ನೂ ನಂಬುವ ಸ್ಥಿತಿಯಲ್ಲಿ ಅವರಿಲ್ಲ. ಒಮ್ಮೆ ಅವರು ನಾಯಿ ಮಾಂಸ ಎಂದು ನಂಬಿಬಿಟ್ಟ ಮೇಲೆ ಯಾವ ಪ್ರಯೋಗಾಲಯದ ವರದಿ ಬಂದರೂ ಅವರು ನಂಬುವುದಿಲ್ಲ.</p><p>ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾಗಿಯೂ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕಾಂಗಿಯಾಗಿ ಹೋರಾಟವನ್ನೂ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆಯುವುದರೊಳಗೇ ಇಂತಹ ಸ್ಥಿತಿ ಯಾಕೆ ಬಂತು? ದೇವರಾಜ ಅರಸು ನಂತರ ಮುಖ್ಯಮಂತ್ರಿ<br>ಯಾಗಿ ಐದು ವರ್ಷದ ಅವಧಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿದ್ದು ಸಿದ್ದರಾಮಯ್ಯ ಮಾತ್ರ. ಅರಸು ಅವರಂತೆಯೇ ಸಿದ್ದರಾಮಯ್ಯ ಅವರನ್ನೂ ಪದಚ್ಯುತಗೊಳಿಸುವ ತಂತ್ರ ನಡೆಯುತ್ತಿರಬಹುದೇ? ‘ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅರಸು ವಿರುದ್ಧ ಮಾಡಿದ ಪಿತೂರಿಯನ್ನೇ ನನ್ನ ವಿರುದ್ಧವೂ ನಡೆಸುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಅದರಲ್ಲಿ ಸತ್ಯ ಇರಬಹುದೇ?</p><p>ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ, ಒಂದು ವರ್ಷ ಕಳೆಯುವುದರೊಳಗೇ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಿಕೊಂಡಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ಸಿಕ್ಕರೆ ಸಿದ್ದರಾಮಯ್ಯ ಅನುಭವಿಸುತ್ತಿರುವ ಎಲ್ಲ ಸಂಕಷ್ಟಗಳಿಗೂ ಮುಕ್ತಿ ದೊರೆಯುತ್ತದೆ. ತಮ್ಮ ನಲವತ್ತು ವರ್ಷಗಳ ರಾಜಕೀಯದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲ ಎಂದು ಅವರು ಹೇಳಿಕೊಳ್ಳುತ್ತಾರೆ. ಅದು ನಿಜ ಎಂದೂ ಒಪ್ಪೋಣ. ಆದರೆ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ನಂತರ ಆಡಳಿತದಲ್ಲಿ ಅವರ ಹಿಡಿತ ಹಿಂದಿನ ಬಾರಿಯ ಹಾಗೆ ಬಿಗಿಯಾಗಿಲ್ಲ ಎಂದು ಅವರ ಹಿಂಬಾಲಕರೇ ಹೇಳುತ್ತಿದ್ದಾರೆ. </p><p>ಸಂಪುಟದ ಸಚಿವರಿಂದಲೂ ವಿರೋಧ ಪಕ್ಷದಲ್ಲಿ ಇರುವ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಾಯಲ್ಲೂ ಇಂತಹ ಮಾತುಗಳು ಬಂದಿವೆ. ಸಂಸದರಾಗಿದ್ದ ಪ್ರತಾಪ ಸಿಂಹ ಅವರಂತೂ ‘ಸಿದ್ದರಾಮಯ್ಯ ಭ್ರಷ್ಟ ಎಂದು ಹೇಳಲಾರೆ’ ಎಂದಿದ್ದಾರೆ. ಇಷ್ಟೆಲ್ಲಾ ಇದ್ದೂ ಸಿದ್ದರಾಮಯ್ಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ಹೇಗೆ ಎಂದು ಕೇಳಿದರೆ, ಆಡಳಿತದ ಮೇಲೆ ಹಿಡಿತ ತಪ್ಪಿದ್ದೇ ಕಾರಣ ಎಂಬ ಉತ್ತರ ಬರುತ್ತದೆ. ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರದಲ್ಲಿ ಆಡಳಿತ ಸಡಿಲವಾಗಿರಬಹುದೇ?</p><p>ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ, ರಾಜ್ಯ ಸರ್ಕಾರಕ್ಕೆ ಇನ್ನೂ ಒಂದೇ ವರ್ಷ ಆಗಿದೆ ಎನ್ನುವುದನ್ನು ನಂಬುವುದು ಕಷ್ಟ. ಮುಡಾ ಪ್ರಕರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ರಾಜ್ಯದ ಎಲ್ಲ ರಾಜಕಾರಣಿಗಳ ನಿದ್ದೆ ಕೆಡಿಸಿವೆ. ವಿಧಾನಸಭೆ ಅಧಿವೇಶನದ ಬಹುಪಾಲು ಸಮಯವನ್ನು ಈ ವಿಷಯಗಳೇ ತಿಂದುಹಾಕಿವೆ. ಬಿಜೆಪಿ– ಜೆಡಿಎಸ್ ಮೈತ್ರಿಕೂಟದವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಆ ಕಡೆ ರಮೇಶ ಜಾರಕಿಹೊಳಿ, ಬಸನಗೌಡ ಪಾಟೀಲರು ಮತ್ತೊಂದು ಪಾದಯಾತ್ರೆಯ ಮಾತನಾಡುತ್ತಿದ್ದಾರೆ. ಬಿಜೆಪಿ– ಜೆಡಿಎಸ್ ಪಾದಯಾತ್ರೆ ನಡೆಸುವ ಎಲ್ಲ ಕಡೆ ತಾವೂ ಸಂಘರ್ಷ ನಡೆಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.</p><p>ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷವೋ ಆರು ತಿಂಗಳೋ ಇದ್ದಾಗ ಇಂತಹ ಪಾದಯಾತ್ರೆಗಳು ನಡೆಯುವುದು ಮಾಮೂಲು. ಆದರೆ ಸದ್ಯಕ್ಕೆ ಚುನಾವಣೆಯೇನೂ ಇಲ್ಲ. ರಾಜ್ಯ ರಾಜಕೀಯದಲ್ಲಿ ಈಗ ಅಕಾಲಿಕ ಮಳೆ. ಅಕಾಲಿಕ ಮಳೆ ಯಾವ ಬೆಳೆಗೂ ಒಳ್ಳೆಯದಲ್ಲ ಎಂಬುದು ತಜ್ಞರ ಅಂಬೋಣ.</p><p>ಪ್ರಜಾಪ್ರಭುತ್ವದಲ್ಲಿ ಚುನಾವಣೆಯೇ ಜಂಬೂಫಲ ವೃಕ್ಷ. ಅಧಿಕಾರವೆಂಬುದೇ ಹಣ್ಣು. ಮಹಾಭಾರತದ ಕಾಲದಲ್ಲಿ ಸತ್ಯ ಹೇಳಿದರೆ ಹಣ್ಣಿನ ಹತ್ತಿರಕ್ಕೆ ಹೋಗಬಹುದಿತ್ತು. ಆದರೆ ಈಗ ಕಲಿಯುಗ. ಸುಳ್ಳು ಹೇಳಿದಷ್ಟೂ ಹಣ್ಣಿನ ಹತ್ತಿರ ಹೋಗಬಹುದು. ಹಣ್ಣಿನ ಮೇಲೆ ಕಣ್ಣು ಎಲ್ಲರಿಗೂ ಇರುತ್ತದೆ. ನಮ್ಮ ಜನ ಸುಳ್ಳಿಗೆ ಮರುಳಾದ ಹಾಗೆ ಸತ್ಯಕ್ಕೆ ವಶವಾಗುವುದಿಲ್ಲ. ಬಹುತೇಕ ಎಲ್ಲ ಚುನಾವಣೆಯಲ್ಲಿಯೂ ಇದು ಸಾಬೀತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ಬಿಗಿಗೊಳಿಸುವುದೇ ಸಿದ್ದರಾಮಯ್ಯ ಅವರ ಮುಂದಿರುವ ದಾರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>