<p><strong>ಬಾಗಲಕೋಟೆ</strong>: ಪ್ರವಾಸೋದ್ಯಮ ಇಲಾಖೆಯ ಮೂರು ಖಾತೆಗಳಲ್ಲಿದ್ದ ಹಣದಲ್ಲಿ ₹2.43 ಕೋಟಿಯನ್ನು ನಾಲ್ಕು ವರ್ಷಗಳಿಂದ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡಿದ್ದರೂ ಅಧಿಕಾರಿಗಳಿಗೆ ಗೊತ್ತಾಗದಿರುವುದು ಹೇಗೆ ಎಂಬುದು ಚರ್ಚೆಯಾಗುತ್ತಿದೆ.</p>.<p>2021ರಿಂದ ಇಲ್ಲಿಯವರೆಗೆ ಐವರು ಉಪನಿರ್ದೇಶಕರಾಗಿ ಆಡಳಿತ ನಡೆಸಿದ್ದಾರೆ. ಬಹುತೇಕರು ಪ್ರಭಾರ ಅಧಿಕಾರಿಗಳಾಗಿದ್ದರೂ ಹಣ ತೆಗೆದಿರುವುದು ಯಾರ ಗಮನಕ್ಕೂ ಬಂದಿಲ್ಲ ಎಂಬುದು ಅಚ್ಚರಿಗೆ ಕಾರಣವಾಗಿದೆ.</p>.<p>ಐಡಿಬಿಐನಲ್ಲಿ ಖಾತೆ ತೆರೆದದ್ದು ಏಕೆ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೇ ಖಾತೆ ತೆರೆಯಬೇಕು. ಹಾಗೆಯೇ ಒಂದೇ ಖಾತೆ ಹೊಂದಿರಬೇಕು ಎಂಬ ಸರ್ಕಾರದಿಂದ ಸೂಚನೆ ಇದೆ.</p>.<p>ಪ್ರವಾಸೋದ್ಯಮ ಇಲಾಖೆಯು ಹಲವಾರು ವರ್ಷಗಳಿಂದ ಐಡಿಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರುವುದಲ್ಲದೇ, ಇಲಾಖೆಯು ಮೂರು ಖಾತೆಗಳನ್ನು ತೆರೆದಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.</p>.<p><strong>ಫೋರ್ಜರಿ ಸಹಿ ಅನುಮಾನ</strong>: ಜಿಲ್ಲಾಧಿಕಾರಿ ಸಹಿ ಫೋರ್ಜರಿ ಮಾಡಲಾಗಿದೆ ಎಂಬ ಅನುಮಾನ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳದ್ದಾಗಿದೆ. ಇಲಾಖೆಯ ದಾಖಲೆಗಳ ಪ್ರಕಾರ ಖಾತೆಗಳಿಂದ ತೆಗೆದಿರುವ ಹಣಕ್ಕೆ ಜಿಲ್ಲಾಧಿಕಾರಿ ಅವರು ಯಾವುದೇ ಚೆಕ್ ನೀಡಿಲ್ಲ. ಬ್ಯಾಂಕ್ ಅಧಿಕಾರಿಗಳೇ ಪತ್ರ ಸಿದ್ಧಪಡಿಸಿಕೊಂಡು, ಅದಕ್ಕೆ ಜಿಲ್ಲಾಧಿಕಾರಿ ಸಹಿ ಫೋರ್ಜರಿ ಮಾಡಿ, ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ಉಪನ್ಯಾಸಕ ಉಪನಿರ್ದೇಶಕರಾದದ್ದು ಹೇಗೆ?</strong></p>.<p>ಜಿಲ್ಲೆಯ ಕಟಗೇರಿಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕನಾಗಿರುವ ಗೋಪಾಲ ಹಿತ್ತಲಮನಿ ಅವರು, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕರಾದದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.</p>.<p>ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ ಭಜಂತ್ರಿ ಎಂಬುವವರು ಬಾಗಲಕೋಟೆಯಲ್ಲಿಯೂ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಏಳು ತಿಂಗಳ ಹಿಂದೆ ಅವರ ಜಾಗಕ್ಕೆ ಹಿತ್ತಲಮನಿ ಬಂದಿದ್ದಾರೆ.</p>.<p>ಮೂರು ದಿನ ಕಾಲೇಜಿನಲ್ಲಿಯೂ ಮೂರು ದಿನ ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಬೇರೆ ಇಲಾಖೆಗಳಿಗೆ ಕಳುಹಿಸಬಾರದು ಎಂದು ಸೂಚನೆ ಇದ್ದರೂ, ರಾಜಕೀಯ ನಾಯಕರ ಒತ್ತಡದ ಪರಿಣಾಮ ಕಾಲೇಜಿನ ಜತೆಗೆ ಇಲಾಖೆಯ ಹುದ್ದೆಯನ್ನು ಅಧಿಕ ಪ್ರಭಾರವಾಗಿ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.</p>.<h2><strong>ಸಮಗ್ರ ವರದಿಗೆ ಸಚಿವ ಪಾಟೀಲ ಸೂಚನೆ</strong></h2><p><strong>ಗದಗ: ‘</strong>ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮೂರು ಖಾತೆಗಳಿಂದ ಅಕ್ರಮವಾಗಿ ಹಣ ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.</p><p>‘ಬಾಗಲಕೋಟೆ ಐಡಿಬಿಐ ಬ್ಯಾಂಕ್ನಿಂದ ₹2.43 ಕೋಟಿ ಹಣವನ್ನು ಅಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆಯಲಾಗಿದೆ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಇಂತಹ ಅಕೌಂಟ್ಗಳನ್ನು ಬಂದ್ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವೆ’ ಎಂದು ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.</p><p>‘ಆರ್ಥಿಕ ಇಲಾಖೆಯ ನಿರ್ದೇಶನ, ಮಾರ್ಗಸೂಚಿಗೆ ಅನುಗುಣವಾಗಿ ಯಾವ ಖಾತೆಗಳು ಇಲ್ಲವೋ ಅಂತಹವುಗಳನ್ನು ಪರಿಶೀಲಿಸಿ, ಟ್ರಜರಿಗೆ ವರ್ಗಾಯಿಸುವಂತೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಹಾಗೂ ಮುಖ್ಯ ಅಧಿಕಾರಿಗಳಿಗೆ ಜೂನ್ 12ರಂದೇ ಪತ್ರ ಬರೆದಿದ್ದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಖಾತೆಗಳನ್ನು ತೀವ್ರವಾಗಿ ಗಮನಿಸುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಅವರು ತಿಳಿಸಿದರು.</p><p>‘ಬಾಗಲಕೋಟೆಯಲ್ಲಿ ₹2.43 ಕೋಟಿ ಹಣ ಇಲಾಖೆಯ ಬ್ಯಾಂಕ್ ಖಾತೆಯಿಂದ ನಾಪತ್ತೆಯಾಗಿದೆ. ಈ ಅವ್ಯವಹಾರಕ್ಕೆ ಕಾರಣರಾದವರು ಯಾರು?, ಆ ಖಾತೆ ಕಾನೂನು ರೀತಿ ಇತ್ತೇ? ಅಕ್ರಮವನ್ನು ಬ್ಯಾಂಕ್ ಅಧಿಕಾರಿಗಳು ಮಾಡಿದ್ದಾರೆಯೇ ಅಥವಾ ನಮ್ಮ ಇಲಾಖೆಯ ಯಾರಾದರೂ ಮಿಲಾಪಿ ಆಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.</p><p>‘ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡವರಿಗೆ ಉಗ್ರ ಶಿಕ್ಷೆಗೆ ಗುರಿಪಡಿಸ ಲಾಗುವುದು. ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.</p><p>‘ನಿಗಮ, ಮಂಡಳಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಇಲಾಖೆಗೆ ಸಂಬಂಧಿಸಿದ ಕೆಲವು ಖಾತೆಗಳನ್ನು ಬಹಳ ವರ್ಷಗಳಿಂದ ವ್ಯವಹರಿಸದೇ ಹಾಗೆಯೇ ಬಿಡಲಾಗಿದೆ. ಇನ್ನೂ ಕೆಲವೆಡೆ ಪ್ರಮುಖ ಹಣಕಾಸಿನ ವರ್ಗಾವಣೆ ಮತ್ತು ವ್ಯವಹಾರಗಳನ್ನು ಹೊರಗುತ್ತಿಗೆ ಸಿಬ್ಬಂದಿ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಇದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಪ್ರವಾಸೋದ್ಯಮ ಇಲಾಖೆಯ ಮೂರು ಖಾತೆಗಳಲ್ಲಿದ್ದ ಹಣದಲ್ಲಿ ₹2.43 ಕೋಟಿಯನ್ನು ನಾಲ್ಕು ವರ್ಷಗಳಿಂದ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆದುಕೊಂಡಿದ್ದರೂ ಅಧಿಕಾರಿಗಳಿಗೆ ಗೊತ್ತಾಗದಿರುವುದು ಹೇಗೆ ಎಂಬುದು ಚರ್ಚೆಯಾಗುತ್ತಿದೆ.</p>.<p>2021ರಿಂದ ಇಲ್ಲಿಯವರೆಗೆ ಐವರು ಉಪನಿರ್ದೇಶಕರಾಗಿ ಆಡಳಿತ ನಡೆಸಿದ್ದಾರೆ. ಬಹುತೇಕರು ಪ್ರಭಾರ ಅಧಿಕಾರಿಗಳಾಗಿದ್ದರೂ ಹಣ ತೆಗೆದಿರುವುದು ಯಾರ ಗಮನಕ್ಕೂ ಬಂದಿಲ್ಲ ಎಂಬುದು ಅಚ್ಚರಿಗೆ ಕಾರಣವಾಗಿದೆ.</p>.<p>ಐಡಿಬಿಐನಲ್ಲಿ ಖಾತೆ ತೆರೆದದ್ದು ಏಕೆ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೇ ಖಾತೆ ತೆರೆಯಬೇಕು. ಹಾಗೆಯೇ ಒಂದೇ ಖಾತೆ ಹೊಂದಿರಬೇಕು ಎಂಬ ಸರ್ಕಾರದಿಂದ ಸೂಚನೆ ಇದೆ.</p>.<p>ಪ್ರವಾಸೋದ್ಯಮ ಇಲಾಖೆಯು ಹಲವಾರು ವರ್ಷಗಳಿಂದ ಐಡಿಬಿಐ ಬ್ಯಾಂಕಿನಲ್ಲಿ ಖಾತೆ ಹೊಂದಿರುವುದಲ್ಲದೇ, ಇಲಾಖೆಯು ಮೂರು ಖಾತೆಗಳನ್ನು ತೆರೆದಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.</p>.<p><strong>ಫೋರ್ಜರಿ ಸಹಿ ಅನುಮಾನ</strong>: ಜಿಲ್ಲಾಧಿಕಾರಿ ಸಹಿ ಫೋರ್ಜರಿ ಮಾಡಲಾಗಿದೆ ಎಂಬ ಅನುಮಾನ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳದ್ದಾಗಿದೆ. ಇಲಾಖೆಯ ದಾಖಲೆಗಳ ಪ್ರಕಾರ ಖಾತೆಗಳಿಂದ ತೆಗೆದಿರುವ ಹಣಕ್ಕೆ ಜಿಲ್ಲಾಧಿಕಾರಿ ಅವರು ಯಾವುದೇ ಚೆಕ್ ನೀಡಿಲ್ಲ. ಬ್ಯಾಂಕ್ ಅಧಿಕಾರಿಗಳೇ ಪತ್ರ ಸಿದ್ಧಪಡಿಸಿಕೊಂಡು, ಅದಕ್ಕೆ ಜಿಲ್ಲಾಧಿಕಾರಿ ಸಹಿ ಫೋರ್ಜರಿ ಮಾಡಿ, ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿರಬೇಕು ಎಂದು ಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ಉಪನ್ಯಾಸಕ ಉಪನಿರ್ದೇಶಕರಾದದ್ದು ಹೇಗೆ?</strong></p>.<p>ಜಿಲ್ಲೆಯ ಕಟಗೇರಿಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕನಾಗಿರುವ ಗೋಪಾಲ ಹಿತ್ತಲಮನಿ ಅವರು, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕರಾದದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.</p>.<p>ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ ಭಜಂತ್ರಿ ಎಂಬುವವರು ಬಾಗಲಕೋಟೆಯಲ್ಲಿಯೂ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಏಳು ತಿಂಗಳ ಹಿಂದೆ ಅವರ ಜಾಗಕ್ಕೆ ಹಿತ್ತಲಮನಿ ಬಂದಿದ್ದಾರೆ.</p>.<p>ಮೂರು ದಿನ ಕಾಲೇಜಿನಲ್ಲಿಯೂ ಮೂರು ದಿನ ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಬೇರೆ ಇಲಾಖೆಗಳಿಗೆ ಕಳುಹಿಸಬಾರದು ಎಂದು ಸೂಚನೆ ಇದ್ದರೂ, ರಾಜಕೀಯ ನಾಯಕರ ಒತ್ತಡದ ಪರಿಣಾಮ ಕಾಲೇಜಿನ ಜತೆಗೆ ಇಲಾಖೆಯ ಹುದ್ದೆಯನ್ನು ಅಧಿಕ ಪ್ರಭಾರವಾಗಿ ನೀಡಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ.</p>.<h2><strong>ಸಮಗ್ರ ವರದಿಗೆ ಸಚಿವ ಪಾಟೀಲ ಸೂಚನೆ</strong></h2><p><strong>ಗದಗ: ‘</strong>ಪ್ರವಾಸೋದ್ಯಮ ಇಲಾಖೆಗೆ ಸೇರಿದ ಮೂರು ಖಾತೆಗಳಿಂದ ಅಕ್ರಮವಾಗಿ ಹಣ ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.</p><p>‘ಬಾಗಲಕೋಟೆ ಐಡಿಬಿಐ ಬ್ಯಾಂಕ್ನಿಂದ ₹2.43 ಕೋಟಿ ಹಣವನ್ನು ಅಧಿಕಾರಿಗಳ ಗಮನಕ್ಕೆ ಬಾರದಂತೆ ತೆಗೆಯಲಾಗಿದೆ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಇಂತಹ ಅಕೌಂಟ್ಗಳನ್ನು ಬಂದ್ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವೆ’ ಎಂದು ಅವರು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.</p><p>‘ಆರ್ಥಿಕ ಇಲಾಖೆಯ ನಿರ್ದೇಶನ, ಮಾರ್ಗಸೂಚಿಗೆ ಅನುಗುಣವಾಗಿ ಯಾವ ಖಾತೆಗಳು ಇಲ್ಲವೋ ಅಂತಹವುಗಳನ್ನು ಪರಿಶೀಲಿಸಿ, ಟ್ರಜರಿಗೆ ವರ್ಗಾಯಿಸುವಂತೆ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಹಾಗೂ ಮುಖ್ಯ ಅಧಿಕಾರಿಗಳಿಗೆ ಜೂನ್ 12ರಂದೇ ಪತ್ರ ಬರೆದಿದ್ದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಖಾತೆಗಳನ್ನು ತೀವ್ರವಾಗಿ ಗಮನಿಸುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ಅವರು ತಿಳಿಸಿದರು.</p><p>‘ಬಾಗಲಕೋಟೆಯಲ್ಲಿ ₹2.43 ಕೋಟಿ ಹಣ ಇಲಾಖೆಯ ಬ್ಯಾಂಕ್ ಖಾತೆಯಿಂದ ನಾಪತ್ತೆಯಾಗಿದೆ. ಈ ಅವ್ಯವಹಾರಕ್ಕೆ ಕಾರಣರಾದವರು ಯಾರು?, ಆ ಖಾತೆ ಕಾನೂನು ರೀತಿ ಇತ್ತೇ? ಅಕ್ರಮವನ್ನು ಬ್ಯಾಂಕ್ ಅಧಿಕಾರಿಗಳು ಮಾಡಿದ್ದಾರೆಯೇ ಅಥವಾ ನಮ್ಮ ಇಲಾಖೆಯ ಯಾರಾದರೂ ಮಿಲಾಪಿ ಆಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.</p><p>‘ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡವರಿಗೆ ಉಗ್ರ ಶಿಕ್ಷೆಗೆ ಗುರಿಪಡಿಸ ಲಾಗುವುದು. ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.</p><p>‘ನಿಗಮ, ಮಂಡಳಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಇಲಾಖೆಗೆ ಸಂಬಂಧಿಸಿದ ಕೆಲವು ಖಾತೆಗಳನ್ನು ಬಹಳ ವರ್ಷಗಳಿಂದ ವ್ಯವಹರಿಸದೇ ಹಾಗೆಯೇ ಬಿಡಲಾಗಿದೆ. ಇನ್ನೂ ಕೆಲವೆಡೆ ಪ್ರಮುಖ ಹಣಕಾಸಿನ ವರ್ಗಾವಣೆ ಮತ್ತು ವ್ಯವಹಾರಗಳನ್ನು ಹೊರಗುತ್ತಿಗೆ ಸಿಬ್ಬಂದಿ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಇದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>