<p><strong>ಜಮಖಂಡಿ:</strong> ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಮನೆಮಾಡಿದೆ.</p>.<p>ಮುತ್ತೂರು ನಡುಗಡ್ಡೆಯಲ್ಲಿರುವ 40 ಮನೆಗಳ ಪೈಕಿ ಕೇವಲ 8 ಕುಟುಂಬಗಳು, 38 ಜನರು, 80 ಜಾನುವಾರಗಳು ಶುಕ್ರವಾರ ಸ್ಥಳಾಂತರವಾಗಿದ್ದು, ಇನ್ನೂ 32 ಕುಟುಂಬಗಳು, 180 ಜನರು, 120 ಜಾನುವಾರುಗಳು ಅಲ್ಲಿಯೇ ಇವೆ. ಕೆಲ ಮನೆಗಳ ಹಿಂದೆ ನೀರು ಬಂದರೂ ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.</p>.<p>‘ಮನೆಯಲ್ಲಿನ ಎಲ್ಲ ಸಾಮಗ್ರಿಗಳನ್ನು ಬೋಟ್ನಲ್ಲಿ ತೆಗೆದುಕೊಂಡು ನದಿ ದಾಟಿದ ನಂತರ ಸುರಕ್ಷಿತ ಸ್ಥಳಕ್ಕೆ ಸಾಮಗ್ರಿ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಅಥವಾ ಗೂಡ್ಸ್ ವಾಹನದಲ್ಲಿ ಒಯ್ಯುವುದು. ನೀರು ಕಡಿಮೆಯಾದ ನಂತರ ಮತ್ತೆ ನಡುಗಡ್ಡೆಗೆ ತರಲು ಅಂದಾಜು ₹10-15 ಸಾವಿರ ಖರ್ಚಾಗುತ್ತದೆ. ಪ್ರತಿವರ್ಷ ಇದರಿಂದ ಸಾಕಾಗಿದೆ. ನಮಗೆ ಶಾಶ್ವತ ಪರಿಹಾರ ನೀಡಬೇಕು’ ಎಂದು ಮಹಿಳೆಯೊಬ್ಬರು ತಿಳಿಸಿದರು.</p>.<p>‘ಬೋಟ್ ಪಕ್ಕದಲ್ಲಿ ಜಾನುವಾರಗಳನ್ನು ಕಟ್ಟಿಕೊಂಡು ನೀರಿನಲ್ಲಿ ಈಜುವ ಮೂಲಕ ಜಾನುವಾರಗಳನ್ನು ಸ್ಥಳಾಂತರ ಮಾಡಬೇಕು. ನೀರಿನ ರಭಸಕ್ಕೆ ಹಾಗೂ ನೀರಿನಲ್ಲಿ ತೆಗೆದುಕೊಂಡು ಬರುವುದರಿಂದ ಅವುಗಳು ಅಂಜಿ ನಾಲ್ಕುದಿನ ಮೇವು ತಿನ್ನುವುದಿಲ್ಲ. ಹಾಲು ಹಿಂಡುವುದನ್ನು ಕಡಿಮೆ ಮಾಡುತ್ತವೆ. ನಮ್ಮ ಕುಟುಂಬ ಹೈನುಗಾರಿಕೆ ಮೇಲೆಯೇ ಜೀವನ ನಡೆಸುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ರವಿ ನಾಟಿಕಾರ.</p>.<p>ನೀರು ಹೆಚ್ಚಾಗಿ ಬರುತ್ತಿರುವದರಿಂದ ಮುತ್ತೂರು, ಕಂಕಣವಾಡಿ ನಡುಗಡ್ಡೆ ಗ್ರಾಮಗಳ ವ್ಯಾಪ್ತಿಯ ಸುಮಾರು 50 ಎಕರೆಯಷ್ಟು ಜಮೀನಿನಲ್ಲಿ ಬೆಳೆದ ಕಬ್ಬು, ಹೆಸರು, ಗೋವಿನಜೋಳ ಬೆಳೆ ಜಲಾವೃತಗೊಂಡಿದೆ. ರಾತ್ರಿ ಮತ್ತಷ್ಟು ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ. ನಮ್ಮ ಜಮೀನುಗಳಲ್ಲಿ ಪ್ರತಿವರ್ಷ ನೀರು ಬಂದು ಬೆಳೆಯ ಸುಳಿಯಲ್ಲಿ ನೀರು ಹೋಗಿ ನದಿ ನೀರು ಕಡಿಮೆಯಾದ ನಂತರ ಬೆಳೆಗಳು ಒಣಗಿ ಹೋಗುತ್ತವೆ. ಒಣಗಿದ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸಲಿಂಗ ಹಿಪ್ಪರಗಿ ಒತ್ತಾಯಿಸಿದರು.</p>.<div><blockquote>ನದಿ ತೀರದ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸರ್ಕಾರಿ ಶಾಲೆಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಾನುವಾರಗಳಿಗೂ ಮೇವು ನೀಡಲಾಗುವುದು</blockquote><span class="attribution"> ಸಂಜು ಜುನ್ನೂರ ತಾ.ಪಂ ಇಓ</span></div>.<h2> ಬೇರೆ ಅಧಿಕಾರಿ ನೇಮಕ ಮಾಡಲು ಒತ್ತಾಯ</h2>.<p> ಗ್ರಾಮಕ್ಕೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಮುತ್ತೂರು ನಡುಗಡ್ಡೆಗೆ ಸಹಕಾರ ಇಲಾಕೆಯ ಜೆ.ಜಿ ಸವದಿ ಎಂಬ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಇಲ್ಲ. ಮುಂದೆ ನಿಂತು ಸ್ಥಳಾಂತರ ಮಾಡಿಸದೇ ಮೇಲಾಧಿಕಾರಿ ಬಂದಾಗ ಮಾತ್ರ ಮುಖ ತೋರಿಸಿ ಹೋಗುತ್ತಾರೆ. ಅವರನ್ನು ತೆಗೆದು ಬೇರೆಯವರಿಗೆ ನೇಮಕ ಮಾಡಲು ಸ್ಥಳೀಯರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಮಖಂಡಿ:</strong> ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಮನೆಮಾಡಿದೆ.</p>.<p>ಮುತ್ತೂರು ನಡುಗಡ್ಡೆಯಲ್ಲಿರುವ 40 ಮನೆಗಳ ಪೈಕಿ ಕೇವಲ 8 ಕುಟುಂಬಗಳು, 38 ಜನರು, 80 ಜಾನುವಾರಗಳು ಶುಕ್ರವಾರ ಸ್ಥಳಾಂತರವಾಗಿದ್ದು, ಇನ್ನೂ 32 ಕುಟುಂಬಗಳು, 180 ಜನರು, 120 ಜಾನುವಾರುಗಳು ಅಲ್ಲಿಯೇ ಇವೆ. ಕೆಲ ಮನೆಗಳ ಹಿಂದೆ ನೀರು ಬಂದರೂ ಜನರು ಸುರಕ್ಷಿತ ಸ್ಥಳಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.</p>.<p>‘ಮನೆಯಲ್ಲಿನ ಎಲ್ಲ ಸಾಮಗ್ರಿಗಳನ್ನು ಬೋಟ್ನಲ್ಲಿ ತೆಗೆದುಕೊಂಡು ನದಿ ದಾಟಿದ ನಂತರ ಸುರಕ್ಷಿತ ಸ್ಥಳಕ್ಕೆ ಸಾಮಗ್ರಿ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಅಥವಾ ಗೂಡ್ಸ್ ವಾಹನದಲ್ಲಿ ಒಯ್ಯುವುದು. ನೀರು ಕಡಿಮೆಯಾದ ನಂತರ ಮತ್ತೆ ನಡುಗಡ್ಡೆಗೆ ತರಲು ಅಂದಾಜು ₹10-15 ಸಾವಿರ ಖರ್ಚಾಗುತ್ತದೆ. ಪ್ರತಿವರ್ಷ ಇದರಿಂದ ಸಾಕಾಗಿದೆ. ನಮಗೆ ಶಾಶ್ವತ ಪರಿಹಾರ ನೀಡಬೇಕು’ ಎಂದು ಮಹಿಳೆಯೊಬ್ಬರು ತಿಳಿಸಿದರು.</p>.<p>‘ಬೋಟ್ ಪಕ್ಕದಲ್ಲಿ ಜಾನುವಾರಗಳನ್ನು ಕಟ್ಟಿಕೊಂಡು ನೀರಿನಲ್ಲಿ ಈಜುವ ಮೂಲಕ ಜಾನುವಾರಗಳನ್ನು ಸ್ಥಳಾಂತರ ಮಾಡಬೇಕು. ನೀರಿನ ರಭಸಕ್ಕೆ ಹಾಗೂ ನೀರಿನಲ್ಲಿ ತೆಗೆದುಕೊಂಡು ಬರುವುದರಿಂದ ಅವುಗಳು ಅಂಜಿ ನಾಲ್ಕುದಿನ ಮೇವು ತಿನ್ನುವುದಿಲ್ಲ. ಹಾಲು ಹಿಂಡುವುದನ್ನು ಕಡಿಮೆ ಮಾಡುತ್ತವೆ. ನಮ್ಮ ಕುಟುಂಬ ಹೈನುಗಾರಿಕೆ ಮೇಲೆಯೇ ಜೀವನ ನಡೆಸುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತದೆ’ ಎನ್ನುತ್ತಾರೆ ಸ್ಥಳೀಯ ರವಿ ನಾಟಿಕಾರ.</p>.<p>ನೀರು ಹೆಚ್ಚಾಗಿ ಬರುತ್ತಿರುವದರಿಂದ ಮುತ್ತೂರು, ಕಂಕಣವಾಡಿ ನಡುಗಡ್ಡೆ ಗ್ರಾಮಗಳ ವ್ಯಾಪ್ತಿಯ ಸುಮಾರು 50 ಎಕರೆಯಷ್ಟು ಜಮೀನಿನಲ್ಲಿ ಬೆಳೆದ ಕಬ್ಬು, ಹೆಸರು, ಗೋವಿನಜೋಳ ಬೆಳೆ ಜಲಾವೃತಗೊಂಡಿದೆ. ರಾತ್ರಿ ಮತ್ತಷ್ಟು ಜಮೀನಿಗೆ ನೀರು ನುಗ್ಗುವ ಸಾಧ್ಯತೆಯಿದೆ. ನಮ್ಮ ಜಮೀನುಗಳಲ್ಲಿ ಪ್ರತಿವರ್ಷ ನೀರು ಬಂದು ಬೆಳೆಯ ಸುಳಿಯಲ್ಲಿ ನೀರು ಹೋಗಿ ನದಿ ನೀರು ಕಡಿಮೆಯಾದ ನಂತರ ಬೆಳೆಗಳು ಒಣಗಿ ಹೋಗುತ್ತವೆ. ಒಣಗಿದ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸಲಿಂಗ ಹಿಪ್ಪರಗಿ ಒತ್ತಾಯಿಸಿದರು.</p>.<div><blockquote>ನದಿ ತೀರದ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸರ್ಕಾರಿ ಶಾಲೆಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಜಾನುವಾರಗಳಿಗೂ ಮೇವು ನೀಡಲಾಗುವುದು</blockquote><span class="attribution"> ಸಂಜು ಜುನ್ನೂರ ತಾ.ಪಂ ಇಓ</span></div>.<h2> ಬೇರೆ ಅಧಿಕಾರಿ ನೇಮಕ ಮಾಡಲು ಒತ್ತಾಯ</h2>.<p> ಗ್ರಾಮಕ್ಕೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಮುತ್ತೂರು ನಡುಗಡ್ಡೆಗೆ ಸಹಕಾರ ಇಲಾಕೆಯ ಜೆ.ಜಿ ಸವದಿ ಎಂಬ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಇಲ್ಲ. ಮುಂದೆ ನಿಂತು ಸ್ಥಳಾಂತರ ಮಾಡಿಸದೇ ಮೇಲಾಧಿಕಾರಿ ಬಂದಾಗ ಮಾತ್ರ ಮುಖ ತೋರಿಸಿ ಹೋಗುತ್ತಾರೆ. ಅವರನ್ನು ತೆಗೆದು ಬೇರೆಯವರಿಗೆ ನೇಮಕ ಮಾಡಲು ಸ್ಥಳೀಯರು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>