<p><strong>ತೆಕ್ಕಲಕೋಟೆ</strong>: ಸಮೀಪದ ಹೆರಕಲ್ಲು ಗ್ರಾಮದಲ್ಲಿ 60ಕ್ಕೂ ಹೆಚ್ಚು ಕುರಿಗಳು ಬುಧವಾರ ಸಾವಿಗೀಡಾಗಿದ್ದು, ಕಲುಷಿತ ಆಹಾರ ಸೇವನೆಯೇ ಘಟನೆ ಕಾರಣ ಎಂದು ಶಂಕಿಸಲಾಗಿದೆ.</p>.<p>ಗ್ರಾಮದ ಗುಮ್ಮಡಿ ರಾಜಶೇಖರ, ಗಾದಿಲಿಂಗ ಹಾಗೂ ಮಂಜಪ್ಪ ಅವರಿಗೆ ಸೇರಿದ ಕುರಿಮಂದೆ ಮಂಗಳವಾರದಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಲಾಗಿತ್ತು.</p>.<p>ಬಳ್ಳಾರಿ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ವಿನೋದ್ ಕುಮಾರ್, ಪ್ರಾದೇಶಿಕ ಪ್ರಯೋಗಾಲಯ ಸಂಶೋಧನಾಧಿಕಾರಿ ಡಾ. ರಾಜಶೇಖರ, ಸಿರುಗುಪ್ಪ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ವೈ ಗಂಗಾಧರ ಪರಿಶೀಲನೆ ನಡೆಸಿ ಔಷಧೋಪಚಾರ ನೀಡಿದ್ದರು.</p>.<p>‘ನಮ್ಮವು 250 ಕುರಿ ಇದ್ದಾವೆ. ಮಂಗಳವಾರದಿಂದ ಕುರಿಗಳು ತೀವ್ರ ಅಸ್ವಸ್ಥವಾಗಿದ್ದು ಸಂಜೆಯಿಂದ ಒಂದೊಂದಾಗಿ ಸಾವಿಗೀಡಾಗುತ್ತಿವೆ. ಈ ವರೆಗೆ 63 ಕುರಿಗಳು ಸತ್ತಿವೆ. ಔಷಧ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಕುರಿಗಾಹಿ ಗಾದಿಲಿಂಗ ಆತಂಕ ವ್ಯಕ್ತಪಡಿಸಿದರು.</p>.<p>‘ಕುರಿಗಳು ವಿಷ ಪೂರಿತ ಆಹಾರ ಸೇವನೆ ಮಾಡಿರುವ ಸಾಧ್ಯತೆ ಇದ್ದು, ಚಿಕಿತ್ಸೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ಕುರಿ ಅಭಿವೃದ್ಧಿ ಮಂಡಳಿಗೆ ಪರಿಹಾರಕ್ಕಾಗಿ ಶಿಫಾರಸ್ಸು ಮಾಡಲಾಗಿದೆ’ ಎಂದು ಡಾ.ವಿನೋದ್ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ</strong>: ಸಮೀಪದ ಹೆರಕಲ್ಲು ಗ್ರಾಮದಲ್ಲಿ 60ಕ್ಕೂ ಹೆಚ್ಚು ಕುರಿಗಳು ಬುಧವಾರ ಸಾವಿಗೀಡಾಗಿದ್ದು, ಕಲುಷಿತ ಆಹಾರ ಸೇವನೆಯೇ ಘಟನೆ ಕಾರಣ ಎಂದು ಶಂಕಿಸಲಾಗಿದೆ.</p>.<p>ಗ್ರಾಮದ ಗುಮ್ಮಡಿ ರಾಜಶೇಖರ, ಗಾದಿಲಿಂಗ ಹಾಗೂ ಮಂಜಪ್ಪ ಅವರಿಗೆ ಸೇರಿದ ಕುರಿಮಂದೆ ಮಂಗಳವಾರದಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಲಾಗಿತ್ತು.</p>.<p>ಬಳ್ಳಾರಿ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ.ವಿನೋದ್ ಕುಮಾರ್, ಪ್ರಾದೇಶಿಕ ಪ್ರಯೋಗಾಲಯ ಸಂಶೋಧನಾಧಿಕಾರಿ ಡಾ. ರಾಜಶೇಖರ, ಸಿರುಗುಪ್ಪ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾ. ವೈ ಗಂಗಾಧರ ಪರಿಶೀಲನೆ ನಡೆಸಿ ಔಷಧೋಪಚಾರ ನೀಡಿದ್ದರು.</p>.<p>‘ನಮ್ಮವು 250 ಕುರಿ ಇದ್ದಾವೆ. ಮಂಗಳವಾರದಿಂದ ಕುರಿಗಳು ತೀವ್ರ ಅಸ್ವಸ್ಥವಾಗಿದ್ದು ಸಂಜೆಯಿಂದ ಒಂದೊಂದಾಗಿ ಸಾವಿಗೀಡಾಗುತ್ತಿವೆ. ಈ ವರೆಗೆ 63 ಕುರಿಗಳು ಸತ್ತಿವೆ. ಔಷಧ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಕುರಿಗಾಹಿ ಗಾದಿಲಿಂಗ ಆತಂಕ ವ್ಯಕ್ತಪಡಿಸಿದರು.</p>.<p>‘ಕುರಿಗಳು ವಿಷ ಪೂರಿತ ಆಹಾರ ಸೇವನೆ ಮಾಡಿರುವ ಸಾಧ್ಯತೆ ಇದ್ದು, ಚಿಕಿತ್ಸೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ಕುರಿ ಅಭಿವೃದ್ಧಿ ಮಂಡಳಿಗೆ ಪರಿಹಾರಕ್ಕಾಗಿ ಶಿಫಾರಸ್ಸು ಮಾಡಲಾಗಿದೆ’ ಎಂದು ಡಾ.ವಿನೋದ್ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>