<p><strong>ಹೂವಿನಹಡಗಲಿ</strong>: ಪಟ್ಟಣದ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಗ್ರಾಹಕರೊಬ್ಬರ ಹಣವನ್ನು ಒಟಿಪಿ ಇಲ್ಲದೇ ಆನ್ಲೈನ್ ವಂಚಕರು ₹9.7 ಲಕ್ಷ ದೋಚಿರುವ ಘಟನೆ ಭಾನುವಾರ ಜರುಗಿದೆ.</p>.<p>ತಾಲ್ಲೂಕಿನ ನಂದಿಹಳ್ಳಿಯ ಕಂಠಿ ವಿರೂಪಾಕ್ಷ ಹಣ ಕಳೆದುಕೊಂಡಿರುವರು. ಎರಡು ದಿನಗಳ ಹಿಂದೆಯಷ್ಟೇ ಜಮೀನು ಮಾರಾಟದ ಹಣ ಇವರ ಖಾತೆಗೆ ಜಮೆ ಆಗಿತ್ತು. ಖರೀದಿದಾರರು ಇನ್ನಷ್ಟು ಹಣವನ್ನು ಜಮೆ ಮಾಡುವರಿದ್ದರು. ಈ ವೇಳೆ ಕೆನರಾ ಬ್ಯಾಂಕ್ ಲೋಗೋ ಇರುವ ಆ್ಯಪ್ನ ಲಿಂಕ್ ಇವರ ಮೊಬೈಲ್ಗೆ ಸಂದೇಶ ಬಂದಿದೆ. ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಬಳಸಿ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. ನಂತರದ 30 ನಿಮಿಷದಲ್ಲಿ ಖಾತೆಯಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ.</p>.<p>ಸೋಮವಾರ ಬೆಳಿಗ್ಗೆ ಹಣ ವರ್ಗಾವಣೆಗೆ ಮಾಡಲು ಮುಂದಾದಾಗ ಖಾತೆಯಲ್ಲಿಹಣ ಇಲ್ಲದಿರುವುದು ತಿಳಿದು, ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ವಂಚನೆಯಾಗಿರುವುದು ತಿಳಿದಿದೆ.</p>.<p>ಈ ಕುರಿತು ವಿರೂಪಾಕ್ಷಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಿದ್ದಾರೆ.</p>.<p>‘ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಓಪನ್ ಮಾಡಿದೆ. ಅಷ್ಟರಲ್ಲಿ ಆನ್ ಲೈನ್ ವಂಚಕರು ಹಣ ಲಪಟಾಯಿಸಿದ್ದಾರೆ. ಆರ್ಥಿಕ ತೊಂದರೆ ಇದ್ದುದರಿಂದ ಜಮೀನು ಮಾರಾಟ ಮಾಡಿದ್ದೆ. ಹಣವನ್ನೆಲ್ಲ ಕಳ್ಳರು ದೋಚಿದ್ದಾರೆ’ ಎಂದು ವಿರೂಪಾಕ್ಷಿ ಅಳಲು ತೋಡಿಕೊಂಡರು.</p>.<p>ಬ್ಯಾಂಕ್ ಖಾತೆಗಳಿಗೆ ಕನಿಷ್ಠ ರಕ್ಷಣೆ ಇಲ್ಲವಾದರೆ ಗ್ರಾಹಕರು ಯಾವ ವಿಶ್ವಾಸದ ಮೇಲೆ ವ್ಯವಹರಿಸಬೇಕು. ಹಣ ವರ್ಗಾವಣೆಗೆ ಒಟಿಪಿ ಕಡ್ಡಾಯವಿದ್ದರೂ ಈ ಪ್ರಕರಣದಲ್ಲಿ ಒಟಿಪಿ ಇಲ್ಲದೇ ಲಕ್ಷಾಂತರ ಹಣ ಲಪಟಾಯಿಸಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ಪಟ್ಟಣದ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಗ್ರಾಹಕರೊಬ್ಬರ ಹಣವನ್ನು ಒಟಿಪಿ ಇಲ್ಲದೇ ಆನ್ಲೈನ್ ವಂಚಕರು ₹9.7 ಲಕ್ಷ ದೋಚಿರುವ ಘಟನೆ ಭಾನುವಾರ ಜರುಗಿದೆ.</p>.<p>ತಾಲ್ಲೂಕಿನ ನಂದಿಹಳ್ಳಿಯ ಕಂಠಿ ವಿರೂಪಾಕ್ಷ ಹಣ ಕಳೆದುಕೊಂಡಿರುವರು. ಎರಡು ದಿನಗಳ ಹಿಂದೆಯಷ್ಟೇ ಜಮೀನು ಮಾರಾಟದ ಹಣ ಇವರ ಖಾತೆಗೆ ಜಮೆ ಆಗಿತ್ತು. ಖರೀದಿದಾರರು ಇನ್ನಷ್ಟು ಹಣವನ್ನು ಜಮೆ ಮಾಡುವರಿದ್ದರು. ಈ ವೇಳೆ ಕೆನರಾ ಬ್ಯಾಂಕ್ ಲೋಗೋ ಇರುವ ಆ್ಯಪ್ನ ಲಿಂಕ್ ಇವರ ಮೊಬೈಲ್ಗೆ ಸಂದೇಶ ಬಂದಿದೆ. ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಬಳಸಿ ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. ನಂತರದ 30 ನಿಮಿಷದಲ್ಲಿ ಖಾತೆಯಲ್ಲಿದ್ದ ಹಣವೆಲ್ಲ ಖಾಲಿಯಾಗಿದೆ.</p>.<p>ಸೋಮವಾರ ಬೆಳಿಗ್ಗೆ ಹಣ ವರ್ಗಾವಣೆಗೆ ಮಾಡಲು ಮುಂದಾದಾಗ ಖಾತೆಯಲ್ಲಿಹಣ ಇಲ್ಲದಿರುವುದು ತಿಳಿದು, ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ವಂಚನೆಯಾಗಿರುವುದು ತಿಳಿದಿದೆ.</p>.<p>ಈ ಕುರಿತು ವಿರೂಪಾಕ್ಷಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾಯಿಸಿದ್ದಾರೆ.</p>.<p>‘ಬ್ಯಾಂಕ್ ಸಂದೇಶವೆಂದು ತಿಳಿದು ಲಿಂಕ್ ಓಪನ್ ಮಾಡಿದೆ. ಅಷ್ಟರಲ್ಲಿ ಆನ್ ಲೈನ್ ವಂಚಕರು ಹಣ ಲಪಟಾಯಿಸಿದ್ದಾರೆ. ಆರ್ಥಿಕ ತೊಂದರೆ ಇದ್ದುದರಿಂದ ಜಮೀನು ಮಾರಾಟ ಮಾಡಿದ್ದೆ. ಹಣವನ್ನೆಲ್ಲ ಕಳ್ಳರು ದೋಚಿದ್ದಾರೆ’ ಎಂದು ವಿರೂಪಾಕ್ಷಿ ಅಳಲು ತೋಡಿಕೊಂಡರು.</p>.<p>ಬ್ಯಾಂಕ್ ಖಾತೆಗಳಿಗೆ ಕನಿಷ್ಠ ರಕ್ಷಣೆ ಇಲ್ಲವಾದರೆ ಗ್ರಾಹಕರು ಯಾವ ವಿಶ್ವಾಸದ ಮೇಲೆ ವ್ಯವಹರಿಸಬೇಕು. ಹಣ ವರ್ಗಾವಣೆಗೆ ಒಟಿಪಿ ಕಡ್ಡಾಯವಿದ್ದರೂ ಈ ಪ್ರಕರಣದಲ್ಲಿ ಒಟಿಪಿ ಇಲ್ಲದೇ ಲಕ್ಷಾಂತರ ಹಣ ಲಪಟಾಯಿಸಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>