<p><strong>ಬಳ್ಳಾರಿ:</strong> ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೃಷಿ ಅವಶೇಷ ಬಳಕೆಯ ಕುರಿತು ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ರಾಷ್ಟ್ರೀಯ ಮಿಷನ್ ಸಮರ್ಥ ಮಿಷನ್’ ಅಡಿಯಲ್ಲಿ ರೈತರಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು.</p>.<p>ಈ ವೇಳೆ ಮಾತನಾಡಿದ ಮಿಷನ್ ನಿರ್ದೇಶಕ ಸತೀಶ್ ಉಪಾಧ್ಯಾಯ, ‘ವಿವಿಧ ಕ್ಷೇತ್ರಗಳಲ್ಲಿ ಕೃಷಿ ಅವಶೇಷಗಳ ಬಳಕೆಯನ್ನು ಉತ್ತೇಜಿಸುವುದು ಕಾರ್ಯಾಗಾರದ ಉದ್ದೇಶ: ಎಂದು ಹೇಳಿದರು.</p>.<p>ಫರೀದಾಬಾದ್ನ ಎನ್ಪಿಟಿಐ ಮಹಾ ನಿರ್ದೇಶಕ ತೃಪ್ತಾ ಠಾಕೂರ್ ಮಾತನಾಡಿ, ‘ಕೃಷಿ-ಅವಶೇಷಗಳ ಪ್ರಜ್ಞಾಪೂರ್ವಕ ಬಳಕೆ ಕುರಿತ ಈ ಕಾರ್ಯಾಗಾರವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.</p>.<p>ಬೆಳೆ ಅವಶೇಷಗಳ ನಿರ್ವಹಣೆಗೆ ರಾಷ್ಟ್ರೀಯ ನೀತಿ, ಕೃಷಿ ಯಾಂತ್ರೀಕರಣಕ್ಕೆ ಕೇಂದ್ರದ ಯೋಜನೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೃಷಿ ಅವಶೇಷ ಬಳಕೆ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ಕೃಷಿ ಕ್ಷೇತ್ರವು ಹೇಗೆ ಮುಂದೆ ಬರಬಹುದು ಎಂಬುದರ ಕುರಿತು ಕಾರ್ಯಗಾರದಲ್ಲಿ ರೈತರಿಗೆ ಮಾರ್ಗದರ್ಶನ ನೀಡಲಾಯಿತು. </p>.<p>ವಾಯು ಮಾಲಿನ್ಯದ ಸಮಸ್ಯೆಯ ಬಗ್ಗೆಯೂ ರೈತರಿಗೆ ಅರಿವು ಮೂಡಿಸಲಾಯಿತು.</p>.<p>ಫರೀದಾಬಾದ್ನ ಎನ್ಪಿಟಿಐ ಪ್ರಧಾನ ನಿರ್ದೇಶಕ ಮಂಜು ಮಾಮ್, ಮಿಷನ್ ಸದಸ್ಯರಾದ ಪ್ರಫುಲ್ ಚಂದ್ರ ಡೋಂಗ್ರೆ, ಸಮರ್ಥ, ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜಿ.ರವಿಶಂಕರ್, ಎಂ.ಗೋವಿಂದಪ್ಪ, ಎನ್ಪಿಟಿಐ ನಿರ್ದೇಶಕ ಸಂಜಯ ಪಾಟೀಲ್ ಇದ್ದರು. </p>.<p>ಹಿಂದಿ–ವಿರೋಧ: ಕಾರ್ಯಾಗಾರಕ್ಕೆ ನಿರೀಕ್ಷೆಗೂ ಮೀರಿ ರೈತರು ಬಂದಿದ್ದರು. 100–150 ಆಸನದ ಸಭಾಂಗಣದಲ್ಲಿ 500 ರೈತರು ಕಿಕ್ಕಿರಿದು ತುಂಬಿದ್ದರು. ಆಸನವಿಲ್ಲದೇ, ಸರಿಯಾದ ವ್ಯವಸ್ಥೆಗಳಿಲ್ಲದೇ ಮೊದಲೇ ಆಕ್ರೋಶಗೊಂಡಿದ್ದ ರೈತರಿಗೆ ಐಸಿಎಆರ್ನ ಅಧಿಕಾರಿಗಳ ಹಿಂದಿ ಭಾಷೆ ಮತ್ತಷ್ಟು ಕೋಪ ತರಿಸಿತ್ತು. ಹೀಗಾಗಿ ಬಹುಪಾಲು ರೈತರು ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು. ಕೆಲವು ರೈತರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿದರು.</p>.<p>‘ರೈತರ ಬಗ್ಗೆ ಇವರಿಗ್ಯಾಕೆ ಇಷ್ಟು ಅಸಡ್ಡೆ. ಒಂದಷ್ಟು ಜನಕ್ಕೆ ಪುಸ್ತಕ, ಪೆನ್ನು, ಕೈಚೀಲ ಕೊಟ್ಟಿದ್ದಾರೆ. ಬಹುತೇಕರಿಗೆ ಕೊಟ್ಟೇ ಇಲ್ಲ. ಅಧಿಕಾರಿಗಳು ಹಿಂದಿಯಲ್ಲೇ ಮಾತನಾಡುತ್ತಾರೆ. ಹಳ್ಳಿ ಜನರಾದ ನಮಗೆ ಹಿಂದಿ–ಇಂಗ್ಲಿಷ್ ಎಲ್ಲಿಂದ ಅರ್ಥವಾಗಬೇಕು’ ಎಂದು ರೈತ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಕೆಲವೇ ರೈತರು ಸಭಾಂಗಣದಲ್ಲಿ ಉಳಿದಿದ್ದರು. ಗೊಂದಲದಲ್ಲೇ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೃಷಿ ಅವಶೇಷ ಬಳಕೆಯ ಕುರಿತು ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ರಾಷ್ಟ್ರೀಯ ಮಿಷನ್ ಸಮರ್ಥ ಮಿಷನ್’ ಅಡಿಯಲ್ಲಿ ರೈತರಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು.</p>.<p>ಈ ವೇಳೆ ಮಾತನಾಡಿದ ಮಿಷನ್ ನಿರ್ದೇಶಕ ಸತೀಶ್ ಉಪಾಧ್ಯಾಯ, ‘ವಿವಿಧ ಕ್ಷೇತ್ರಗಳಲ್ಲಿ ಕೃಷಿ ಅವಶೇಷಗಳ ಬಳಕೆಯನ್ನು ಉತ್ತೇಜಿಸುವುದು ಕಾರ್ಯಾಗಾರದ ಉದ್ದೇಶ: ಎಂದು ಹೇಳಿದರು.</p>.<p>ಫರೀದಾಬಾದ್ನ ಎನ್ಪಿಟಿಐ ಮಹಾ ನಿರ್ದೇಶಕ ತೃಪ್ತಾ ಠಾಕೂರ್ ಮಾತನಾಡಿ, ‘ಕೃಷಿ-ಅವಶೇಷಗಳ ಪ್ರಜ್ಞಾಪೂರ್ವಕ ಬಳಕೆ ಕುರಿತ ಈ ಕಾರ್ಯಾಗಾರವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.</p>.<p>ಬೆಳೆ ಅವಶೇಷಗಳ ನಿರ್ವಹಣೆಗೆ ರಾಷ್ಟ್ರೀಯ ನೀತಿ, ಕೃಷಿ ಯಾಂತ್ರೀಕರಣಕ್ಕೆ ಕೇಂದ್ರದ ಯೋಜನೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕೃಷಿ ಅವಶೇಷ ಬಳಕೆ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ಕೃಷಿ ಕ್ಷೇತ್ರವು ಹೇಗೆ ಮುಂದೆ ಬರಬಹುದು ಎಂಬುದರ ಕುರಿತು ಕಾರ್ಯಗಾರದಲ್ಲಿ ರೈತರಿಗೆ ಮಾರ್ಗದರ್ಶನ ನೀಡಲಾಯಿತು. </p>.<p>ವಾಯು ಮಾಲಿನ್ಯದ ಸಮಸ್ಯೆಯ ಬಗ್ಗೆಯೂ ರೈತರಿಗೆ ಅರಿವು ಮೂಡಿಸಲಾಯಿತು.</p>.<p>ಫರೀದಾಬಾದ್ನ ಎನ್ಪಿಟಿಐ ಪ್ರಧಾನ ನಿರ್ದೇಶಕ ಮಂಜು ಮಾಮ್, ಮಿಷನ್ ಸದಸ್ಯರಾದ ಪ್ರಫುಲ್ ಚಂದ್ರ ಡೋಂಗ್ರೆ, ಸಮರ್ಥ, ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಜಿ.ರವಿಶಂಕರ್, ಎಂ.ಗೋವಿಂದಪ್ಪ, ಎನ್ಪಿಟಿಐ ನಿರ್ದೇಶಕ ಸಂಜಯ ಪಾಟೀಲ್ ಇದ್ದರು. </p>.<p>ಹಿಂದಿ–ವಿರೋಧ: ಕಾರ್ಯಾಗಾರಕ್ಕೆ ನಿರೀಕ್ಷೆಗೂ ಮೀರಿ ರೈತರು ಬಂದಿದ್ದರು. 100–150 ಆಸನದ ಸಭಾಂಗಣದಲ್ಲಿ 500 ರೈತರು ಕಿಕ್ಕಿರಿದು ತುಂಬಿದ್ದರು. ಆಸನವಿಲ್ಲದೇ, ಸರಿಯಾದ ವ್ಯವಸ್ಥೆಗಳಿಲ್ಲದೇ ಮೊದಲೇ ಆಕ್ರೋಶಗೊಂಡಿದ್ದ ರೈತರಿಗೆ ಐಸಿಎಆರ್ನ ಅಧಿಕಾರಿಗಳ ಹಿಂದಿ ಭಾಷೆ ಮತ್ತಷ್ಟು ಕೋಪ ತರಿಸಿತ್ತು. ಹೀಗಾಗಿ ಬಹುಪಾಲು ರೈತರು ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದರು. ಕೆಲವು ರೈತರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿದರು.</p>.<p>‘ರೈತರ ಬಗ್ಗೆ ಇವರಿಗ್ಯಾಕೆ ಇಷ್ಟು ಅಸಡ್ಡೆ. ಒಂದಷ್ಟು ಜನಕ್ಕೆ ಪುಸ್ತಕ, ಪೆನ್ನು, ಕೈಚೀಲ ಕೊಟ್ಟಿದ್ದಾರೆ. ಬಹುತೇಕರಿಗೆ ಕೊಟ್ಟೇ ಇಲ್ಲ. ಅಧಿಕಾರಿಗಳು ಹಿಂದಿಯಲ್ಲೇ ಮಾತನಾಡುತ್ತಾರೆ. ಹಳ್ಳಿ ಜನರಾದ ನಮಗೆ ಹಿಂದಿ–ಇಂಗ್ಲಿಷ್ ಎಲ್ಲಿಂದ ಅರ್ಥವಾಗಬೇಕು’ ಎಂದು ರೈತ ಜನಾರ್ದನ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.</p>.<p>ಕೆಲವೇ ರೈತರು ಸಭಾಂಗಣದಲ್ಲಿ ಉಳಿದಿದ್ದರು. ಗೊಂದಲದಲ್ಲೇ ಕಾರ್ಯಕ್ರಮ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>