<p><strong>ಸಂಡೂರು</strong>: ತಾಲ್ಲೂಕಿನ ಸುಶೀಲನಗರದಲ್ಲಿ ಶುಕ್ರವಾರ ತಡರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಖಾಸಿಂಪೀರಾ ಎಂಬುವರ ದನದ ಕೊಟ್ಟಿಗೆಗೆ ನುಗ್ಗಿ ಎರಡು ಕರು ಹಾಗೂ ಹಸುವಿಗೆ ಗಾಯ ಮಾಡಿದೆ.</p>.<p>ಚಿರತೆ ಕಂಡು ದನ–ಕರುಗಳು ಬೆಚ್ಚಿ, ಕೂಗಿದ್ದರಿಂದ ಜನರು ಎಚ್ಚರಗೊಂಡು ಶೆಡ್ ಬಳಿ ಬಂದಾಗ ಚಿರತೆ ಇರುವುದು ಗೊತ್ತಾಗಿದೆ. ಗದ್ದಲ ಮಾಡಿ ಓಡಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಸಿಬ್ಬಂದಿ ಬಂದು ಪಟಾಕಿ ಸಿಡಿಸಿದರು.</p>.<p>ಸುಶೀಲನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೈಸಿಂಗ್ ಪುರ ಮತ್ತು ವೆಂಕಟಗಿರಿ ಮಧ್ಯೆ ಇರುವ ಗಾಳೆಮ್ಮನ ಗುಡಿಯಲ್ಲಿ ಶುಕ್ರವಾರ ಕರಡಿ ಕಾಣಿಸಿಕೊಂಡಿತ್ತು. ಸ್ಥಳೀಯರು ಅದನ್ನು ಓಡಿಸಿದ್ದಾರೆ.</p>.<p>ಉತ್ತರ ವಲಯ ಅರಣ್ಯಾಧಿಕಾರಿ ಸಯ್ಯದ್ ದಾದಾ ಖಲಂದರ್ ಈ ಕುರಿತು ಪ್ರತಿಕ್ರಿಯಿಸಿ,‘ಚಿರತೆ ಸೆರೆಗೆ ಬೋನ್ ಅಳವಡಿಸಲಾಗಿದೆ. ಶೆಡ್ ಬಳಿ ಸ್ವಚ್ಛಗೊಳಿಸಲಾಗಿದೆ. ಗಾಳೆಮ್ಮನ ಗುಡಿ ಬಳಿ ಕರಡಿ ಮತ್ತೊಮ್ಮೆ ಕಂಡು ಬಂದರೆ, ಹಿಡಿದು ಬೇರೆಡೆ ಸಾಗಿಸಲಾಗುವುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಡೂರು</strong>: ತಾಲ್ಲೂಕಿನ ಸುಶೀಲನಗರದಲ್ಲಿ ಶುಕ್ರವಾರ ತಡರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಖಾಸಿಂಪೀರಾ ಎಂಬುವರ ದನದ ಕೊಟ್ಟಿಗೆಗೆ ನುಗ್ಗಿ ಎರಡು ಕರು ಹಾಗೂ ಹಸುವಿಗೆ ಗಾಯ ಮಾಡಿದೆ.</p>.<p>ಚಿರತೆ ಕಂಡು ದನ–ಕರುಗಳು ಬೆಚ್ಚಿ, ಕೂಗಿದ್ದರಿಂದ ಜನರು ಎಚ್ಚರಗೊಂಡು ಶೆಡ್ ಬಳಿ ಬಂದಾಗ ಚಿರತೆ ಇರುವುದು ಗೊತ್ತಾಗಿದೆ. ಗದ್ದಲ ಮಾಡಿ ಓಡಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಸಿಬ್ಬಂದಿ ಬಂದು ಪಟಾಕಿ ಸಿಡಿಸಿದರು.</p>.<p>ಸುಶೀಲನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೈಸಿಂಗ್ ಪುರ ಮತ್ತು ವೆಂಕಟಗಿರಿ ಮಧ್ಯೆ ಇರುವ ಗಾಳೆಮ್ಮನ ಗುಡಿಯಲ್ಲಿ ಶುಕ್ರವಾರ ಕರಡಿ ಕಾಣಿಸಿಕೊಂಡಿತ್ತು. ಸ್ಥಳೀಯರು ಅದನ್ನು ಓಡಿಸಿದ್ದಾರೆ.</p>.<p>ಉತ್ತರ ವಲಯ ಅರಣ್ಯಾಧಿಕಾರಿ ಸಯ್ಯದ್ ದಾದಾ ಖಲಂದರ್ ಈ ಕುರಿತು ಪ್ರತಿಕ್ರಿಯಿಸಿ,‘ಚಿರತೆ ಸೆರೆಗೆ ಬೋನ್ ಅಳವಡಿಸಲಾಗಿದೆ. ಶೆಡ್ ಬಳಿ ಸ್ವಚ್ಛಗೊಳಿಸಲಾಗಿದೆ. ಗಾಳೆಮ್ಮನ ಗುಡಿ ಬಳಿ ಕರಡಿ ಮತ್ತೊಮ್ಮೆ ಕಂಡು ಬಂದರೆ, ಹಿಡಿದು ಬೇರೆಡೆ ಸಾಗಿಸಲಾಗುವುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>