<p><strong>ಬಳ್ಳಾರಿ</strong>: ಕಟ್ಟಡ ನಿರ್ಮಾಣ ಕಾರ್ಮಿಕರ ಹೆಸರಿನಲ್ಲಿ ಕಾರ್ಡ್ ಮಾಡಿಸಿಕೊಂಡು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಪಡೆಯುತ್ತಿರುವ ನಕಲಿ ಕಾರ್ಮಿಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಕಾರ್ಮಿಕ ಇಲಾಖೆಯು, ಜಿಲ್ಲೆಯಲ್ಲಿ ಇದುವರೆಗೆ 2,308 ನಕಲಿ ಕಾರ್ಡ್ಗಳನ್ನು ರದ್ದುಪಡಿಸಿದೆ.</p>.<p>ಮಂಡಳಿಯಿಂದ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ, ಕಾರ್ಮಿಕರಲ್ಲದವರು ಸಹ ನಕಲಿ ದಾಖಲೆ ಸಲ್ಲಿಸಿ ಕಾರ್ಡ್ ಪಡೆದಿದ್ದಾರೆ. ಇದರಿಂದಾಗಿ ನೈಜ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ ಎಂದು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳು ದನಿ ಎತ್ತಿದ್ದವು. ಅಂಥವರನ್ನು ಗುರುತಿಸಿ ಕಾರ್ಡ್ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದವು.</p>.<p>ಇಲಾಖೆಯಿಂದ ಅಭಿಯಾನ: ‘ನಕಲಿ ಕಾರ್ಡ್ ಹಾವಳಿ ಕುರಿತು ಸಂಘಟನೆಗಳು ಮಾಡಿದ್ದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆಯು, ಕಟ್ಟಡ ಕಾರ್ಮಿಕರಲ್ಲದವರ ಕಾರ್ಡ್ ರದ್ದುಗೊಳಿಸಲು ಕಳೆದ ವರ್ಷದಿಂದ ಬೋಗಸ್ ಕಾರ್ಡ್ ರದ್ದತಿ ಅಭಿಯಾನ ಶುರು ಮಾಡಿದೆ.</p>.<p>ಕಟ್ಟಡ ನಿರ್ಮಾಣ ಕೆಲಸ ಮಾಡುವ ಸುಮಾರು 20 ಬಗೆಯ ಕಾರ್ಮಿಕರ ಹಿತಕ್ಕಾಗಿಯೇ ಇರುವ ಮಂಡಳಿಯು ಅವರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಶಸ್ತ್ರಚಿಕಿತ್ಸೆಗೆ ಸಹಾಯಧನ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಧನ, ಲ್ಯಾಪ್ಟಾಪ್ ವಿತರಣೆ, ಮದುವೆ ಕಾರ್ಯಕ್ರಮಕ್ಕೆ ನೆರವು, ಕೆಲಸ ಮಾಡುವಾಗ ಅವಘಡ ಸಂಭವಿಸಿ ಗಾಯಗೊಂಡರೆ ಅಥವಾ ಮರಣ ಹೊಂದಿದರೆ ಪರಿಹಾರ ಸೇರಿದಂತೆ ಅವರ ಬದುಕಿಗೆ ಸಾಮಾಜಿಕ ಭದ್ರತೆ ಒದಗಿಸುವ ಸೌಲಭ್ಯಗಳನ್ನು ಮಂಡಳಿ ನೀಡುತ್ತಿದೆ.</p>.<p>ಇಲಾಖೆಯಿಂದಲೇ ಸಾಫ್ಟ್ವೇರ್: ಹಿಂದೆ ಸೇವಾ ಸಿಂಧು ಪೋರ್ಟಲ್ನಲ್ಲಿ ಕಟ್ಟಡ ಕಾರ್ಮಿಕರು ನೋಂದಣಿಗೆ ಅರ್ಜಿ ಸಲ್ಲಿಸಬೇಕಿತ್ತು. ಈಗ ಕಾರ್ಮಿಕ ಇಲಾಖೆಗಾಗಿಯೇ ಒಂದು ವರ್ಷದ ಹಿಂದೆ ಹೊಸ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದು, ಅದರ ಮೂಲಕವೇ ನೋಂದಣಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಯಾರಾದರೂ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ ನಮ್ಮಲ್ಲಿರುವ ದತ್ತಾಂಶದಿಂದ ಪತ್ತೆಹಚ್ಚಿ ಅರ್ಜಿಯನ್ನು ತಡೆ ಹಿಡಿಯಲಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಕಾರ್ಮಿಕರು ತಮ್ಮ ಬಳಿ ಇರುವ ಕಾರ್ಡ್ ಅನ್ನು ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ವರ್ಷದಲ್ಲಿ ಕನಿಷ್ಠ 90 ದಿನ ಕಟ್ಟಡ ನಿರ್ಮಾಣ ಕೆಲಸ ಮಾಡಿರುವುದರ ಹಾಗೂ ಕಟ್ಟಡದ ಮಾಲೀಕರಿಂದ ಸಂಬಳ ಪಡೆದಿರುವುದರ ಕುರಿತು ದಾಖಲೆ ಸಲ್ಲಿಸಬೇಕು. ಆಗ, ಅವರ ಕಾರ್ಡ್ ಅನ್ನು ನವೀಕರಣ ಮಾಡಲಾಗುತ್ತದೆ. ಇಲ್ಲದಿದ್ದರೆ ರದ್ದು ಮಾಡಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು. </p>.<p><strong>ಅಂಕಿ ಸಂಖ್ಯೆ</strong> </p>.<p>62,093: 2024ರ ಅಕ್ಟೋಬರ್ವರೆಗೆ ನೋಂದಣಿಯಾದ ಫಲಾನುಭವಿಗಳು </p>.<p>2601: 2023ರ ಏಪ್ರಿಲ್ನಿಂದ 2024ರ ಅಕ್ಟೋಬರ್ವರೆಗೆ ನೋಂದಣಿಯಾದವರು </p>.<div><blockquote>ಬಳ್ಳಾರಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ನೋಂದಣಿಯೂ ಕಡಿಮೆ ಬೋಗಸ್ ಕಾರ್ಡ್ಗಳೂ ಕಡಿಮೆ. ಇಲ್ಲಿ ಪರಿಶೀಲನೆ ಕಟ್ಟುನಿಟ್ಟಾಗಿ ಆಗುತ್ತದೆ. ಹೀಗಾಗಿ ಅಕ್ರಮವೂ ಕಡಿಮೆಯಾಗಿದೆ. </blockquote><span class="attribution">ಸಿದ್ದಪ್ಪ ಜಿಲ್ಲಾ ಕಾರ್ಮಿಕ ಅಧಿಕಾರಿ ಬಳ್ಳಾರಿ</span></div>.<p>ಸಿರುಗುಪ್ಪ ತಾಲ್ಲೂಕಿನಲ್ಲೇ ಹೆಚ್ಚು ‘ಜಿಲ್ಲೆಯ ಒಟ್ಟಾರೆ 62093 ನೋಂದಾಯಿತ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕ ಕಾರ್ಡ್ಗಳಿವೆ. ಸದ್ಯ ರದ್ದಾಗಿರುವ ಕಾರ್ಡ್ಗಳ ಪೈಕಿ ಸಿರುಗುಪ್ಪ ತಾಲ್ಲೂಕಿನಲ್ಲಿ ಅತಿ ಹೆಚ್ಚು 1278 ರದ್ದಾಗಿವೆ. ನಂತರ ರಾಮನಗರದಲ್ಲಿ 1137 ಬಳ್ಳಾರಿ ಎರಡನೇ ವೃತ್ತದಲ್ಲಿ 437 ಹಾಗೂ ವೃತ್ತ 1ರಲ್ಲಿ 414 ನಕಲಿ ಕಾರ್ಡ್ಗಳನ್ನು ಪತ್ತೆಹಚ್ಚಿ ರದ್ದು ಮಾಡಲಾಗಿದೆ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸ್ಥಳ ಭೇಟಿ ದಾಖಲೆ ಮರು ಪರಿಶೀಲನೆ ‘ನಕಲಿ ದಾಖಲೆ ಸಲ್ಲಿಸಿ ಕಾರ್ಡ್ ಪಡೆದಿರುವವರ ವಿಳಾಸಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳೇ ಭೇಟಿ ನೀಡಿ ಅವರು ನೈಜ ಕಾರ್ಮಿಕರೇ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಅವರಿಗೆ ವಿಡಿಯೊ ಕರೆ ಮಾಡಿ ವಿಚಾರಣೆ ಮಾಡುವ ಜೊತೆಗೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಮಾಹಿತಿ ಸಂಗ್ರಹಿಸುತ್ತೇವೆ. ಕಾರ್ಡ್ ನೋಂದಣಿ ಸಂದರ್ಭದಲ್ಲಿ ಕೊಟ್ಟಿರುವ ದಾಖಲೆಗಳನ್ನು ಪುನರ್ ಪರಿಶೀಲಿಸುತ್ತೇವೆ. ನಕಲಿ ಕಾರ್ಮಿಕ ಎಂಬುದು ಖಚಿತವಾದರೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅವರ ನೋಂದಣಿ ರದ್ದುಪಡಿಸುತ್ತೇವೆ. ಬಳಿಕ ಅವರಿಗೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಕಾರ್ಮಿಕ ಅಧಿಕಾರಿ ಸಿದ್ದಪ್ಪ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಕಟ್ಟಡ ನಿರ್ಮಾಣ ಕಾರ್ಮಿಕರ ಹೆಸರಿನಲ್ಲಿ ಕಾರ್ಡ್ ಮಾಡಿಸಿಕೊಂಡು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ಪಡೆಯುತ್ತಿರುವ ನಕಲಿ ಕಾರ್ಮಿಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಕಾರ್ಮಿಕ ಇಲಾಖೆಯು, ಜಿಲ್ಲೆಯಲ್ಲಿ ಇದುವರೆಗೆ 2,308 ನಕಲಿ ಕಾರ್ಡ್ಗಳನ್ನು ರದ್ದುಪಡಿಸಿದೆ.</p>.<p>ಮಂಡಳಿಯಿಂದ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ, ಕಾರ್ಮಿಕರಲ್ಲದವರು ಸಹ ನಕಲಿ ದಾಖಲೆ ಸಲ್ಲಿಸಿ ಕಾರ್ಡ್ ಪಡೆದಿದ್ದಾರೆ. ಇದರಿಂದಾಗಿ ನೈಜ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ ಎಂದು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳು ದನಿ ಎತ್ತಿದ್ದವು. ಅಂಥವರನ್ನು ಗುರುತಿಸಿ ಕಾರ್ಡ್ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದವು.</p>.<p>ಇಲಾಖೆಯಿಂದ ಅಭಿಯಾನ: ‘ನಕಲಿ ಕಾರ್ಡ್ ಹಾವಳಿ ಕುರಿತು ಸಂಘಟನೆಗಳು ಮಾಡಿದ್ದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಇಲಾಖೆಯು, ಕಟ್ಟಡ ಕಾರ್ಮಿಕರಲ್ಲದವರ ಕಾರ್ಡ್ ರದ್ದುಗೊಳಿಸಲು ಕಳೆದ ವರ್ಷದಿಂದ ಬೋಗಸ್ ಕಾರ್ಡ್ ರದ್ದತಿ ಅಭಿಯಾನ ಶುರು ಮಾಡಿದೆ.</p>.<p>ಕಟ್ಟಡ ನಿರ್ಮಾಣ ಕೆಲಸ ಮಾಡುವ ಸುಮಾರು 20 ಬಗೆಯ ಕಾರ್ಮಿಕರ ಹಿತಕ್ಕಾಗಿಯೇ ಇರುವ ಮಂಡಳಿಯು ಅವರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಶಸ್ತ್ರಚಿಕಿತ್ಸೆಗೆ ಸಹಾಯಧನ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಧನ, ಲ್ಯಾಪ್ಟಾಪ್ ವಿತರಣೆ, ಮದುವೆ ಕಾರ್ಯಕ್ರಮಕ್ಕೆ ನೆರವು, ಕೆಲಸ ಮಾಡುವಾಗ ಅವಘಡ ಸಂಭವಿಸಿ ಗಾಯಗೊಂಡರೆ ಅಥವಾ ಮರಣ ಹೊಂದಿದರೆ ಪರಿಹಾರ ಸೇರಿದಂತೆ ಅವರ ಬದುಕಿಗೆ ಸಾಮಾಜಿಕ ಭದ್ರತೆ ಒದಗಿಸುವ ಸೌಲಭ್ಯಗಳನ್ನು ಮಂಡಳಿ ನೀಡುತ್ತಿದೆ.</p>.<p>ಇಲಾಖೆಯಿಂದಲೇ ಸಾಫ್ಟ್ವೇರ್: ಹಿಂದೆ ಸೇವಾ ಸಿಂಧು ಪೋರ್ಟಲ್ನಲ್ಲಿ ಕಟ್ಟಡ ಕಾರ್ಮಿಕರು ನೋಂದಣಿಗೆ ಅರ್ಜಿ ಸಲ್ಲಿಸಬೇಕಿತ್ತು. ಈಗ ಕಾರ್ಮಿಕ ಇಲಾಖೆಗಾಗಿಯೇ ಒಂದು ವರ್ಷದ ಹಿಂದೆ ಹೊಸ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದು, ಅದರ ಮೂಲಕವೇ ನೋಂದಣಿಗೆ ಅರ್ಜಿ ಸ್ವೀಕರಿಸಲಾಗುತ್ತಿದೆ. ಯಾರಾದರೂ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ ನಮ್ಮಲ್ಲಿರುವ ದತ್ತಾಂಶದಿಂದ ಪತ್ತೆಹಚ್ಚಿ ಅರ್ಜಿಯನ್ನು ತಡೆ ಹಿಡಿಯಲಾಗುತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಕಾರ್ಮಿಕರು ತಮ್ಮ ಬಳಿ ಇರುವ ಕಾರ್ಡ್ ಅನ್ನು ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ವರ್ಷದಲ್ಲಿ ಕನಿಷ್ಠ 90 ದಿನ ಕಟ್ಟಡ ನಿರ್ಮಾಣ ಕೆಲಸ ಮಾಡಿರುವುದರ ಹಾಗೂ ಕಟ್ಟಡದ ಮಾಲೀಕರಿಂದ ಸಂಬಳ ಪಡೆದಿರುವುದರ ಕುರಿತು ದಾಖಲೆ ಸಲ್ಲಿಸಬೇಕು. ಆಗ, ಅವರ ಕಾರ್ಡ್ ಅನ್ನು ನವೀಕರಣ ಮಾಡಲಾಗುತ್ತದೆ. ಇಲ್ಲದಿದ್ದರೆ ರದ್ದು ಮಾಡಲಾಗುತ್ತದೆ’ ಎಂದು ಅಧಿಕಾರಿಗಳು ತಿಳಿಸಿದರು. </p>.<p><strong>ಅಂಕಿ ಸಂಖ್ಯೆ</strong> </p>.<p>62,093: 2024ರ ಅಕ್ಟೋಬರ್ವರೆಗೆ ನೋಂದಣಿಯಾದ ಫಲಾನುಭವಿಗಳು </p>.<p>2601: 2023ರ ಏಪ್ರಿಲ್ನಿಂದ 2024ರ ಅಕ್ಟೋಬರ್ವರೆಗೆ ನೋಂದಣಿಯಾದವರು </p>.<div><blockquote>ಬಳ್ಳಾರಿ ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರ ನೋಂದಣಿಯೂ ಕಡಿಮೆ ಬೋಗಸ್ ಕಾರ್ಡ್ಗಳೂ ಕಡಿಮೆ. ಇಲ್ಲಿ ಪರಿಶೀಲನೆ ಕಟ್ಟುನಿಟ್ಟಾಗಿ ಆಗುತ್ತದೆ. ಹೀಗಾಗಿ ಅಕ್ರಮವೂ ಕಡಿಮೆಯಾಗಿದೆ. </blockquote><span class="attribution">ಸಿದ್ದಪ್ಪ ಜಿಲ್ಲಾ ಕಾರ್ಮಿಕ ಅಧಿಕಾರಿ ಬಳ್ಳಾರಿ</span></div>.<p>ಸಿರುಗುಪ್ಪ ತಾಲ್ಲೂಕಿನಲ್ಲೇ ಹೆಚ್ಚು ‘ಜಿಲ್ಲೆಯ ಒಟ್ಟಾರೆ 62093 ನೋಂದಾಯಿತ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕ ಕಾರ್ಡ್ಗಳಿವೆ. ಸದ್ಯ ರದ್ದಾಗಿರುವ ಕಾರ್ಡ್ಗಳ ಪೈಕಿ ಸಿರುಗುಪ್ಪ ತಾಲ್ಲೂಕಿನಲ್ಲಿ ಅತಿ ಹೆಚ್ಚು 1278 ರದ್ದಾಗಿವೆ. ನಂತರ ರಾಮನಗರದಲ್ಲಿ 1137 ಬಳ್ಳಾರಿ ಎರಡನೇ ವೃತ್ತದಲ್ಲಿ 437 ಹಾಗೂ ವೃತ್ತ 1ರಲ್ಲಿ 414 ನಕಲಿ ಕಾರ್ಡ್ಗಳನ್ನು ಪತ್ತೆಹಚ್ಚಿ ರದ್ದು ಮಾಡಲಾಗಿದೆ’ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸ್ಥಳ ಭೇಟಿ ದಾಖಲೆ ಮರು ಪರಿಶೀಲನೆ ‘ನಕಲಿ ದಾಖಲೆ ಸಲ್ಲಿಸಿ ಕಾರ್ಡ್ ಪಡೆದಿರುವವರ ವಿಳಾಸಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳೇ ಭೇಟಿ ನೀಡಿ ಅವರು ನೈಜ ಕಾರ್ಮಿಕರೇ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಅವರಿಗೆ ವಿಡಿಯೊ ಕರೆ ಮಾಡಿ ವಿಚಾರಣೆ ಮಾಡುವ ಜೊತೆಗೆ ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿ ಮಾಹಿತಿ ಸಂಗ್ರಹಿಸುತ್ತೇವೆ. ಕಾರ್ಡ್ ನೋಂದಣಿ ಸಂದರ್ಭದಲ್ಲಿ ಕೊಟ್ಟಿರುವ ದಾಖಲೆಗಳನ್ನು ಪುನರ್ ಪರಿಶೀಲಿಸುತ್ತೇವೆ. ನಕಲಿ ಕಾರ್ಮಿಕ ಎಂಬುದು ಖಚಿತವಾದರೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಅವರ ನೋಂದಣಿ ರದ್ದುಪಡಿಸುತ್ತೇವೆ. ಬಳಿಕ ಅವರಿಗೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ’ ಎಂದು ಕಾರ್ಮಿಕ ಅಧಿಕಾರಿ ಸಿದ್ದಪ್ಪ ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>