<p><strong>ಬಳ್ಳಾರಿ</strong>: ಕೇಂದ್ರದ ಬಜೆಟ್ ಪ್ರತಿ ಸುಟ್ಟು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ರಾಜ್ಯ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. </p>.<p>ಈ ವೇಳೆ ಮಾತನಾಡಿದ ಸಂಘದ ರಾಷ್ಟ್ರ ಘಟಕದ ಉಪಾಧ್ಯಕ್ಷ ಸುನೀತ್ ಕುಮಾರ್, ‘ಕೇಂದ್ರ ಬಜೆಟ್ ಜನ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೆಟ್ ಪರವಾಗಿದೆ. ಈ ಬಜೆಟ್ ರೈತರ ಬದುಕಿನ ಬವಣೆಗಳಿಗೆ ಪರಿಹಾರ ನೀಡದೆ ಪೊಳ್ಳು ಆಶ್ವಾಸನೆಗಳಿಂದ ತುಂಬಿದೆ. ಕನಿಷ್ಟ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಸರ್ಕಾರ ಖರೀದಿಸಬೇಕು, ಅದನ್ನು ಕಾನೂನುಬದ್ಧವಾಗಿಸಬೇಕು, ವಿದ್ಯುತ್ ಮಸೂದೆ-2023 ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ‘ ಎಂದರು. </p>.<p>ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಶಶಿಧರ್ ಮಾತನಾಡಿ, ‘ನರೆಗಾ ವ್ಯವಸ್ಥೆಯನ್ನು ಬಲಪಡಿಸಬೇಕು, ಸಾಲಮನ್ನಾ ಮಾಡಬೇಕು ಮತ್ತು ಪಿಂಚಣಿ ಕೊಡಬೇಕು ಎಂದು ಬಹಳ ಕಾಲದಿಂದ ಹೋರಾಟ ನಡೆಸಲಾಗುತ್ತಿದೆ. ಈ ಹಕ್ಕೊತ್ತಾಯಗಳಲ್ಲಿ ಯಾವುದನ್ನೂ ಈಡೇರಿಲ್ಲ’ ಎಂದರು. </p>.<p>ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಉಪಾಧ್ಯಕ್ಷ ವಿ.ನಾಗಮಾಳ್, ಎನ್. ಸ್ವಾಮಿ, ಲಕ್ಷ್ಮಣ್, ಗಣಪತಿ ಮಾನೆ, ಮಹೇಶ್, ಗೋವಿಂದ್, ದೀಪಾ, ಶರಣು ಗೂಗಲ್, ಗುರಳ್ಳಿ ರಾಜ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ಕೇಂದ್ರದ ಬಜೆಟ್ ಪ್ರತಿ ಸುಟ್ಟು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ರಾಜ್ಯ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. </p>.<p>ಈ ವೇಳೆ ಮಾತನಾಡಿದ ಸಂಘದ ರಾಷ್ಟ್ರ ಘಟಕದ ಉಪಾಧ್ಯಕ್ಷ ಸುನೀತ್ ಕುಮಾರ್, ‘ಕೇಂದ್ರ ಬಜೆಟ್ ಜನ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೆಟ್ ಪರವಾಗಿದೆ. ಈ ಬಜೆಟ್ ರೈತರ ಬದುಕಿನ ಬವಣೆಗಳಿಗೆ ಪರಿಹಾರ ನೀಡದೆ ಪೊಳ್ಳು ಆಶ್ವಾಸನೆಗಳಿಂದ ತುಂಬಿದೆ. ಕನಿಷ್ಟ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಸರ್ಕಾರ ಖರೀದಿಸಬೇಕು, ಅದನ್ನು ಕಾನೂನುಬದ್ಧವಾಗಿಸಬೇಕು, ವಿದ್ಯುತ್ ಮಸೂದೆ-2023 ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ‘ ಎಂದರು. </p>.<p>ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಶಶಿಧರ್ ಮಾತನಾಡಿ, ‘ನರೆಗಾ ವ್ಯವಸ್ಥೆಯನ್ನು ಬಲಪಡಿಸಬೇಕು, ಸಾಲಮನ್ನಾ ಮಾಡಬೇಕು ಮತ್ತು ಪಿಂಚಣಿ ಕೊಡಬೇಕು ಎಂದು ಬಹಳ ಕಾಲದಿಂದ ಹೋರಾಟ ನಡೆಸಲಾಗುತ್ತಿದೆ. ಈ ಹಕ್ಕೊತ್ತಾಯಗಳಲ್ಲಿ ಯಾವುದನ್ನೂ ಈಡೇರಿಲ್ಲ’ ಎಂದರು. </p>.<p>ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಉಪಾಧ್ಯಕ್ಷ ವಿ.ನಾಗಮಾಳ್, ಎನ್. ಸ್ವಾಮಿ, ಲಕ್ಷ್ಮಣ್, ಗಣಪತಿ ಮಾನೆ, ಮಹೇಶ್, ಗೋವಿಂದ್, ದೀಪಾ, ಶರಣು ಗೂಗಲ್, ಗುರಳ್ಳಿ ರಾಜ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>