<p>ಕಂಪ್ಲಿ: ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಅವಘಡ ಸಂಭವಿಸಿ ಎರಡು ಬೃಹತ್ ಭತ್ತದ ಮೇವಿನ ಬಣಿವೆಗಳು ಭಸ್ಮವಾಗಿವೆ.</p>.<p>ಸಂಪೂರ್ಣ ಭಸ್ಮವಾದ ಎರಡು ಬಣಿವೆಗಳು ಗ್ರಾಮದ ಎಂ.ಗೋಪಾಲಪ್ಪ ಹನುಮಂತರೆಡ್ಡಿ ಅವರಿಗೆ ಸೇರಿವೆ. ಗ್ರಾಮದಲ್ಲಿ ಸಂಜೆ 5.30ರ ಸುಮಾರಿಗೆ ಬೀಸಿದ ಬಿರುಗಾಳಿಗೆ ವಿದ್ಯುತ್ ಕಂಬದ ತಂತಿ ತುಂಡಾಗಿ ತಕ್ಷಣ ಕಾಣಿಸಿಕೊಂಡ ಕಿಡಿಗಳು ಹತ್ತಿರದ ಎರಡು ಬೃಹತ್ ಭತ್ತದ ಮೇವಿನ ಬಣಿವೆಗಳಿಗೆ ತಗುಲಿ ಈ ಘಟನೆ ನಡೆದಿದೆ.</p>.<p>‘ಆರು ಎಮ್ಮೆ, ನಾಲ್ಕು ಆಕಳು ಆರೈಕೆ ಮಾಡಿ ಹೈನುಗಾರಿಕೆ ಮಾಡುತ್ತಿದ್ದೆ. ಬೇಸಿಗೆಯಲ್ಲಿ ಮೇವಿನ ಕೊರತೆಯಾಗಬಹುದು ಎಂದು ನೂರು ಎಕರೆ ಭತ್ತದ ಮೇವು ಖರೀದಿಸಿ ಎರಡು ಬೃಹತ್ ಬಣಿವೆ ಹಾಕಿದ್ದೆ. ಸದ್ಯ ಮೇವು ಸಂಪೂರ್ಣ ಭಸ್ಮವಾಗಿದ್ದರಿಂದ ಸುಮಾರು ₹ 3 ಲಕ್ಷ ನಷ್ಟವುಂಟಾಗಿದೆ’ ಎಂದು ರೈತ ಗೋಪಾಲಪ್ಪ ಬೇಸರದಿಂದ ತಿಳಿಸಿದರು.</p>.<p>ವಿಷಯ ತಿಳಿದ ಕುರುಗೋಡು ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಅವಘಡ ಸಂಭವಿಸಿ ಎರಡು ಬೃಹತ್ ಭತ್ತದ ಮೇವಿನ ಬಣಿವೆಗಳು ಭಸ್ಮವಾಗಿವೆ.</p>.<p>ಸಂಪೂರ್ಣ ಭಸ್ಮವಾದ ಎರಡು ಬಣಿವೆಗಳು ಗ್ರಾಮದ ಎಂ.ಗೋಪಾಲಪ್ಪ ಹನುಮಂತರೆಡ್ಡಿ ಅವರಿಗೆ ಸೇರಿವೆ. ಗ್ರಾಮದಲ್ಲಿ ಸಂಜೆ 5.30ರ ಸುಮಾರಿಗೆ ಬೀಸಿದ ಬಿರುಗಾಳಿಗೆ ವಿದ್ಯುತ್ ಕಂಬದ ತಂತಿ ತುಂಡಾಗಿ ತಕ್ಷಣ ಕಾಣಿಸಿಕೊಂಡ ಕಿಡಿಗಳು ಹತ್ತಿರದ ಎರಡು ಬೃಹತ್ ಭತ್ತದ ಮೇವಿನ ಬಣಿವೆಗಳಿಗೆ ತಗುಲಿ ಈ ಘಟನೆ ನಡೆದಿದೆ.</p>.<p>‘ಆರು ಎಮ್ಮೆ, ನಾಲ್ಕು ಆಕಳು ಆರೈಕೆ ಮಾಡಿ ಹೈನುಗಾರಿಕೆ ಮಾಡುತ್ತಿದ್ದೆ. ಬೇಸಿಗೆಯಲ್ಲಿ ಮೇವಿನ ಕೊರತೆಯಾಗಬಹುದು ಎಂದು ನೂರು ಎಕರೆ ಭತ್ತದ ಮೇವು ಖರೀದಿಸಿ ಎರಡು ಬೃಹತ್ ಬಣಿವೆ ಹಾಕಿದ್ದೆ. ಸದ್ಯ ಮೇವು ಸಂಪೂರ್ಣ ಭಸ್ಮವಾಗಿದ್ದರಿಂದ ಸುಮಾರು ₹ 3 ಲಕ್ಷ ನಷ್ಟವುಂಟಾಗಿದೆ’ ಎಂದು ರೈತ ಗೋಪಾಲಪ್ಪ ಬೇಸರದಿಂದ ತಿಳಿಸಿದರು.</p>.<p>ವಿಷಯ ತಿಳಿದ ಕುರುಗೋಡು ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>