<p>ಕಂಪ್ಲಿ: ಇಲ್ಲಿಯ ಸವಿತಾ ಸಮಾಜದವರು ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ತಹಶೀಲ್ದಾರ್ ಶಿವರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.</p>.<p>‘ಸವಿತಾ ಸಮುದಾಯದ ಜಾತಿ ಪದವನ್ನು ಸಾರ್ವಜನಿಕವಾಗಿ ಬೈಗುಳವಾಗಿ ಉಪಯೋಗಿಸುವವರ ವಿರುದ್ಧ ದೌರ್ಜನ್ಯ ಕಾಯ್ದೆಯ ಅಡಿ ದೂರು ದಾಖಲಿಸಬೇಕು. ಜನಸಂಖ್ಯೆ ಆಧಾರಿತವಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮೀಸಲಾತಿಗೆ ಆದೇಶ ಹೊರಡಿಸಬೇಕು. ನಾಯಿಂದ ಜಾತಿಯನ್ನು ಹಿಂದುಳಿದ ಪ್ರವರ್ಗ-2ಎ ಮೀಸಲಿನ ಸವಿತಾ ಸಮದಾಯಕ್ಕೆ ಸೇರ್ಪಡೆಗೊಳಿಸಬೇಕು’ ಎಂದು ಸವಿತಾ ಸಮಾಜ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ. ಪಾಂಡುರಂಗ ಮನವಿ ಮಾಡಿದರು.</p>.<p>ರಾಜ್ಯದ ನಾಲ್ಕು ಕಡೆ ಕ್ಷೌರಿಕ ತರಬೇತಿ ಕೇಂದ್ರಗಳನ್ನು, ನಾದಸ್ವರ ಡೋಲು ನುಡಿಸುವ ತರಬೇತಿ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.</p>.<p>ಸವಿತಾ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಎ. ಹನುಮಂತ, ಪದಾಧಿಕಾರಿಗಳಾದ ಎ. ಅಂಜಿನಪ್ಪ, ಎನ್. ಶ್ರೀನಿವಾಸ್, ಆನಂದ್, ಕೆ. ಶ್ರೀನಿವಾಸ್, ರಾಜಾ, ವೀರಕುಮಾರ್, ಬುಜ್ಜಿ, ಕೃಷ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ಇಲ್ಲಿಯ ಸವಿತಾ ಸಮಾಜದವರು ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ತಹಶೀಲ್ದಾರ್ ಶಿವರಾಜ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.</p>.<p>‘ಸವಿತಾ ಸಮುದಾಯದ ಜಾತಿ ಪದವನ್ನು ಸಾರ್ವಜನಿಕವಾಗಿ ಬೈಗುಳವಾಗಿ ಉಪಯೋಗಿಸುವವರ ವಿರುದ್ಧ ದೌರ್ಜನ್ಯ ಕಾಯ್ದೆಯ ಅಡಿ ದೂರು ದಾಖಲಿಸಬೇಕು. ಜನಸಂಖ್ಯೆ ಆಧಾರಿತವಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮೀಸಲಾತಿಗೆ ಆದೇಶ ಹೊರಡಿಸಬೇಕು. ನಾಯಿಂದ ಜಾತಿಯನ್ನು ಹಿಂದುಳಿದ ಪ್ರವರ್ಗ-2ಎ ಮೀಸಲಿನ ಸವಿತಾ ಸಮದಾಯಕ್ಕೆ ಸೇರ್ಪಡೆಗೊಳಿಸಬೇಕು’ ಎಂದು ಸವಿತಾ ಸಮಾಜ ಸಂಘದ ಜಿಲ್ಲಾ ಉಪಾಧ್ಯಕ್ಷ ಪಿ. ಪಾಂಡುರಂಗ ಮನವಿ ಮಾಡಿದರು.</p>.<p>ರಾಜ್ಯದ ನಾಲ್ಕು ಕಡೆ ಕ್ಷೌರಿಕ ತರಬೇತಿ ಕೇಂದ್ರಗಳನ್ನು, ನಾದಸ್ವರ ಡೋಲು ನುಡಿಸುವ ತರಬೇತಿ ಕೇಂದ್ರಗಳನ್ನು ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.</p>.<p>ಸವಿತಾ ಸಮಾಜ ಸಂಘದ ತಾಲ್ಲೂಕು ಅಧ್ಯಕ್ಷ ಎ. ಹನುಮಂತ, ಪದಾಧಿಕಾರಿಗಳಾದ ಎ. ಅಂಜಿನಪ್ಪ, ಎನ್. ಶ್ರೀನಿವಾಸ್, ಆನಂದ್, ಕೆ. ಶ್ರೀನಿವಾಸ್, ರಾಜಾ, ವೀರಕುಮಾರ್, ಬುಜ್ಜಿ, ಕೃಷ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>