<p><strong>ಎರ್ರಿಸ್ವಾಮಿ ಬಿ.</strong></p>.<p>ತೋರಣಗಲ್ಲು: ಸಮೀಪದ ಏಳುಬೆಂಚಿ ಗ್ರಾಮದ ರೈತ ವಾಲ್ಮೀಕಿ ಮಾರುತಿ ಎಂಬುವವರು ಮಿಶ್ರ ಕೃಷಿ ಪದ್ಧತಿಯಲ್ಲಿ 3 ಎಕರೆ 14 ಸೇಂಟ್ ಜಮೀನಿನಲ್ಲಿ ಹೂಕೋಸು, ಕಾಕಡಮಲ್ಲಿಗೆ, ಪೇರಲೆ, ದಾಳಿಂಬೆ, ಜಂಬುನೇರಳೆ, ವಾಟರ್ ಆ್ಯಪಲ್, ತೆಂಗು, ಮಾಗಣಿ ಬೆಳೆದು ವಾರ್ಷಿಕ ವೆಚ್ಚ ಕಳೆದು ₹ 2ಲಕ್ಷ ಆದಾಯಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.</p>.<p>ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಹಣ್ಣು ತರಕಾರಿ ಜೊತೆಗೆ ಎರಡು ವರ್ಷಗಳಿಂದ ಸಮೃದ್ಧವಾಗಿ ಹೂವನ್ನೂ ಬೆಳೆಯುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನೇ ನಂಬಿ ವರ್ಷ ಪೂರ್ತಿ ಶ್ರಮವಹಿಸಿ ಕೃಷಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.</p>.<p>ಪ್ರತಿ ವರ್ಷ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಯುತ್ತಿದ್ದರು. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಇರುವುದರಿಂದ ದೂಳು, ಕಲುಷಿತ ಹೊಗೆಯಿಂದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿ ನಷ್ಟ ಉಂಟಾಗುತ್ತಿತ್ತು. ಹೀಗಾಗಿ ಆ ಬೆಳೆಗಳಿಗೆ ವಿದಾಯ ಹೇಳಿ ವಿವಿಧ ಹಣ್ಣು, ತರಕಾರಿ ಹಾಗೂ ಹೂವಿನ ಬೇಸಾಯ ಆರಂಭಿಸಿದ್ದಾರೆ.</p>.<p>ಪೇರಲೆ, ದಾಳಿಂಬೆ, ಜಂಬುನೇರಳೆಹಣ್ಣು, ವಾಟರ್ ಆ್ಯಪಲ್, ತೆಂಗು, ಮಾಗಣಿ ಸಸಿಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಖರೀದಿಸಿದ್ದಾರೆ. ಪೇರಲೆ, ದಾಳಿಂಬೆ, ಜಂಬುನೇರಳೆ ಸಸಿಗಳಿಗೆ ತಲಾ ₹100ರಂತೆ ಖರೀದಿಸಿದ್ದರೆ, ವಾಟರ್ ಆ್ಯಪಲ್ ಹಣ್ಣಿನ ಒಂದು ಸಸಿಗೆ ₹150ರಂತೆ ಒಟ್ಟು ನಾಲ್ಕು ಸಸಿಗಳನ್ನು ಖರೀದಿಸಿ ಬೆಳೆಸಿದ್ದಾರೆ.</p>.<p>ಪೇರಲೆ ಮತ್ತು ದಾಳಿಂಬೆ ಹಣ್ಣಿನ ಸಸಿಗಳನ್ನು ಮೂರು ಎಕರೆಯ ವ್ಯಾಪ್ತಿಯಲ್ಲಿ, ಜಂಬು ನೇರಳೆಯ ಸಸಿಗಳನ್ನು 1ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಜಮೀನಿನ ಸುತ್ತ, ಬದುಗಳಲ್ಲಿ 100 ತೆಂಗು, 200 ಮಾಗಣಿ ಸಸಿಗಳನ್ನು ನೆಟ್ಟಿದ್ದಾರೆ. ಹೂಕೋಸನ್ನು ಒಂದು ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ.</p>.<p>ಅರ್ಧ ಎಕರೆಯಲ್ಲಿ ಕಾಕಡಮಲ್ಲಿಗೆಯ 500 ಸಸಿಗಳನ್ನು ನೆಟ್ಟು ಆರು ತಿಂಗಳಾಗಿದೆ. 1 ಕೆ.ಜಿ. ಕಾಕಡಮಲ್ಲಿಗೆಯನ್ನು ₹600ರಂತೆ ಮಾರಾಟ ಮಾಡಿ ಆರೇ ತಿಂಗಳಲ್ಲ ₹ 30ಸಾವಿರ ಆದಾಯ ಗಳಿಸಿದ್ದಾರೆ.</p>.<p>ಕೃಷಿ ಇಲಾಖೆಯಿಂದ ಸಬ್ಸಿಡಿ ಅಡಿ ಹನಿ ನೀರಾವರಿಗೆ ₹25 ಸಾವಿರ ನೀಡಿ, ಡ್ರಿಪ್ಗಳನ್ನು ಪಡೆದಿದ್ದಾರೆ. ಮಿಶ್ರ ಬೇಸಾಯದ ವೆಚ್ಚಕ್ಕಾಗಿ ಕುಡುತಿನಿ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಿಂದ ₹75 ಸಾವಿರ ಸಾಲ ಪಡೆದಿದ್ದಾರೆ.</p>.<p>ಸಾವಯುವ ಕೃಷಿ ಪದ್ಧತಿ ಅನುಸಾರ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಉತ್ತಮ ಇಳುವರಿ, ಹೆಚ್ಚಿನ ಆದಾಯಕ್ಕಾಗಿ ರಾಸಾಯನಿಕ ಗೊಬ್ಬರ, ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡಿ, ಪ್ರತಿ ವರ್ಷ ಅಧಿಕ ಲಾಭ ಗಳಿಸುತ್ತಿದ್ದಾರೆ.</p>.<p>ತೋಟಗಾರಿಕಾ ಇಲಾಖೆಯು ಸಬ್ಸಿಡಿ ರೂಪದಲ್ಲಿ ಸಾಲ ನೀಡಬೇಕು. ಸರ್ಕಾರವು ತೋಟಗಾರಿಕಾ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು </p><p>-ವಾಲ್ಮೀಕಿ ಮಾರುತಿ ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎರ್ರಿಸ್ವಾಮಿ ಬಿ.</strong></p>.<p>ತೋರಣಗಲ್ಲು: ಸಮೀಪದ ಏಳುಬೆಂಚಿ ಗ್ರಾಮದ ರೈತ ವಾಲ್ಮೀಕಿ ಮಾರುತಿ ಎಂಬುವವರು ಮಿಶ್ರ ಕೃಷಿ ಪದ್ಧತಿಯಲ್ಲಿ 3 ಎಕರೆ 14 ಸೇಂಟ್ ಜಮೀನಿನಲ್ಲಿ ಹೂಕೋಸು, ಕಾಕಡಮಲ್ಲಿಗೆ, ಪೇರಲೆ, ದಾಳಿಂಬೆ, ಜಂಬುನೇರಳೆ, ವಾಟರ್ ಆ್ಯಪಲ್, ತೆಂಗು, ಮಾಗಣಿ ಬೆಳೆದು ವಾರ್ಷಿಕ ವೆಚ್ಚ ಕಳೆದು ₹ 2ಲಕ್ಷ ಆದಾಯಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.</p>.<p>ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಹಣ್ಣು ತರಕಾರಿ ಜೊತೆಗೆ ಎರಡು ವರ್ಷಗಳಿಂದ ಸಮೃದ್ಧವಾಗಿ ಹೂವನ್ನೂ ಬೆಳೆಯುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನೇ ನಂಬಿ ವರ್ಷ ಪೂರ್ತಿ ಶ್ರಮವಹಿಸಿ ಕೃಷಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.</p>.<p>ಪ್ರತಿ ವರ್ಷ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಯುತ್ತಿದ್ದರು. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಇರುವುದರಿಂದ ದೂಳು, ಕಲುಷಿತ ಹೊಗೆಯಿಂದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿ ನಷ್ಟ ಉಂಟಾಗುತ್ತಿತ್ತು. ಹೀಗಾಗಿ ಆ ಬೆಳೆಗಳಿಗೆ ವಿದಾಯ ಹೇಳಿ ವಿವಿಧ ಹಣ್ಣು, ತರಕಾರಿ ಹಾಗೂ ಹೂವಿನ ಬೇಸಾಯ ಆರಂಭಿಸಿದ್ದಾರೆ.</p>.<p>ಪೇರಲೆ, ದಾಳಿಂಬೆ, ಜಂಬುನೇರಳೆಹಣ್ಣು, ವಾಟರ್ ಆ್ಯಪಲ್, ತೆಂಗು, ಮಾಗಣಿ ಸಸಿಗಳನ್ನು ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಖರೀದಿಸಿದ್ದಾರೆ. ಪೇರಲೆ, ದಾಳಿಂಬೆ, ಜಂಬುನೇರಳೆ ಸಸಿಗಳಿಗೆ ತಲಾ ₹100ರಂತೆ ಖರೀದಿಸಿದ್ದರೆ, ವಾಟರ್ ಆ್ಯಪಲ್ ಹಣ್ಣಿನ ಒಂದು ಸಸಿಗೆ ₹150ರಂತೆ ಒಟ್ಟು ನಾಲ್ಕು ಸಸಿಗಳನ್ನು ಖರೀದಿಸಿ ಬೆಳೆಸಿದ್ದಾರೆ.</p>.<p>ಪೇರಲೆ ಮತ್ತು ದಾಳಿಂಬೆ ಹಣ್ಣಿನ ಸಸಿಗಳನ್ನು ಮೂರು ಎಕರೆಯ ವ್ಯಾಪ್ತಿಯಲ್ಲಿ, ಜಂಬು ನೇರಳೆಯ ಸಸಿಗಳನ್ನು 1ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಜಮೀನಿನ ಸುತ್ತ, ಬದುಗಳಲ್ಲಿ 100 ತೆಂಗು, 200 ಮಾಗಣಿ ಸಸಿಗಳನ್ನು ನೆಟ್ಟಿದ್ದಾರೆ. ಹೂಕೋಸನ್ನು ಒಂದು ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ.</p>.<p>ಅರ್ಧ ಎಕರೆಯಲ್ಲಿ ಕಾಕಡಮಲ್ಲಿಗೆಯ 500 ಸಸಿಗಳನ್ನು ನೆಟ್ಟು ಆರು ತಿಂಗಳಾಗಿದೆ. 1 ಕೆ.ಜಿ. ಕಾಕಡಮಲ್ಲಿಗೆಯನ್ನು ₹600ರಂತೆ ಮಾರಾಟ ಮಾಡಿ ಆರೇ ತಿಂಗಳಲ್ಲ ₹ 30ಸಾವಿರ ಆದಾಯ ಗಳಿಸಿದ್ದಾರೆ.</p>.<p>ಕೃಷಿ ಇಲಾಖೆಯಿಂದ ಸಬ್ಸಿಡಿ ಅಡಿ ಹನಿ ನೀರಾವರಿಗೆ ₹25 ಸಾವಿರ ನೀಡಿ, ಡ್ರಿಪ್ಗಳನ್ನು ಪಡೆದಿದ್ದಾರೆ. ಮಿಶ್ರ ಬೇಸಾಯದ ವೆಚ್ಚಕ್ಕಾಗಿ ಕುಡುತಿನಿ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಿಂದ ₹75 ಸಾವಿರ ಸಾಲ ಪಡೆದಿದ್ದಾರೆ.</p>.<p>ಸಾವಯುವ ಕೃಷಿ ಪದ್ಧತಿ ಅನುಸಾರ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಉತ್ತಮ ಇಳುವರಿ, ಹೆಚ್ಚಿನ ಆದಾಯಕ್ಕಾಗಿ ರಾಸಾಯನಿಕ ಗೊಬ್ಬರ, ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡಿ, ಪ್ರತಿ ವರ್ಷ ಅಧಿಕ ಲಾಭ ಗಳಿಸುತ್ತಿದ್ದಾರೆ.</p>.<p>ತೋಟಗಾರಿಕಾ ಇಲಾಖೆಯು ಸಬ್ಸಿಡಿ ರೂಪದಲ್ಲಿ ಸಾಲ ನೀಡಬೇಕು. ಸರ್ಕಾರವು ತೋಟಗಾರಿಕಾ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು </p><p>-ವಾಲ್ಮೀಕಿ ಮಾರುತಿ ರೈತ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>