<p><strong>ಹಗರಿಬೊಮ್ಮನಹಳ್ಳಿ</strong>: ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದ ರೈತರೊಬ್ಬರು ಕುಂಬಳಕಾಯಿ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.</p>.<p>ವಾಣಿಜ್ಯ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಬೆಳೆದು ಅಲ್ಪ ಲಾಭ ಪಡೆದಿದ್ದ ರೈತ ಈಗ ಲಕ್ಷ ಲಕ್ಷ ಎಣಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಮುದೇಗೌಡರ ಬಸವರಾಜ ಅವರು ಕೇವಲ ₹30 ಸಾವಿರ ಖರ್ಚು ಮಾಡಿ ಒಂದೂ ಮುಕ್ಕಾಲು ಎಕರೆ ಜಮೀನಿನಲ್ಲಿ ಸಿಹಿ ಕುಂಬಳ ಬೆಳೆದು ₹4.5ಲಕ್ಷ ಲಾಭ ಗಳಿಸಿದ್ದಾರೆ. ಮೊದಲ ಕಟಾವಿನಲ್ಲಿ 17ಟನ್ ಇಳುವರಿ ಬಂದಿದೆ. ಕೆ.ಜಿ.ಗೆ ₹12 ರ ವರೆಗೂ ಬೆಲೆ ದೊರೆತಿದೆ.</p>.<p>ದಾವಣಗೆರೆಯಿಂದ ತಲಾ 100ಗ್ರಾಂ ಪ್ಯಾಕೆಟ್ಗೆ ₹530 ರಂತೆ 20 ಪ್ಯಾಕೆಟ್ ಖರೀದಿಸಿದ್ದಾರೆ. ಜಮೀನು ಮಾಗಿ ಮಾಡಿದ ಬಳಿಕ 3 ಅಡಿ ಅಂತರದಲ್ಲಿ 40 ಸಾಲುಗಳಲ್ಲಿ ಬೀಜಗಳನ್ನು ಊರುವ ಮೂಲಕ ಬಿತ್ತನೆ ಮಾಡಿದ್ದಾರೆ. 6 ದಿನಗಳಲ್ಲಿ ಮೊಳಕೆ ಒಡೆದ ಬಳಿಕ ಒಮ್ಮೆ ನೀರು ಹರಿಸಿ ಒಂದು ಪ್ಯಾಕೆಟ್ ರಾಸಯನಿಕ ಗೊಬ್ಬರ ಹಾಕಿದ್ದಾರೆ, ನಂತರದಲ್ಲಿ ಮೂರು ಬಾರಿ ನೀರು ಹರಿಸಿ ಜತನ ಮಾಡಿದ್ದಾರೆ. ಕೇವಲ 3 ತಿಂಗಳಲ್ಲಿ ಫಲ ಕಟಾವಿಗೆ ಬಂದಿದೆ.</p>.<p>ಬಳ್ಳಿಗಳಲ್ಲಿ ಸುರುಳಿಪೂಚಾ ರೋಗ ತಗುಲದಂತೆ ಮುಂಜಾಗ್ರತಾ ಕ್ರಮವಾಗಿ ಒಮ್ಮೆ ಮಾತ್ರ ಪೌಡರ್ ಔಷಧಿ ಸಿಂಪಡಿಸಿದ್ದಾರೆ. ಕಟಾವಿಗೆ ಮಾತ್ರ ಕೂಲಿ ಆಳುಗಳಿಗೆ ₹5 ಸಾವಿರ ನೀಡಿದ್ದಾರೆ. ಸ್ಥಳಕ್ಕೆ ಖರೀದಿದಾರರೇ ಬಂದು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಹೋಗುವುದರಿಂದ ಮಾರುಕಟ್ಟೆಯ ಕಿರಿಕಿರಿ ಇಲ್ಲ. ಪಟ್ಟಣದಲ್ಲಿ ತೂಕ ಮಾಡಿಸಿದ ಸ್ಥಳದಲ್ಲಿಯೇ ರೈತರಿಗೆ ಸಂಪೂರ್ಣ ಮೊತ್ತ ಪಾವತಿಯಾಗುತ್ತದೆ.</p>.<p>‘ಮಸಾರಿ ನೆಲ್ಕುದ್ರಿಯಲ್ಲಿ ಬೆಳೆದ ಸಿಹಿ ಕುಂಬಳಕಾಯಿಗೆ ಕೋಲ್ಕತ್ತ ಮತ್ತು ಮುಂಬೈ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಅಲ್ಲಿ ಯಥೇಚ್ಛವಾಗಿ ಊಟಕ್ಕೆ ಬಳಸುತ್ತಾರೆ ಎನ್ನುತ್ತಾರೆ ಗ್ರಾಮದ ರೈತ ಕಡ್ಲಿ ಪರಮೇಶ್.</p>.<p>ಗ್ರಾಮದಲ್ಲಿ ಈಗ 25ಕ್ಕೂ ಹೆಚ್ಚು ರೈತರು ನೂರಾರು ಎಕರೆಯಲ್ಲಿ ಕುಂಬಳ ಬೆಳೆದು ಲಾಭದ ಹಾದಿಯಲ್ಲಿದ್ದಾರೆ. ದಿನದಿಂದ ದಿನಕ್ಕೆ ಬೆಳೆಗಾರರ ಸಂಖ್ಯೆಯೂ ಹೆಚ್ಚುತ್ತಿದೆ.</p>.<p>ಮೊದಲು ಶೇಂಗಾ ಮೆಕ್ಕೆಜೋಳ ಬೆಳೆದು ಅಲ್ಪ ಲಾಭಕ್ಕಷ್ಟೇ ತೃಪ್ತಿ ಪಡುತ್ತಿದ್ದೆವು. ಕೂಲಿಗೆ ಸಮವಾಗುತ್ತಿತ್ತು. ಕಳೆದ ವರ್ಷ ಬರಗಾಲದಿಂದ ಕೃಷಿ ಕೈ ಹಿಡಿಯಲಿಲ್ಲ ಈ ಬಾರಿ ಕುಂಬಳ ಬೆಳೆಯಿಂದ ಅಧಿಕ ಲಾಭ ಸಿಕ್ಕಿದ್ದು ತುಂಬಾ ಖುಷಿ ಇದೆ. </p><p><strong>–ಮುದೇಗೌಡರ ಬಸವರಾಜಪ್ಪ, ಅಧಿಕ ಲಾಭ ಗಳಿಸಿದ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ</strong>: ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದ ರೈತರೊಬ್ಬರು ಕುಂಬಳಕಾಯಿ ಬೆಳೆದು ಲಕ್ಷಾಂತರ ರೂಪಾಯಿ ಲಾಭ ಗಳಿಸಿದ್ದಾರೆ.</p>.<p>ವಾಣಿಜ್ಯ ಬೆಳೆಗಳಾದ ಶೇಂಗಾ, ಮೆಕ್ಕೆಜೋಳ ಬೆಳೆದು ಅಲ್ಪ ಲಾಭ ಪಡೆದಿದ್ದ ರೈತ ಈಗ ಲಕ್ಷ ಲಕ್ಷ ಎಣಿಸುತ್ತಿದ್ದಾರೆ.</p>.<p>ತಾಲ್ಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಮುದೇಗೌಡರ ಬಸವರಾಜ ಅವರು ಕೇವಲ ₹30 ಸಾವಿರ ಖರ್ಚು ಮಾಡಿ ಒಂದೂ ಮುಕ್ಕಾಲು ಎಕರೆ ಜಮೀನಿನಲ್ಲಿ ಸಿಹಿ ಕುಂಬಳ ಬೆಳೆದು ₹4.5ಲಕ್ಷ ಲಾಭ ಗಳಿಸಿದ್ದಾರೆ. ಮೊದಲ ಕಟಾವಿನಲ್ಲಿ 17ಟನ್ ಇಳುವರಿ ಬಂದಿದೆ. ಕೆ.ಜಿ.ಗೆ ₹12 ರ ವರೆಗೂ ಬೆಲೆ ದೊರೆತಿದೆ.</p>.<p>ದಾವಣಗೆರೆಯಿಂದ ತಲಾ 100ಗ್ರಾಂ ಪ್ಯಾಕೆಟ್ಗೆ ₹530 ರಂತೆ 20 ಪ್ಯಾಕೆಟ್ ಖರೀದಿಸಿದ್ದಾರೆ. ಜಮೀನು ಮಾಗಿ ಮಾಡಿದ ಬಳಿಕ 3 ಅಡಿ ಅಂತರದಲ್ಲಿ 40 ಸಾಲುಗಳಲ್ಲಿ ಬೀಜಗಳನ್ನು ಊರುವ ಮೂಲಕ ಬಿತ್ತನೆ ಮಾಡಿದ್ದಾರೆ. 6 ದಿನಗಳಲ್ಲಿ ಮೊಳಕೆ ಒಡೆದ ಬಳಿಕ ಒಮ್ಮೆ ನೀರು ಹರಿಸಿ ಒಂದು ಪ್ಯಾಕೆಟ್ ರಾಸಯನಿಕ ಗೊಬ್ಬರ ಹಾಕಿದ್ದಾರೆ, ನಂತರದಲ್ಲಿ ಮೂರು ಬಾರಿ ನೀರು ಹರಿಸಿ ಜತನ ಮಾಡಿದ್ದಾರೆ. ಕೇವಲ 3 ತಿಂಗಳಲ್ಲಿ ಫಲ ಕಟಾವಿಗೆ ಬಂದಿದೆ.</p>.<p>ಬಳ್ಳಿಗಳಲ್ಲಿ ಸುರುಳಿಪೂಚಾ ರೋಗ ತಗುಲದಂತೆ ಮುಂಜಾಗ್ರತಾ ಕ್ರಮವಾಗಿ ಒಮ್ಮೆ ಮಾತ್ರ ಪೌಡರ್ ಔಷಧಿ ಸಿಂಪಡಿಸಿದ್ದಾರೆ. ಕಟಾವಿಗೆ ಮಾತ್ರ ಕೂಲಿ ಆಳುಗಳಿಗೆ ₹5 ಸಾವಿರ ನೀಡಿದ್ದಾರೆ. ಸ್ಥಳಕ್ಕೆ ಖರೀದಿದಾರರೇ ಬಂದು ತಮ್ಮ ವಾಹನಕ್ಕೆ ತುಂಬಿಸಿಕೊಂಡು ಹೋಗುವುದರಿಂದ ಮಾರುಕಟ್ಟೆಯ ಕಿರಿಕಿರಿ ಇಲ್ಲ. ಪಟ್ಟಣದಲ್ಲಿ ತೂಕ ಮಾಡಿಸಿದ ಸ್ಥಳದಲ್ಲಿಯೇ ರೈತರಿಗೆ ಸಂಪೂರ್ಣ ಮೊತ್ತ ಪಾವತಿಯಾಗುತ್ತದೆ.</p>.<p>‘ಮಸಾರಿ ನೆಲ್ಕುದ್ರಿಯಲ್ಲಿ ಬೆಳೆದ ಸಿಹಿ ಕುಂಬಳಕಾಯಿಗೆ ಕೋಲ್ಕತ್ತ ಮತ್ತು ಮುಂಬೈ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಅಲ್ಲಿ ಯಥೇಚ್ಛವಾಗಿ ಊಟಕ್ಕೆ ಬಳಸುತ್ತಾರೆ ಎನ್ನುತ್ತಾರೆ ಗ್ರಾಮದ ರೈತ ಕಡ್ಲಿ ಪರಮೇಶ್.</p>.<p>ಗ್ರಾಮದಲ್ಲಿ ಈಗ 25ಕ್ಕೂ ಹೆಚ್ಚು ರೈತರು ನೂರಾರು ಎಕರೆಯಲ್ಲಿ ಕುಂಬಳ ಬೆಳೆದು ಲಾಭದ ಹಾದಿಯಲ್ಲಿದ್ದಾರೆ. ದಿನದಿಂದ ದಿನಕ್ಕೆ ಬೆಳೆಗಾರರ ಸಂಖ್ಯೆಯೂ ಹೆಚ್ಚುತ್ತಿದೆ.</p>.<p>ಮೊದಲು ಶೇಂಗಾ ಮೆಕ್ಕೆಜೋಳ ಬೆಳೆದು ಅಲ್ಪ ಲಾಭಕ್ಕಷ್ಟೇ ತೃಪ್ತಿ ಪಡುತ್ತಿದ್ದೆವು. ಕೂಲಿಗೆ ಸಮವಾಗುತ್ತಿತ್ತು. ಕಳೆದ ವರ್ಷ ಬರಗಾಲದಿಂದ ಕೃಷಿ ಕೈ ಹಿಡಿಯಲಿಲ್ಲ ಈ ಬಾರಿ ಕುಂಬಳ ಬೆಳೆಯಿಂದ ಅಧಿಕ ಲಾಭ ಸಿಕ್ಕಿದ್ದು ತುಂಬಾ ಖುಷಿ ಇದೆ. </p><p><strong>–ಮುದೇಗೌಡರ ಬಸವರಾಜಪ್ಪ, ಅಧಿಕ ಲಾಭ ಗಳಿಸಿದ ರೈತ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>