<p><strong>ಬಳ್ಳಾರಿ</strong>: ನಗರದ ಚಂದ್ರ ಕಾಲೋನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಲಿಫ್ಟ್ ಕುಸಿದು ಪೇಂಟಿಂಗ್ ಕೆಲಸಗಾರ ಮೃತಪಟ್ಟಿದ್ದಾರೆ. </p>.<p>ಗೋನಾಳು ರಸ್ತೆಯ ಆಶ್ರೇಯ ಕಾಲೋನಿಯ ಜಿ. ವೀರಾಂಜಿನೇಯಲು (46) ಮೃತ ವ್ಯಕ್ತಿ. ಈ ಕುರಿತು ವೀರಾಂಜಿನೇಯಲು ಅವರ ಪತ್ನಿ ಲಕ್ಷ್ಮೀ ಎಂಬುವವರು ಕೌಲ್ ಬಜಾರ್ ಠಾಣೆಗೆ ದೂರು ನೀಡಿದ್ದು, ಕಟ್ಟಡ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಇದರ ಆಧಾರದಲ್ಲಿ ಪೊಲೀಸರು ಕಟ್ಟಡ ಮಾಲೀಕ ಬೀಮಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. </p>.<p>ಕಟ್ಟಡ ಮಾಲೀಕ ಭೀಮಪ್ಪ ಚಂದ್ರ ಕಾಲೋನಿಯ 1ನೇ ಕ್ರಾಸ್ನಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಇದರ ಪೇಂಟಿಂಗ್ ಗುತ್ತಿಗೆಯನ್ನು ವೀರಾಂಜಿನೇಯಲು ಅವರಿಗೆ ವಹಿಸಿದ್ದರು. 5 ತಿಂಗಳಿಂದಲೂ ಕೆಲಸ ನಡೆಯುತ್ತಿತ್ತು. ನಿರ್ಮಾಣ ಉದ್ದೇಶಕ್ಕಾಗಿ ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಇದರಲ್ಲಿ ಮೇಲಿನ ಮಹಡಿಗೆ ಹೋಗುವ ವೇಳೆ ವೀರಾಂಜಿನೇಯಲು ಅವರು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಶನಿವಾರ ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿದ್ದು, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ನ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ</strong>: ನಗರದ ಚಂದ್ರ ಕಾಲೋನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಳವಡಿಸಿದ್ದ ತಾತ್ಕಾಲಿಕ ಲಿಫ್ಟ್ ಕುಸಿದು ಪೇಂಟಿಂಗ್ ಕೆಲಸಗಾರ ಮೃತಪಟ್ಟಿದ್ದಾರೆ. </p>.<p>ಗೋನಾಳು ರಸ್ತೆಯ ಆಶ್ರೇಯ ಕಾಲೋನಿಯ ಜಿ. ವೀರಾಂಜಿನೇಯಲು (46) ಮೃತ ವ್ಯಕ್ತಿ. ಈ ಕುರಿತು ವೀರಾಂಜಿನೇಯಲು ಅವರ ಪತ್ನಿ ಲಕ್ಷ್ಮೀ ಎಂಬುವವರು ಕೌಲ್ ಬಜಾರ್ ಠಾಣೆಗೆ ದೂರು ನೀಡಿದ್ದು, ಕಟ್ಟಡ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ. ಇದರ ಆಧಾರದಲ್ಲಿ ಪೊಲೀಸರು ಕಟ್ಟಡ ಮಾಲೀಕ ಬೀಮಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. </p>.<p>ಕಟ್ಟಡ ಮಾಲೀಕ ಭೀಮಪ್ಪ ಚಂದ್ರ ಕಾಲೋನಿಯ 1ನೇ ಕ್ರಾಸ್ನಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಇದರ ಪೇಂಟಿಂಗ್ ಗುತ್ತಿಗೆಯನ್ನು ವೀರಾಂಜಿನೇಯಲು ಅವರಿಗೆ ವಹಿಸಿದ್ದರು. 5 ತಿಂಗಳಿಂದಲೂ ಕೆಲಸ ನಡೆಯುತ್ತಿತ್ತು. ನಿರ್ಮಾಣ ಉದ್ದೇಶಕ್ಕಾಗಿ ತಾತ್ಕಾಲಿಕ ಲಿಫ್ಟ್ ಅಳವಡಿಸಲಾಗಿತ್ತು. ಇದರಲ್ಲಿ ಮೇಲಿನ ಮಹಡಿಗೆ ಹೋಗುವ ವೇಳೆ ವೀರಾಂಜಿನೇಯಲು ಅವರು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಶನಿವಾರ ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿದ್ದು, ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ನ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>