<p><strong>ಸಿರುಗುಪ್ಪ</strong>: ತಾಲ್ಲೂಕಿನ ಗಡಿಭಾಗದ ಅಗಸನೂರು ಮತ್ತು ನಾಗಲಾಪುರ ಗ್ರಾಮದಲ್ಲಿ ಮೊಹರಂ ಆಚರಣ ವೇಳೆ ಮದ್ಯ-ಮಾಂಸ ತೊರದು, ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಮೊದಲಿನಿಂದ ಬಂದ ಸಂಪ್ರದಾಯವಾಗಿದೆ.</p>.<p>ಪೀರಲ ದೇವರಿಗೆ ಮುದಗಲ್ನಲ್ಲಿ ಕಾಣಿಕೆ, ಅಯನೂರಿನಲ್ಲಿ ಸಕ್ಕರೆ, ಆಗಸನೂರಿನಲ್ಲಿ ಕಾಯಿ ನೀಡಿ ಹರಕೆ ಸಲ್ಲಿಸುವ ವಿಶೇಷ ಪರಂಪರ ಇಲ್ಲಿನದು.</p>.<p>ಸ್ತ್ರೀಯರು ಹೂ ಮೂಡಿಯುವುದಿಲ್ಲ, ಯಾರೊಬ್ಬರೂ ಪಾದರಕ್ಷೆ ಹಾಕುವುದಿಲ್ಲ, ಹಬ್ಬ ಮುಗಿಯುವವರೆಗೂ ಮನೆಯ ಬಾಗಿಲು ಮುಚ್ಚುವಂತಿಲ್ಲ. ಈ ನಿಯಮ ಗ್ರಾಮದವರಿಗಷ್ಟೆ ಅಲ್ಲದೆ, ಹಬ್ಬಕ್ಕೆ ಬರುವ ಪ್ರತಿಯೊಬ್ಬರೂ ಪಾಲನೆ ಮಾಡುವುದು ಕಡ್ಡಾಯ.</p>.<p>ಬಹುತೇಕ ಕಡೆ ಪೀರಲ ದೇವರ ಮೆರವಣಿಗೆ ರಾತ್ರಿ ವೇಳೆಯಲ್ಲಿ ನಡೆಯುವುದು ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ 7 ದಿನದ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಪ್ರಾರಂಭವಾಗಿ ಸಂಜೆವರಿಗೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ಕಾಯಿ, ಕೆಂಪು ಸಕ್ಕರೆ ತುಲಾಭಾರ ಮಾಡಿ, ಅರ್ಪಿಸುತ್ತಾರೆ.</p>.<p>ಪೀರಲ ದೇವರ ಹಿಂದೆ ಕುಳಿತ ಮುಸ್ಲಿಂ ಮುಜಾವರು ದೇವರನ್ನು ಎತ್ತಿ ಕೊಡುತ್ತಾರೆ, ಬಿಳಿ ಬಟ್ಟೆ ಮತ್ತು ಪೇಟಾ ಧರಿಸಿದ ನಿಶಾನಿ ಧಾರಿಗಳಲ್ಲಿ ಲಿಂಗಾಯತರೊಬ್ಬರು ದೇವರನ್ನು ಹೊತ್ತು ಸಾಗುತ್ತಾರೆ. ದೇವರನ್ನು ಹಿಡಿದ ಇಬ್ಬರು ಮನೆ ಮನೆಗೆ ಹೋಗಿ ಭಕ್ತರಿಂದ ಪೂಜೆ ಪಡೆಯುತ್ತಾರೆ.</p>.<p>ಜನಪದ ಸೊಗಡಿನ ಹಾಡುಗಳ ಮೂಲಕ ಪೀರಲ ದೇವರ ಚರಿತ್ರೆಯನ್ನು ಹಾಡುತ್ತಾರೆ. ಬುಕ್ಕಿಟ್ಟುಗಾರರು ತಯಾರಿಸಿದ ಭಂಡಾರವನ್ನು ದೇವರು ಎತ್ತುವಾಗ ಎರಚುತ್ತಾರೆ. ಸಂಜೆಯಾಗುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು 50ಕ್ಕೂ ಹೆಚ್ಚು ತಮಟೆ ನಾದಕ್ಕೆ ಕುಂಬ ಹಿಡಿದು ಮೇಲು ಪದ ಹಾಡುತ್ತ ಕುಣಿದು ಕುಪ್ಪಳಿಸುತ್ತಾರೆ. </p>.<p>ಗ್ರಾಮದ ಶರಬಣ್ಣ ತಾತಾ ಅವರ ಮನೆಯಲ್ಲಿ ಮಾದಲಿ ಸಹಿತ ದಾಸೋಹ ನಡೆಯುತ್ತದೆ.</p>.<p><strong>ಗ್ರಾಮದಲ್ಲಿ ಹಿರಿಯರು ಆಚರಿಸಿಕೊಂಡು ಬಂದಿರುವ ಮೊಹರಂ ಹಬ್ಬವನ್ನು ಇಂದಿಗೂ ಸೌಹಾರ್ದಿದಿಂದ ಆಚರಿಸುತ್ತಿದ್ದೇವೆ</strong></p><p><strong>-ಎಂ.ಗೋಪಾಲರೆಡ್ಡಿ ಅಗಸನೂರು ನಿವಾಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: ತಾಲ್ಲೂಕಿನ ಗಡಿಭಾಗದ ಅಗಸನೂರು ಮತ್ತು ನಾಗಲಾಪುರ ಗ್ರಾಮದಲ್ಲಿ ಮೊಹರಂ ಆಚರಣ ವೇಳೆ ಮದ್ಯ-ಮಾಂಸ ತೊರದು, ಕಟ್ಟುನಿಟ್ಟಿನ ನಿಯಮ ಪಾಲಿಸುವುದು ಮೊದಲಿನಿಂದ ಬಂದ ಸಂಪ್ರದಾಯವಾಗಿದೆ.</p>.<p>ಪೀರಲ ದೇವರಿಗೆ ಮುದಗಲ್ನಲ್ಲಿ ಕಾಣಿಕೆ, ಅಯನೂರಿನಲ್ಲಿ ಸಕ್ಕರೆ, ಆಗಸನೂರಿನಲ್ಲಿ ಕಾಯಿ ನೀಡಿ ಹರಕೆ ಸಲ್ಲಿಸುವ ವಿಶೇಷ ಪರಂಪರ ಇಲ್ಲಿನದು.</p>.<p>ಸ್ತ್ರೀಯರು ಹೂ ಮೂಡಿಯುವುದಿಲ್ಲ, ಯಾರೊಬ್ಬರೂ ಪಾದರಕ್ಷೆ ಹಾಕುವುದಿಲ್ಲ, ಹಬ್ಬ ಮುಗಿಯುವವರೆಗೂ ಮನೆಯ ಬಾಗಿಲು ಮುಚ್ಚುವಂತಿಲ್ಲ. ಈ ನಿಯಮ ಗ್ರಾಮದವರಿಗಷ್ಟೆ ಅಲ್ಲದೆ, ಹಬ್ಬಕ್ಕೆ ಬರುವ ಪ್ರತಿಯೊಬ್ಬರೂ ಪಾಲನೆ ಮಾಡುವುದು ಕಡ್ಡಾಯ.</p>.<p>ಬಹುತೇಕ ಕಡೆ ಪೀರಲ ದೇವರ ಮೆರವಣಿಗೆ ರಾತ್ರಿ ವೇಳೆಯಲ್ಲಿ ನಡೆಯುವುದು ಸಾಮಾನ್ಯ. ಆದರೆ, ಈ ಗ್ರಾಮದಲ್ಲಿ 7 ದಿನದ ಕಾರ್ಯಕ್ರಮದಲ್ಲಿ ಮಧ್ಯಾಹ್ನ ಪ್ರಾರಂಭವಾಗಿ ಸಂಜೆವರಿಗೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ಕಾಯಿ, ಕೆಂಪು ಸಕ್ಕರೆ ತುಲಾಭಾರ ಮಾಡಿ, ಅರ್ಪಿಸುತ್ತಾರೆ.</p>.<p>ಪೀರಲ ದೇವರ ಹಿಂದೆ ಕುಳಿತ ಮುಸ್ಲಿಂ ಮುಜಾವರು ದೇವರನ್ನು ಎತ್ತಿ ಕೊಡುತ್ತಾರೆ, ಬಿಳಿ ಬಟ್ಟೆ ಮತ್ತು ಪೇಟಾ ಧರಿಸಿದ ನಿಶಾನಿ ಧಾರಿಗಳಲ್ಲಿ ಲಿಂಗಾಯತರೊಬ್ಬರು ದೇವರನ್ನು ಹೊತ್ತು ಸಾಗುತ್ತಾರೆ. ದೇವರನ್ನು ಹಿಡಿದ ಇಬ್ಬರು ಮನೆ ಮನೆಗೆ ಹೋಗಿ ಭಕ್ತರಿಂದ ಪೂಜೆ ಪಡೆಯುತ್ತಾರೆ.</p>.<p>ಜನಪದ ಸೊಗಡಿನ ಹಾಡುಗಳ ಮೂಲಕ ಪೀರಲ ದೇವರ ಚರಿತ್ರೆಯನ್ನು ಹಾಡುತ್ತಾರೆ. ಬುಕ್ಕಿಟ್ಟುಗಾರರು ತಯಾರಿಸಿದ ಭಂಡಾರವನ್ನು ದೇವರು ಎತ್ತುವಾಗ ಎರಚುತ್ತಾರೆ. ಸಂಜೆಯಾಗುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಸಾವಿರಾರು ಭಕ್ತರು 50ಕ್ಕೂ ಹೆಚ್ಚು ತಮಟೆ ನಾದಕ್ಕೆ ಕುಂಬ ಹಿಡಿದು ಮೇಲು ಪದ ಹಾಡುತ್ತ ಕುಣಿದು ಕುಪ್ಪಳಿಸುತ್ತಾರೆ. </p>.<p>ಗ್ರಾಮದ ಶರಬಣ್ಣ ತಾತಾ ಅವರ ಮನೆಯಲ್ಲಿ ಮಾದಲಿ ಸಹಿತ ದಾಸೋಹ ನಡೆಯುತ್ತದೆ.</p>.<p><strong>ಗ್ರಾಮದಲ್ಲಿ ಹಿರಿಯರು ಆಚರಿಸಿಕೊಂಡು ಬಂದಿರುವ ಮೊಹರಂ ಹಬ್ಬವನ್ನು ಇಂದಿಗೂ ಸೌಹಾರ್ದಿದಿಂದ ಆಚರಿಸುತ್ತಿದ್ದೇವೆ</strong></p><p><strong>-ಎಂ.ಗೋಪಾಲರೆಡ್ಡಿ ಅಗಸನೂರು ನಿವಾಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>