<p><strong>ಕಂಪ್ಲಿ</strong>: ತುಂಗಭದ್ರಾ ನದಿಗೆ ಜಲಾಶಯದಿಂದ ಸುಮಾರು 1.55ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಂಪ್ಲಿಯ ಕೋಟೆ ಪ್ರದೇಶದ ಜಲಾವೃತಗೊಂಡಿದೆ. </p>.<p>ಹೊಳೆ ಆಂಜನೇಯ ದೇವಸ್ಥಾನ, ಮಹಾಂಕಾಳಿ ದೇವಸ್ಥಾನ, ನದಿ ಬಳಿಯ ವೆಂಕಟರಮಣ ದೇವಸ್ಥಾನ, ಕೋಟೆ ಜನವಸತಿ ಪ್ರದೇಶಕ್ಕೆ ತೆರಳುವ ಮುಖ್ಯರಸ್ತೆ, ಕುಮಾರರಾಮನ ಹೆಬ್ಬಾಗಿಲಿನ ವರೆಗೆ ನದಿ ಬಂದಿದೆ. ಮೀನುಗಾರರ ಕೆಲ ಮನೆಗಳಿಗೆ ನೆರೆ ನೀರು ನುಗ್ಗಿದೆ.</p>.<p>ನದಿ ಬಳಿ ಸುಮಾರು 54ಮೀನುಗಾರರ ಕುಟುಂಬಗಳಿದ್ದು, ತಾಲ್ಲೂಕು ಆಡಳಿತ 200ಮೀಟರ್ ಅಂತರದಲ್ಲಿ ಕಾಳಜಿ ಕೇಂದ್ರ ತೆರೆದಿದೆ. ಆದರೆ, ಇಲ್ಲಿಯವರೆಗೆ ಯಾವೊಂದು ಕುಟುಂಬವೂ ಬಂದು ನೆಲೆಸಿಲ್ಲ. ಆದರೂ ಕಾಳಜಿ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. </p>.<p>ಶಾಸಕರು, ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಭೇಟಿ ನೀಡಿ ಮನವೊಲಿಸಿದರೂ ಯಾರೂ ಕಾಳಜಿ ಕೇಂದ್ರಕ್ಕೆ ಹೋಗುತ್ತಿಲ್ಲ. ಇದ್ದಲ್ಲಿಗೇ ಊಟದ ವ್ಯವಸ್ಥೆ ಮಾಡುವಂತೆ, ಇಲ್ಲವೆ ಹತ್ತಿರದಲ್ಲಿ ಕೇಂದ್ರ ತೆರೆಯುವಂತೆ ಮೀನುಗಾರರು ಒತ್ತಾಯಿಸಿದ್ದಾರೆ. </p>.<p>ನದಿಗೆ 2ಲಕ್ಷ ಕ್ಯುಸೆಕ್ ನೀರು ಬರುವ ಸಾಧ್ಯತೆ ಇರುವುದರಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳುವಂತೆ ಅಧಿಕಾರಿಗಳು ಮನವೊಲಿಕೆ ಮುಂದುವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಂಪ್ಲಿ</strong>: ತುಂಗಭದ್ರಾ ನದಿಗೆ ಜಲಾಶಯದಿಂದ ಸುಮಾರು 1.55ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಂಪ್ಲಿಯ ಕೋಟೆ ಪ್ರದೇಶದ ಜಲಾವೃತಗೊಂಡಿದೆ. </p>.<p>ಹೊಳೆ ಆಂಜನೇಯ ದೇವಸ್ಥಾನ, ಮಹಾಂಕಾಳಿ ದೇವಸ್ಥಾನ, ನದಿ ಬಳಿಯ ವೆಂಕಟರಮಣ ದೇವಸ್ಥಾನ, ಕೋಟೆ ಜನವಸತಿ ಪ್ರದೇಶಕ್ಕೆ ತೆರಳುವ ಮುಖ್ಯರಸ್ತೆ, ಕುಮಾರರಾಮನ ಹೆಬ್ಬಾಗಿಲಿನ ವರೆಗೆ ನದಿ ಬಂದಿದೆ. ಮೀನುಗಾರರ ಕೆಲ ಮನೆಗಳಿಗೆ ನೆರೆ ನೀರು ನುಗ್ಗಿದೆ.</p>.<p>ನದಿ ಬಳಿ ಸುಮಾರು 54ಮೀನುಗಾರರ ಕುಟುಂಬಗಳಿದ್ದು, ತಾಲ್ಲೂಕು ಆಡಳಿತ 200ಮೀಟರ್ ಅಂತರದಲ್ಲಿ ಕಾಳಜಿ ಕೇಂದ್ರ ತೆರೆದಿದೆ. ಆದರೆ, ಇಲ್ಲಿಯವರೆಗೆ ಯಾವೊಂದು ಕುಟುಂಬವೂ ಬಂದು ನೆಲೆಸಿಲ್ಲ. ಆದರೂ ಕಾಳಜಿ ಕೇಂದ್ರದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. </p>.<p>ಶಾಸಕರು, ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಭೇಟಿ ನೀಡಿ ಮನವೊಲಿಸಿದರೂ ಯಾರೂ ಕಾಳಜಿ ಕೇಂದ್ರಕ್ಕೆ ಹೋಗುತ್ತಿಲ್ಲ. ಇದ್ದಲ್ಲಿಗೇ ಊಟದ ವ್ಯವಸ್ಥೆ ಮಾಡುವಂತೆ, ಇಲ್ಲವೆ ಹತ್ತಿರದಲ್ಲಿ ಕೇಂದ್ರ ತೆರೆಯುವಂತೆ ಮೀನುಗಾರರು ಒತ್ತಾಯಿಸಿದ್ದಾರೆ. </p>.<p>ನದಿಗೆ 2ಲಕ್ಷ ಕ್ಯುಸೆಕ್ ನೀರು ಬರುವ ಸಾಧ್ಯತೆ ಇರುವುದರಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳುವಂತೆ ಅಧಿಕಾರಿಗಳು ಮನವೊಲಿಕೆ ಮುಂದುವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>