‘ಪಂಚಾಯಿತಿ ಕೆಲಸ, ಆರ್ಥಿಕ ವ್ಯವಹಾರ, ಹೊಲಗದ್ದೆಗಳಿಗೆ ಹೋಗಲು ಜನರಿಗೆ ರಸ್ತೆಯೇ ಇಲ್ಲ. ಇದನ್ನು ಬಗೆಹರಿಸಲು ಹಲವು ಬಾರಿ ಅಥಣಿ ತಾಲ್ಲೂಕಿನ ಭೂ ಮಾಪನಾ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಅವರು ಖುದ್ದಾಗಿ ಸೂಚಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಗ್ರಾಮಸ್ಥ ಪ್ರಕಾಶ ಕಂಟೇಕರ ತಿಳಿಸಿದರು.