<p><strong>ಬೆಳಗಾವಿ:</strong> ಮುಂಗಾರು ಚುರುಕುಗೊಂಡಿದ್ದರಿಂದ ಈಗ ರೈತರು ಬಿತ್ತನೆಗೆ ಅಣಿಯಾಗಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕದ ಮಾರಾಟವೂ ಜೋರಾಗಿದೆ. ಇದೇ ಹೊತ್ತಿನಲ್ಲಿ ಕೆಲವರು ನಿಯಮ ಬಾಹಿರವಾದ ಉತ್ಪನ್ನಗಳನ್ನು ಮಾರಾಟ ಮಾಡಿ, ರೈತರಿಗೆ ವಂಚಿಸುತ್ತಿರುವ ಆರೋಪವೂ ಕೇಳಿಬರುತ್ತಿವೆ.</p>.<p>ಹಾಗಾಗಿ ಬೆಳಗಾವಿ ವಿಭಾಗದಲ್ಲಿ ಅನುಮತಿ ಪಡೆಯದೆ, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮತ್ತು ದಾಸ್ತಾನು ಮಾಡುವವರ ವಿರುದ್ಧ ಕೃಷಿ ಇಲಾಖೆ (ಸಚಿವಾಲಯ ವಿಭಾಗ) ಜಾಗೃತ ಕೋಶದವರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.</p>.<p>ಕಳೆದ 14 ತಿಂಗಳಲ್ಲಿ ಕೃಷಿ ಪರಿಕರ ಮಾರಾಟ ಕೇಂದ್ರ ಮತ್ತು ಗೋದಾಮುಗಳ ಮೇಲೆ 92 ದಾಳಿ ನಡೆದಿದ್ದು, ₹2.75 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.</p>.<p><strong>ಹೊರರಾಜ್ಯದ ಉತ್ಪನ್ನಗಳು: </strong>ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರದಿಂದ ನಿಯಮ ಬಾಹಿರವಾಗಿ ಬರುತ್ತಿರುವ ಉತ್ಪನ್ನಗಳನ್ನು ಸ್ಥಳೀಯ ಏಜೆಂಟರ ಮೂಲಕ ರೈತರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂಥ ಉತ್ಪನ್ನ ಬಳಸಿ, ರೈತರು ಆರ್ಥಿಕ ನಷ್ಟ ಅನುಭವಿಸಿದ ಉದಾಹರಣೆಗಳೂ ಇವೆ. ಈ ಪ್ರಕರಣ ಮರುಕಳಿಸದಂತೆ ನಿಗಾ ವಹಿಸಲಾಗುತ್ತಿದೆ.</p>.<p>ಯಾರ ಮೇಲೆ ದಾಳಿ?: ‘ಕೆಲವು ಮಾರಾಟಗಾರರು ಅನುಮತಿ ಪಡೆಯದೆ ಕೃಷಿ ಪರಿಕರ ಮಾರುತ್ತಿದ್ದಾರೆ. ಅನಧಿಕೃತವಾದ ಕೀಟನಾಶಕ ಮಾರುವವರಿದ್ದಾರೆ. ಕೆಲವರು ಒಂದು ಉತ್ಪನ್ನಕ್ಕಷ್ಟೇ ಅನುಮತಿ ಪಡೆದು, ಹೆಚ್ಚಿನ ಉತ್ಪನ್ನ ಮಾರುತ್ತಾರೆ. ಬಳಕೆ ವಿಧಾನವನ್ನು ಕನ್ನಡದಲ್ಲಿ ತಿಳಿಸದೆ ಕೀಟನಾಶಕ, ರಸಗೊಬ್ಬರ ಮಾರುವವರಿದ್ದಾರೆ. ಇಂಥವರ ದಾಳಿ ಮಾಡುತ್ತಿದ್ದೇವೆ. ಆ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ತಪ್ಪೆಸಗಿದವರ ವಿರುದ್ಧ ಜೆಎಂಎಫ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ಜಾಗೃತ ಕೋಶದ ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕ ಮಹಾಂತೇಶ ಕಿಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಈಗಷ್ಟೇ ಚುರುಕು ಪಡೆದಿದೆ. ಆದರೆ, ರೈತರು ಮೋಸಕ್ಕೆ ಒಳಗಾಗುವುದನ್ನು ತಪ್ಪಿಸಿನಿಂದಲೇ ಈಗಿನಿಂದಲೇ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.</p>.<p><strong>ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣ?: </strong>ಜಾಗೃತ ಕೋಶದ ಬೆಳಗಾವಿ ವಿಭಾಗ ಏಳು ಜಿಲ್ಲೆಗಳ (ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ಧಾರವಾಡ) ವ್ಯಾಪ್ತಿ ಹೊಂದಿದೆ.</p>.<p>ಈ ಪೈಕಿ 2023ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗೆ 85 ದಾಳಿ ನಡೆದಿವೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 18, ಹಾವೇರಿಯಲ್ಲಿ 17, ಧಾರವಾಡ, ಬೆಳಗಾವಿಯಲ್ಲಿ ತಲಾ 14, ಬಾಗಲಕೋಟೆಯಲ್ಲಿ 13, ಗದುಗಿನಲ್ಲಿ 8, ಉತ್ತರ ಕನ್ನಡದಲ್ಲಿ ಒಂದು ದಾಳಿಯಾಗಿದೆ. 6 ದಾಳಿಗಳಲ್ಲಿ ₹25.4 ಲಕ್ಷ ಮೌಲ್ಯದ ಬಿತ್ತನೆ ಬೀಜ, 29 ದಾಳಿಗಳಲ್ಲಿ ₹65.3 ಲಕ್ಷ ಮೌಲ್ಯದ ರಸಗೊಬ್ಬರ, 50 ದಾಳಿಗಳಲ್ಲಿ ₹1.67 ಕೋಟಿ ಮೌಲ್ಯದ ಕೀಟನಾಶಕ ವಶಕ್ಕೆ ಪಡೆಯಲಾಗಿದೆ.</p>.<p>2024ರ ಏಪ್ರಿಲ್ 1ರಿಂದ ಜೂನ್ 5ರವರೆಗೆ ವಿಜಯಪುರ, ಬಾಗಲಕೋಟೆ, ಧಾರವಾಡದಲ್ಲಿ ತಲಾ 2, ಹಾವೇರಿಯಲ್ಲಿ 1 ಸೇರಿದಂತೆ ಏಳು ದಾಳಿ ನಡೆದಿದ್ದು, ₹17.1 ಲಕ್ಷ ಮೌಲ್ಯದ ಬಿತ್ತನೆ ಬೀಜ ಮತ್ತು ಕೀಟನಾಶಕ ವಶಪಡಿಸಿಕೊಳ್ಳಲಾಗಿದೆ.</p>.<p><strong>ಏನು ಮಾಡಬೇಕು?</strong></p><p> ‘ರೈತರು ಯಾವುದೇ ಕೃಷಿ ಪರಿಕರ ಖರೀದಿಸಿದರೂ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಬಿತ್ತನೆ ಬೀಜಗಳ ಪ್ಯಾಕೆಟ್ ಒಂದಿಷ್ಟು ಕಾಳು ತೆಗೆದಿರಿಸಬೇಕು. ಭೂಮಿಯ ತೇವಾಂಶ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಂಡೇ ಬಿತ್ತನೆ ಮಾಡಬೇಕು’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<div><blockquote>ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕ ಖರೀದಿಸುವಾಗ ರೈತರು ಎಚ್ಚರ ವಹಿಸಬೇಕು. ಅಧಿಕೃತ ಮಾರಾಟಗಾರರಿಂದಲೇ ಕೃಷಿ ಪರಿಕರ ಖರೀದಿಸಬೇಕು </blockquote><span class="attribution">–ರಾಜಶೇಖರ ಬಿಜಾಪುರ, ಜಂಟಿನಿರ್ದೇಶಕ ಜಾಗೃತ ಕೋಶ ಕೃಷಿ ಇಲಾಖೆ ಬೆಳಗಾವಿ ವಿಭಾಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಮುಂಗಾರು ಚುರುಕುಗೊಂಡಿದ್ದರಿಂದ ಈಗ ರೈತರು ಬಿತ್ತನೆಗೆ ಅಣಿಯಾಗಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕದ ಮಾರಾಟವೂ ಜೋರಾಗಿದೆ. ಇದೇ ಹೊತ್ತಿನಲ್ಲಿ ಕೆಲವರು ನಿಯಮ ಬಾಹಿರವಾದ ಉತ್ಪನ್ನಗಳನ್ನು ಮಾರಾಟ ಮಾಡಿ, ರೈತರಿಗೆ ವಂಚಿಸುತ್ತಿರುವ ಆರೋಪವೂ ಕೇಳಿಬರುತ್ತಿವೆ.</p>.<p>ಹಾಗಾಗಿ ಬೆಳಗಾವಿ ವಿಭಾಗದಲ್ಲಿ ಅನುಮತಿ ಪಡೆಯದೆ, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ಮಾರಾಟ ಮತ್ತು ದಾಸ್ತಾನು ಮಾಡುವವರ ವಿರುದ್ಧ ಕೃಷಿ ಇಲಾಖೆ (ಸಚಿವಾಲಯ ವಿಭಾಗ) ಜಾಗೃತ ಕೋಶದವರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.</p>.<p>ಕಳೆದ 14 ತಿಂಗಳಲ್ಲಿ ಕೃಷಿ ಪರಿಕರ ಮಾರಾಟ ಕೇಂದ್ರ ಮತ್ತು ಗೋದಾಮುಗಳ ಮೇಲೆ 92 ದಾಳಿ ನಡೆದಿದ್ದು, ₹2.75 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ.</p>.<p><strong>ಹೊರರಾಜ್ಯದ ಉತ್ಪನ್ನಗಳು: </strong>ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರದಿಂದ ನಿಯಮ ಬಾಹಿರವಾಗಿ ಬರುತ್ತಿರುವ ಉತ್ಪನ್ನಗಳನ್ನು ಸ್ಥಳೀಯ ಏಜೆಂಟರ ಮೂಲಕ ರೈತರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಂಥ ಉತ್ಪನ್ನ ಬಳಸಿ, ರೈತರು ಆರ್ಥಿಕ ನಷ್ಟ ಅನುಭವಿಸಿದ ಉದಾಹರಣೆಗಳೂ ಇವೆ. ಈ ಪ್ರಕರಣ ಮರುಕಳಿಸದಂತೆ ನಿಗಾ ವಹಿಸಲಾಗುತ್ತಿದೆ.</p>.<p>ಯಾರ ಮೇಲೆ ದಾಳಿ?: ‘ಕೆಲವು ಮಾರಾಟಗಾರರು ಅನುಮತಿ ಪಡೆಯದೆ ಕೃಷಿ ಪರಿಕರ ಮಾರುತ್ತಿದ್ದಾರೆ. ಅನಧಿಕೃತವಾದ ಕೀಟನಾಶಕ ಮಾರುವವರಿದ್ದಾರೆ. ಕೆಲವರು ಒಂದು ಉತ್ಪನ್ನಕ್ಕಷ್ಟೇ ಅನುಮತಿ ಪಡೆದು, ಹೆಚ್ಚಿನ ಉತ್ಪನ್ನ ಮಾರುತ್ತಾರೆ. ಬಳಕೆ ವಿಧಾನವನ್ನು ಕನ್ನಡದಲ್ಲಿ ತಿಳಿಸದೆ ಕೀಟನಾಶಕ, ರಸಗೊಬ್ಬರ ಮಾರುವವರಿದ್ದಾರೆ. ಇಂಥವರ ದಾಳಿ ಮಾಡುತ್ತಿದ್ದೇವೆ. ಆ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ತಪ್ಪೆಸಗಿದವರ ವಿರುದ್ಧ ಜೆಎಂಎಫ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ಜಾಗೃತ ಕೋಶದ ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕ ಮಹಾಂತೇಶ ಕಿಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಈಗಷ್ಟೇ ಚುರುಕು ಪಡೆದಿದೆ. ಆದರೆ, ರೈತರು ಮೋಸಕ್ಕೆ ಒಳಗಾಗುವುದನ್ನು ತಪ್ಪಿಸಿನಿಂದಲೇ ಈಗಿನಿಂದಲೇ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದರು.</p>.<p><strong>ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣ?: </strong>ಜಾಗೃತ ಕೋಶದ ಬೆಳಗಾವಿ ವಿಭಾಗ ಏಳು ಜಿಲ್ಲೆಗಳ (ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ಧಾರವಾಡ) ವ್ಯಾಪ್ತಿ ಹೊಂದಿದೆ.</p>.<p>ಈ ಪೈಕಿ 2023ರ ಏಪ್ರಿಲ್ 1ರಿಂದ 2024ರ ಮಾರ್ಚ್ 31ರವರೆಗೆ 85 ದಾಳಿ ನಡೆದಿವೆ. ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 18, ಹಾವೇರಿಯಲ್ಲಿ 17, ಧಾರವಾಡ, ಬೆಳಗಾವಿಯಲ್ಲಿ ತಲಾ 14, ಬಾಗಲಕೋಟೆಯಲ್ಲಿ 13, ಗದುಗಿನಲ್ಲಿ 8, ಉತ್ತರ ಕನ್ನಡದಲ್ಲಿ ಒಂದು ದಾಳಿಯಾಗಿದೆ. 6 ದಾಳಿಗಳಲ್ಲಿ ₹25.4 ಲಕ್ಷ ಮೌಲ್ಯದ ಬಿತ್ತನೆ ಬೀಜ, 29 ದಾಳಿಗಳಲ್ಲಿ ₹65.3 ಲಕ್ಷ ಮೌಲ್ಯದ ರಸಗೊಬ್ಬರ, 50 ದಾಳಿಗಳಲ್ಲಿ ₹1.67 ಕೋಟಿ ಮೌಲ್ಯದ ಕೀಟನಾಶಕ ವಶಕ್ಕೆ ಪಡೆಯಲಾಗಿದೆ.</p>.<p>2024ರ ಏಪ್ರಿಲ್ 1ರಿಂದ ಜೂನ್ 5ರವರೆಗೆ ವಿಜಯಪುರ, ಬಾಗಲಕೋಟೆ, ಧಾರವಾಡದಲ್ಲಿ ತಲಾ 2, ಹಾವೇರಿಯಲ್ಲಿ 1 ಸೇರಿದಂತೆ ಏಳು ದಾಳಿ ನಡೆದಿದ್ದು, ₹17.1 ಲಕ್ಷ ಮೌಲ್ಯದ ಬಿತ್ತನೆ ಬೀಜ ಮತ್ತು ಕೀಟನಾಶಕ ವಶಪಡಿಸಿಕೊಳ್ಳಲಾಗಿದೆ.</p>.<p><strong>ಏನು ಮಾಡಬೇಕು?</strong></p><p> ‘ರೈತರು ಯಾವುದೇ ಕೃಷಿ ಪರಿಕರ ಖರೀದಿಸಿದರೂ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಬಿತ್ತನೆ ಬೀಜಗಳ ಪ್ಯಾಕೆಟ್ ಒಂದಿಷ್ಟು ಕಾಳು ತೆಗೆದಿರಿಸಬೇಕು. ಭೂಮಿಯ ತೇವಾಂಶ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಂಡೇ ಬಿತ್ತನೆ ಮಾಡಬೇಕು’ ಎಂದು ಅಧಿಕಾರಿಗಳು ಹೇಳುತ್ತಾರೆ.</p>.<div><blockquote>ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕ ಖರೀದಿಸುವಾಗ ರೈತರು ಎಚ್ಚರ ವಹಿಸಬೇಕು. ಅಧಿಕೃತ ಮಾರಾಟಗಾರರಿಂದಲೇ ಕೃಷಿ ಪರಿಕರ ಖರೀದಿಸಬೇಕು </blockquote><span class="attribution">–ರಾಜಶೇಖರ ಬಿಜಾಪುರ, ಜಂಟಿನಿರ್ದೇಶಕ ಜಾಗೃತ ಕೋಶ ಕೃಷಿ ಇಲಾಖೆ ಬೆಳಗಾವಿ ವಿಭಾಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>