<p><strong>ಅಥಣಿ (ಬೆಳಗಾವಿ ಜಿಲ್ಲೆ):</strong> ಮಕ್ಕಳನ್ನು ಅಪಹರಣ ಮಾಡಿ, ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ.</p><p>ಅಥಣಿಯ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ್ನ ಮನೆಯಲ್ಲಿ ಆಡುತ್ತಿದ್ದ ವಿಜಯ ದೇಸಾಯಿ ಅವರ ಮಕ್ಕಳಾದ ಸ್ವಸ್ತಿಕ್ (4) ಮತ್ತು ವಿಯೋಮ್ (3) ಅವರನ್ನು ಮೂವರ ತಂಡ ಗುರುವಾರ ಅಪಹರಿಸಿತ್ತು. ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.</p><p>ಮಾಹಿತಿ ಆಧರಿಸಿ ಮಕ್ಕಳ ಪತ್ತೆಗೆ ತೆರಳಿದ ಪೊಲೀಸರ ತಂಡಕ್ಕೆ, ಮಹಾರಾಷ್ಟ್ರದ ಜತ್ತ ಗಡಿಯಲ್ಲಿ ಆರೋಪಿಗಳು ಪತ್ತೆಯಾದರು. ಶುಕ್ರವಾರ ನಸುಕಿನ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಲು ಸುತ್ತವರಿದರು. ಎಚ್ಚೆತ್ತುಕೊಂಡ ಆರೋಪಿಗಳು ಪೊಲೀಸರತ್ತ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದರು.</p><p>ಈ ವೇಳೆ ಪೊಲೀಸರು ಅವರತ್ತ ಗುಂಡು ಹಾರಿಸಿದರು. ಮುಖ್ಯ ಆರೋಪಿ ಕೊಲ್ಹಾಪುರ ಸಾಂಬಾ ಕಾಂಬಳೆ ಕಾಲಿಗೆ ಗುಂಡು ತಗಲಿತು. ಇನ್ನಿಬ್ಬರು ಆರೋಪಿಗಳಾದ ಚಿಕ್ಕೋಡಿ ತಾಲ್ಲೂಕು ಅಂಕಲಿ ಗ್ರಾಮದ ರವಿಕಿರಣ ಕಮಲಾಕರ ಹಾಗೂ ಬಿಹಾರದ ಶಾರೂಖ್ ಶೇಖ್ ಅವರೂ ಸಿಕ್ಕಿಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p><p>ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ, ಸಿಬ್ಬಂದಿಯಾದ ರಮೇಶ ಹಾದಿಮನಿ, ಜಮೀರ ಡಾಂಗೆ ಅವರಿಗೆ ಆರೋಪಿಗಳು ತೂರಿದ ಕಲ್ಲಿನಿಂದ ಗಾಯಗಳಾಗಿವೆ. ಎಲ್ಲರಿಗೂ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.</p><p>ಮಕ್ಕಳ ಅಪಹರಣ ಮಾಡಿದ ಕೆಲವೇ ಗಂಟೆಗಳನ್ನು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯಾರಿಗೂ ಪ್ರಾಣ ಹಾನಿ ಆಗಿಲ್ಲ. ಮಕ್ಕಳೂ ಸುರಕ್ಷಿತವಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.</p><p>ವಿಜಯ ದೇಸಾಯಿ ಹಾಗೂ ಆರೋಪಿಗಳ ಮಧ್ಯೆ ಇದ್ದ ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ (ಬೆಳಗಾವಿ ಜಿಲ್ಲೆ):</strong> ಮಕ್ಕಳನ್ನು ಅಪಹರಣ ಮಾಡಿ, ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ.</p><p>ಅಥಣಿಯ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ್ನ ಮನೆಯಲ್ಲಿ ಆಡುತ್ತಿದ್ದ ವಿಜಯ ದೇಸಾಯಿ ಅವರ ಮಕ್ಕಳಾದ ಸ್ವಸ್ತಿಕ್ (4) ಮತ್ತು ವಿಯೋಮ್ (3) ಅವರನ್ನು ಮೂವರ ತಂಡ ಗುರುವಾರ ಅಪಹರಿಸಿತ್ತು. ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.</p><p>ಮಾಹಿತಿ ಆಧರಿಸಿ ಮಕ್ಕಳ ಪತ್ತೆಗೆ ತೆರಳಿದ ಪೊಲೀಸರ ತಂಡಕ್ಕೆ, ಮಹಾರಾಷ್ಟ್ರದ ಜತ್ತ ಗಡಿಯಲ್ಲಿ ಆರೋಪಿಗಳು ಪತ್ತೆಯಾದರು. ಶುಕ್ರವಾರ ನಸುಕಿನ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಲು ಸುತ್ತವರಿದರು. ಎಚ್ಚೆತ್ತುಕೊಂಡ ಆರೋಪಿಗಳು ಪೊಲೀಸರತ್ತ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದರು.</p><p>ಈ ವೇಳೆ ಪೊಲೀಸರು ಅವರತ್ತ ಗುಂಡು ಹಾರಿಸಿದರು. ಮುಖ್ಯ ಆರೋಪಿ ಕೊಲ್ಹಾಪುರ ಸಾಂಬಾ ಕಾಂಬಳೆ ಕಾಲಿಗೆ ಗುಂಡು ತಗಲಿತು. ಇನ್ನಿಬ್ಬರು ಆರೋಪಿಗಳಾದ ಚಿಕ್ಕೋಡಿ ತಾಲ್ಲೂಕು ಅಂಕಲಿ ಗ್ರಾಮದ ರವಿಕಿರಣ ಕಮಲಾಕರ ಹಾಗೂ ಬಿಹಾರದ ಶಾರೂಖ್ ಶೇಖ್ ಅವರೂ ಸಿಕ್ಕಿಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.</p><p>ಸಿಪಿಐ ಸಂತೋಷ ಹಳ್ಳೂರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಪಿಎಸ್ಐ ಗಿರಮಲ್ಲಪ್ಪ ಉಪ್ಪಾರ, ಸಿಬ್ಬಂದಿಯಾದ ರಮೇಶ ಹಾದಿಮನಿ, ಜಮೀರ ಡಾಂಗೆ ಅವರಿಗೆ ಆರೋಪಿಗಳು ತೂರಿದ ಕಲ್ಲಿನಿಂದ ಗಾಯಗಳಾಗಿವೆ. ಎಲ್ಲರಿಗೂ ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.</p><p>ಮಕ್ಕಳ ಅಪಹರಣ ಮಾಡಿದ ಕೆಲವೇ ಗಂಟೆಗಳನ್ನು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಯಾರಿಗೂ ಪ್ರಾಣ ಹಾನಿ ಆಗಿಲ್ಲ. ಮಕ್ಕಳೂ ಸುರಕ್ಷಿತವಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.</p><p>ವಿಜಯ ದೇಸಾಯಿ ಹಾಗೂ ಆರೋಪಿಗಳ ಮಧ್ಯೆ ಇದ್ದ ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>