<p><strong>ಹುಕ್ಕೇರಿ:</strong> ತಾಲ್ಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ್ ಶುಗರ್ಸ್ ಇಂಡಸ್ಟ್ರೀಜ್ ಲಿ. ಪ್ರಸಕ್ತ ಸಾಲಿನ ಬಾಯ್ಲರ್ ಪ್ರದೀಪನ ಮತ್ತು ಕಬ್ಬು ನುರಿಕೆ ಕಾರ್ಯಾಚರಣೆ ಪ್ರಾರಂಭಿಸಿತು.</p>.<p>ಮುಖ್ಯ ಆಡಳಿತಾಧಿಕಾರಿ ಪೃಥ್ವಿ ಕತ್ತಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ14 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ಸದಸ್ಯರು, ಕಬ್ಬು ಬೆಳೆಗಾರರು ಕಬ್ಬು ಪೂರೈಸಲು ವಿನಂತಿಸಿದರು.</p>.<p>ಕಬ್ಬಿನ ನುರಿಕೆ ಹೆಚ್ಚಾದಷ್ಟು ಉತ್ತಮ ದರ ಕೊಡಲು ಸಾಧ್ಯವೆಂದ ಅವರು, ತಾಲ್ಲೂಕಿನ 3 ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ರೈತರು, ಸದಸ್ಯರು ಕೈಜೋಡಿಸಲು ವಿನಂತಿಸಿದರು.</p>.<p>ನಿರ್ದೇಶಕ ಪವನ್ ಕತ್ತಿ ಮಾತನಾಡಿ, ಗೋವಿನ ಜೋಳ (ಮೆಕ್ಕೆ ಜೋಳ) ಬಳಸಿ ಏಥೆನಾಲ್ ಉತ್ಪಾದಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ರೈತರು ಬೆಳೆದ ಗೋವಿನ ಜೋಳವನ್ನು ಕಾರ್ಖಾನೆಯೇ ಖರೀದಿ ಮಾಡಿ ಅನುಕೂಲ ಮಾಡಿಕೊಡಲಿದೆ ಎಂದರು.</p>.<p>ಮುಖಂಡರಾದ ದಿಲೀಪ ವಾಳಿಕಿಂಡಿ, ಸತ್ಯಪ್ಪ ಚಂದರಗಿ, ಸಂದೀಪ ಕತ್ತಿ, ಬಸವಣ್ಣಿ ಬಂಬಲವಾಡ, ಶಂಕರ ಚಂದರಗಿ, ಪರಸಪ್ಪ ಹನಮನ್ನವರ, ಬಾಹುಬಲಿ ಮುನ್ನೋಳಿ, ಅಶೋಕ ಬೆಲ್ಲದ, ಸಿದ್ರಾಮ ಮುಗಳಿ, ಆನಂದ ಲಕ್ಕುಂಡಿ, ಸಂಜೀವ ನಾಯಿಕ, ವಿಶ್ವನಾಥ ನಾಯಿಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ:</strong> ತಾಲ್ಲೂಕಿನ ಬೆಲ್ಲದ ಬಾಗೇವಾಡಿ ವಿಶ್ವರಾಜ್ ಶುಗರ್ಸ್ ಇಂಡಸ್ಟ್ರೀಜ್ ಲಿ. ಪ್ರಸಕ್ತ ಸಾಲಿನ ಬಾಯ್ಲರ್ ಪ್ರದೀಪನ ಮತ್ತು ಕಬ್ಬು ನುರಿಕೆ ಕಾರ್ಯಾಚರಣೆ ಪ್ರಾರಂಭಿಸಿತು.</p>.<p>ಮುಖ್ಯ ಆಡಳಿತಾಧಿಕಾರಿ ಪೃಥ್ವಿ ಕತ್ತಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ14 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ಸದಸ್ಯರು, ಕಬ್ಬು ಬೆಳೆಗಾರರು ಕಬ್ಬು ಪೂರೈಸಲು ವಿನಂತಿಸಿದರು.</p>.<p>ಕಬ್ಬಿನ ನುರಿಕೆ ಹೆಚ್ಚಾದಷ್ಟು ಉತ್ತಮ ದರ ಕೊಡಲು ಸಾಧ್ಯವೆಂದ ಅವರು, ತಾಲ್ಲೂಕಿನ 3 ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ರೈತರು, ಸದಸ್ಯರು ಕೈಜೋಡಿಸಲು ವಿನಂತಿಸಿದರು.</p>.<p>ನಿರ್ದೇಶಕ ಪವನ್ ಕತ್ತಿ ಮಾತನಾಡಿ, ಗೋವಿನ ಜೋಳ (ಮೆಕ್ಕೆ ಜೋಳ) ಬಳಸಿ ಏಥೆನಾಲ್ ಉತ್ಪಾದಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ರೈತರು ಬೆಳೆದ ಗೋವಿನ ಜೋಳವನ್ನು ಕಾರ್ಖಾನೆಯೇ ಖರೀದಿ ಮಾಡಿ ಅನುಕೂಲ ಮಾಡಿಕೊಡಲಿದೆ ಎಂದರು.</p>.<p>ಮುಖಂಡರಾದ ದಿಲೀಪ ವಾಳಿಕಿಂಡಿ, ಸತ್ಯಪ್ಪ ಚಂದರಗಿ, ಸಂದೀಪ ಕತ್ತಿ, ಬಸವಣ್ಣಿ ಬಂಬಲವಾಡ, ಶಂಕರ ಚಂದರಗಿ, ಪರಸಪ್ಪ ಹನಮನ್ನವರ, ಬಾಹುಬಲಿ ಮುನ್ನೋಳಿ, ಅಶೋಕ ಬೆಲ್ಲದ, ಸಿದ್ರಾಮ ಮುಗಳಿ, ಆನಂದ ಲಕ್ಕುಂಡಿ, ಸಂಜೀವ ನಾಯಿಕ, ವಿಶ್ವನಾಥ ನಾಯಿಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>