ವಿದ್ಯಾರಣ್ಯಪುರದ ನರಸೀಪುರದ ಜಯಶ್ರೀ ಬಾರ್ನಲ್ಲಿ ಮೂವರು ಆರೋಪಿಗಳೂ ಮದ್ಯ ಸೇವಿಸಲು ಬಂದಿದ್ದರು. ಮದ್ಯ ಸೇವನೆ ಬಳಿಕ ಬಾರ್ ಕ್ಯಾಷಿಯರ್ ಬಿಲ್ ನೀಡಿದ್ದರು. ಪಾವತಿಸಬೇಕಾದ ಹಣಕ್ಕಿಂತಲೂ ₹20 ಹೆಚ್ಚಿನ ಮೊತ್ತವನ್ನು ಬಿಲ್ನಲ್ಲಿ ನಮೂದಿಸಲಾಗಿತ್ತು ಎಂಬ ಕಾರಣಕ್ಕೆ ಆರೋಪಿಗಳು ಗಲಾಟೆ ಮಾಡಿದ್ದರು. ಬಾಟಲ್ನಿಂದ ಕ್ಯಾಷಿಯರ್ ರಂಜಿತ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಅದೇ ಬಾಟಲಿಯಿಂದ ಇರಿದಿದ್ದರು. ಘಟನೆ ಸಂಬಂಧ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.