ಜಂಟಿ ಸಮೀಕ್ಷೆ ನಡೆಸಲು ಪಾಲಿಕೆ ಮೈಸೂರು ರಾಜ ಮನೆತನದವರಿಗೆ ಜೂನ್ 18ರಂದು ನೋಟಿಸ್ ನೀಡಿತ್ತು. ಅದಕ್ಕೆ ಉತ್ತರ ಬಾರದ್ದರಿಂದ ಜೂನ್ 26ರಂದು ಮತ್ತೊಂದು ನೋಟಿಸ್ ನೀಡಿ, ಜುಲೈ 1ರಂದು ಜಂಟಿ ಪರಿಶೀಲನೆಗೆ ಬಾರದಿದ್ದರೆ ಜಮೀನನ್ನು ಸ್ವಾಧೀನಕ್ಕೆ ಪಡೆಯುವುದಾಗಿ ಹೇಳಿತ್ತು. ಎರಡನೇ ನೋಟಿಸ್ಗೂ ಉತ್ತರ ಬಾರದ್ದರಿಂದ ಬಿಬಿಎಂಪಿ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.