<p><strong>ಬೆಂಗಳೂರು:</strong> ನಾಗವಾರ ಪ್ರದೇಶದ ಹೊಲವೊಂದರ ಖರಾಬು ಸ್ಥಳದಲ್ಲಿ ಮಳೆನೀರಿನ ಚರಂಡಿಗೆ ತಡೆಗೋಡೆ ನಿರ್ಮಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ. ಕೂಡಲೇ ತಡೆಗೋಡೆಯನ್ನು ತೆರವುಗೊಳಿಸಬೇಕು ಎಂದು ನಾಗವಾರದ ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ರಾಜಗೋಪಾಲ್, ‘ಕಾರ್ಲೆ ಇನ್ಫ್ರಾಟೆಕ್ ಸಂಸ್ಥೆಯು ರಾಜಕಾಲುವೆ ಬಳಿ ಸರ್ವೆ ನಂಬರ್ 91/3 ರಲ್ಲಿ 9 ಗುಂಟೆ ಖರಾಬು ಸ್ಥಳವನ್ನು ಅತಿಕ್ರಮಿಸಿ 33 ಅಡಿ ಅಗಲದ ತಡೆಗೋಡೆ ನಿರ್ಮಿಸಿದೆ. ಸರಾಗವಾಗಿ ಹರಿಯಬೇಕಿದ್ದ ನೀರಿಗೆ ತಡೆ ಉಂಟಾಗಿದ್ದರಿಂದ ಮಳೆ ನೀರು, ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.</p>.<p>ಜನರಿಗೆ ಸಂಕಷ್ಟ ಉಂಟಾಗುವುದರ ಜೊತೆಗೆ ಹೆಬ್ಬಾಳದಿಂದ ಹೊರಮಾವುವರೆಗಿನ ಕಚ್ಚಾ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜಾಗದ ಪರಿಶೀಲನೆ ನಡೆಸಿ, ತಡೆಗೋಡೆ ತೆರವಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮುನಿಯಪ್ಪ, ಸುದರ್ಶನ್ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ನಾಗವಾರ ಪ್ರದೇಶದ ಹೊಲವೊಂದರ ಖರಾಬು ಸ್ಥಳದಲ್ಲಿ ಮಳೆನೀರಿನ ಚರಂಡಿಗೆ ತಡೆಗೋಡೆ ನಿರ್ಮಿಸಿದ್ದರಿಂದ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ. ಕೂಡಲೇ ತಡೆಗೋಡೆಯನ್ನು ತೆರವುಗೊಳಿಸಬೇಕು ಎಂದು ನಾಗವಾರದ ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಮುಖಂಡ ರಾಜಗೋಪಾಲ್, ‘ಕಾರ್ಲೆ ಇನ್ಫ್ರಾಟೆಕ್ ಸಂಸ್ಥೆಯು ರಾಜಕಾಲುವೆ ಬಳಿ ಸರ್ವೆ ನಂಬರ್ 91/3 ರಲ್ಲಿ 9 ಗುಂಟೆ ಖರಾಬು ಸ್ಥಳವನ್ನು ಅತಿಕ್ರಮಿಸಿ 33 ಅಡಿ ಅಗಲದ ತಡೆಗೋಡೆ ನಿರ್ಮಿಸಿದೆ. ಸರಾಗವಾಗಿ ಹರಿಯಬೇಕಿದ್ದ ನೀರಿಗೆ ತಡೆ ಉಂಟಾಗಿದ್ದರಿಂದ ಮಳೆ ನೀರು, ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.</p>.<p>ಜನರಿಗೆ ಸಂಕಷ್ಟ ಉಂಟಾಗುವುದರ ಜೊತೆಗೆ ಹೆಬ್ಬಾಳದಿಂದ ಹೊರಮಾವುವರೆಗಿನ ಕಚ್ಚಾ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜಾಗದ ಪರಿಶೀಲನೆ ನಡೆಸಿ, ತಡೆಗೋಡೆ ತೆರವಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮುನಿಯಪ್ಪ, ಸುದರ್ಶನ್ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>