<p><strong>ಬೆಂಗಳೂರು</strong>: ಮನೆ, ನಿವೇಶನ ಮತ್ತಿತರ ಆಸ್ತಿಗಳ ಮೇಲೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿರುವ ಜಾಲ ರಾಜಧಾನಿಯಲ್ಲಿ ಮತ್ತೆ ಸಕ್ರಿಯವಾಗಿದೆ. ಈ ಜಾಲಕ್ಕೆ ಸಿಲುಕಿ ಹಲವರು ನಿವೇಶನ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.</p><p>ನಿವೇಶನದ ಮೂಲ ಮಾಲೀಕರು ದಾಖಲೆ ಪರಿಶೀಲಿಸಿದಾಗ ನಿವೇಶನದ ಮೇಲೆಯೇ ವಂಚಕರು ಕೋಟ್ಯಂತರ ರೂಪಾಯಿ ಸಾಲ ಪಡೆದುಕೊಂಡಿ ರುವುದು ಪತ್ತೆಯಾಗುತ್ತಿದೆ. ಈ ಜಾಲಕ್ಕೆ ಬ್ಯಾಂಕ್ ವ್ಯವಸ್ಥಾಪಕರು, ಉಪ ನೋಂದಣಿ ಕಚೇರಿಯ ಅಧಿಕಾರಿಗಳು ಸಹ ಕೈಜೋಡಿಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.</p><p>ವಂಚನೆಗೆ ಒಳಗಾದ ಹಲವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಬೇರೊಬ್ಬರ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ, ಸಾಲ ಪಡೆದಿರುವ ಸಂಬಂಧ ಜೆ.ಪಿ.ನಗರ, ಪುಟ್ಟೇನಹಳ್ಳಿ ಹಾಗೂ ಹುಳಿಮಾವು ಪೊಲೀಸ್ ಠಾಣೆಗಳಲ್ಲಿ ಇತ್ತೀಚೆಗೆ ಎಫ್.ಐ.ಆರ್ ಆಗಿದ್ದು ಪ್ರಕರಣಗಳನ್ನು ಸಿಸಿಬಿ ವರ್ಗಾವಣೆ ಮಾಡಲಾಗಿದೆ.</p><p>ಸಿಸಿಬಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿ ಐವರು ಮಧ್ಯವರ್ತಿಗಳು ಹಾಗೂ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಜಾಲ ವಿಸ್ತಾರಗೊಂಡಿರುವ ಅನುಮಾನ ವ್ಯಕ್ತವಾಗಿದೆ.</p><p>2022ರಲ್ಲೂ ನಗರದಲ್ಲಿ ಇದೇ ರೀತಿಯ ಜಾಲ ವ್ಯಾಪಿಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಇತರೆ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ್ದ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಜಾಲ, ಅದೇ ನಿವೇಶನಗಳನ್ನು ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಿತ್ತು. ಜಾಲದ ಸುಳಿವು ಪತ್ತೆ ಮಾಡಿದ್ದ ಮಾಲೀಕರು ದೂರು ನೀಡಿದ್ದರು. ಶೇಷಾದ್ರಿಪುರ, ಮಾರತ್ಹಳ್ಳಿ ಕುಮಾರಸ್ವಾಮಿ ಲೇಔಟ್, ಕೆಂಪೇಗೌಡ ನಗರ, ಯಲಹಂಕ ನ್ಯೂಟೌನ್, ಜಿಗಣಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದರು. 15 ಕಡೆ ಪ್ರಕರಣಗಳು ದಾಖಲಾಗಿದ್ದವು. ಕೆಲವು ತಿಂಗಳಿಂದ ಈ ರೀತಿಯ ವಂಚನೆ ಜಾಲ ತಣ್ಣಗಾಗಿತ್ತು. ಈಗ ಮತ್ತೆ ತಲೆಯೆತ್ತಿದೆ.</p><p><strong>ಹೇಗೆ ನಡೆಯುತ್ತಿದೆ ವಂಚನೆ?: </strong>ಮನೆ ಹಾಗೂ ಆಸ್ತಿ ಖರೀದಿಸುವ ವೃದ್ಧರನ್ನು ಮಧ್ಯವರ್ತಿಗಳು ಪತ್ತೆ ಹಚ್ಚುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ‘ಆಸ್ತಿ ಮಾರಾಟಕ್ಕಿದೆ’ ಎಂದು ಯಾರಾದರೂ ಮಾಹಿತಿ ಹಾಕಿದ್ದರೆ ಅಂತಹವರನ್ನೂ ಪತ್ತೆ ಮಾಡುತ್ತಾರೆ. ಅವರ ಮನೆಗೆ ತೆರಳಿ, ಆಸ್ತಿ ಖರೀದಿಸುವ ನೆಪದಲ್ಲಿ ಮುಂಗಡವಾಗಿ ಸ್ವಲ್ಪ ಹಣ ನೀಡಿ ದಾಖಲಾತಿ ಪರಿಶೀಲಿಸಿ ಅದರ ಫೋಟೊ ತೆಗೆದುಕೊಳ್ಳುತ್ತಾರೆ. ಅದೇ ಮಾದರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಸಲ್ಲಿಸುತ್ತಾರೆ. ಬ್ಯಾಂಕ್ನವರು ದಾಖಲೆಗಳ ನೈಜತೆ ಪರಿಶೀಲಿಸದೆ ಸಾಲ ನೀಡುತ್ತಿದ್ದಾರೆ. ಮೂಲ ಮಾಲೀಕರು ದಾಖಲೆ ಪರಿಶೀಲನೆ ವೇಳೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗುತ್ತಿದೆ ಎಂದು ಮೂಲಗಳು ಹೇಳಿವೆ.</p>.<p><strong>‘ಬ್ಯಾಂಕ್ ಅಧಿಕಾರಿಗಳಿಗೆ ಕಮಿಷನ್’</strong></p><p>‘ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗುತ್ತಿದ್ದಾರೆ. ಪುಟ್ಟೇನಹಳ್ಳಿ ಹಾಗೂ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವಿರುವುದು ಸಾಬೀತಾಗಿದೆ. ಮಧ್ಯವರ್ತಿಗಳಿಗೆ ಬ್ಯಾಂಕ್ ಸಿಬ್ಬಂದಿಯೇ ಬ್ಯಾಂಕ್ ಖಾತೆ ಸೃಷ್ಟಿಸಿ ಕೊಡುತ್ತಿದ್ದರು. ಅಲ್ಲದೇ ಮಧ್ಯವರ್ತಿಗಳು ತಂದುಕೊಡುವ ನಕಲಿ ದಾಖಲೆಗಳನ್ನು ಪರಿಶೀಲಿಸದೆ ಸಾಲ ಮಂಜೂರು ಮಾಡುತ್ತಿದ್ದರು. ಅದಾದ ಮೇಲೆ ಕಮಿಷನ್ ಪಡೆಯುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.</p>.<p><strong>2 ಬ್ಯಾಂಕ್ಗಳಿಂದ ₹2.22 ಕೋಟಿ ಸಾಲ</strong></p><p>ನಕಲಿ ದಾಖಲೆ, ಸೇಲ್ ಡೀಡ್ ಸೃಷ್ಟಿಸಿ, ಸೋಮಶೆಟ್ಟಿಹಳ್ಳಿ ನಿವಾಸಿ ಬಿ.ಪ್ರಶಾಂತ್ಕುಮಾರ್ ಎಂಬಾತ ಎಸ್ಬಿಐ ಬ್ಯಾಂಕ್ನಿಂದ ₹1.22 ಕೋಟಿ ಸಾಲ ಪಡೆದುಕೊಂಡಿದ್ದಾನೆ. ಈ ಸಂಬಂಧ ಬ್ಯಾಂಕ್ನ ಸಿಬ್ಬಂದಿ ಕೆ.ಶ್ರೀನಿವಾಸ್ ಅವರು ಜ.8ರಂದು ದೂರು ನೀಡಿದ್ದು, ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಬನಶಂಕರಿ 2ನೇ ಹಂತದ ಟೀಚರ್ಸ್ ಕಾಲೊನಿಯ ಬಿ.ಪಿ.ಮೋಹನ್ಚಂದ್ ಅವರ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ಕ್ರಯಪತ್ರ ಮಾಡಿಕೊಟ್ಟು ಎಂ.ಜಿ.ರಸ್ತೆಯ ಡಿಸಿಬಿ ಬ್ಯಾಂಕ್ನಿಂದ ₹1 ಕೋಟಿ ಸಾಲ ಪಡೆದುಕೊಂಡಿದ್ದು ಜೆಪಿ ನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಈ ಪ್ರಕರಣದಲ್ಲಿ ಚಿಕ್ಕಬಳ್ಳಾಪುರದ ಟಿ.ವಿ.ರಾಮಕೃಷ್ಣರೆಡ್ಡಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮನೆ, ನಿವೇಶನ ಮತ್ತಿತರ ಆಸ್ತಿಗಳ ಮೇಲೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿರುವ ಜಾಲ ರಾಜಧಾನಿಯಲ್ಲಿ ಮತ್ತೆ ಸಕ್ರಿಯವಾಗಿದೆ. ಈ ಜಾಲಕ್ಕೆ ಸಿಲುಕಿ ಹಲವರು ನಿವೇಶನ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.</p><p>ನಿವೇಶನದ ಮೂಲ ಮಾಲೀಕರು ದಾಖಲೆ ಪರಿಶೀಲಿಸಿದಾಗ ನಿವೇಶನದ ಮೇಲೆಯೇ ವಂಚಕರು ಕೋಟ್ಯಂತರ ರೂಪಾಯಿ ಸಾಲ ಪಡೆದುಕೊಂಡಿ ರುವುದು ಪತ್ತೆಯಾಗುತ್ತಿದೆ. ಈ ಜಾಲಕ್ಕೆ ಬ್ಯಾಂಕ್ ವ್ಯವಸ್ಥಾಪಕರು, ಉಪ ನೋಂದಣಿ ಕಚೇರಿಯ ಅಧಿಕಾರಿಗಳು ಸಹ ಕೈಜೋಡಿಸಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.</p><p>ವಂಚನೆಗೆ ಒಳಗಾದ ಹಲವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ಬೇರೊಬ್ಬರ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ, ಸಾಲ ಪಡೆದಿರುವ ಸಂಬಂಧ ಜೆ.ಪಿ.ನಗರ, ಪುಟ್ಟೇನಹಳ್ಳಿ ಹಾಗೂ ಹುಳಿಮಾವು ಪೊಲೀಸ್ ಠಾಣೆಗಳಲ್ಲಿ ಇತ್ತೀಚೆಗೆ ಎಫ್.ಐ.ಆರ್ ಆಗಿದ್ದು ಪ್ರಕರಣಗಳನ್ನು ಸಿಸಿಬಿ ವರ್ಗಾವಣೆ ಮಾಡಲಾಗಿದೆ.</p><p>ಸಿಸಿಬಿ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿ ಐವರು ಮಧ್ಯವರ್ತಿಗಳು ಹಾಗೂ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಜಾಲ ವಿಸ್ತಾರಗೊಂಡಿರುವ ಅನುಮಾನ ವ್ಯಕ್ತವಾಗಿದೆ.</p><p>2022ರಲ್ಲೂ ನಗರದಲ್ಲಿ ಇದೇ ರೀತಿಯ ಜಾಲ ವ್ಯಾಪಿಸಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಇತರೆ ಸಂಸ್ಥೆಗಳು ಅಭಿವೃದ್ಧಿ ಪಡಿಸಿದ್ದ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಜಾಲ, ಅದೇ ನಿವೇಶನಗಳನ್ನು ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಿತ್ತು. ಜಾಲದ ಸುಳಿವು ಪತ್ತೆ ಮಾಡಿದ್ದ ಮಾಲೀಕರು ದೂರು ನೀಡಿದ್ದರು. ಶೇಷಾದ್ರಿಪುರ, ಮಾರತ್ಹಳ್ಳಿ ಕುಮಾರಸ್ವಾಮಿ ಲೇಔಟ್, ಕೆಂಪೇಗೌಡ ನಗರ, ಯಲಹಂಕ ನ್ಯೂಟೌನ್, ಜಿಗಣಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದರು. 15 ಕಡೆ ಪ್ರಕರಣಗಳು ದಾಖಲಾಗಿದ್ದವು. ಕೆಲವು ತಿಂಗಳಿಂದ ಈ ರೀತಿಯ ವಂಚನೆ ಜಾಲ ತಣ್ಣಗಾಗಿತ್ತು. ಈಗ ಮತ್ತೆ ತಲೆಯೆತ್ತಿದೆ.</p><p><strong>ಹೇಗೆ ನಡೆಯುತ್ತಿದೆ ವಂಚನೆ?: </strong>ಮನೆ ಹಾಗೂ ಆಸ್ತಿ ಖರೀದಿಸುವ ವೃದ್ಧರನ್ನು ಮಧ್ಯವರ್ತಿಗಳು ಪತ್ತೆ ಹಚ್ಚುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ‘ಆಸ್ತಿ ಮಾರಾಟಕ್ಕಿದೆ’ ಎಂದು ಯಾರಾದರೂ ಮಾಹಿತಿ ಹಾಕಿದ್ದರೆ ಅಂತಹವರನ್ನೂ ಪತ್ತೆ ಮಾಡುತ್ತಾರೆ. ಅವರ ಮನೆಗೆ ತೆರಳಿ, ಆಸ್ತಿ ಖರೀದಿಸುವ ನೆಪದಲ್ಲಿ ಮುಂಗಡವಾಗಿ ಸ್ವಲ್ಪ ಹಣ ನೀಡಿ ದಾಖಲಾತಿ ಪರಿಶೀಲಿಸಿ ಅದರ ಫೋಟೊ ತೆಗೆದುಕೊಳ್ಳುತ್ತಾರೆ. ಅದೇ ಮಾದರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಸಲ್ಲಿಸುತ್ತಾರೆ. ಬ್ಯಾಂಕ್ನವರು ದಾಖಲೆಗಳ ನೈಜತೆ ಪರಿಶೀಲಿಸದೆ ಸಾಲ ನೀಡುತ್ತಿದ್ದಾರೆ. ಮೂಲ ಮಾಲೀಕರು ದಾಖಲೆ ಪರಿಶೀಲನೆ ವೇಳೆ ಮೋಸಕ್ಕೆ ಒಳಗಾಗಿರುವುದು ಗೊತ್ತಾಗುತ್ತಿದೆ ಎಂದು ಮೂಲಗಳು ಹೇಳಿವೆ.</p>.<p><strong>‘ಬ್ಯಾಂಕ್ ಅಧಿಕಾರಿಗಳಿಗೆ ಕಮಿಷನ್’</strong></p><p>‘ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗುತ್ತಿದ್ದಾರೆ. ಪುಟ್ಟೇನಹಳ್ಳಿ ಹಾಗೂ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರವಿರುವುದು ಸಾಬೀತಾಗಿದೆ. ಮಧ್ಯವರ್ತಿಗಳಿಗೆ ಬ್ಯಾಂಕ್ ಸಿಬ್ಬಂದಿಯೇ ಬ್ಯಾಂಕ್ ಖಾತೆ ಸೃಷ್ಟಿಸಿ ಕೊಡುತ್ತಿದ್ದರು. ಅಲ್ಲದೇ ಮಧ್ಯವರ್ತಿಗಳು ತಂದುಕೊಡುವ ನಕಲಿ ದಾಖಲೆಗಳನ್ನು ಪರಿಶೀಲಿಸದೆ ಸಾಲ ಮಂಜೂರು ಮಾಡುತ್ತಿದ್ದರು. ಅದಾದ ಮೇಲೆ ಕಮಿಷನ್ ಪಡೆಯುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.</p>.<p><strong>2 ಬ್ಯಾಂಕ್ಗಳಿಂದ ₹2.22 ಕೋಟಿ ಸಾಲ</strong></p><p>ನಕಲಿ ದಾಖಲೆ, ಸೇಲ್ ಡೀಡ್ ಸೃಷ್ಟಿಸಿ, ಸೋಮಶೆಟ್ಟಿಹಳ್ಳಿ ನಿವಾಸಿ ಬಿ.ಪ್ರಶಾಂತ್ಕುಮಾರ್ ಎಂಬಾತ ಎಸ್ಬಿಐ ಬ್ಯಾಂಕ್ನಿಂದ ₹1.22 ಕೋಟಿ ಸಾಲ ಪಡೆದುಕೊಂಡಿದ್ದಾನೆ. ಈ ಸಂಬಂಧ ಬ್ಯಾಂಕ್ನ ಸಿಬ್ಬಂದಿ ಕೆ.ಶ್ರೀನಿವಾಸ್ ಅವರು ಜ.8ರಂದು ದೂರು ನೀಡಿದ್ದು, ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಬನಶಂಕರಿ 2ನೇ ಹಂತದ ಟೀಚರ್ಸ್ ಕಾಲೊನಿಯ ಬಿ.ಪಿ.ಮೋಹನ್ಚಂದ್ ಅವರ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ಕ್ರಯಪತ್ರ ಮಾಡಿಕೊಟ್ಟು ಎಂ.ಜಿ.ರಸ್ತೆಯ ಡಿಸಿಬಿ ಬ್ಯಾಂಕ್ನಿಂದ ₹1 ಕೋಟಿ ಸಾಲ ಪಡೆದುಕೊಂಡಿದ್ದು ಜೆಪಿ ನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p><p>ಈ ಪ್ರಕರಣದಲ್ಲಿ ಚಿಕ್ಕಬಳ್ಳಾಪುರದ ಟಿ.ವಿ.ರಾಮಕೃಷ್ಣರೆಡ್ಡಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>