‘ನಮ್ಮ ಅಣ್ಣ ಗೌರಪ್ಪ ಅವರ ಪುತ್ರ ಗೌರೀಶ್ಗೆ ದಾವಣಗೆರೆಯ ವಾಣಿ ಎಂಬುವರ ಜತೆಗೆ ವಿವಾಹವಾಗಿತ್ತು. ಕೌಟುಂಬಿಕ ಗಲಾಟೆ ಹಿನ್ನೆಲೆಯಲ್ಲಿ ಎಲ್ಲ ಸಹೋದರರ ವಿರುದ್ಧ ದಾವಣಗೆರೆಯ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕಾಯ್ದೆ ಅಡಿ ದೂರು ನೀಡಿದ್ದರು. ಅದಾದ ಮೇಲೆ ಶಿವರಾಜ್ ಅವರಿಗೆ ವಾಣಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಇದರಿಂದ ಶಿವರಾಜ್ ನೊಂದಿದ್ದರು’ ಎಂದು ಮೃತರ ಸಹೋದರ ದೂರಿನಲ್ಲಿ ತಿಳಿಸಿದ್ದಾರೆ.