<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಅರಣ್ಯ ಒತ್ತುವರಿ ಈಗಲೂ ನಿರಂತರವಾಗಿ ಸಾಗಿದೆ. ಒತ್ತುವರಿ ನಿಯಂತ್ರಣವನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಿ, ಪರಿಹಾರಾತ್ಮಕ ಕ್ರಮ ಕೈಗೊಳ್ಳಬೇಕು’ ಎಂದು ‘ಬೆಂಗಳೂರು ಕ್ಲೈಮೇಟ್ ಚೇಂಜ್ ಇನಿಸಿಯೇಟಿವ್– ಕರ್ನಾಟಕ (ಬಿಸಿಸಿಐ–ಕೆ)’ ಸಂಘಟನೆ ಒತ್ತಾಯಿಸಿದೆ.</p>.<p>ಸಂಘಟನೆ ಪರವಾಗಿ ವಿಧಾನಪರಿಷತ್ ಮಾಜಿ ಸಭಾಪತಿ ಪ್ರೊ. ಬಿ.ಕೆ. ಚಂದ್ರಶೇಖರ್, ಪರಿಸರ ವಿಜ್ಞಾನಿ ಎನ್.ಎಚ್. ರವೀಂದ್ರನಾಥ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.</p>.<p>‘ಅರಣ್ಯ ಒತ್ತುವರಿಯ ಬಹುತೇಕ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಉಳಿದಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಬಹಳ ಕಳವಳಕಾರಿ. ‘ಹವಾಮಾನ ಬದಲಾವಣೆ’ ಪರಿಣಾಮದಿಂದ ವಾತಾವರಣದಲ್ಲಿ ಸರಾಸರಿ ತಾಪಮಾನ ತೀವ್ರ ಏರಿಕೆ, ನೆರೆ–ಬರ, ಅಕಾಲಿಕ ಮಳೆ, ಬಿಸಿಗಾಳಿ, ಭೂಕುಸಿತ, ಅಂತರ್ಜಲ ಕುಸಿತ, ಮೇಲ್ಮಣ್ಣು ಫಲವತ್ತತೆ ನಾಶಗಳ ಜನಜೀವನವನ್ನು ನಲುಗಿಸುತ್ತಿವೆ. ಇದನ್ನು ಎದುರಿಸಲು ಈಗಲೂ ಸಾಧ್ಯವಿರುವ ಪರಿಣಾಮಕಾರಿ ಮಾರ್ಗವೆಂದರೆ, ಕಾಡನ್ನು ರಕ್ಷಿಕೊಳ್ಳುವುದು ಹಾಗೂ ಹಸಿರಿನ ಕವಚ ಹಿಗ್ಗಿಸುವುದಾಗಿದೆ’ ಎಂದಿದ್ದಾರೆ.</p>.<p>‘ಅರಣ್ಯ ಸಂರಕ್ಷಣಾ ಕಾನೂನು’ ಹಾಗೂ ‘ವನ್ಯಜೀವಿ ಸಂರಕ್ಷಣಾ ಕಾನೂನುಗಳು’ ಅರಣ್ಯಭೂಮಿ ರಕ್ಷಿಸಿಕೊಳ್ಳುವ ಅಧಿಕಾರ ಮತ್ತು ಅದರ ಉತ್ತರದಾಯಿತ್ವವನ್ನು ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ವಹಿಸಿದೆ. ಆದರೂ ಕಾನೂನು ಮೀರಿ ಅನ್ಯ ಉದ್ದೇಶಕ್ಕೆ ಅರಣ್ಯಭೂಮಿ ಪರಿವರ್ತಿಸುವುದು ಹಾಗೂ ಒತ್ತುವರಿ ಮಾಡುವುದನ್ನು ನಿಯಂತ್ರಿಸುವಲ್ಲಿ ಬಹುಪಾಲು ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದಿದ್ದಾರೆ.</p>.<p>‘ಇನ್ನು ಮುಂದಾದರೂ ಅರಣ್ಯ ಒತ್ತುವರಿಯಾಗುವುದನ್ನು ತಡೆದು ಅರಣ್ಯ ಪ್ರದೇಶಗಳನ್ನು ರಕ್ಷಿಸುವಲ್ಲಿ ನಾಡಿನ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಸದರು, ಶಾಸಕರು ಕೈಜೋಡಿಸಬೇಕು’ ಎಂದು ಅವರು ಆಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಅರಣ್ಯ ಒತ್ತುವರಿ ಈಗಲೂ ನಿರಂತರವಾಗಿ ಸಾಗಿದೆ. ಒತ್ತುವರಿ ನಿಯಂತ್ರಣವನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಿ, ಪರಿಹಾರಾತ್ಮಕ ಕ್ರಮ ಕೈಗೊಳ್ಳಬೇಕು’ ಎಂದು ‘ಬೆಂಗಳೂರು ಕ್ಲೈಮೇಟ್ ಚೇಂಜ್ ಇನಿಸಿಯೇಟಿವ್– ಕರ್ನಾಟಕ (ಬಿಸಿಸಿಐ–ಕೆ)’ ಸಂಘಟನೆ ಒತ್ತಾಯಿಸಿದೆ.</p>.<p>ಸಂಘಟನೆ ಪರವಾಗಿ ವಿಧಾನಪರಿಷತ್ ಮಾಜಿ ಸಭಾಪತಿ ಪ್ರೊ. ಬಿ.ಕೆ. ಚಂದ್ರಶೇಖರ್, ಪರಿಸರ ವಿಜ್ಞಾನಿ ಎನ್.ಎಚ್. ರವೀಂದ್ರನಾಥ, ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.</p>.<p>‘ಅರಣ್ಯ ಒತ್ತುವರಿಯ ಬಹುತೇಕ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಉಳಿದಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಬಹಳ ಕಳವಳಕಾರಿ. ‘ಹವಾಮಾನ ಬದಲಾವಣೆ’ ಪರಿಣಾಮದಿಂದ ವಾತಾವರಣದಲ್ಲಿ ಸರಾಸರಿ ತಾಪಮಾನ ತೀವ್ರ ಏರಿಕೆ, ನೆರೆ–ಬರ, ಅಕಾಲಿಕ ಮಳೆ, ಬಿಸಿಗಾಳಿ, ಭೂಕುಸಿತ, ಅಂತರ್ಜಲ ಕುಸಿತ, ಮೇಲ್ಮಣ್ಣು ಫಲವತ್ತತೆ ನಾಶಗಳ ಜನಜೀವನವನ್ನು ನಲುಗಿಸುತ್ತಿವೆ. ಇದನ್ನು ಎದುರಿಸಲು ಈಗಲೂ ಸಾಧ್ಯವಿರುವ ಪರಿಣಾಮಕಾರಿ ಮಾರ್ಗವೆಂದರೆ, ಕಾಡನ್ನು ರಕ್ಷಿಕೊಳ್ಳುವುದು ಹಾಗೂ ಹಸಿರಿನ ಕವಚ ಹಿಗ್ಗಿಸುವುದಾಗಿದೆ’ ಎಂದಿದ್ದಾರೆ.</p>.<p>‘ಅರಣ್ಯ ಸಂರಕ್ಷಣಾ ಕಾನೂನು’ ಹಾಗೂ ‘ವನ್ಯಜೀವಿ ಸಂರಕ್ಷಣಾ ಕಾನೂನುಗಳು’ ಅರಣ್ಯಭೂಮಿ ರಕ್ಷಿಸಿಕೊಳ್ಳುವ ಅಧಿಕಾರ ಮತ್ತು ಅದರ ಉತ್ತರದಾಯಿತ್ವವನ್ನು ಇಲಾಖೆಯ ವಿವಿಧ ಹಂತದ ಅಧಿಕಾರಿಗಳಿಗೆ ವಹಿಸಿದೆ. ಆದರೂ ಕಾನೂನು ಮೀರಿ ಅನ್ಯ ಉದ್ದೇಶಕ್ಕೆ ಅರಣ್ಯಭೂಮಿ ಪರಿವರ್ತಿಸುವುದು ಹಾಗೂ ಒತ್ತುವರಿ ಮಾಡುವುದನ್ನು ನಿಯಂತ್ರಿಸುವಲ್ಲಿ ಬಹುಪಾಲು ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದಿದ್ದಾರೆ.</p>.<p>‘ಇನ್ನು ಮುಂದಾದರೂ ಅರಣ್ಯ ಒತ್ತುವರಿಯಾಗುವುದನ್ನು ತಡೆದು ಅರಣ್ಯ ಪ್ರದೇಶಗಳನ್ನು ರಕ್ಷಿಸುವಲ್ಲಿ ನಾಡಿನ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಸಂಸದರು, ಶಾಸಕರು ಕೈಜೋಡಿಸಬೇಕು’ ಎಂದು ಅವರು ಆಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>