ಜೈನ್ ವಿಶ್ವವಿದ್ಯಾಲಯದ ಸಹಕುಲಪತಿ ದಿನೇಶ್ ನೀಲಕಂಠ್ ಮಾತನಾಡಿ, ‘ನವರಸ ಪರಿಕಲ್ಪನೆ ಅಡಿಯಲ್ಲಿ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿತ್ತು. ಒಂದು ಕಥೆ ಪ್ರೇಕ್ಷಕರ ಭಾವನೆಗಳನ್ನು ಜಾಗೃತಗೊಳಿಸುವುದರ ಜೊತೆಗೆ ಕಲ್ಪನಾಶಕ್ತಿಗೆ ಜೀವ ನೀಡಲಿದೆ. ಇದರಿಂದ, ಕಲಾವಿದರು ತಮ್ಮ ಪ್ರೇಕ್ಷಕರೊಂದಿಗೆ ಆಳವಾದ ಸಂಬಂಧ ಹೊಂದಬಹುದು. ವಿದ್ಯಾರ್ಥಿಗಳು ಚಲನಚಿತ್ರ ನಿರ್ಮಾಪಕರು, ಕಥೆಗಾರರು ಮತ್ತು ಚಲನಚಿತ್ರಕಾರರಾಗಲು ಸಿನಿಮೇಟ್ಸ್ ಒಂದು ಉತ್ತಮ ವೇದಿಕೆಯಾಗಿದೆ’ ಎಂದರು.