‘ವೃತ್ತಿಪರ ಕೋರ್ಸ್ಗಳಿಗೆ ಒತ್ತು ಕೊಟ್ಟ ಪರಿಣಾಮ’
‘ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಕೋರ್ಸ್ಗಳ ಬಗ್ಗೆ ಅರಿವು ಹೆಚ್ಚಾಗಿದೆ. ಅನುದಾನ ರಹಿತ ಕಾಲೇಜುಗಳು ಲಾಭ ಗಳಿಕೆಗೆ ಕೆಲಸ ಮಾಡುತ್ತಿದ್ದರೂ ಅವುಗಳ ಪರಿಶ್ರಮದಿಂದ ವೃತ್ತಿಪರ ಕೋರ್ಸ್ಗಳ ಅರಿವು ಮೂಡಿದೆ. ಹಿಂದಿಗೆ ಹೋಲಿಸಿದರೆ ಈಗ ಬೀದರ್ ಫಲಿತಾಂಶ ಉತ್ತಮವಾಗಿ ಬರುತ್ತಿದೆ. ಹಿಂದೆ ಕೋಚಿಂಗ್ ಸೆಂಟರ್ಗಳ ಮೂಲಕ ವಿಶೇಷ ತರಬೇತಿ ಕೊಡುತ್ತಿದ್ದವರೂ ಈಗ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ವೃತ್ತಿಪರ ಕೋರ್ಸ್ಗಳನ್ನೇ ಮುಖ್ಯವಾಗಿಟ್ಟುಕೊಂಡು ತರಬೇತಿ ಕೊಡುತ್ತಿದ್ದಾರೆ. ಬೇಸಿಕ್ ಸೈನ್ಸ್ಗಿಂತ ವೃತ್ತಿಪರ ಕೋರ್ಸ್ಗಳಿಗೆ ಯಾವ ರೀತಿ ಸೀಟುಗಳನ್ನು ಪಡೆಯಬೇಕು ಎನ್ನುವುದಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಇದರ ಒಟ್ಟಾರೆ ಪರಿಣಾಮವಾಗಿ ಸ್ಥಳೀಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಕಾರಣರಾಗಿದ್ದಾರೆ’ ಎನ್ನುತ್ತಾರೆ ನಿವೃತ್ತ ಕಾಲೇಜು ಪ್ರಾಚಾರ್ಯ ವಿಠ್ಠಲದಾಸ ಪ್ಯಾಗೆ.