<p><strong>ಚಿಟಗುಪ್ಪ:</strong> ಇಲ್ಲಿಯ ಬಹುತೇಕ ವಾರ್ಡ್ಗಳಲ್ಲಿ 6 ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಮಹಿಳೆಯರು, ನಾಗರಿಕರು ಕೊಡಗಳು ಹಿಡಿದುಕೊಂಡು ಜಿಟಿಜಿಟಿ ಮಳೆಯಲ್ಲಿಯೇ ಕೊಳವೆ ಬಾವಿಗಳಿಗೆ ತೆರಳಿ, ನೀರು ತರುತ್ತಿದ್ದಾರೆ.</p>.<p>ಮಳೆಯಿದ್ದರೂ ಕುಡಿಯಲು ತೊಟ್ಟು ನೀರು ಸಿಗುತ್ತಿಲ್ಲ. ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಸದ್ಯಕ್ಕೆ ಕೊಳವೆ ಬಾವಿಯನ್ನು ಆಶ್ರಯಿಸಿದ್ದಾರೆ. ಒಂದು ಕೊಡ ನೀರು ಪಡೆಯಲು ಕನಿಷ್ಠ ಒಂದು ಗಂಟೆ ಹಿಡಿಯುತ್ತಿದೆ.</p>.<p>ಪಟ್ಟಣದ ಹಳೆ ಅಗಸಿ, ಭಾಸ್ಕರ್ ನಗರ, ಭವಾನಿ ದೇಗುಲ ಕಾಲೊನಿ, ಅಯ್ಯಪ್ಪ ಸ್ವಾಮಿ ಓಣಿ, ಹಳೆ ಹನುಮಾನ ದೇಗುಲ ಓಣಿ ಇತರೆಡೆಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಹೆಚ್ಚು ಸದಸ್ಯರಿರುವವರ ಮನೆಗಳಲ್ಲಿ ಮಕ್ಕಳು ವೃದ್ಧರು ನೀರಿಗಾಗಿ ಪರದಾಡುವಂತಾಗಿದೆ’ ಎಂದು ಸಮಾಜ ಸೇವಕ ಪೂರ್ಣಾನಂದ ಕಟ್ಟಿಮನಿ ತಿಳಿಸಿದರು.</p>.<p>ಸಂಬಂಧಿಸಿದ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಪುರಸಭೆ ಸಿಬ್ಬಂದಿಯೂ ಗಮನ ಹರಿಸುತ್ತಿಲ್ಲ. ಇದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಒಟ್ಟು 12 ಗ್ರಾಮಗಳಿಗೆ ನೀರು ಸರಬರಾಜು ಸಮಸ್ಯೆಯಾಗಿದೆ. ಕಾರಂಜಾ ನೀರು ಪೂರೈಕೆಯಾಗುವ ಪೈಪ್ಲೈನ್ ಒಡೆದಿದ್ದರಿಂದ ಈ ಸಮಸ್ಯೆಯಾಗಿದೆ. ದುರಸ್ತಿಯಾದ ತಕ್ಷಣ ನೀರು ಸರಬರಾಜು ಆರಂಭಿಸಲಾಗುತ್ತದೆ. ಹೀಗಾಗಿ ಪುರಸಭೆಯ ಸಮಸ್ಯೆಯಿರುವುದಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಹುಸಾಮೊದ್ದೀನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ:</strong> ಇಲ್ಲಿಯ ಬಹುತೇಕ ವಾರ್ಡ್ಗಳಲ್ಲಿ 6 ದಿನಗಳಿಂದ ತಾಂತ್ರಿಕ ಸಮಸ್ಯೆಯಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ. ಮಹಿಳೆಯರು, ನಾಗರಿಕರು ಕೊಡಗಳು ಹಿಡಿದುಕೊಂಡು ಜಿಟಿಜಿಟಿ ಮಳೆಯಲ್ಲಿಯೇ ಕೊಳವೆ ಬಾವಿಗಳಿಗೆ ತೆರಳಿ, ನೀರು ತರುತ್ತಿದ್ದಾರೆ.</p>.<p>ಮಳೆಯಿದ್ದರೂ ಕುಡಿಯಲು ತೊಟ್ಟು ನೀರು ಸಿಗುತ್ತಿಲ್ಲ. ಮಕ್ಕಳಿಂದ ಹಿರಿಯರವರೆಗೂ ಎಲ್ಲರೂ ಸದ್ಯಕ್ಕೆ ಕೊಳವೆ ಬಾವಿಯನ್ನು ಆಶ್ರಯಿಸಿದ್ದಾರೆ. ಒಂದು ಕೊಡ ನೀರು ಪಡೆಯಲು ಕನಿಷ್ಠ ಒಂದು ಗಂಟೆ ಹಿಡಿಯುತ್ತಿದೆ.</p>.<p>ಪಟ್ಟಣದ ಹಳೆ ಅಗಸಿ, ಭಾಸ್ಕರ್ ನಗರ, ಭವಾನಿ ದೇಗುಲ ಕಾಲೊನಿ, ಅಯ್ಯಪ್ಪ ಸ್ವಾಮಿ ಓಣಿ, ಹಳೆ ಹನುಮಾನ ದೇಗುಲ ಓಣಿ ಇತರೆಡೆಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಹೆಚ್ಚು ಸದಸ್ಯರಿರುವವರ ಮನೆಗಳಲ್ಲಿ ಮಕ್ಕಳು ವೃದ್ಧರು ನೀರಿಗಾಗಿ ಪರದಾಡುವಂತಾಗಿದೆ’ ಎಂದು ಸಮಾಜ ಸೇವಕ ಪೂರ್ಣಾನಂದ ಕಟ್ಟಿಮನಿ ತಿಳಿಸಿದರು.</p>.<p>ಸಂಬಂಧಿಸಿದ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಪುರಸಭೆ ಸಿಬ್ಬಂದಿಯೂ ಗಮನ ಹರಿಸುತ್ತಿಲ್ಲ. ಇದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಒಟ್ಟು 12 ಗ್ರಾಮಗಳಿಗೆ ನೀರು ಸರಬರಾಜು ಸಮಸ್ಯೆಯಾಗಿದೆ. ಕಾರಂಜಾ ನೀರು ಪೂರೈಕೆಯಾಗುವ ಪೈಪ್ಲೈನ್ ಒಡೆದಿದ್ದರಿಂದ ಈ ಸಮಸ್ಯೆಯಾಗಿದೆ. ದುರಸ್ತಿಯಾದ ತಕ್ಷಣ ನೀರು ಸರಬರಾಜು ಆರಂಭಿಸಲಾಗುತ್ತದೆ. ಹೀಗಾಗಿ ಪುರಸಭೆಯ ಸಮಸ್ಯೆಯಿರುವುದಿಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಹುಸಾಮೊದ್ದೀನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>