<p><strong>ಜನವಾಡ:</strong> ಜಿಲ್ಲಾ ಕೊರಮ(ಕೊರವ) ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ನೀಟ್ನಲ್ಲಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ಕ್ರಮವಾಗಿ 724ನೇ ರ್ಯಾಂಕ್, 2,239ನೇ ರ್ಯಾಂಕ್ ಮತ್ತು 7,622ನೇ ರ್ಯಾಂಕ್ ಪಡೆದ ಓಂಕಾರ ತುಕಾರಾಮ, ಕೃಷ್ಣ ಸಂಜೀವಕುಮಾರ ಹಾಗೂ ದೀಪಕ್ ಶಾಮಣ್ಣ ಅವರನ್ನು ಶಾಲು ಹೊದಿಸಿ, ಕೃತಿ ನೀಡಿ ಗೌರವಿಸಲಾಯಿತು.</p>.<p>ಛಲವಿದ್ದಲ್ಲಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ನೀಟ್ನಲ್ಲಿ ಸಾಧನೆಗೈದ ಜನವಾಡದ ಮೆಕ್ಯಾನಿಕ್ ತುಕಾರಾಮ ಅವರ ಪುತ್ರ ಓಂಕಾರ ಅವರೇ ನಿದರ್ಶನ ಎಂದು ಜಿಲ್ಲಾ ಕಾರಾಗೃಹದ ಜೇಲರ್ ತಿಮ್ಮಣ್ಣ ಭಜಂತ್ರಿ ಹೇಳಿದರು.</p>.<p>ನೀಟ್ನಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಕೊರಮ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಂಡುಕೊಳ್ಳಲು ಧನ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.</p>.<p>ಜಿಲ್ಲಾ ಕೊರಮ (ಕೊರವ) ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಂಜುಕುಮಾರ ಬೇಲೂರ, ಸಹ ಶಿಕ್ಷಕ ನಾರಾಯಣ ಕೊನಸಾರೆ ಮಾತನಾಡಿದರು.</p>.<p>ಸಂಘದ ಗೌರವಾಧ್ಯಕ್ಷ ವಿಶ್ವನಾಥ ಜಾಧವ್, ಅಧ್ಯಕ್ಷ ಸಂತೋಷ ಕೊರವ, ಕಾರ್ಯಾಧ್ಯಕ್ಷ ನಾಗೇಶ ಕೈಕಾಡಿ, ಉಪಾಧ್ಯಕ್ಷ ಸಂಜು ಯರಂಡಿ, ಪ್ರಮುಖರಾದ ಮನೋಜ್ ಮಾನೆ, ರವೀಂದ್ರ ಬಂಗೆ, ಸಂತೋಷ ಬಂಗೆ, ಶಂಕರ ಬಂಗೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ:</strong> ಜಿಲ್ಲಾ ಕೊರಮ(ಕೊರವ) ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೀದರ್ ತಾಲ್ಲೂಕಿನ ಜನವಾಡದಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.</p>.<p>ನೀಟ್ನಲ್ಲಿ ಪರಿಶಿಷ್ಟ ಜಾತಿ ವಿಭಾಗದಲ್ಲಿ ಕ್ರಮವಾಗಿ 724ನೇ ರ್ಯಾಂಕ್, 2,239ನೇ ರ್ಯಾಂಕ್ ಮತ್ತು 7,622ನೇ ರ್ಯಾಂಕ್ ಪಡೆದ ಓಂಕಾರ ತುಕಾರಾಮ, ಕೃಷ್ಣ ಸಂಜೀವಕುಮಾರ ಹಾಗೂ ದೀಪಕ್ ಶಾಮಣ್ಣ ಅವರನ್ನು ಶಾಲು ಹೊದಿಸಿ, ಕೃತಿ ನೀಡಿ ಗೌರವಿಸಲಾಯಿತು.</p>.<p>ಛಲವಿದ್ದಲ್ಲಿ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದಕ್ಕೆ ನೀಟ್ನಲ್ಲಿ ಸಾಧನೆಗೈದ ಜನವಾಡದ ಮೆಕ್ಯಾನಿಕ್ ತುಕಾರಾಮ ಅವರ ಪುತ್ರ ಓಂಕಾರ ಅವರೇ ನಿದರ್ಶನ ಎಂದು ಜಿಲ್ಲಾ ಕಾರಾಗೃಹದ ಜೇಲರ್ ತಿಮ್ಮಣ್ಣ ಭಜಂತ್ರಿ ಹೇಳಿದರು.</p>.<p>ನೀಟ್ನಲ್ಲಿ ಉತ್ತಮ ರ್ಯಾಂಕ್ ಗಳಿಸಿದ ಕೊರಮ ಸಮಾಜದ ವಿದ್ಯಾರ್ಥಿಗಳಿಗೆ ಪುಸ್ತಕ ಕೊಂಡುಕೊಳ್ಳಲು ಧನ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.</p>.<p>ಜಿಲ್ಲಾ ಕೊರಮ (ಕೊರವ) ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಂಜುಕುಮಾರ ಬೇಲೂರ, ಸಹ ಶಿಕ್ಷಕ ನಾರಾಯಣ ಕೊನಸಾರೆ ಮಾತನಾಡಿದರು.</p>.<p>ಸಂಘದ ಗೌರವಾಧ್ಯಕ್ಷ ವಿಶ್ವನಾಥ ಜಾಧವ್, ಅಧ್ಯಕ್ಷ ಸಂತೋಷ ಕೊರವ, ಕಾರ್ಯಾಧ್ಯಕ್ಷ ನಾಗೇಶ ಕೈಕಾಡಿ, ಉಪಾಧ್ಯಕ್ಷ ಸಂಜು ಯರಂಡಿ, ಪ್ರಮುಖರಾದ ಮನೋಜ್ ಮಾನೆ, ರವೀಂದ್ರ ಬಂಗೆ, ಸಂತೋಷ ಬಂಗೆ, ಶಂಕರ ಬಂಗೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>