ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಸಂಪತ್ತು ಮಾರುವವರಿಗೆ ವಿಶ್ವಗುರು ಅಂತಾರೇನು?: ಬಸವರಾಜ ಬುಳ್ಳಾ

Published : 10 ಫೆಬ್ರುವರಿ 2024, 15:51 IST
Last Updated : 10 ಫೆಬ್ರುವರಿ 2024, 15:51 IST
ಫಾಲೋ ಮಾಡಿ
Comments
‘ನಾನೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ’
‘ನಾನೂ ಕೂಡ ಬೀದರ್‌ ಲೋಕಸಭೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಬರುವ ಚುನಾವಣೆಯಲ್ಲಿ ನನಗೆ ಅವಕಾಶ ಕೊಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ನಾನು ಎರಡು ಸಲ ಪಕ್ಷದ ಜಿಲ್ಲಾಧ್ಯಕ್ಷನಾಗಿ ರಾಜ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ’ ಎಂದು ಬಸವರಾಜ ಬುಳ್ಳಾ ಹೇಳಿದರು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಒಂದುವೇಳೆ ನನಗೆ ಟಿಕೆಟ್‌ ಸಿಕ್ಕಿ ಚುನಾವಣೆಯಲ್ಲಿ ಗೆದ್ದರೆ ಹತ್ತು ‘ಗ್ಯಾರಂಟಿ’ ಜಾರಿಗೆ ತರುವೆ. ಬೀದರ್‌–ಬಳ್ಳಾರಿ ಚತುಷ್ಪಥ ಕೈಗಾರಿಕೆ ಕಾರಿಡಾರ್‌ ಪ್ರಮುಖ ನಗರಗಳಿಗೆ ವಿಮಾನ ಸಂಚಾರ ಬೆಂಗಳೂರು–ನವದೆಹಲಿ ವಾಯಾ ಬೀದರ್‌ ರೈಲು ಸಂಚಾರ ಬಸವಕಲ್ಯಾಣದಲ್ಲಿ ಏರ್‌ಪೋರ್ಟ್‌ ರೈಲು ಸೇವೆ ವಿಸ್ತರಣೆ ದೊಡ್ಡ ಕೈಗಾರಿಕೆಗಳ ಸ್ಥಾಪನೆ ಐಟಿ. ಬಿ.ಟಿ ಟೆಕ್ಸ್‌ಟೈಲ್ಸ್‌ ಪಾರ್ಕ್‌ ಬಿಎಸ್‌ಎಸ್‌ಕೆ ಪುನಾರರಂಭಿಸಲು ಕ್ರಮ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಬೀದರ್–ಜಹೀರಾಬಾದ್‌ ಚತುಷ್ಪಥಕ್ಕೆ ಶ್ರಮಿಸುವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT