<p><strong>ಬೀದರ್:</strong> ವಾರವಿಡೀ ಸತತ ಸುರಿದ ಜಿಟಿಜಿಟಿ ಮಳೆ ಜಿಲ್ಲೆಯಲ್ಲಿ ಅನೇಕರ ತಲೆಯ ಮೇಲಿನ ಸೂರು ಕಸಿದುಕೊಂಡಿದೆ.</p>.<p>ವಾರವೊಂದರಲ್ಲೇ ಬೀದರ್ ಜಿಲ್ಲೆಯಾದ್ಯಂತ 204 ಮನೆಗಳಿಗೆ ಹಾನಿಯಾಗಿದೆ. ಬಹುತೇಕ ಮನೆಗಳು ಇದರಲ್ಲಿ ಹಳತಾಗಿದ್ದವು. ಆದರೆ, ಅವುಗಳು ಅವರ ಬದುಕಿಗೆ ಆಸರೆಯಾಗಿದ್ದವು. ಬಿಟ್ಟೂ ಬಿಡದೆ ಮಳೆ ಸುರಿದು ಗೋಡೆಗಳು ನೆನೆದು ಅಂತಿಮವಾಗಿ ಧರೆಗುರುಳಿವೆ. ಅವರಿಗಿದ್ದ ನೆರಳು ಇಲ್ಲವಾಗಿದೆ.</p>.<p>ಮಳೆಗೆ ಬಸವಕಲ್ಯಾಣ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದು, 50 ಮನೆಗಳು ಬಿದ್ದಿವೆ. ನಂತರದ ಸ್ಥಾನ ಔರಾದ್, ಬೀದರ್, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನದ್ದು. ಔರಾದ್ನಲ್ಲಿ 36, ಬೀದರ್ನಲ್ಲಿ 26, ಭಾಲ್ಕಿಯಲ್ಲಿ 24, ಹುಮನಾಬಾದ್ನಲ್ಲಿ 24, ಚಿಟಗುಪ್ಪದಲ್ಲಿ 21 ಮನೆಗಳಿಗೆ ಹಾನಿ ಉಂಟಾಗಿದೆ. ಕಮಲನಗರ ಹಾಗೂ ಹುಲಸೂರಿನಲ್ಲಿ ಕ್ರಮವಾಗಿ 13 ಮತ್ತು 11 ಮನೆಗಳಿಗೆ ಹಾನಿಯಾಗಿದೆ.</p>.<p>ಇನ್ನಷ್ಟೇ ಸರ್ವೇ ನಡೆಯುತ್ತಿದ್ದು, ನಿಖರ ಮಾಹಿತಿ ಸಿಗಬೇಕಿದೆ. ಮನೆ ಹಾಗೂ ಅದರ ಪರಿಹಾರಕ್ಕಾಗಿ ಮಾಹಿತಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.</p>.<h2>ಬೆಳೆಗೂ ಹಾನಿ:</h2>.<p>ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೂ ಮಳೆ ಪೆಟ್ಟು ಕೊಟ್ಟಿದೆ. ಅದರಲ್ಲೂ ತಗ್ಗು ಪ್ರದೇಶದಲ್ಲಿರುವ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಸಮಸ್ಯೆ ಉಂಟಾಗಿದೆ.</p>.<p>ತಡವಾಗಿ ಬಿತ್ತನೆ ಮಾಡಿದ ರೈತರ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ಬೀಜಗಳು ಕೊಳೆತು ಹೋಗಿವೆ. ಈಗಷ್ಟೇ ಮೇಲೆ ಎದ್ದಿದ್ದ ಸಸಿಗಳು ಕೂಡ ಹಾಳಾಗಿವೆ. ಇದು ರೈತರ ಚಿಂತೆ ಹೆಚ್ಚಿಸಿದೆ. ಆದರೆ, ಹೆಚ್ಚಿನ ಭಾಗಗಳಲ್ಲಿ ಮಳೆಗೆ ಬೆಳೆಗಳು ನಳನಳಿಸುತ್ತಿವೆ. ಈ ಭಾಗದ ರೈತರು ಸಂತಸದಲ್ಲಿದ್ದಾರೆ.</p>.<p>‘ಅತಿಯಾದ ತೇವಾಂಶದಿಂದ ಬೆಳೆಗಳ ಬೇರುಗಳ ಉಸಿರಾಟದಲ್ಲಿ ವ್ಯತ್ಯಯವಾಗಿ ಹಾಗೂ ಪೋಷಕಾಂಶಗಳು ಅತಿಯಾಗಿ ಸೋರಿಕೆಯಿಂದಾಗಿ ಎಲೆಗಳು ಹಳದಿಯಾಗುವ ಲಕ್ಷಗಳು ಕಂಡು ಬರುತ್ತದೆ. ಹೊಲದಲ್ಲಿ ನೀರು ನಿಂತರೆ ಇದರ ನಿರ್ವಹಣೆಗಾಗಿ ರೈತರು ಪ್ರತಿ 10 ಮೀಟರ್ ಅಂತರದಲ್ಲಿ ಒಂದರಂತೆ 1 ಅಡಿ ಆಳದ ನೇಗಿಲ ಸಾಲು ತೆಗೆದು ಬಸಿ ಕಾಲುವೆಯಿಂದ ನೀರು ಹೊರ ಹಾಕಬೇಕು. ನೀರಿನಲ್ಲಿ ಕರಗುವ 19:19:19 ದ್ರಾವಣವನ್ನು 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗಳಿಗೆ ಸಿಂಪಡಿಸಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ಮಾಡಿದ್ದಾರೆ.</p>.<p>ಉತ್ತಮ ಮಳೆಗೆ ಜಿಲ್ಲೆಯ ಬಹುತೇಕ ಕೆರೆ, ಕಟ್ಟೆ, ಹಳ್ಳ, ಕೊಳ್ಳ ಹಾಗೂ ಚೆಕ್ ಡ್ಯಾಂಗಳು ತುಂಬಿವೆ. ಅಂತರ್ಜಲ ಹೆಚ್ಚಾಗಿದ್ದು, ಬಾವಿಗಳು ಕೂಡ ಭರ್ತಿಯಾಗಿವೆ. ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯಕ್ಕೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ವಾರವಿಡೀ ಸತತ ಸುರಿದ ಜಿಟಿಜಿಟಿ ಮಳೆ ಜಿಲ್ಲೆಯಲ್ಲಿ ಅನೇಕರ ತಲೆಯ ಮೇಲಿನ ಸೂರು ಕಸಿದುಕೊಂಡಿದೆ.</p>.<p>ವಾರವೊಂದರಲ್ಲೇ ಬೀದರ್ ಜಿಲ್ಲೆಯಾದ್ಯಂತ 204 ಮನೆಗಳಿಗೆ ಹಾನಿಯಾಗಿದೆ. ಬಹುತೇಕ ಮನೆಗಳು ಇದರಲ್ಲಿ ಹಳತಾಗಿದ್ದವು. ಆದರೆ, ಅವುಗಳು ಅವರ ಬದುಕಿಗೆ ಆಸರೆಯಾಗಿದ್ದವು. ಬಿಟ್ಟೂ ಬಿಡದೆ ಮಳೆ ಸುರಿದು ಗೋಡೆಗಳು ನೆನೆದು ಅಂತಿಮವಾಗಿ ಧರೆಗುರುಳಿವೆ. ಅವರಿಗಿದ್ದ ನೆರಳು ಇಲ್ಲವಾಗಿದೆ.</p>.<p>ಮಳೆಗೆ ಬಸವಕಲ್ಯಾಣ ತಾಲ್ಲೂಕಿನಲ್ಲಿ ಹೆಚ್ಚು ಹಾನಿಯಾಗಿದ್ದು, 50 ಮನೆಗಳು ಬಿದ್ದಿವೆ. ನಂತರದ ಸ್ಥಾನ ಔರಾದ್, ಬೀದರ್, ಭಾಲ್ಕಿ ಹಾಗೂ ಹುಮನಾಬಾದ್ ತಾಲ್ಲೂಕಿನದ್ದು. ಔರಾದ್ನಲ್ಲಿ 36, ಬೀದರ್ನಲ್ಲಿ 26, ಭಾಲ್ಕಿಯಲ್ಲಿ 24, ಹುಮನಾಬಾದ್ನಲ್ಲಿ 24, ಚಿಟಗುಪ್ಪದಲ್ಲಿ 21 ಮನೆಗಳಿಗೆ ಹಾನಿ ಉಂಟಾಗಿದೆ. ಕಮಲನಗರ ಹಾಗೂ ಹುಲಸೂರಿನಲ್ಲಿ ಕ್ರಮವಾಗಿ 13 ಮತ್ತು 11 ಮನೆಗಳಿಗೆ ಹಾನಿಯಾಗಿದೆ.</p>.<p>ಇನ್ನಷ್ಟೇ ಸರ್ವೇ ನಡೆಯುತ್ತಿದ್ದು, ನಿಖರ ಮಾಹಿತಿ ಸಿಗಬೇಕಿದೆ. ಮನೆ ಹಾಗೂ ಅದರ ಪರಿಹಾರಕ್ಕಾಗಿ ಮಾಹಿತಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.</p>.<h2>ಬೆಳೆಗೂ ಹಾನಿ:</h2>.<p>ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೂ ಮಳೆ ಪೆಟ್ಟು ಕೊಟ್ಟಿದೆ. ಅದರಲ್ಲೂ ತಗ್ಗು ಪ್ರದೇಶದಲ್ಲಿರುವ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ಸಮಸ್ಯೆ ಉಂಟಾಗಿದೆ.</p>.<p>ತಡವಾಗಿ ಬಿತ್ತನೆ ಮಾಡಿದ ರೈತರ ಹೊಲಗಳಲ್ಲಿ ತೇವಾಂಶ ಹೆಚ್ಚಾಗಿ ಬೀಜಗಳು ಕೊಳೆತು ಹೋಗಿವೆ. ಈಗಷ್ಟೇ ಮೇಲೆ ಎದ್ದಿದ್ದ ಸಸಿಗಳು ಕೂಡ ಹಾಳಾಗಿವೆ. ಇದು ರೈತರ ಚಿಂತೆ ಹೆಚ್ಚಿಸಿದೆ. ಆದರೆ, ಹೆಚ್ಚಿನ ಭಾಗಗಳಲ್ಲಿ ಮಳೆಗೆ ಬೆಳೆಗಳು ನಳನಳಿಸುತ್ತಿವೆ. ಈ ಭಾಗದ ರೈತರು ಸಂತಸದಲ್ಲಿದ್ದಾರೆ.</p>.<p>‘ಅತಿಯಾದ ತೇವಾಂಶದಿಂದ ಬೆಳೆಗಳ ಬೇರುಗಳ ಉಸಿರಾಟದಲ್ಲಿ ವ್ಯತ್ಯಯವಾಗಿ ಹಾಗೂ ಪೋಷಕಾಂಶಗಳು ಅತಿಯಾಗಿ ಸೋರಿಕೆಯಿಂದಾಗಿ ಎಲೆಗಳು ಹಳದಿಯಾಗುವ ಲಕ್ಷಗಳು ಕಂಡು ಬರುತ್ತದೆ. ಹೊಲದಲ್ಲಿ ನೀರು ನಿಂತರೆ ಇದರ ನಿರ್ವಹಣೆಗಾಗಿ ರೈತರು ಪ್ರತಿ 10 ಮೀಟರ್ ಅಂತರದಲ್ಲಿ ಒಂದರಂತೆ 1 ಅಡಿ ಆಳದ ನೇಗಿಲ ಸಾಲು ತೆಗೆದು ಬಸಿ ಕಾಲುವೆಯಿಂದ ನೀರು ಹೊರ ಹಾಕಬೇಕು. ನೀರಿನಲ್ಲಿ ಕರಗುವ 19:19:19 ದ್ರಾವಣವನ್ನು 10 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗಳಿಗೆ ಸಿಂಪಡಿಸಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ಮಾಡಿದ್ದಾರೆ.</p>.<p>ಉತ್ತಮ ಮಳೆಗೆ ಜಿಲ್ಲೆಯ ಬಹುತೇಕ ಕೆರೆ, ಕಟ್ಟೆ, ಹಳ್ಳ, ಕೊಳ್ಳ ಹಾಗೂ ಚೆಕ್ ಡ್ಯಾಂಗಳು ತುಂಬಿವೆ. ಅಂತರ್ಜಲ ಹೆಚ್ಚಾಗಿದ್ದು, ಬಾವಿಗಳು ಕೂಡ ಭರ್ತಿಯಾಗಿವೆ. ಜಿಲ್ಲೆಯ ಜೀವನಾಡಿ ಕಾರಂಜಾ ಜಲಾಶಯಕ್ಕೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>