<p><strong>ಔರಾದ್:</strong> ಪಟ್ಟಣದ ಸಂತೋಷ ಕಾಲೊನಿಯ ರಸ್ತೆಯು ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.</p>.<p>ಪಟ್ಟಣದ ಸಂತೋಷ ಕಾಲೊನಿಯಲ್ಲಿರುವ ಅನೇಕ ಮನೆಗಳಿಗೆ ತೆರಳು ಕನಿಷ್ಠ ಕಚ್ಚಾ ರಸ್ತೆಯಿಲ್ಲ. ಹೀಗಾಗಿ ಈ ಕಾಲೊನಿ ಮಳೆಯಾದರೆ ಕೆಸರಿನಲ್ಲಿಯೇ ಓಡಾಡುಂತಾಗಿದೆ’ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.</p>.<p>‘ಈಗ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ. ಮೊಳಕಾಲುದ್ದ ಕೆಸರು ಆಗಿದೆ. ಹುಲ್ಲುಮುಳ್ಳಿನ ಪೊದೆ ಬೆಳೆದಿದೆ. ಇದರಿಂದ ಹಾವು, ಚೇಳಿನ ಭೀತಿ ಎದುರಾಗಿದೆ. ಮಕ್ಕಳು, ಮಹಿಳೆಯರು ಹೊರ ಬರಲು ಹೆದರುತ್ತಿದ್ದಾರೆ’ ಎಂದು ಸಂತೋಷ ಕಾಲೊನಿ ನಿವಾಸಿ ರಮೇಶ ಬೀಗಾಂವಕರ ತಿಳಿಸಿದ್ದಾರೆ.</p>.<p>‘ಸಂತೋಷ ಕಾಲೊನಿಯ ಕಸ್ತೂರೆ ಆಸ್ಪತ್ರೆ ಹಿಂದುಗಡೆ ಅನೇಕ ಮನೆಗಳಿವೆ. ಪ್ರತಿ ವರ್ಷ ಮನೆ ತೆರಿಗೆ ಕಟ್ಟುತ್ತೇವೆ. ಆದರೆ ಕನಿಷ್ಠ ಕಚ್ಚಾ ರಸ್ತೆ ಮಾಡಿಕೊಡುವಂತೆ ಅನೇಕ ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ದೂರಿದ್ದಾರೆ.</p>.<p>‘ನಮ್ಮದು ಅಧಿಕೃತ ಬಡಾವಣೆ ಇದೆ. ಹೀಗಾಗಿ ಇಲ್ಲಿ ಕಚ್ಚಾ ರಸ್ತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ನಿವಾಸಿ ಮಾರುತಿ ಟೊಂಪೆ, ಯಶವಂತ ಬೀಗಾಂವಕರ, ಮಕ್ಬುಲ್ಸಾಬ್, ಕಿಶನ್ ಸಾಯಪ್ಪ, ರಫೀಕ್, ನಿಲೇಶ್ ಸೇರಿದಂತೆ ಅನೇಕರು ಸೇರಿ ಪಟ್ಟಣ ಪಂಚಾಯಿತಿಗೆ ಮನವಿಪತ್ರ ಸಲ್ಲಿಸಿದ್ದಾರೆ.</p>.<p>‘ಸಂತೋಷ ಕಾಲೊನಿ ಜನ ರಸ್ತೆ ಮಾಡಿಕೊಡಲು ಮನವಿ ಕೊಟ್ಟಿದ್ದಾರೆ. ಸೋಮವಾರ ಹೋಗಿ ಪರಿಶೀಲನೆ ಮಾಡಿ ನಡೆದಾಡಲು ಅನುವು ಆಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ಪಟ್ಟಣದ ಸಂತೋಷ ಕಾಲೊನಿಯ ರಸ್ತೆಯು ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.</p>.<p>ಪಟ್ಟಣದ ಸಂತೋಷ ಕಾಲೊನಿಯಲ್ಲಿರುವ ಅನೇಕ ಮನೆಗಳಿಗೆ ತೆರಳು ಕನಿಷ್ಠ ಕಚ್ಚಾ ರಸ್ತೆಯಿಲ್ಲ. ಹೀಗಾಗಿ ಈ ಕಾಲೊನಿ ಮಳೆಯಾದರೆ ಕೆಸರಿನಲ್ಲಿಯೇ ಓಡಾಡುಂತಾಗಿದೆ’ ಎಂದು ನಿವಾಸಿಗಳು ಗೋಳು ತೋಡಿಕೊಂಡಿದ್ದಾರೆ.</p>.<p>‘ಈಗ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಮನೆಯಿಂದ ಹೊರಗೆ ಹೋಗಲು ಆಗುತ್ತಿಲ್ಲ. ಮೊಳಕಾಲುದ್ದ ಕೆಸರು ಆಗಿದೆ. ಹುಲ್ಲುಮುಳ್ಳಿನ ಪೊದೆ ಬೆಳೆದಿದೆ. ಇದರಿಂದ ಹಾವು, ಚೇಳಿನ ಭೀತಿ ಎದುರಾಗಿದೆ. ಮಕ್ಕಳು, ಮಹಿಳೆಯರು ಹೊರ ಬರಲು ಹೆದರುತ್ತಿದ್ದಾರೆ’ ಎಂದು ಸಂತೋಷ ಕಾಲೊನಿ ನಿವಾಸಿ ರಮೇಶ ಬೀಗಾಂವಕರ ತಿಳಿಸಿದ್ದಾರೆ.</p>.<p>‘ಸಂತೋಷ ಕಾಲೊನಿಯ ಕಸ್ತೂರೆ ಆಸ್ಪತ್ರೆ ಹಿಂದುಗಡೆ ಅನೇಕ ಮನೆಗಳಿವೆ. ಪ್ರತಿ ವರ್ಷ ಮನೆ ತೆರಿಗೆ ಕಟ್ಟುತ್ತೇವೆ. ಆದರೆ ಕನಿಷ್ಠ ಕಚ್ಚಾ ರಸ್ತೆ ಮಾಡಿಕೊಡುವಂತೆ ಅನೇಕ ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ದೂರಿದ್ದಾರೆ.</p>.<p>‘ನಮ್ಮದು ಅಧಿಕೃತ ಬಡಾವಣೆ ಇದೆ. ಹೀಗಾಗಿ ಇಲ್ಲಿ ಕಚ್ಚಾ ರಸ್ತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ನಿವಾಸಿ ಮಾರುತಿ ಟೊಂಪೆ, ಯಶವಂತ ಬೀಗಾಂವಕರ, ಮಕ್ಬುಲ್ಸಾಬ್, ಕಿಶನ್ ಸಾಯಪ್ಪ, ರಫೀಕ್, ನಿಲೇಶ್ ಸೇರಿದಂತೆ ಅನೇಕರು ಸೇರಿ ಪಟ್ಟಣ ಪಂಚಾಯಿತಿಗೆ ಮನವಿಪತ್ರ ಸಲ್ಲಿಸಿದ್ದಾರೆ.</p>.<p>‘ಸಂತೋಷ ಕಾಲೊನಿ ಜನ ರಸ್ತೆ ಮಾಡಿಕೊಡಲು ಮನವಿ ಕೊಟ್ಟಿದ್ದಾರೆ. ಸೋಮವಾರ ಹೋಗಿ ಪರಿಶೀಲನೆ ಮಾಡಿ ನಡೆದಾಡಲು ಅನುವು ಆಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>