<p><strong>ಬೀದರ್:</strong> ಎರಡು ದಿನಗಳ ಜಿಲ್ಲಾಮಟ್ಟದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶಕ್ಕೆ ನಗರದಲ್ಲಿ ಮಂಗಳವಾರ ತೆರೆ ಬಿತ್ತು.</p>.<p>ಅನುವಾದಕಿ ಶುಭಾ ದೊಟಿಹಾಳ್ ಮಾತನಾಡಿ,‘ಸಂಸ್ಕೃತಿಯನ್ನು ಉಳಿಸುವಲ್ಲಿ ತಾಯಿಯ ಪಾತ್ರ ಮಹತ್ವವಾದುದು. ಪ್ರಸ್ತುತ ಸಮಾಜದಲ್ಲಿ ಸೀತೆ, ಊರ್ಮಿಳೆ ಹಾಗೂ ಮಾಂಡಲಿ ಅವರಂಥ ಮಹಿಳೆಯರ ಅವಶ್ಯಕತೆ ಇದೆ’ ಎಂದು ಹೇಳಿದರು.</p>.<p>ಪ್ರತಿಯೊಬ್ಬ ಪುರುಷರಲ್ಲಿ ಸಂಸ್ಕೃತಿ ಬೆಳೆಸುವ ಮಹತ್ವದ ಜವಾಬ್ದಾರಿ ಮಹಿಳೆಯರು ಹೊತ್ತುಕೊಳ್ಳಬೇಕು. ತಾಳ್ಮೆಯ ಪ್ರತೀಕವಾದ ಶಾರದಾ ಮಾತೆಯ ಉದಾಹರಣೆಯೊಂದಿಗೆ ಮಹಿಳೆಯರು ತಾಳ್ಮೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಯಶ್ರೀ ಪ್ರಭಾ,‘ಮಹಿಳೆಯರು ಪ್ರಬಲರಾಗಬೇಕು. ಸಮಾಜದಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳ ವಿರುದ್ಧ ಗುಡುಗಬೇಕು’ ಎಂದು ತಿಳಿಸಿದರು.</p>.<p>ನಾಟಿ ವೈದ್ಯೆ ಮಂಗಳಾಬಾಯಿ ಸಿದ್ರಾಮಪ್ಪಾ ಮಡಿವಾಳ ಅವರಿಗೆ ಸೇವಾ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. </p>.<p>ಮಾರುತಿರಾವ ಪಂಚಭಾಯಿ, ಶೀಲಾ ಖೂಬಾ, ನೀತು ಬೆಲ್ದಾಳೆ, ಸುಷ್ಮಾ ಪಾಟೀಲ, ಅರುಣಾ ರವಿಸ್ವಾಮಿ, ಪುಣ್ಯವತಿ ವಿಸಾಜಿ, ಜಯಶ್ರೀ ಮಣಗೆ, ರತ್ನಾ ಪಾಟೀಲ, ಭಗಿನಿ ದಾನೇಶ್ವರಿ ಮಡಿವಾಳ, ಅರ್ಚನಾ ಸಿರಗೆರೆ ಹಾಗೂ ಶ್ರೇಯಾ ಮಹೇಂದ್ರಕರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಎರಡು ದಿನಗಳ ಜಿಲ್ಲಾಮಟ್ಟದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶಕ್ಕೆ ನಗರದಲ್ಲಿ ಮಂಗಳವಾರ ತೆರೆ ಬಿತ್ತು.</p>.<p>ಅನುವಾದಕಿ ಶುಭಾ ದೊಟಿಹಾಳ್ ಮಾತನಾಡಿ,‘ಸಂಸ್ಕೃತಿಯನ್ನು ಉಳಿಸುವಲ್ಲಿ ತಾಯಿಯ ಪಾತ್ರ ಮಹತ್ವವಾದುದು. ಪ್ರಸ್ತುತ ಸಮಾಜದಲ್ಲಿ ಸೀತೆ, ಊರ್ಮಿಳೆ ಹಾಗೂ ಮಾಂಡಲಿ ಅವರಂಥ ಮಹಿಳೆಯರ ಅವಶ್ಯಕತೆ ಇದೆ’ ಎಂದು ಹೇಳಿದರು.</p>.<p>ಪ್ರತಿಯೊಬ್ಬ ಪುರುಷರಲ್ಲಿ ಸಂಸ್ಕೃತಿ ಬೆಳೆಸುವ ಮಹತ್ವದ ಜವಾಬ್ದಾರಿ ಮಹಿಳೆಯರು ಹೊತ್ತುಕೊಳ್ಳಬೇಕು. ತಾಳ್ಮೆಯ ಪ್ರತೀಕವಾದ ಶಾರದಾ ಮಾತೆಯ ಉದಾಹರಣೆಯೊಂದಿಗೆ ಮಹಿಳೆಯರು ತಾಳ್ಮೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.</p>.<p>ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಜಯಶ್ರೀ ಪ್ರಭಾ,‘ಮಹಿಳೆಯರು ಪ್ರಬಲರಾಗಬೇಕು. ಸಮಾಜದಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳ ವಿರುದ್ಧ ಗುಡುಗಬೇಕು’ ಎಂದು ತಿಳಿಸಿದರು.</p>.<p>ನಾಟಿ ವೈದ್ಯೆ ಮಂಗಳಾಬಾಯಿ ಸಿದ್ರಾಮಪ್ಪಾ ಮಡಿವಾಳ ಅವರಿಗೆ ಸೇವಾ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. </p>.<p>ಮಾರುತಿರಾವ ಪಂಚಭಾಯಿ, ಶೀಲಾ ಖೂಬಾ, ನೀತು ಬೆಲ್ದಾಳೆ, ಸುಷ್ಮಾ ಪಾಟೀಲ, ಅರುಣಾ ರವಿಸ್ವಾಮಿ, ಪುಣ್ಯವತಿ ವಿಸಾಜಿ, ಜಯಶ್ರೀ ಮಣಗೆ, ರತ್ನಾ ಪಾಟೀಲ, ಭಗಿನಿ ದಾನೇಶ್ವರಿ ಮಡಿವಾಳ, ಅರ್ಚನಾ ಸಿರಗೆರೆ ಹಾಗೂ ಶ್ರೇಯಾ ಮಹೇಂದ್ರಕರ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>