<p><strong>ಯಳಂದೂರು</strong>: ಆಷಾಢ ಮಾಸದ ಮೂರನೇ ಶುಕ್ರವಾರ ಮತ್ತು ಶನಿವಾರದ ವಿಶೇಷ ಪೂಜೆ, ಚಾಮುಂಡೇಶ್ವರಿ ವರ್ಧಂತಿ ಉತ್ಸವದ ಅಂಗವಾಗಿ ಭಕ್ತರು ವಿವಿಧ ದೇಗುಲಗಳಿಗೆ ಭೇಟಿ ನೀಡಿ ಅಲಂಕೃತ ದೇವಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.</p>.<p>ಬಿಳಿಗಿರಿಬೆಟ್ಟದ ಅಮ್ಮನವರ ದೇವಳ ಮತ್ತು ರಂಗನಾಥಸ್ವಾಮಿ ದೇವಾಲಯ, ಪಟ್ಟಣದ ವೆಂಕಟೇಶ್ವರ ದೇಗುಲದ ಸಪ್ತಮಾತೃಕೆ, ಮಹಾಲಕ್ಷ್ಮಿ ಮತ್ತು ಅಂಬಳೆ ಚಾಮುಂಡೇಶ್ವರಿ ದೇವಳದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ಜರುಗಿದವು.</p>.<p>ಚಾಮುಂಡೇಶ್ವರಿ ದೇವಿಗೆ ಹೂವಿನ ಅಲಂಕಾರ ಮಾಡಿ, ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಮಹಾಲಕ್ಷ್ಮಿ ದೇವಿಗೆ ಕುಂಕುಮದ ಅಲಂಕಾರ, ವೆಂಕಟೇಶ್ವರನಿಗೆ ತುಳಸಿ ಮತ್ತು ಹೂವಿನ ಹಾರಗಳ ಸಿಂಗಾರ ಗಮನ ಸೆಳೆಯಿತು.</p>.<p>ಕೆಸ್ತೂರು ಗ್ರಾಮದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಕಂಡಾಯ ಉತ್ಸವ ನಡೆಯಿತು. ಗ್ರಾಮಸ್ಥರು ಹೂ, ಹಣ್ಣು, ಹಾರ ಸಮರ್ಪಿಸಿದರು. ಸಂಜೆ ಮೆರವಣಿಗೆ ನಡೆಸಿ ತೀರ್ಥ ಪ್ರಸಾದ ವಿತರಿಸಲಾಯಿತು.</p>.<p>‘ಬೆಳಿಗ್ಗೆ ಮಹಾ ಮಂಗಳಾರತಿ ಮಾಡಿ, ಸಂಜೆ ವಿಶೇಷ ಅಭಿಷೇಕ ಪೂಜೆ ನೆರವೇರಿಸಲಾಯಿತು. ನೂರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು’ ಎಂದು ಬಿಳಿಗಿರಿಬೆಟ್ಟದ ಅರ್ಚಕ ರವಿಕುಮಾರ್ ತಿಳಿಸಿದರು.</p>.<p>‘ಪ್ರತಿವರ್ಷ ಆಷಾಢ ಮಾಸದಲ್ಲಿ ದೇವಿಯ ದರ್ಶನ ಪಡೆಯುತ್ತೇವೆ, ದೇವರಿಗೆ ಧೂಪ, ದೀಪ ಬೆಳಗಿ ಹರಕೆ ತೀರಿಸುತ್ತೇವೆ. ಇದರಿಂದ ದೇವರು ಸನ್ಮಂಗಳ ಕರುಣಿಸುತ್ತಾನೆ’ ಎಂದು ಭಕ್ತ ಸಂಗಮೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ಆಷಾಢ ಮಾಸದ ಮೂರನೇ ಶುಕ್ರವಾರ ಮತ್ತು ಶನಿವಾರದ ವಿಶೇಷ ಪೂಜೆ, ಚಾಮುಂಡೇಶ್ವರಿ ವರ್ಧಂತಿ ಉತ್ಸವದ ಅಂಗವಾಗಿ ಭಕ್ತರು ವಿವಿಧ ದೇಗುಲಗಳಿಗೆ ಭೇಟಿ ನೀಡಿ ಅಲಂಕೃತ ದೇವಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.</p>.<p>ಬಿಳಿಗಿರಿಬೆಟ್ಟದ ಅಮ್ಮನವರ ದೇವಳ ಮತ್ತು ರಂಗನಾಥಸ್ವಾಮಿ ದೇವಾಲಯ, ಪಟ್ಟಣದ ವೆಂಕಟೇಶ್ವರ ದೇಗುಲದ ಸಪ್ತಮಾತೃಕೆ, ಮಹಾಲಕ್ಷ್ಮಿ ಮತ್ತು ಅಂಬಳೆ ಚಾಮುಂಡೇಶ್ವರಿ ದೇವಳದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ಜರುಗಿದವು.</p>.<p>ಚಾಮುಂಡೇಶ್ವರಿ ದೇವಿಗೆ ಹೂವಿನ ಅಲಂಕಾರ ಮಾಡಿ, ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಮಹಾಲಕ್ಷ್ಮಿ ದೇವಿಗೆ ಕುಂಕುಮದ ಅಲಂಕಾರ, ವೆಂಕಟೇಶ್ವರನಿಗೆ ತುಳಸಿ ಮತ್ತು ಹೂವಿನ ಹಾರಗಳ ಸಿಂಗಾರ ಗಮನ ಸೆಳೆಯಿತು.</p>.<p>ಕೆಸ್ತೂರು ಗ್ರಾಮದಲ್ಲಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ ಕಂಡಾಯ ಉತ್ಸವ ನಡೆಯಿತು. ಗ್ರಾಮಸ್ಥರು ಹೂ, ಹಣ್ಣು, ಹಾರ ಸಮರ್ಪಿಸಿದರು. ಸಂಜೆ ಮೆರವಣಿಗೆ ನಡೆಸಿ ತೀರ್ಥ ಪ್ರಸಾದ ವಿತರಿಸಲಾಯಿತು.</p>.<p>‘ಬೆಳಿಗ್ಗೆ ಮಹಾ ಮಂಗಳಾರತಿ ಮಾಡಿ, ಸಂಜೆ ವಿಶೇಷ ಅಭಿಷೇಕ ಪೂಜೆ ನೆರವೇರಿಸಲಾಯಿತು. ನೂರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು’ ಎಂದು ಬಿಳಿಗಿರಿಬೆಟ್ಟದ ಅರ್ಚಕ ರವಿಕುಮಾರ್ ತಿಳಿಸಿದರು.</p>.<p>‘ಪ್ರತಿವರ್ಷ ಆಷಾಢ ಮಾಸದಲ್ಲಿ ದೇವಿಯ ದರ್ಶನ ಪಡೆಯುತ್ತೇವೆ, ದೇವರಿಗೆ ಧೂಪ, ದೀಪ ಬೆಳಗಿ ಹರಕೆ ತೀರಿಸುತ್ತೇವೆ. ಇದರಿಂದ ದೇವರು ಸನ್ಮಂಗಳ ಕರುಣಿಸುತ್ತಾನೆ’ ಎಂದು ಭಕ್ತ ಸಂಗಮೇಶ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>