<p><strong>ಚಾಮರಾಜನಗರ</strong>: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೇವಾಲಯದಲ್ಲಿ ಸುಳ್ಳು ವಂಶವೃಕ್ಷದ ದಾಖಲೆ ನೀಡಿ ಕಟ್ಟಿಗೆ ಹುದ್ದೆ (ಪಂಜು ಹಿಡಿಯುವ) ಪಡೆದಿದ್ದ ಬಿ.ಆರ್.ರಂಗನಾಥ ಅವರನ್ನು ಕೆಲಸದಿಂದ ವಜಾಗೊಳಿಸಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಹೇಶ್ ಅವರು ಆದೇಶ ಹೊರಡಿಸಿದ್ದಾರೆ. </p>.<p>ಕಳೆದ ಡಿ.13ರಂದು ಈ ಆದೇಶ ಹೊರಡಿಸಲಾಗಿದೆ. ರಂಗನಾಥ ಅವರು 2010ರ ಅಕ್ಟೋಬರ್ನಲ್ಲಿ ಕಟ್ಟಿಗೆ ಹುದ್ದೆಗೆ ನೇಮಕಗೊಂಡಿದ್ದರು.</p>.<p>ವಂಶಪಾರಂಪರ್ಯವಾಗಿ ಸಿಗುವ ಈ ಹುದ್ದೆಯನ್ನು ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿ ಪಡೆದಿದ್ದಾರೆ ಎಂದು ರತ್ನಮ್ಮ ಎಂಬುವವರು ದೂರು ನೀಡಿದ್ದರು. ಜಿಲ್ಲಾಡಳಿತ ಮಾತ್ರವಲ್ಲದೇ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. </p>.<p>ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿರುವುದು ತನಿಖೆಯಿಂದ ಸಾಬೀತಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ನೀಡಿದ ವರದಿಯ ಆಧಾರದಲ್ಲಿ ಆಡಳಿತಾಧಿಕಾರಿಯವರು ರಂಗನಾಥ ಅವರನ್ನು ಸೇವೆಯಿಂದ ವಜಾ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ದೇವಾಲಯದಲ್ಲಿ ಸುಳ್ಳು ವಂಶವೃಕ್ಷದ ದಾಖಲೆ ನೀಡಿ ಕಟ್ಟಿಗೆ ಹುದ್ದೆ (ಪಂಜು ಹಿಡಿಯುವ) ಪಡೆದಿದ್ದ ಬಿ.ಆರ್.ರಂಗನಾಥ ಅವರನ್ನು ಕೆಲಸದಿಂದ ವಜಾಗೊಳಿಸಿ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಹೇಶ್ ಅವರು ಆದೇಶ ಹೊರಡಿಸಿದ್ದಾರೆ. </p>.<p>ಕಳೆದ ಡಿ.13ರಂದು ಈ ಆದೇಶ ಹೊರಡಿಸಲಾಗಿದೆ. ರಂಗನಾಥ ಅವರು 2010ರ ಅಕ್ಟೋಬರ್ನಲ್ಲಿ ಕಟ್ಟಿಗೆ ಹುದ್ದೆಗೆ ನೇಮಕಗೊಂಡಿದ್ದರು.</p>.<p>ವಂಶಪಾರಂಪರ್ಯವಾಗಿ ಸಿಗುವ ಈ ಹುದ್ದೆಯನ್ನು ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿ ಪಡೆದಿದ್ದಾರೆ ಎಂದು ರತ್ನಮ್ಮ ಎಂಬುವವರು ದೂರು ನೀಡಿದ್ದರು. ಜಿಲ್ಲಾಡಳಿತ ಮಾತ್ರವಲ್ಲದೇ ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. </p>.<p>ರಂಗನಾಥ ಅವರು ಸುಳ್ಳು ವಂಶವೃಕ್ಷ ನೀಡಿರುವುದು ತನಿಖೆಯಿಂದ ಸಾಬೀತಾಗಿತ್ತು. ದೇವಾಲಯದ ಕಾರ್ಯನಿರ್ವಾಹಕ ನೀಡಿದ ವರದಿಯ ಆಧಾರದಲ್ಲಿ ಆಡಳಿತಾಧಿಕಾರಿಯವರು ರಂಗನಾಥ ಅವರನ್ನು ಸೇವೆಯಿಂದ ವಜಾ ಮಾಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>