ಡಾ.ಬಿ.ಆರ್.ಅಂಬೇಡ್ಕರ್, ಡಾ.ರಾಜ್ಕುಮಾರ್ ರಸ್ತೆಯಲ್ಲಿಲ್ಲ ಸಮರ್ಪಕ ಚರಂಡಿ ವ್ಯವಸ್ಥೆ
ಅವಿನ್ ಪ್ರಕಾಶ್ ವಿ.
Published : 11 ಡಿಸೆಂಬರ್ 2023, 8:23 IST
Last Updated : 11 ಡಿಸೆಂಬರ್ 2023, 8:23 IST
ಫಾಲೋ ಮಾಡಿ
Comments
ಅಂಬೇಡ್ಕರ್ ರಸ್ತೆಯ ಚರಂಡಿಯಲ್ಲಿ ನೀರು ಕಟ್ಟಿ ನಿಂತಿರುವುದು
ತೆರೆದುಕೊಂಡಿರುವ ಚರಂಡಿ
ಕೊಳ್ಳೇಗಾಲದ್ದು ಹೆಸರಿಗಷ್ಟೇ ನಗರಸಭೆ. ಇಲ್ಲಿ ಯಾವ ಕೆಲಸವೂ ಸಹ ಆಗುವುದಿಲ್ಲ. ಗ್ರಾಮೀಣ ಭಾಗದಲ್ಲಿಯೇ ರಸ್ತೆ ಚರಂಡಿಗಳು ಇಲ್ಲಿಗಿಂತ ಉತ್ತಮವಾಗಿವೆ
. ಪ್ರಸನ್ನ ಅಣಗಳ್ಳಿ
- ಚರಂಡಿಗಳು ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ವ್ಯವಸ್ಥಿತಿವಾಗಿ ನಿರ್ಮಿಸಲಾಗುವುದು. ಸದ್ಯ ಸ್ವಚ್ಛತೆಗೆ ಗಮನ ಹರಿಸಲಾಗುವುದು
ಮಹೇಶ್ ಉಪವಿಭಾಗಾಧಿಕಾರಿ ಮತ್ತು ನಗರಸಭೆ ಪ್ರಭಾರ ಆಯುಕ್ತ
ಹೊಸ ಚರಂಡಿ ನಿರ್ಮಿಸಿ...
ಎರಡೂ ರಸ್ತೆಗಳ ಎರಡೂ ಬದಿಗಳಲ್ಲಿ ವ್ಯವಸ್ಥಿತವಾಗಿ ಚರಂಡಿ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ. ‘ಇಲ್ಲಿರುವ ಅಂಗಡಿಗಳಿಂದ ನಗರಸಭೆ ಹೆಚ್ಚಿನ ಆದಾಯ ಗಳಿಸುತ್ತದೆ. ಆದರೂ ನಗರಸಭೆ ನಿರ್ಲಕ್ಷ ಮಾಡಿದೆ. ಎರಡೂ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. 15 ವರ್ಷಗಳಿಂದಲೂ ಜನರು ಈ ಒತ್ತಾಯ ಮಾಡುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು ಅಧಿಕಾರಿಗಳು ಕಾಳಜಿ ವಹಿಸಿಲ್ಲ. ರಸ್ತೆ ಚರಂಡಿಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಮುಖಂಡ ರಾಜು ಎಚ್ಚರಿಸಿದರು.