<p><strong>ಕೊಳ್ಳೇಗಾಲ/ಮಹದೇಶ್ವರ ಬೆಟ್ಟ</strong>: ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾನುವಾರ ಮಧ್ಯಾಹ್ನ ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ.</p><p>ಮಹದೇಶ್ವರ ಬೆಟ್ಟದಲ್ಲಿ ಸತತ ಎರಡು ಗಂಟೆಗಳ ಕಾಲ ಎಡೆಬಿಡದೆ ಸುರಿದಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ನಾಲ್ಕು ಗಂಟೆಯವರೆಗೆ ಸುರಿಯಿತು. ನಂತರವೂ ಇಳಿಸಂಜೆಯವರೆಗೆ ಸೋನೆ ಮಳೆಯಾಯಿತು.</p><p>ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಯ 108 ಅಡಿ ಪ್ರತಿಮೆ ಇರುವ ಜಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಲಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ತಡೆಗೋಡೆ ಸಮೀಪ ನೀರು ಹರಿದು, ಕೆಳಗಡೆ ಇರುವ ಹಲವಾರು ಮನೆಗಳಿಗೆ ನುಗ್ಗಿತು. ಯಾವುದೇ ಅನಾಹುತವಾಗಿಲ್ಲ.</p><p>ಕೊಳ್ಳೇಗಾಲ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಮಧ್ಯಾಹ್ನ 2.30ಗೆ ಆರಂಭವಾದ ಮಳೆ 3.30ವರೆಗೂ ಧಾರಾಕಾರವಾಗಿ ಸುರಿಯಿತು. ನಂಜನಕಟ್ಟೆಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತು. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಲ್ಲೂ ನೀರು ಹರಿದು ನಿವಾಸಿಗಳು ಪರದಾಡಿದರು.</p><p>ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿಯಿತು. 10 ದಿನಗಳಿಂದ ಮಳೆಯಾಗುತ್ತಿದ್ದರೂ, ತಾಲ್ಲೂಕಿನಲ್ಲಿ ಈ ಪ್ರಮಾಣದ ಮಳೆಯಾಗಿದ್ದು ಇದೇ ಮೊದಲು.</p><p>ಚರಂಡಿಗಳಲ್ಲಿ ನೀರು ಉಕ್ಕೇರಿತು. ರಸ್ತೆ ಹೊಂಡ ಗುಂಡಿಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಕಷ್ಟವಾಯಿತು. ಶಾಲಾ ಕಾಲೇಜುಗಳ ಆಟದ ಮೈದಾನಗಳಲ್ಲಿ ನೀರು ತುಂಬಿತು.</p><p>ಡಾ.ರಾಜಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆಗಳು ಜಲಾವೃತವಾದವು. ಕೆಲವೆಡೆ ಮರದ ಕೊಂಬೆಗಳು ಮುರಿದುಬಿದ್ದಿವೆ. ಇನ್ನು ಕೆಲವು ಕಡೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿದೆ.</p><p>ನಗರದ ಮಹದೇಶ್ವರ ಕಾಲೇಜು ಸಮೀಪದ ರಸ್ತೆ ನೀರಿನಿಂದ ಜಲಾವೃತವಾಗಿದ್ದು ಬಡಾವಣೆಯ ನಿವಾಸಿಗಳು ಸಂಚರಿಸಲು ಕಿರಿಕಿರಿ ಅನುಭವಿಸಿದರು. ಮಹದೇಶ್ವರ ಕಾಲೇಜು ಕ್ರೀಡಾಂಗಣ ಜಲಾವೃತವಾಗಿತ್ತು.</p><p>ಈ ಕ್ರೀಡಾಂಗಣದಲ್ಲಿ ಸೋಮವಾರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಳೆಯಿಂದಾಗಿ ಕ್ರೀಡಾಂಗಣ ಒದ್ದೆಯಾಗಿದ್ದು, ಟೂರ್ನಿ ಸ್ಥಗಿತಗೊಂಡಿದೆ.</p>.<p>ತಾಲ್ಲೂಕಿನ ಸತ್ತೇಗಾಲ, ಜಾಗೇರಿ, ಜಕ್ಕಳಿ, ಕೆಂಪನಪಾಳ್ಯ, ಲಕ್ಕರಸನ ಪಾಳ್ಯ, ಟಿಸಿ ಹುಂಡಿ, ಲಿಂಗನಪುರ, ಮಧುವನಹಳ್ಳಿ , ದೊಡ್ಡಿಂದುವಾಡಿ, ಮತ್ತಿಪುರ , ಚಿಕ್ಕಲ್ಲೂರು, ನರಿಪುರ, ಸರಗೂರು, ಗುಂಡೆಗಾಲ, ಉತ್ತಂಬಳ್ಳಿ, ಗೊಬ್ಬಳಿಪುರ, ಹಾಲಳ್ಳಿ, ಟಗರಪುರ, ಚಿಲುಕವಾಡಿ, ಕುಂತೂರು, ಸುರಪುರ, ಕುಣಗಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದೆ.</p><p><strong>ಯಳಂದೂರು– ಸಾಧಾರಣ ಮಳೆ:</strong> ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಾಮಾನ್ಯ ಮಳೆಯಾಗಿದೆ. ಮಧ್ಯಾಹ್ನ ಕಾಡಂಚಿನ ಪ್ರದೇಶಗಳಲ್ಲಿ ದಿನವಿಡೀ ಮೋಡ ಮುಚ್ಚಿದ ವಾತಾವರಣ ಇತ್ತು. ಮಧ್ಯಾಹ್ನ ತುಂತರು ಮಳೆ ಎರಡು ಗಂಟೆಗಳ ಕಾಲ ಸುರಿಯಿತು. ಕೆಸ್ತೂರು, ಹೊನ್ನೂರು ಸುತ್ತಮುತ್ತಲೂ ಮಳೆಯಾಗಿದೆ.</p><p>ಪಟ್ಟಣದಲ್ಲೂ ದಿನವಿಡೀ ಬಿಸಿಲು ಮತ್ತು ಮೋಡ ಮುಸುಕಿದ ಸ್ಥಿತಿ ಇತ್ತು. ಗಾಳಿಯ ಜೊತೆ ತುಂತುರು ಮಳೆಯಾಯಿತು. ಬಿಳಿಗಿರಿರಂಗನಬೆಟ್ಟದಲ್ಲೂ ಅರ್ಧ ಗಂಟೆ ಮಳೆಯಾಗಿದೆ.</p><p>ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲೂ ಹದವಾಗಿ ವರ್ಷಧಾರೆಯಾಗಿದೆ.</p><p><strong>ಜಿಲ್ಲಾ ಕೇಂದ್ರದಲ್ಲಿ ಬಾರದ ಮಳೆ:</strong> ಭಾನುವಾರ ದಿನವಿಡೀ ಮೋಡ ಕವಿದ ವಾತಾವರಣ ಇದ್ದರೂ ಚಾಮರಾಜನಗರದಲ್ಲಿ ಮಳೆಯಾಗಲಿಲ್ಲ. ಬಿಸಿಲು ಹೆಚ್ಚಿಲ್ಲದಿದ್ದುರಿಂದ ವಾತಾವರಣ ತಂಪಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ/ಮಹದೇಶ್ವರ ಬೆಟ್ಟ</strong>: ಮಹದೇಶ್ವರ ಬೆಟ್ಟ, ಕೊಳ್ಳೇಗಾಲ ಸೇರಿದಂತೆ ವಿವಿಧ ಕಡೆಗಳಲ್ಲಿ ಭಾನುವಾರ ಮಧ್ಯಾಹ್ನ ಗಂಟೆಗೂ ಹೆಚ್ಚು ಕಾಲ ಭರ್ಜರಿ ಮಳೆಯಾಗಿದೆ.</p><p>ಮಹದೇಶ್ವರ ಬೆಟ್ಟದಲ್ಲಿ ಸತತ ಎರಡು ಗಂಟೆಗಳ ಕಾಲ ಎಡೆಬಿಡದೆ ಸುರಿದಿದೆ. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ನಾಲ್ಕು ಗಂಟೆಯವರೆಗೆ ಸುರಿಯಿತು. ನಂತರವೂ ಇಳಿಸಂಜೆಯವರೆಗೆ ಸೋನೆ ಮಳೆಯಾಯಿತು.</p><p>ಬೆಟ್ಟದಲ್ಲಿ ಮಹದೇಶ್ವರ ಸ್ವಾಮಿಯ 108 ಅಡಿ ಪ್ರತಿಮೆ ಇರುವ ಜಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಬಲಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ತಡೆಗೋಡೆ ಸಮೀಪ ನೀರು ಹರಿದು, ಕೆಳಗಡೆ ಇರುವ ಹಲವಾರು ಮನೆಗಳಿಗೆ ನುಗ್ಗಿತು. ಯಾವುದೇ ಅನಾಹುತವಾಗಿಲ್ಲ.</p><p>ಕೊಳ್ಳೇಗಾಲ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಮಧ್ಯಾಹ್ನ 2.30ಗೆ ಆರಂಭವಾದ ಮಳೆ 3.30ವರೆಗೂ ಧಾರಾಕಾರವಾಗಿ ಸುರಿಯಿತು. ನಂಜನಕಟ್ಟೆಯಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತು. ತಗ್ಗು ಪ್ರದೇಶದಲ್ಲಿರುವ ಬಡಾವಣೆಗಳಲ್ಲೂ ನೀರು ಹರಿದು ನಿವಾಸಿಗಳು ಪರದಾಡಿದರು.</p><p>ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿಯಿತು. 10 ದಿನಗಳಿಂದ ಮಳೆಯಾಗುತ್ತಿದ್ದರೂ, ತಾಲ್ಲೂಕಿನಲ್ಲಿ ಈ ಪ್ರಮಾಣದ ಮಳೆಯಾಗಿದ್ದು ಇದೇ ಮೊದಲು.</p><p>ಚರಂಡಿಗಳಲ್ಲಿ ನೀರು ಉಕ್ಕೇರಿತು. ರಸ್ತೆ ಹೊಂಡ ಗುಂಡಿಗಳಲ್ಲಿ ನೀರು ನಿಂತಿದ್ದರಿಂದ ಸಂಚಾರ ಕಷ್ಟವಾಯಿತು. ಶಾಲಾ ಕಾಲೇಜುಗಳ ಆಟದ ಮೈದಾನಗಳಲ್ಲಿ ನೀರು ತುಂಬಿತು.</p><p>ಡಾ.ರಾಜಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆಗಳು ಜಲಾವೃತವಾದವು. ಕೆಲವೆಡೆ ಮರದ ಕೊಂಬೆಗಳು ಮುರಿದುಬಿದ್ದಿವೆ. ಇನ್ನು ಕೆಲವು ಕಡೆ ಹಳ್ಳ ಕೊಳ್ಳಗಳಲ್ಲಿ ನೀರು ತುಂಬಿದೆ.</p><p>ನಗರದ ಮಹದೇಶ್ವರ ಕಾಲೇಜು ಸಮೀಪದ ರಸ್ತೆ ನೀರಿನಿಂದ ಜಲಾವೃತವಾಗಿದ್ದು ಬಡಾವಣೆಯ ನಿವಾಸಿಗಳು ಸಂಚರಿಸಲು ಕಿರಿಕಿರಿ ಅನುಭವಿಸಿದರು. ಮಹದೇಶ್ವರ ಕಾಲೇಜು ಕ್ರೀಡಾಂಗಣ ಜಲಾವೃತವಾಗಿತ್ತು.</p><p>ಈ ಕ್ರೀಡಾಂಗಣದಲ್ಲಿ ಸೋಮವಾರ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಮಳೆಯಿಂದಾಗಿ ಕ್ರೀಡಾಂಗಣ ಒದ್ದೆಯಾಗಿದ್ದು, ಟೂರ್ನಿ ಸ್ಥಗಿತಗೊಂಡಿದೆ.</p>.<p>ತಾಲ್ಲೂಕಿನ ಸತ್ತೇಗಾಲ, ಜಾಗೇರಿ, ಜಕ್ಕಳಿ, ಕೆಂಪನಪಾಳ್ಯ, ಲಕ್ಕರಸನ ಪಾಳ್ಯ, ಟಿಸಿ ಹುಂಡಿ, ಲಿಂಗನಪುರ, ಮಧುವನಹಳ್ಳಿ , ದೊಡ್ಡಿಂದುವಾಡಿ, ಮತ್ತಿಪುರ , ಚಿಕ್ಕಲ್ಲೂರು, ನರಿಪುರ, ಸರಗೂರು, ಗುಂಡೆಗಾಲ, ಉತ್ತಂಬಳ್ಳಿ, ಗೊಬ್ಬಳಿಪುರ, ಹಾಲಳ್ಳಿ, ಟಗರಪುರ, ಚಿಲುಕವಾಡಿ, ಕುಂತೂರು, ಸುರಪುರ, ಕುಣಗಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದೆ.</p><p><strong>ಯಳಂದೂರು– ಸಾಧಾರಣ ಮಳೆ:</strong> ತಾಲ್ಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಸಾಮಾನ್ಯ ಮಳೆಯಾಗಿದೆ. ಮಧ್ಯಾಹ್ನ ಕಾಡಂಚಿನ ಪ್ರದೇಶಗಳಲ್ಲಿ ದಿನವಿಡೀ ಮೋಡ ಮುಚ್ಚಿದ ವಾತಾವರಣ ಇತ್ತು. ಮಧ್ಯಾಹ್ನ ತುಂತರು ಮಳೆ ಎರಡು ಗಂಟೆಗಳ ಕಾಲ ಸುರಿಯಿತು. ಕೆಸ್ತೂರು, ಹೊನ್ನೂರು ಸುತ್ತಮುತ್ತಲೂ ಮಳೆಯಾಗಿದೆ.</p><p>ಪಟ್ಟಣದಲ್ಲೂ ದಿನವಿಡೀ ಬಿಸಿಲು ಮತ್ತು ಮೋಡ ಮುಸುಕಿದ ಸ್ಥಿತಿ ಇತ್ತು. ಗಾಳಿಯ ಜೊತೆ ತುಂತುರು ಮಳೆಯಾಯಿತು. ಬಿಳಿಗಿರಿರಂಗನಬೆಟ್ಟದಲ್ಲೂ ಅರ್ಧ ಗಂಟೆ ಮಳೆಯಾಗಿದೆ.</p><p>ಗುಂಡ್ಲುಪೇಟೆ, ಹನೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲೂ ಹದವಾಗಿ ವರ್ಷಧಾರೆಯಾಗಿದೆ.</p><p><strong>ಜಿಲ್ಲಾ ಕೇಂದ್ರದಲ್ಲಿ ಬಾರದ ಮಳೆ:</strong> ಭಾನುವಾರ ದಿನವಿಡೀ ಮೋಡ ಕವಿದ ವಾತಾವರಣ ಇದ್ದರೂ ಚಾಮರಾಜನಗರದಲ್ಲಿ ಮಳೆಯಾಗಲಿಲ್ಲ. ಬಿಸಿಲು ಹೆಚ್ಚಿಲ್ಲದಿದ್ದುರಿಂದ ವಾತಾವರಣ ತಂಪಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>