ಎಂಟು ಗುಂಟೆ ಜಮೀನು ಖರೀದಿಸಿರುವ ಶ್ರೀನಿಧಿ ಕುದರ್ ಮಾತನಾಡಿ ‘ನಾವು ಖರೀದಿಸುವುದಕ್ಕೂ ಮೊದಲು ಮೂವರ ಹೆಸರಿಗೆ ಅದು ಕ್ರಯ ಆಗಿದೆ. ಮೊದಲಿನಿಂದಲೇ ಅದೇ ರೀತಿ ಬಂದಿದೆ. ಖಾತೆಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ತಹಶೀಲ್ದಾರರು ಅದು ಹಾಸ್ಟೆಲ್ಗೆ ಸೇರಿದ ಆಸ್ತಿಯಂತೆ ಕಾಣುತ್ತಿದೆ ಎಂದು ಗಮನ ಸೆಳೆದಾಗ ಹಾಸ್ಟೆಲ್ಗೆ ಸೇರಿದ ಜಾಗವಾಗಿದ್ದರೆ ಖಾತೆ ಮಾಡಬೇಡಿ ಎಂದು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿಯೇ ಬರೆದು ಕೊಟ್ಟಿದ್ದೇವೆ. ಹಾಗಿದ್ದರೂ ಮೂರು ತಿಂಗಳ ಬಳಿಕ ನಮ್ಮ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಗರದಲ್ಲಿ ನಮ್ಮ ಆಸ್ತಿಯೇ ಸಾಕಷ್ಟಿದೆ. ಸಮುದಾಯಕ್ಕೆ ನಾವೇ ಕೊಡುತ್ತೇವೆಯೇ ವಿನಾ ಜನರ ಆಸ್ತಿ ನಮಗೆ ಬೇಡ’ ಎಂದರು.