<p><strong>ಯಳಂದೂರು</strong>: ‘ಕಾರ್ಗಿಲ್ ಯುದ್ಧ ಭಾರತೀಯ ಸೈನಿಕರ ಪರಾಕ್ರಮವನ್ನು ವಿಶ್ವಕ್ಕೆ ಪ್ರಚುರಪಡಿಸಿತು. ಯುವ ಜನರಲ್ಲಿ ರಾಷ್ಟ್ರಪ್ರೇಮದ ಕಿಚ್ಚನ್ನು ಬಡಿದು ಎಚ್ಚರಿಸಿತು’ ಎಂದು ಪರ್ವತಾರೋಹಿ ಪ್ರದೀಪ್.ಎಸ್ ಹೇಳಿದರು.</p>.<p>ತಾಲ್ಲೂಕಿನ ಬನ್ನಿಸಾರಿಗೆ ಸಮೀಪದ ಯೋಧ ನವೀನ್ ಸ್ಮಾರಕದ ಬಳಿ ಗುರುವಾರ ಆಯೋಜಿಸಿದ್ದ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಅತಿ ಶೀತ ಪ್ರದೇಶ. ಅತ್ಯಂತ ಎತ್ತರದ ಶಿಖರಗಳಿಂದ ಆವೃತ ಹಿಮ ಸಂಚಿತ ದುರ್ಗಮ ತಾಣ. ಈ ಪ್ರದೇಶದಲ್ಲಿ ಜೀವದ ಹಂಗು ತೊರೆದು ಸೈನಿಕರು ಹೋರಾಡಿದರು. ಮೂರು ತಿಂಗಳ ಘರ್ಷಣೆ ನಂತರ ಪಾಕಿಸ್ತಾನ್ ಸೈನ್ಯ ಹಿಂದೆ ಸರಿಯಿತು. ನೂರಾರು ಯೋಧರು ಪ್ರಾಣ ಕಳೆದುಕೊಂಡು, ಭಾರತೀಯ ಸೈನಿಕರ ಶೌರ್ಯ ಪರಾಕ್ರಮಗಳನ್ನು ವಿಶ್ವಕ್ಕೆ ಸಾರಿದರು’ ಎಂದರು.</p>.<p> ಅರ್ಚಕ ಅಗ್ರಹಾರ ರಾಮಪ್ಪ, ಮುಖ್ಯ ಶಿಕ್ಷಕ ಮಹದೇವಪ್ರಸಾದ್, ಮುಖಂಡರಾದ ನವೀನ್, ರೇವಣ್ಣ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ‘ಕಾರ್ಗಿಲ್ ಯುದ್ಧ ಭಾರತೀಯ ಸೈನಿಕರ ಪರಾಕ್ರಮವನ್ನು ವಿಶ್ವಕ್ಕೆ ಪ್ರಚುರಪಡಿಸಿತು. ಯುವ ಜನರಲ್ಲಿ ರಾಷ್ಟ್ರಪ್ರೇಮದ ಕಿಚ್ಚನ್ನು ಬಡಿದು ಎಚ್ಚರಿಸಿತು’ ಎಂದು ಪರ್ವತಾರೋಹಿ ಪ್ರದೀಪ್.ಎಸ್ ಹೇಳಿದರು.</p>.<p>ತಾಲ್ಲೂಕಿನ ಬನ್ನಿಸಾರಿಗೆ ಸಮೀಪದ ಯೋಧ ನವೀನ್ ಸ್ಮಾರಕದ ಬಳಿ ಗುರುವಾರ ಆಯೋಜಿಸಿದ್ದ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಅತಿ ಶೀತ ಪ್ರದೇಶ. ಅತ್ಯಂತ ಎತ್ತರದ ಶಿಖರಗಳಿಂದ ಆವೃತ ಹಿಮ ಸಂಚಿತ ದುರ್ಗಮ ತಾಣ. ಈ ಪ್ರದೇಶದಲ್ಲಿ ಜೀವದ ಹಂಗು ತೊರೆದು ಸೈನಿಕರು ಹೋರಾಡಿದರು. ಮೂರು ತಿಂಗಳ ಘರ್ಷಣೆ ನಂತರ ಪಾಕಿಸ್ತಾನ್ ಸೈನ್ಯ ಹಿಂದೆ ಸರಿಯಿತು. ನೂರಾರು ಯೋಧರು ಪ್ರಾಣ ಕಳೆದುಕೊಂಡು, ಭಾರತೀಯ ಸೈನಿಕರ ಶೌರ್ಯ ಪರಾಕ್ರಮಗಳನ್ನು ವಿಶ್ವಕ್ಕೆ ಸಾರಿದರು’ ಎಂದರು.</p>.<p> ಅರ್ಚಕ ಅಗ್ರಹಾರ ರಾಮಪ್ಪ, ಮುಖ್ಯ ಶಿಕ್ಷಕ ಮಹದೇವಪ್ರಸಾದ್, ಮುಖಂಡರಾದ ನವೀನ್, ರೇವಣ್ಣ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>