<p><strong>ಚಾಮರಾಜನಗರ:</strong> ‘ಜವಾಬ್ದಾರಿ ಇಲ್ಲದ ಸರ್ಕಾರಗಳು ನಮ್ಮ ದೇಶದಲ್ಲಿವೆ. ಭ್ರಷ್ಟತೆ ನಮ್ಮ ದೇಶದ ವ್ಯವಸ್ಥೆಯ ಭಾಗವಾಗಿದೆ. ಭ್ರಷ್ಟಾಚಾರವನ್ನು ಸಂಭ್ರಮಿಸುವ ಜನರಿದ್ದಾರೆ. ದೇಶ ಗಣರಾಜ್ಯವಾಗಬೇಕಾದರೆ ಆಳುವವರನ್ನು ಪ್ರಶ್ನಿಸುವ ಸಂಸ್ಕೃತಿ ಹುಟ್ಟಬೇಕು’ ಎಂದು ಹಿರಿಯ ವಕೀಲ, ಹೋರಾಟಗಾರ ಬಿ.ಟಿ.ವೆಂಕಟೇಶ್ ಶನಿವಾರ ಅಭಿಪ್ರಾಯಪಟ್ಟರು. </p>.<p>75ನೇ ಗಣರಾಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ನಾಗವಳ್ಳಿಯ ಪುನರ್ಚಿತ್, ನಗರದ ರಂಗವಾಹಿನಿ ಮತ್ತು ಶಾಂತಲಾ ಕಲಾವಿದರು ಸಂಸ್ಥೆಗಳು ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಗಣರಾಜ್ಯ ಎತ್ತ ಸಾಗುತ್ತಿದೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. </p>.<p>‘ನಾವು ಆಯ್ಕೆ ಮಾಡಿದ ಪ್ರತಿನಿಧಿಗಳು ನಮ್ಮನ್ನು ಆಳುವುದು ಗಣರಾಜ್ಯದ ಪರಿಕಲ್ಪನೆ. ಇದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ. ಮೂರೂವರೆ ದಶಕಗಳಿಂದ ದೇಶದಲ್ಲಿನ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಮ್ಮದು ಶ್ರೀಮಂತ ರಾಷ್ಟ್ರ, ಇಲ್ಲಿರುವ ಸಂಪನ್ಮೂಲಗಳೇ ನಮಗೆ ಶಾಪವಾಗಿವೆ’ ಎಂದು ದೂರಿದರು. </p>.<p>‘ಜನಪರವಾಗಿ ಮಾತನಾಡಿದವರನ್ನು, ಹೋರಾಟ ಮಾಡುವವರನ್ನು ಜೈಲಿಗೆ ಹಾಕಲಾಗುತ್ತಿದೆ. ಏನೂ ತಿಳಿಯದವರ ವಿರುದ್ಧ ದೇಶದ್ರೋಹದಂತಹ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಜೈಲಿಗೆ ಹೋಗುವವರೆಲ್ಲ ಬಡವರು, ದಲಿತರು, ಶೂದ್ರರು, ಅಲ್ಪಸಂಖ್ಯಾತರು. ದೇಶದಲ್ಲಿ 5.36 ಲಕ್ಷದಷ್ಟು ಜನರು ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಾ ಇದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಅವರಿಗೆ ತಿಳಿದಿಲ್ಲ’ ಎಂದರು. </p>.<p>‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸರ್ಕಾರವೇ ಶಿಕ್ಷಣ, ಆರೋಗ್ಯ, ಸಾರಿಗೆ ಸೇವೆಗಳನ್ನು ಉಚಿತವಾಗಿ ನೀಡುತ್ತಿವೆ. ಅಮೆರಿಕದಲ್ಲಿ ಶೇ 99ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಾರೆ. ಆದರೆ, ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ. 75 ವರ್ಷಗಳ ಅವಧಿಯಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಾಗಿರುವುದು ನಿಜ. ಆದರೆ, ಶೇ 100ರಷ್ಟು ಸಾಕ್ಷರತೆ ಬಂದಾಗ ಜನರ ಬದುಕು ಹಸನಾಗುತ್ತದೆ. ಸಮಾನತೆ ಬರುತ್ತದೆ’ ಎಂದು ವೆಂಕಟೇಶ್ ಪ್ರತಿಪಾದಿಸಿದರು. </p>.<p>‘ನಾವೇ ಆಯ್ಕೆ ಮಾಡಿದ ಸರ್ಕಾರಗಳು ನಮ್ಮ ಪರವಾಗಿ ಕೆಲಸ ಮಾಡದೆ, ನಮ್ಮನ್ನು ಭಿಕ್ಷುಕರನ್ನಾಗಿ ಮಾಡುತ್ತಿವೆ. ದಲಿತರಿಗೆ ಅವಕಾಶ ಸಿಗುತ್ತಿಲ್ಲ. ಬೆಂಗಳೂರಿನಲ್ಲೇ 40 ಸಾವಿರದಷ್ಟು ಮಂದಿ ನಕಲಿ ಜಾತಿ ಪ್ರಮಾಣ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಇದರಲ್ಲಿ ಶಾಸಕರೂ ಇದ್ದಾರೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೂ ಇದ್ದಾರೆ’ ಎಂದು ಹೇಳಿದರು. </p>.<p>‘ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ತಾರತಮ್ಯ ದೂರವಾಗಬೇಕು. ಅದಕ್ಕಾಗಿ ನಮ್ಮಲ್ಲಿ ಸಾಂವಿಧಾನಿಕ ನೈತಿಕತೆ ಇರಬೇಕು. ಮೌಲ್ಯಗಳಿಗೆ ಬೆಲೆ ಕೊಡಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು’ ಎಂದರು. </p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಶಾಂತಲಾ ಕಲಾವಿದರು ಟ್ರಸ್ಟಿ ವೆಂಕಟರಾಜು, ‘ನಮ್ಮ ದೇಶ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಸ್ವಾತಂತ್ರ್ಯ ಪಡೆಯಿತು. ಯುದ್ಧದ ವಿರುದ್ಧವಾದ ನೀತಿ ನಮ್ಮ ದೇಶದ್ದಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ಕೆಲವೇ ದಶಕಗಳಲ್ಲಿ ಮೂರು ಯುದ್ಧಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ನಾವು ತುಂಬಾ ಆದರ್ಶಗಳನ್ನು ಇಟ್ಟುಕೊಂಡಿದ್ದೆವು. ಆದರೆ ಇತ್ತೀಚಿನ ವರ್ಷಗಳಲ್ಲಿ ನಾವು ಏನು ಅಂದುಕೊಂಡಿದ್ದೆವೋ ಅದಕ್ಕೆ ವಿರುದ್ಧವಾದ ಸಂಗತಿಗಳು ನಡೆಯುತ್ತಿವೆ’ ಎಂದರು. </p>.<p>ರಂಗವಾಹಿನಿ ಸಂಸ್ಥೆಯ ಸಿ.ಎಂ.ನರಸಿಂಹಮೂರ್ತಿ, ಪುನರ್ಚಿತ್ ಸಂಸ್ಥೆಯ ವೀರಭದ್ರನಾಯಕ ಮಾತನಾಡಿದರು. </p> <p> <strong>ಭಾವಗೀತೆ ಸ್ಪರ್ಧೆ:</strong> ಬಹುಮಾನ ವಿತರಣೆ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಅಂತರ್ ಪ್ರೌಢ ಶಾಲಾ ಭಾವಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಗೌರಿ ಭಾವರಿಯ (ಪ್ರಥಮ) ದೀನಬಂಧು ಶಾಲೆಯ ಅನುಷಾ (ದ್ವಿತೀಯ) ಬಂಜಾರ ಶಾಲೆಯ ಗೌತಮ್ ರಾಜ್ (ತೃತೀಯ) ಮತ್ತು ಸಮಾಧಾನಕರ ಬಹುಮಾನ ಪಡೆದ ಸೇಂಟ್ ಜೋಸೆಫ್ ಶಾಲೆಯ ಭಾವನಾ ಅಭಿಷೇಕ್ ಮಲ್ಲಯ್ಯನಪುರ ಆದರ್ಶ ವಿದ್ಯಾಲಯದ ಹರ್ಷೋಲ್ಲಾಸ ಕ್ರೀಸೆಂಟ್ ಶಾಲೆಯ ಹಲೀಂ ಸಾದಿಯಾ ಅವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ‘ಜವಾಬ್ದಾರಿ ಇಲ್ಲದ ಸರ್ಕಾರಗಳು ನಮ್ಮ ದೇಶದಲ್ಲಿವೆ. ಭ್ರಷ್ಟತೆ ನಮ್ಮ ದೇಶದ ವ್ಯವಸ್ಥೆಯ ಭಾಗವಾಗಿದೆ. ಭ್ರಷ್ಟಾಚಾರವನ್ನು ಸಂಭ್ರಮಿಸುವ ಜನರಿದ್ದಾರೆ. ದೇಶ ಗಣರಾಜ್ಯವಾಗಬೇಕಾದರೆ ಆಳುವವರನ್ನು ಪ್ರಶ್ನಿಸುವ ಸಂಸ್ಕೃತಿ ಹುಟ್ಟಬೇಕು’ ಎಂದು ಹಿರಿಯ ವಕೀಲ, ಹೋರಾಟಗಾರ ಬಿ.ಟಿ.ವೆಂಕಟೇಶ್ ಶನಿವಾರ ಅಭಿಪ್ರಾಯಪಟ್ಟರು. </p>.<p>75ನೇ ಗಣರಾಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ನಾಗವಳ್ಳಿಯ ಪುನರ್ಚಿತ್, ನಗರದ ರಂಗವಾಹಿನಿ ಮತ್ತು ಶಾಂತಲಾ ಕಲಾವಿದರು ಸಂಸ್ಥೆಗಳು ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಗಣರಾಜ್ಯ ಎತ್ತ ಸಾಗುತ್ತಿದೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. </p>.<p>‘ನಾವು ಆಯ್ಕೆ ಮಾಡಿದ ಪ್ರತಿನಿಧಿಗಳು ನಮ್ಮನ್ನು ಆಳುವುದು ಗಣರಾಜ್ಯದ ಪರಿಕಲ್ಪನೆ. ಇದು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿದೆ. ಮೂರೂವರೆ ದಶಕಗಳಿಂದ ದೇಶದಲ್ಲಿನ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಮ್ಮದು ಶ್ರೀಮಂತ ರಾಷ್ಟ್ರ, ಇಲ್ಲಿರುವ ಸಂಪನ್ಮೂಲಗಳೇ ನಮಗೆ ಶಾಪವಾಗಿವೆ’ ಎಂದು ದೂರಿದರು. </p>.<p>‘ಜನಪರವಾಗಿ ಮಾತನಾಡಿದವರನ್ನು, ಹೋರಾಟ ಮಾಡುವವರನ್ನು ಜೈಲಿಗೆ ಹಾಕಲಾಗುತ್ತಿದೆ. ಏನೂ ತಿಳಿಯದವರ ವಿರುದ್ಧ ದೇಶದ್ರೋಹದಂತಹ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಜೈಲಿಗೆ ಹೋಗುವವರೆಲ್ಲ ಬಡವರು, ದಲಿತರು, ಶೂದ್ರರು, ಅಲ್ಪಸಂಖ್ಯಾತರು. ದೇಶದಲ್ಲಿ 5.36 ಲಕ್ಷದಷ್ಟು ಜನರು ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಾ ಇದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಅವರಿಗೆ ತಿಳಿದಿಲ್ಲ’ ಎಂದರು. </p>.<p>‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸರ್ಕಾರವೇ ಶಿಕ್ಷಣ, ಆರೋಗ್ಯ, ಸಾರಿಗೆ ಸೇವೆಗಳನ್ನು ಉಚಿತವಾಗಿ ನೀಡುತ್ತಿವೆ. ಅಮೆರಿಕದಲ್ಲಿ ಶೇ 99ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಾರೆ. ಆದರೆ, ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ. 75 ವರ್ಷಗಳ ಅವಧಿಯಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚಾಗಿರುವುದು ನಿಜ. ಆದರೆ, ಶೇ 100ರಷ್ಟು ಸಾಕ್ಷರತೆ ಬಂದಾಗ ಜನರ ಬದುಕು ಹಸನಾಗುತ್ತದೆ. ಸಮಾನತೆ ಬರುತ್ತದೆ’ ಎಂದು ವೆಂಕಟೇಶ್ ಪ್ರತಿಪಾದಿಸಿದರು. </p>.<p>‘ನಾವೇ ಆಯ್ಕೆ ಮಾಡಿದ ಸರ್ಕಾರಗಳು ನಮ್ಮ ಪರವಾಗಿ ಕೆಲಸ ಮಾಡದೆ, ನಮ್ಮನ್ನು ಭಿಕ್ಷುಕರನ್ನಾಗಿ ಮಾಡುತ್ತಿವೆ. ದಲಿತರಿಗೆ ಅವಕಾಶ ಸಿಗುತ್ತಿಲ್ಲ. ಬೆಂಗಳೂರಿನಲ್ಲೇ 40 ಸಾವಿರದಷ್ಟು ಮಂದಿ ನಕಲಿ ಜಾತಿ ಪ್ರಮಾಣ ನೀಡಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ. ಇದರಲ್ಲಿ ಶಾಸಕರೂ ಇದ್ದಾರೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೂ ಇದ್ದಾರೆ’ ಎಂದು ಹೇಳಿದರು. </p>.<p>‘ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ತಾರತಮ್ಯ ದೂರವಾಗಬೇಕು. ಅದಕ್ಕಾಗಿ ನಮ್ಮಲ್ಲಿ ಸಾಂವಿಧಾನಿಕ ನೈತಿಕತೆ ಇರಬೇಕು. ಮೌಲ್ಯಗಳಿಗೆ ಬೆಲೆ ಕೊಡಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು’ ಎಂದರು. </p>.<p>ಪ್ರಾಸ್ತಾವಿಕವಾಗಿ ಮಾತನಾಡಿದ ಶಾಂತಲಾ ಕಲಾವಿದರು ಟ್ರಸ್ಟಿ ವೆಂಕಟರಾಜು, ‘ನಮ್ಮ ದೇಶ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಸ್ವಾತಂತ್ರ್ಯ ಪಡೆಯಿತು. ಯುದ್ಧದ ವಿರುದ್ಧವಾದ ನೀತಿ ನಮ್ಮ ದೇಶದ್ದಾಗಿತ್ತು. ಆದರೆ ಸ್ವಾತಂತ್ರ್ಯ ಬಂದ ಕೆಲವೇ ದಶಕಗಳಲ್ಲಿ ಮೂರು ಯುದ್ಧಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ನಾವು ತುಂಬಾ ಆದರ್ಶಗಳನ್ನು ಇಟ್ಟುಕೊಂಡಿದ್ದೆವು. ಆದರೆ ಇತ್ತೀಚಿನ ವರ್ಷಗಳಲ್ಲಿ ನಾವು ಏನು ಅಂದುಕೊಂಡಿದ್ದೆವೋ ಅದಕ್ಕೆ ವಿರುದ್ಧವಾದ ಸಂಗತಿಗಳು ನಡೆಯುತ್ತಿವೆ’ ಎಂದರು. </p>.<p>ರಂಗವಾಹಿನಿ ಸಂಸ್ಥೆಯ ಸಿ.ಎಂ.ನರಸಿಂಹಮೂರ್ತಿ, ಪುನರ್ಚಿತ್ ಸಂಸ್ಥೆಯ ವೀರಭದ್ರನಾಯಕ ಮಾತನಾಡಿದರು. </p> <p> <strong>ಭಾವಗೀತೆ ಸ್ಪರ್ಧೆ:</strong> ಬಹುಮಾನ ವಿತರಣೆ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಅಂತರ್ ಪ್ರೌಢ ಶಾಲಾ ಭಾವಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಗೌರಿ ಭಾವರಿಯ (ಪ್ರಥಮ) ದೀನಬಂಧು ಶಾಲೆಯ ಅನುಷಾ (ದ್ವಿತೀಯ) ಬಂಜಾರ ಶಾಲೆಯ ಗೌತಮ್ ರಾಜ್ (ತೃತೀಯ) ಮತ್ತು ಸಮಾಧಾನಕರ ಬಹುಮಾನ ಪಡೆದ ಸೇಂಟ್ ಜೋಸೆಫ್ ಶಾಲೆಯ ಭಾವನಾ ಅಭಿಷೇಕ್ ಮಲ್ಲಯ್ಯನಪುರ ಆದರ್ಶ ವಿದ್ಯಾಲಯದ ಹರ್ಷೋಲ್ಲಾಸ ಕ್ರೀಸೆಂಟ್ ಶಾಲೆಯ ಹಲೀಂ ಸಾದಿಯಾ ಅವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>