<p><strong>ಚಾಮರಾಜನಗರ</strong>: ಅಯೋಧ್ಯೆಯಲ್ಲಿ ಸೋಮವಾರ (ಜ.22) ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಜಿಲ್ಲೆಯಾದ್ಯಂತ ದೇವಾಲಯಗಳು, ರಾಮಮಂದಿರಗಳು, ಮನೆ ಮನೆಗಳಲ್ಲಿ ಶ್ರೀರಾಮನ ಆರಾಧನೆ ನಡೆಯಲಿದೆ. </p>.<p>ದೇವಾಲಯಗಳ ಆಡಳಿತ ಮಂಡಳಿಗಳು, ಸಂಘ ಸಂಸ್ಥೆಗಳು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. </p>.<p>ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ರಾಜ್ಯ ಸರ್ಕಾರವೇ ಸೂಚಿಸಿದೆ. ಇದಲ್ಲದೇ, ಖಾಸಗಿ ಆಡಳಿತವಿರುವ ದೇವಾಲಯಗಳಲ್ಲಿ, ವಿಶೇಷವಾಗಿ ಆಂಜನೇಯ ದೇವಾಲಯಗಳು, ರಾಮ ಮಂದಿರಗಳಲ್ಲಿ ಸೋಮವಾರ ಬೆಳಿಗ್ಗೆಯಿಂದ ರಾಮನಿಗೆ ಸಂಬಂಧಿಸಿದ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ನಗರ, ಪಟ್ಟಣ ಹಾಗೂ ಗ್ರಾಮೀಣ ದೇವಾಲಯಗಳಲ್ಲಿ ರಾಮಮಂದಿರ ಲೋಕಾರ್ಪಣೆಯ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. </p>.<p>ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಮುಂಭಾಗ, ಆವರಣದಲ್ಲಿ ಶ್ರೀರಾಮ ಬೃಹತ್ ಕಟ್ಔಟ್ಗಳನ್ನು ಅಳವಡಿಸಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲೂ ರಾಮನ ಭಾವಚಿತ್ರಗಳು ರಾರಾಜಿಸುತ್ತಿವೆ. </p>.<p>ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕಾರ್ಯಸಿದ್ಧಿ ಆಂಜನೇಯ ದೇವಾಲಯ, ಅಭಯಾನಂದ ಆಂಜನೇಯಸ್ವಾಮಿ ದೇವಾಲಯಗಲ್ಲೂ ವಿಶೇಷ ಪೂಜೆ ನೆರವೇರಲಿದೆ. ಸಂಜೆ ಮೆರವಣಿಗೆಯನ್ನೂ ಆಯೋಜಿಸಲಾಗಿದೆ. </p>.<p>ಭುವನೇಶ್ವರಿ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಣೆ ನಡೆಯಲಿದೆ. </p>.<p>ಪ್ರಧಾನಿ ಮೋದಿ ಅವರು ಮನೆಯಲ್ಲಿ ಸಂಜೆ ದೀಪ ಬೆಳಗುವಂತೆ ಕರೆ ನೀಡಿದ್ದು, ಬಿಜೆಪಿಯು ಕಾರ್ಯಕರ್ತರ ಮನೆಗಳಲ್ಲಿ ದೀಪ ಬೆಳಗುವಂತೆ ಕರೆ ನೀಡಿದೆ. </p>.<p> ರಾಮ ತಾರಕ ಹೋಮ ನಗರದ ಅಗ್ರಹಾರ ಬೀದಿಯಲ್ಲಿರುವ ಶ್ರೀ ಪಟ್ಟಾಭಿರಾಮಮಂದಿರ ಶಂಕರಪುರದ ಪಟ್ಟಾಭಿರಾಮಮಂದಿರದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನಡೆಯಲಿವೆ. ಶ್ರೀ ಪಟ್ಟಾಭಿರಾಮ ಮಂದಿರದಲ್ಲಿ ಪ್ರಾತಃಕಾಲ ಗಣಪತಿ ಗಾಯತ್ರಿ ದೇವಿ ರಾಮದೇವರಿಗೆ ಫಲಪಂಚಾಮೃತ ಅಭಿಷೇಕ ನಂತರ ಗಣಪತಿ ಹೋಮ ನವಗ್ರಹ ಹೋಮ ಶ್ರೀರಾಮ ತಾರಕ ಹೋಮ ಹಾಗೂ ಪವಮಾನ ಹೋಮ ಮತ್ತು ರಾಮ ತಾರಕ ಮಂತ್ರ ಪಠಣೆ ಮಧ್ಯಾಹ್ನ 12:35ಕ್ಕೆ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆಯಲಿದ್ದು ಆ ಬಳಿಕ ಅನ್ನಸಂತರ್ಪಣೆ ವಿನಿಯೋಗ ನಡೆಯಲಿದೆ. ಶಂಕರಪುರದ ರಾಮಮಂದಿರದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಅಭಿಷೇಕ ರಾಮ ತಾರಕ ಹೋಮ ಗಣಪತಿ ಹೋಮ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿದೆ. </p>.<p> ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜೆ ಯಳಂದೂರು: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಸೋಮವಾರ ವಿಶೇಷ ಉತ್ಸವಗಳು ಜರುಗಲಿವೆ. ಪಟ್ಟಣದ ಆಂಜನೇಯ ವಡಗೆರೆ ಬಿದ್ದಾಂಜನೇಯ ಕೆಸ್ತೂರು ವೀರಾಂಜನೇಯ ಅಗರ ಶಕ್ತಿ ಆಂಜನೇಯ ಹಾಗೂ ಬಿಳಿಗಿರಿರಂಗನಬೆಟ್ಟದ ದೇಗುಲದಲ್ಲಿ ರಾಮೋತ್ಸವಕ್ಕೆ ಭಕ್ತರು ಸಿದ್ಧತೆ ನಡೆಸಿದ್ದಾರೆ. ಮುಂಜಾನೆಯಿಂದ ದ್ವಾದಶಿ ಮೃಗಶಿರ ನಕ್ಷತ್ರದಲ್ಲಿ ವಿವಿಧ ದೇವಾಲಯದಲ್ಲಿ ದೇವರಿಗೆ ಹೂಗಳ ಅಲಂಕಾರ ಮತ್ತು ಅಭಿಷೇಕ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿದೆ. ದಿನವಿಡಿ ಅರ್ಚನೆ ಭಜನೆ ದೇವರ ಉತ್ಸವ ನಡೆಯಲಿದೆ. ಭಕ್ತರ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ‘ದೇವಾಲಯದಲ್ಲಿ ರಾಮ ಪಟವನ್ನು ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಗುತ್ತದೆ. ಮುಜರಾಯಿ ಇಲಾಖೆಯ ಆದೇಶದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ದೇವಾಲಯದ ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಅಯೋಧ್ಯೆಯಲ್ಲಿ ಸೋಮವಾರ (ಜ.22) ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಜಿಲ್ಲೆಯಾದ್ಯಂತ ದೇವಾಲಯಗಳು, ರಾಮಮಂದಿರಗಳು, ಮನೆ ಮನೆಗಳಲ್ಲಿ ಶ್ರೀರಾಮನ ಆರಾಧನೆ ನಡೆಯಲಿದೆ. </p>.<p>ದೇವಾಲಯಗಳ ಆಡಳಿತ ಮಂಡಳಿಗಳು, ಸಂಘ ಸಂಸ್ಥೆಗಳು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. </p>.<p>ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ರಾಜ್ಯ ಸರ್ಕಾರವೇ ಸೂಚಿಸಿದೆ. ಇದಲ್ಲದೇ, ಖಾಸಗಿ ಆಡಳಿತವಿರುವ ದೇವಾಲಯಗಳಲ್ಲಿ, ವಿಶೇಷವಾಗಿ ಆಂಜನೇಯ ದೇವಾಲಯಗಳು, ರಾಮ ಮಂದಿರಗಳಲ್ಲಿ ಸೋಮವಾರ ಬೆಳಿಗ್ಗೆಯಿಂದ ರಾಮನಿಗೆ ಸಂಬಂಧಿಸಿದ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ನಗರ, ಪಟ್ಟಣ ಹಾಗೂ ಗ್ರಾಮೀಣ ದೇವಾಲಯಗಳಲ್ಲಿ ರಾಮಮಂದಿರ ಲೋಕಾರ್ಪಣೆಯ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. </p>.<p>ಚಾಮರಾಜನಗರದ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಮುಂಭಾಗ, ಆವರಣದಲ್ಲಿ ಶ್ರೀರಾಮ ಬೃಹತ್ ಕಟ್ಔಟ್ಗಳನ್ನು ಅಳವಡಿಸಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲೂ ರಾಮನ ಭಾವಚಿತ್ರಗಳು ರಾರಾಜಿಸುತ್ತಿವೆ. </p>.<p>ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕಾರ್ಯಸಿದ್ಧಿ ಆಂಜನೇಯ ದೇವಾಲಯ, ಅಭಯಾನಂದ ಆಂಜನೇಯಸ್ವಾಮಿ ದೇವಾಲಯಗಲ್ಲೂ ವಿಶೇಷ ಪೂಜೆ ನೆರವೇರಲಿದೆ. ಸಂಜೆ ಮೆರವಣಿಗೆಯನ್ನೂ ಆಯೋಜಿಸಲಾಗಿದೆ. </p>.<p>ಭುವನೇಶ್ವರಿ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಣೆ ನಡೆಯಲಿದೆ. </p>.<p>ಪ್ರಧಾನಿ ಮೋದಿ ಅವರು ಮನೆಯಲ್ಲಿ ಸಂಜೆ ದೀಪ ಬೆಳಗುವಂತೆ ಕರೆ ನೀಡಿದ್ದು, ಬಿಜೆಪಿಯು ಕಾರ್ಯಕರ್ತರ ಮನೆಗಳಲ್ಲಿ ದೀಪ ಬೆಳಗುವಂತೆ ಕರೆ ನೀಡಿದೆ. </p>.<p> ರಾಮ ತಾರಕ ಹೋಮ ನಗರದ ಅಗ್ರಹಾರ ಬೀದಿಯಲ್ಲಿರುವ ಶ್ರೀ ಪಟ್ಟಾಭಿರಾಮಮಂದಿರ ಶಂಕರಪುರದ ಪಟ್ಟಾಭಿರಾಮಮಂದಿರದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನಡೆಯಲಿವೆ. ಶ್ರೀ ಪಟ್ಟಾಭಿರಾಮ ಮಂದಿರದಲ್ಲಿ ಪ್ರಾತಃಕಾಲ ಗಣಪತಿ ಗಾಯತ್ರಿ ದೇವಿ ರಾಮದೇವರಿಗೆ ಫಲಪಂಚಾಮೃತ ಅಭಿಷೇಕ ನಂತರ ಗಣಪತಿ ಹೋಮ ನವಗ್ರಹ ಹೋಮ ಶ್ರೀರಾಮ ತಾರಕ ಹೋಮ ಹಾಗೂ ಪವಮಾನ ಹೋಮ ಮತ್ತು ರಾಮ ತಾರಕ ಮಂತ್ರ ಪಠಣೆ ಮಧ್ಯಾಹ್ನ 12:35ಕ್ಕೆ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಡೆಯಲಿದ್ದು ಆ ಬಳಿಕ ಅನ್ನಸಂತರ್ಪಣೆ ವಿನಿಯೋಗ ನಡೆಯಲಿದೆ. ಶಂಕರಪುರದ ರಾಮಮಂದಿರದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಅಭಿಷೇಕ ರಾಮ ತಾರಕ ಹೋಮ ಗಣಪತಿ ಹೋಮ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ ಅನ್ನದಾನ ಏರ್ಪಡಿಸಲಾಗಿದೆ. </p>.<p> ಆಂಜನೇಯ ದೇಗುಲಗಳಲ್ಲಿ ವಿಶೇಷ ಪೂಜೆ ಯಳಂದೂರು: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಸೋಮವಾರ ವಿಶೇಷ ಉತ್ಸವಗಳು ಜರುಗಲಿವೆ. ಪಟ್ಟಣದ ಆಂಜನೇಯ ವಡಗೆರೆ ಬಿದ್ದಾಂಜನೇಯ ಕೆಸ್ತೂರು ವೀರಾಂಜನೇಯ ಅಗರ ಶಕ್ತಿ ಆಂಜನೇಯ ಹಾಗೂ ಬಿಳಿಗಿರಿರಂಗನಬೆಟ್ಟದ ದೇಗುಲದಲ್ಲಿ ರಾಮೋತ್ಸವಕ್ಕೆ ಭಕ್ತರು ಸಿದ್ಧತೆ ನಡೆಸಿದ್ದಾರೆ. ಮುಂಜಾನೆಯಿಂದ ದ್ವಾದಶಿ ಮೃಗಶಿರ ನಕ್ಷತ್ರದಲ್ಲಿ ವಿವಿಧ ದೇವಾಲಯದಲ್ಲಿ ದೇವರಿಗೆ ಹೂಗಳ ಅಲಂಕಾರ ಮತ್ತು ಅಭಿಷೇಕ ಪೂಜಾ ಕೈಂಕರ್ಯಗಳನ್ನು ಆಯೋಜಿಸಲಾಗಿದೆ. ದಿನವಿಡಿ ಅರ್ಚನೆ ಭಜನೆ ದೇವರ ಉತ್ಸವ ನಡೆಯಲಿದೆ. ಭಕ್ತರ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ‘ದೇವಾಲಯದಲ್ಲಿ ರಾಮ ಪಟವನ್ನು ಪಲ್ಲಕ್ಕಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಗುತ್ತದೆ. ಮುಜರಾಯಿ ಇಲಾಖೆಯ ಆದೇಶದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ದೇವಾಲಯದ ಆಡಳಿತಾಧಿಕಾರಿ ವೈ.ಎನ್.ಮೋಹನ್ ಕುಮಾರ್ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>