<p><strong>ಚಾಮರಾಜನಗರ</strong>: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿಶ್ವಶಾಂತಿ ನಿಕೇತನ ಆಶ್ರಮ ಶಾಶ್ವತವಾದ ಸಾಂಸ್ಕೃತಿಕ ಸ್ಮಾರಕ ಆಗಬೇಕು ಎಂದು ಚಾಮರಾಜನಗರ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್.ಜಯದೇವ ಬುಧವಾರ ಅಭಿಪ್ರಾಯಪಟ್ಟರು.</p>.<p>ವಿಶ್ವಶಾಂತಿ ನಿಕೇತನದ ಸ್ವಾಮಿ ನಿರ್ಮಾಲಾನಂದರ ನೂರನೇ ವರ್ಷಾಚರಣೆ ಹಾಗೂ ಸ್ವಾಮಿಯವರ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅರಣ್ಯ ಕಾಯ್ದೆಗೆ ಯಾವುದೇ ಧಕ್ಕೆ ಬಾರದಂತೆ ವಿಶ್ವಶಾಂತಿ ನಿಕೇತನ ಆಶ್ರಮವನ್ನು ಸಾಂಸ್ಕೃತಿಕ ನೆಲೆ ಎಂದು ಘೋಷಣೆ ಮಾಡಬೇಕು. ಸ್ವಾಮಿ ನಿರ್ಮಲಾನಂದರು ಜಗತ್ತಿನ ಒಳಿತಿಗಾಗಿ ಸ್ವಾಮಿಜಿ ಬದುಕಿದ್ದವರು. ಅವರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮಗಳು ಆಗಬೇಕು. ಈ ಆಶ್ರಮ ಒಬ್ಬ ವ್ಯಕ್ತಿಯ ಘನತೆಯನ್ನು ಸ್ಮರಣೆ ಮಾಡುವಂತಹ ಜಾಗ. ಮನುಷ್ಯನಲ್ಲಿ ಸರಳತೆ ಇದ್ದರೆ ನಾವು ಸಂತೋಷವಾಗಿ ಇರುತ್ತೇವೆ’ ಎಂದರು. </p>.<p>ವಿಶ್ವಶಾಂತಿ ನಿಕೇತನ ಆಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 'ಸ್ವಾಮಿ ನಿರ್ಮಾಲಾನಂದರು ಸತ್ಯದ ಅನ್ವೇಷಣಕ್ಕಾಗಿ ಪ್ರಪಂಚದಾದ್ಯಂತ ಪರ್ಯಟನೆ ಮಾಡಿದ್ದರು. ಸ್ವಾಮೀಜಿಯವರು ಪೂರ್ವಾಶ್ರಮದಲ್ಲಿ ಒಬ್ಬ ಯೋಧರಾಗಿ ದೇಶ ಸೇವೆ ಕೂಡ ಮಾಡಿದ್ದರು ಮತ್ತು ಈ ಆಶ್ರಮಕ್ಕೆ ಬಂದ ಮೇಲೆ 11 ವರ್ಷಗಳ ಕಾಲ ಮೌನಾಚರಣೆ ಮಾಡಿದ್ದರು. ಅವರ ಬದುಕೇ ಒಂದು ಆದರ್ಶವಾಗಿತ್ತು. ಅವರ ಅಂತ್ಯದವರೆವಿಗೂ ದಿವ್ಯ ಸಾಧನೆಗಳನ್ನು ಮಾಡಿ ಸ್ವ ಇಚ್ಚೆಯಿಂದ ಮರಣ ಹೊಂದಿದ್ದರು’ ಎಂದರು. </p>.<p>ಗಾಂಧಿವಾದಿ ಸಿ.ಪಿ.ಹುಚ್ಚೇಗೌಡ, ಯರಗಂಬಳ್ಳಿ ಗ್ರಾಮದ ಸೊಮಣ್ಣ ಮತ್ತು ಗ್ರಾಮಸ್ಥರು, ಬೆಂಗಳೂರಿನ ನಂದಿನಿ ಗಣೇಶ್ ಪ್ರಸಾದ್ ಸೇರಿದಂತೆ ಸ್ವಾಮೀಜಿ ಅನುಯಾಯಿಗಳು, ಬೆಟ್ಟದ ಸುತ್ತುಮುತ್ತಲಿನ ಪೋಡುಗಳ ಸೋಲಿಗರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿಶ್ವಶಾಂತಿ ನಿಕೇತನ ಆಶ್ರಮ ಶಾಶ್ವತವಾದ ಸಾಂಸ್ಕೃತಿಕ ಸ್ಮಾರಕ ಆಗಬೇಕು ಎಂದು ಚಾಮರಾಜನಗರ ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್.ಜಯದೇವ ಬುಧವಾರ ಅಭಿಪ್ರಾಯಪಟ್ಟರು.</p>.<p>ವಿಶ್ವಶಾಂತಿ ನಿಕೇತನದ ಸ್ವಾಮಿ ನಿರ್ಮಾಲಾನಂದರ ನೂರನೇ ವರ್ಷಾಚರಣೆ ಹಾಗೂ ಸ್ವಾಮಿಯವರ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅರಣ್ಯ ಕಾಯ್ದೆಗೆ ಯಾವುದೇ ಧಕ್ಕೆ ಬಾರದಂತೆ ವಿಶ್ವಶಾಂತಿ ನಿಕೇತನ ಆಶ್ರಮವನ್ನು ಸಾಂಸ್ಕೃತಿಕ ನೆಲೆ ಎಂದು ಘೋಷಣೆ ಮಾಡಬೇಕು. ಸ್ವಾಮಿ ನಿರ್ಮಲಾನಂದರು ಜಗತ್ತಿನ ಒಳಿತಿಗಾಗಿ ಸ್ವಾಮಿಜಿ ಬದುಕಿದ್ದವರು. ಅವರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮಗಳು ಆಗಬೇಕು. ಈ ಆಶ್ರಮ ಒಬ್ಬ ವ್ಯಕ್ತಿಯ ಘನತೆಯನ್ನು ಸ್ಮರಣೆ ಮಾಡುವಂತಹ ಜಾಗ. ಮನುಷ್ಯನಲ್ಲಿ ಸರಳತೆ ಇದ್ದರೆ ನಾವು ಸಂತೋಷವಾಗಿ ಇರುತ್ತೇವೆ’ ಎಂದರು. </p>.<p>ವಿಶ್ವಶಾಂತಿ ನಿಕೇತನ ಆಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 'ಸ್ವಾಮಿ ನಿರ್ಮಾಲಾನಂದರು ಸತ್ಯದ ಅನ್ವೇಷಣಕ್ಕಾಗಿ ಪ್ರಪಂಚದಾದ್ಯಂತ ಪರ್ಯಟನೆ ಮಾಡಿದ್ದರು. ಸ್ವಾಮೀಜಿಯವರು ಪೂರ್ವಾಶ್ರಮದಲ್ಲಿ ಒಬ್ಬ ಯೋಧರಾಗಿ ದೇಶ ಸೇವೆ ಕೂಡ ಮಾಡಿದ್ದರು ಮತ್ತು ಈ ಆಶ್ರಮಕ್ಕೆ ಬಂದ ಮೇಲೆ 11 ವರ್ಷಗಳ ಕಾಲ ಮೌನಾಚರಣೆ ಮಾಡಿದ್ದರು. ಅವರ ಬದುಕೇ ಒಂದು ಆದರ್ಶವಾಗಿತ್ತು. ಅವರ ಅಂತ್ಯದವರೆವಿಗೂ ದಿವ್ಯ ಸಾಧನೆಗಳನ್ನು ಮಾಡಿ ಸ್ವ ಇಚ್ಚೆಯಿಂದ ಮರಣ ಹೊಂದಿದ್ದರು’ ಎಂದರು. </p>.<p>ಗಾಂಧಿವಾದಿ ಸಿ.ಪಿ.ಹುಚ್ಚೇಗೌಡ, ಯರಗಂಬಳ್ಳಿ ಗ್ರಾಮದ ಸೊಮಣ್ಣ ಮತ್ತು ಗ್ರಾಮಸ್ಥರು, ಬೆಂಗಳೂರಿನ ನಂದಿನಿ ಗಣೇಶ್ ಪ್ರಸಾದ್ ಸೇರಿದಂತೆ ಸ್ವಾಮೀಜಿ ಅನುಯಾಯಿಗಳು, ಬೆಟ್ಟದ ಸುತ್ತುಮುತ್ತಲಿನ ಪೋಡುಗಳ ಸೋಲಿಗರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>