<p><strong>ಯಳಂದೂರು</strong>: ತಾಲ್ಲೂಕಿನಾದ್ಯಂತ ಬುಧವಾರ ತುಂತುರು ಮಳೆ ಬಿತ್ತು. ಮಧ್ಯಾಹ್ನದ ನಂತರ ಬಿಸಿಲು ಮತ್ತು ಹನಿಯ ಸಿಂಚನ ಮುಂದುವರಿಯಿತು. ಬೆಟ್ಟದ ಸುತ್ತಮುತ್ತ ಚಳಿ ಗಾಳಿ ಬೀಸಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಹೈರಾಣಾಗಿಸಿತು.</p>.<p>ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನರೇಗಾ ಯೋಜನೆಯ ಕಾರ್ಮಿಕರು ಮಳೆಯಿಂದ ರಕ್ಷಿಸಿಕೊಳ್ಳಲು ಪ್ರಯಾಸಪಟ್ಟರು. ಜಾನುವಾರು ಸಾಕಣೆದಾರರು ಪ್ರಾಣಿಗಳಿಗೆ ಮೇವು ಪೂರೈಸಲು ಪರದಾಡಿದರು. ಮಧ್ಯಾಹ್ನದ ನಂತರ ಬಿಸಿಲು ಕಾಣಿಸಿಕೊಂಡು ಚೇತರಿಕೆ ತಂದರೆ, ಸಂಜೆ ಮೋಡ ಮುಸುಕಿದ ಪರಿಸ್ಥಿತಿ ಮುಂದುವರಿಯಿತು.</p>.<p>‘ಮತ್ತೆರಡು ದಿನಗಳ ಕಾಲ ಮಳೆ ಸುರಿಯುವ ನಿರೀಕ್ಷೆ ಇದೆ. ಬೆಳೆಗಾರರು ಟಾರ್ಪಾಲ್ ಬಳಸಿ ಭತ್ತ ಮತ್ತು ಹುಲ್ಲು ರಕ್ಷಿಸಿಕೊಳ್ಳಬೇಕು. ಕೊಯ್ಲು ಮುಂದೂಡಬಹುದು. ಚಳಿ ಗಾಳಿಯೂ ಬೀಸುತ್ತಿದ್ದು, ಹಣ್ಣಿನ ಬೆಳೆಗಳ ರಕ್ಷಣೆಗೆ ಒತ್ತು ನೀಡಬೇಕು’ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟರಂಗಶೆಟ್ಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು</strong>: ತಾಲ್ಲೂಕಿನಾದ್ಯಂತ ಬುಧವಾರ ತುಂತುರು ಮಳೆ ಬಿತ್ತು. ಮಧ್ಯಾಹ್ನದ ನಂತರ ಬಿಸಿಲು ಮತ್ತು ಹನಿಯ ಸಿಂಚನ ಮುಂದುವರಿಯಿತು. ಬೆಟ್ಟದ ಸುತ್ತಮುತ್ತ ಚಳಿ ಗಾಳಿ ಬೀಸಿ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಹೈರಾಣಾಗಿಸಿತು.</p>.<p>ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನರೇಗಾ ಯೋಜನೆಯ ಕಾರ್ಮಿಕರು ಮಳೆಯಿಂದ ರಕ್ಷಿಸಿಕೊಳ್ಳಲು ಪ್ರಯಾಸಪಟ್ಟರು. ಜಾನುವಾರು ಸಾಕಣೆದಾರರು ಪ್ರಾಣಿಗಳಿಗೆ ಮೇವು ಪೂರೈಸಲು ಪರದಾಡಿದರು. ಮಧ್ಯಾಹ್ನದ ನಂತರ ಬಿಸಿಲು ಕಾಣಿಸಿಕೊಂಡು ಚೇತರಿಕೆ ತಂದರೆ, ಸಂಜೆ ಮೋಡ ಮುಸುಕಿದ ಪರಿಸ್ಥಿತಿ ಮುಂದುವರಿಯಿತು.</p>.<p>‘ಮತ್ತೆರಡು ದಿನಗಳ ಕಾಲ ಮಳೆ ಸುರಿಯುವ ನಿರೀಕ್ಷೆ ಇದೆ. ಬೆಳೆಗಾರರು ಟಾರ್ಪಾಲ್ ಬಳಸಿ ಭತ್ತ ಮತ್ತು ಹುಲ್ಲು ರಕ್ಷಿಸಿಕೊಳ್ಳಬೇಕು. ಕೊಯ್ಲು ಮುಂದೂಡಬಹುದು. ಚಳಿ ಗಾಳಿಯೂ ಬೀಸುತ್ತಿದ್ದು, ಹಣ್ಣಿನ ಬೆಳೆಗಳ ರಕ್ಷಣೆಗೆ ಒತ್ತು ನೀಡಬೇಕು’ ಎಂದು ಕೃಷಿ ಇಲಾಖೆ ಅಧಿಕಾರಿ ವೆಂಕಟರಂಗಶೆಟ್ಟಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>