<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ರೈತ ಪಿ.ಈಶ್ವರರೆಡ್ಡಿ ನವಣೆ, ಸಾಮು, ರಾಗಿ, ಭತ್ತ, ಮುಸುಕಿನ ಜೋಳ, ನೆಲಗಡಲೆ, ಬೀಟ್ರೂಟ್, ಹೂಕೋಸು, ಸೇವಂತಿಗೆ, ಚೆಂಡುಹೂವು ಸೇರಿದಂತೆ ವಿವಿಧ ತರಕಾರಿ ಹಾಗೂ ಹೂವನ್ನು ಬೆಳೆಯುತ್ತಿದ್ದಾರೆ.</p>.<p>ಈಶ್ವರರೆಡ್ಡಿ ಅವರಿಗೆ 6 ಎಕರೆ ಜಮೀನು ಇದೆ. ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ವಿವಿಧ ತಳಿಯ ಕೃಷಿ ಹಾಗೂ ತರಕಾರಿ ಬೆಳೆಯುತ್ತಾರೆ. ಜಿಲ್ಲಾ ಪ್ರಗತಿ ಪರ ರೈತ ಎನಿಸಿದ್ದಾರೆ. ಯಲ್ಲಂಪಲ್ಲಿ, ಆಚೇಪಲ್ಲಿ, ಮಿಟ್ಟೇಮರಿ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸಿ ಕೃಷಿಯ ಮಾಹಿತಿ ಪಡೆಯುತ್ತಾರೆ.</p>.<p>2 ಎಕರೆ ಮುಸುಕಿನಜೋಳ, ತಲಾ ಒಂದು ಎಕರೆಯಲ್ಲಿ ಬೀಟ್ರೂಟ್, ಹೂಕೋಸು, ನೆಲಗಡಲೆ, ಟೊಮೆಟೊ, ಭತ್ತ, ರಾಗಿ, ಸಾಮು, ನವಣೆ, ಸೂರ್ಯಕಾಂತಿ ಸೇರಿದಂತೆ ಇತರೆ ತಳಿಯ ಕೃಷಿ ಹಾಗೂ ತರಕಾರಿ ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆದಿದ್ದಾರೆ.</p>.<p>ಕುರಿ, ಮೇಕೆ ಸೀಮೆಹಸು, ನಾಟಿಹಸು ಹಾಗೂ ಹೈಬ್ರಿಡ್ ತಳಿಯ ಮೇಕೆಗಳನ್ನು ಸಾಕಿದ್ದಾರೆ. ತೆಂಗಿನ ಮರ 90, ಹುಣಸೆ ಮರ 95, ಮಾವಿನ ಮರ 80, ಹಲಸಿನ ಮರ 10 ಹಾಗೂ 4 ನುಗ್ಗೆ ಗಿಡ ಬೆಳೆಸಿದ್ದಾರೆ. ಕೃಷಿ ಶೆಡ್ ನಿರ್ಮಾಣ ಮಾಡಿದ್ದಾರೆ. ಕೃಷಿ ಹೊಂಡವೂ ಇದೆ. ಕೊಳವೆಬಾವಿ ಜೊತೆಗೆ, ಮಳೆ ನೀರನ್ನು ಸಂಗ್ರಹ ಮಾಡುತ್ತಾರೆ. ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.</p>.<p>ಕೃಷಿಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಅವರು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಭೇಟಿನೀಡಿ ಅಲ್ಲಿನ ರೈತರಿಂದ ಮಾಹಿತಿ ಪಡೆದಿದ್ದಾರೆ.</p>.<p>ಬೆಳೆಗಳ ಕಸ, ತ್ಯಾಜ್ಯ ಸಂಗ್ರಹಿಸಿ ಸಾವಯವ ತಿಪ್ಪೆಗುಂಡಿ ಮಾಡಿದ್ದಾರೆ.</p>.<p>ಬೆಂಗಳೂರಿನ ಕೃಷಿ ವಿಶ್ವವಿಶ್ವವಿದ್ಯಾಲಯದಿಂದ 2022ರಲ್ಲಿ ನಡೆದ ಕೃಷಿ ಮೇಳದಲ್ಲಿ ‘ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ’ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ ಪಡೆದಿದ್ದಾರೆ.</p>.<p>ರೈತ ಪಿ.ಈಶ್ವರರೆಡ್ಡಿ ಬೆಳೆದಿರುವ ವಿವಿಧ ತಳಿಯ ಕೃಷಿ ಹಾಗೂ ತರಕಾರಿ ಮಿಶ್ರ ಬೆಳೆ ರೈತರಿಗೆ ಮಾದರಿ. ಇವರ ತೋಟಕ್ಕೆ ಆಗಮಿಸಿ, ಬೆಳೆ ವೀಕ್ಷಣೆ ಮಾಡಿದ್ದೇವೆ ಎಂದು ಚೊಕ್ಕಂಪಲ್ಲಿಯ ರೈತ ಕಾಮರೆಡ್ಡಿ ತಿಳಿಸಿದರು.</p>.<p>ಕೃಷಿಯನ್ನೇ ನಂಬಿದ್ದೇನೆ. ಕೃಷಿ ಕೈ ಬಿಟ್ಟಿಲ್ಲ. ಮಿಶ್ರ ಬೆಳೆಗಳಿಂದ ಉತ್ತಮ ಇಳುವರಿ ಬಂದಿದೆ. ವಾರ್ಷಿಕವಾಗಿ ₹8 ರಿಂದ ₹10 ಲಕ್ಷ ಸಂಪಾದನೆ ಆಗುತ್ತದೆ. ₹4 ಲಕ್ಷ ಖರ್ಚಾಗುತ್ತದೆ ಉಳಿದದ್ದು ಲಾಭ ಎಂದು ಪಿ.ಈಶ್ವರರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ರೈತ ಪಿ.ಈಶ್ವರರೆಡ್ಡಿ ನವಣೆ, ಸಾಮು, ರಾಗಿ, ಭತ್ತ, ಮುಸುಕಿನ ಜೋಳ, ನೆಲಗಡಲೆ, ಬೀಟ್ರೂಟ್, ಹೂಕೋಸು, ಸೇವಂತಿಗೆ, ಚೆಂಡುಹೂವು ಸೇರಿದಂತೆ ವಿವಿಧ ತರಕಾರಿ ಹಾಗೂ ಹೂವನ್ನು ಬೆಳೆಯುತ್ತಿದ್ದಾರೆ.</p>.<p>ಈಶ್ವರರೆಡ್ಡಿ ಅವರಿಗೆ 6 ಎಕರೆ ಜಮೀನು ಇದೆ. ಸಾವಯವ ಗೊಬ್ಬರ ಬಳಕೆ ಮಾಡಿಕೊಂಡು ವಿವಿಧ ತಳಿಯ ಕೃಷಿ ಹಾಗೂ ತರಕಾರಿ ಬೆಳೆಯುತ್ತಾರೆ. ಜಿಲ್ಲಾ ಪ್ರಗತಿ ಪರ ರೈತ ಎನಿಸಿದ್ದಾರೆ. ಯಲ್ಲಂಪಲ್ಲಿ, ಆಚೇಪಲ್ಲಿ, ಮಿಟ್ಟೇಮರಿ ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸಿ ಕೃಷಿಯ ಮಾಹಿತಿ ಪಡೆಯುತ್ತಾರೆ.</p>.<p>2 ಎಕರೆ ಮುಸುಕಿನಜೋಳ, ತಲಾ ಒಂದು ಎಕರೆಯಲ್ಲಿ ಬೀಟ್ರೂಟ್, ಹೂಕೋಸು, ನೆಲಗಡಲೆ, ಟೊಮೆಟೊ, ಭತ್ತ, ರಾಗಿ, ಸಾಮು, ನವಣೆ, ಸೂರ್ಯಕಾಂತಿ ಸೇರಿದಂತೆ ಇತರೆ ತಳಿಯ ಕೃಷಿ ಹಾಗೂ ತರಕಾರಿ ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆದಿದ್ದಾರೆ.</p>.<p>ಕುರಿ, ಮೇಕೆ ಸೀಮೆಹಸು, ನಾಟಿಹಸು ಹಾಗೂ ಹೈಬ್ರಿಡ್ ತಳಿಯ ಮೇಕೆಗಳನ್ನು ಸಾಕಿದ್ದಾರೆ. ತೆಂಗಿನ ಮರ 90, ಹುಣಸೆ ಮರ 95, ಮಾವಿನ ಮರ 80, ಹಲಸಿನ ಮರ 10 ಹಾಗೂ 4 ನುಗ್ಗೆ ಗಿಡ ಬೆಳೆಸಿದ್ದಾರೆ. ಕೃಷಿ ಶೆಡ್ ನಿರ್ಮಾಣ ಮಾಡಿದ್ದಾರೆ. ಕೃಷಿ ಹೊಂಡವೂ ಇದೆ. ಕೊಳವೆಬಾವಿ ಜೊತೆಗೆ, ಮಳೆ ನೀರನ್ನು ಸಂಗ್ರಹ ಮಾಡುತ್ತಾರೆ. ಹನಿ ಹಾಗೂ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.</p>.<p>ಕೃಷಿಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಅವರು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಭೇಟಿನೀಡಿ ಅಲ್ಲಿನ ರೈತರಿಂದ ಮಾಹಿತಿ ಪಡೆದಿದ್ದಾರೆ.</p>.<p>ಬೆಳೆಗಳ ಕಸ, ತ್ಯಾಜ್ಯ ಸಂಗ್ರಹಿಸಿ ಸಾವಯವ ತಿಪ್ಪೆಗುಂಡಿ ಮಾಡಿದ್ದಾರೆ.</p>.<p>ಬೆಂಗಳೂರಿನ ಕೃಷಿ ವಿಶ್ವವಿಶ್ವವಿದ್ಯಾಲಯದಿಂದ 2022ರಲ್ಲಿ ನಡೆದ ಕೃಷಿ ಮೇಳದಲ್ಲಿ ‘ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ’ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ ಪಡೆದಿದ್ದಾರೆ.</p>.<p>ರೈತ ಪಿ.ಈಶ್ವರರೆಡ್ಡಿ ಬೆಳೆದಿರುವ ವಿವಿಧ ತಳಿಯ ಕೃಷಿ ಹಾಗೂ ತರಕಾರಿ ಮಿಶ್ರ ಬೆಳೆ ರೈತರಿಗೆ ಮಾದರಿ. ಇವರ ತೋಟಕ್ಕೆ ಆಗಮಿಸಿ, ಬೆಳೆ ವೀಕ್ಷಣೆ ಮಾಡಿದ್ದೇವೆ ಎಂದು ಚೊಕ್ಕಂಪಲ್ಲಿಯ ರೈತ ಕಾಮರೆಡ್ಡಿ ತಿಳಿಸಿದರು.</p>.<p>ಕೃಷಿಯನ್ನೇ ನಂಬಿದ್ದೇನೆ. ಕೃಷಿ ಕೈ ಬಿಟ್ಟಿಲ್ಲ. ಮಿಶ್ರ ಬೆಳೆಗಳಿಂದ ಉತ್ತಮ ಇಳುವರಿ ಬಂದಿದೆ. ವಾರ್ಷಿಕವಾಗಿ ₹8 ರಿಂದ ₹10 ಲಕ್ಷ ಸಂಪಾದನೆ ಆಗುತ್ತದೆ. ₹4 ಲಕ್ಷ ಖರ್ಚಾಗುತ್ತದೆ ಉಳಿದದ್ದು ಲಾಭ ಎಂದು ಪಿ.ಈಶ್ವರರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>