<p><strong>ಆಲ್ದೂರು</strong>: ಸಮೀಪದ ಬಸರವಳ್ಳಿ ಪಂಚಾಯಿತಿಯ ಬೆಟ್ಟದ ಮಳಲಿ ಗ್ರಾಮದಲ್ಲಿ ಜಲಜೀವನ್ ಮಿಷನ್ಗೆ ಸಂಬಂಧಿಸಿದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಕೆಲಸ ಮುಗಿದು ಎರಡು ವರ್ಷ ಕಳೆದರೂ ಕುಡಿಯುವ ನೀರಿಗೆ ವ್ಯವಸ್ಥೆ ಆಗಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.</p>.<p>‘ಗ್ರಾಮದಲ್ಲಿ ಒಟ್ಟು 150 ಮನೆಗಳಿದ್ದು ಇಲ್ಲಿ ನಿರ್ಮಿಸಿದ ನೀರಿನ ಟ್ಯಾಂಕ್ ಗುಣಮಟ್ಟದಿಂದ ಕೂಡಿಲ್ಲ. ಟ್ಯಾಂಕ್ ಇರಿಸಿರುವ ಜಾಗದ ಮೇಲ್ಛಾವಣಿಗೆ ಸಾರಣಿಗೆ ಮಾಡಿಲ್ಲ. ಪೈಪ್ಗಳನ್ನು ಸರಿಯಾಗಿ ಗುಂಡಿ ತೋಡಿ ಅದರಲ್ಲಿ ಸಮರ್ಪಕವಾಗಿ ಮುಚ್ಚಿಲ್ಲ. ಹೀಗಾಗಿ ಅಲ್ಲಲ್ಲಿ ಎದ್ದು ಹೊರಬಂದಿವೆ. ಸರಿಪಡಿಸುವಂತೆ ಎಂಜಿನಿಯರ್ಗಳಿಗೆ ಮನವಿ ಮಾಡಿ ಯಾವ ಪ್ರಯೋಜನವೂ ಆಗಿಲ್ಲ’ ಎಂದು ವೀರಪ್ಪ ಆರೋಪಿಸಿದರು.</p>.<p>ಆರ್ಥಿಕವಾಗಿ ಸಬಲರಾಗಿರುವವರು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದು 22 ಪರಿಶಿಷ್ಟ ಕುಟುಂಬಗಳಿರುವ ಕಾಲೊನಿಗೆ ನೀರಿನ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಆಗಿದೆ. ಆದ್ದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿಯನ್ನು ಸರಿಪಡಿಸಬೇಕೆಂದು ಸಂದೇಶ್ ಪ್ರಮೋದ್ ಒತ್ತಾಯಿಸಿದರು.</p>.<p>ಕಾಮಗಾರಿಗೆ ಒಟ್ಟು ₹ 28 ಲಕ್ಷದ 94,000 ಸಾವಿರ ಮೊತ್ತ ವ್ಯಯಿಸಿದ್ದು ಕಾಮಗಾರಿ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸ್ಪಂದಿಸದೇ ಇದ್ದರೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಯೋಜನೆಯ ಕಿರಿಯ ಸಹಾಯಕ ಎಂಜಿನಿಯರ್ ಪವನ್ ತಿಳಿಸಿದರು.</p>.<p>ಕಾಮಗಾರಿ ಕುರಿತು ಮಾಹಿತಿ ಈಗಾಗಲೇ ಪಡೆದುಕೊಂಡಿದ್ದು ಗುತ್ತಿಗೆದಾರರ ಬಿಲ್ ಪಾವತಿ ತಡೆಹಿಡಿಯಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಧುಕುಮಾರ್ ಎಚ್.ಜಿ. ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲ್ದೂರು</strong>: ಸಮೀಪದ ಬಸರವಳ್ಳಿ ಪಂಚಾಯಿತಿಯ ಬೆಟ್ಟದ ಮಳಲಿ ಗ್ರಾಮದಲ್ಲಿ ಜಲಜೀವನ್ ಮಿಷನ್ಗೆ ಸಂಬಂಧಿಸಿದ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು ಕೆಲಸ ಮುಗಿದು ಎರಡು ವರ್ಷ ಕಳೆದರೂ ಕುಡಿಯುವ ನೀರಿಗೆ ವ್ಯವಸ್ಥೆ ಆಗಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.</p>.<p>‘ಗ್ರಾಮದಲ್ಲಿ ಒಟ್ಟು 150 ಮನೆಗಳಿದ್ದು ಇಲ್ಲಿ ನಿರ್ಮಿಸಿದ ನೀರಿನ ಟ್ಯಾಂಕ್ ಗುಣಮಟ್ಟದಿಂದ ಕೂಡಿಲ್ಲ. ಟ್ಯಾಂಕ್ ಇರಿಸಿರುವ ಜಾಗದ ಮೇಲ್ಛಾವಣಿಗೆ ಸಾರಣಿಗೆ ಮಾಡಿಲ್ಲ. ಪೈಪ್ಗಳನ್ನು ಸರಿಯಾಗಿ ಗುಂಡಿ ತೋಡಿ ಅದರಲ್ಲಿ ಸಮರ್ಪಕವಾಗಿ ಮುಚ್ಚಿಲ್ಲ. ಹೀಗಾಗಿ ಅಲ್ಲಲ್ಲಿ ಎದ್ದು ಹೊರಬಂದಿವೆ. ಸರಿಪಡಿಸುವಂತೆ ಎಂಜಿನಿಯರ್ಗಳಿಗೆ ಮನವಿ ಮಾಡಿ ಯಾವ ಪ್ರಯೋಜನವೂ ಆಗಿಲ್ಲ’ ಎಂದು ವೀರಪ್ಪ ಆರೋಪಿಸಿದರು.</p>.<p>ಆರ್ಥಿಕವಾಗಿ ಸಬಲರಾಗಿರುವವರು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದು 22 ಪರಿಶಿಷ್ಟ ಕುಟುಂಬಗಳಿರುವ ಕಾಲೊನಿಗೆ ನೀರಿನ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಆಗಿದೆ. ಆದ್ದರಿಂದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿಯನ್ನು ಸರಿಪಡಿಸಬೇಕೆಂದು ಸಂದೇಶ್ ಪ್ರಮೋದ್ ಒತ್ತಾಯಿಸಿದರು.</p>.<p>ಕಾಮಗಾರಿಗೆ ಒಟ್ಟು ₹ 28 ಲಕ್ಷದ 94,000 ಸಾವಿರ ಮೊತ್ತ ವ್ಯಯಿಸಿದ್ದು ಕಾಮಗಾರಿ ಸರಿಪಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸ್ಪಂದಿಸದೇ ಇದ್ದರೆ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಲಾಗಿದೆ ಎಂದು ಯೋಜನೆಯ ಕಿರಿಯ ಸಹಾಯಕ ಎಂಜಿನಿಯರ್ ಪವನ್ ತಿಳಿಸಿದರು.</p>.<p>ಕಾಮಗಾರಿ ಕುರಿತು ಮಾಹಿತಿ ಈಗಾಗಲೇ ಪಡೆದುಕೊಂಡಿದ್ದು ಗುತ್ತಿಗೆದಾರರ ಬಿಲ್ ಪಾವತಿ ತಡೆಹಿಡಿಯಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಧುಕುಮಾರ್ ಎಚ್.ಜಿ. ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>